ಮುಂಬಯಿ-ಕುಡ್ಲ ಪ್ರಯಾಣದ ನಡುವೆ ವಿನಾಯಕನ ದರ್ಶನ


Team Udayavani, Jun 20, 2020, 2:17 PM IST

ಮುಂಬಯಿ-ಕುಡ್ಲ ಪ್ರಯಾಣದ ನಡುವೆ ವಿನಾಯಕನ ದರ್ಶನ

ಮುಂಬಯಿಗೆ ತೆರಳಿದ್ದ ನನ್ನ ಮನದಲ್ಲಿ ಏನೋ ಅನ್ವೇಷಣೆಯ ತವಕ.! ಮುಂಬಯಿಗೆ ತೆರಳಿ ಬರುವಾಗ ನೇರ ಮಂಗಳೂರಿನತ್ತ ಬರುವುದು ನನಗೆ ಇಷ್ಟವಿರಲಿಲ್ಲ. ಆದರೆ ಏನು ಮಾಡುವುದು ಎಂಬ ದ್ವಂದ್ವ ನನ್ನಲ್ಲಿ ಇತ್ತು. ಕೊನೆಗೂ ಗಟ್ಟಿ ಮನಸ್ಸು ಮಾಡಿ ಉತ್ತರ ಕನ್ನಡ ಜಿಲ್ಲೆಯ ಸ್ಥಳವೊಂದಕ್ಕೆ ತೆರಳುವ ಯೋಚನೆ ಮಾಡಿದ್ದೆ. ಅದಕ್ಕೆ ಪೂರಕವಾಗಿ ಯೋಜನೆಯನ್ನು ಸಿದ್ಧಪಡಿಸಿಕೊಂಡೆ.

ಇಷ್ಟದಾಯಕ ಇಡಗುಂಜಿ ಬೆನಕ
ಕಳೆದ ಅಚಾನಕ್‌ ಭೇಟಿಯಲ್ಲಿ ತುಂಬಾ ಮುದ ನೀಡಿದ್ದ ಜಿಲ್ಲೆಯತ್ತ ಮತ್ತೆ ಕಾಲಿಡುವ ಮನಸ್ಸಾಯಿತು. ಈ ಬಾರಿ ಮುಂಬಯಿನಿಂದ ಬರುವಾಗ ಉತ್ತರ ಕನ್ನಡ ಜಿಲ್ಲೆಯ ಪ್ರಖ್ಯಾತ ದೇವಾಲಯ ಇಡಗುಂಜಿಗೆ ತೆರಳುವ ಯೋಜನೆ ಹಾಕಿಕೊಂಡಿದ್ದೆ. ಪೂರ್ವ ತಯಾರಿ ನಡೆಸಿದ್ದ ನಾನು ಹೊನ್ನಾವರಕ್ಕೆ ಟಿಕೆಟ್‌ ಮಾಡಿಸಿದ್ದೆ. ಹೊನ್ನಾವರ ರೈಲ್ವೇ ಸ್ಟೇಷನ್‌ನಿಂದ ಹೊನ್ನಾವರ ಬಸ್‌ ನಿಲ್ದಾಣಕ್ಕೆ ಸ್ಥಳೀಯ ವ್ಯಾನ್‌ ಮೂಲಕ ತೆರಳಿದೆ. ಅಲ್ಲಿಂದ ಇಡಗುಂಜಿ ಬಸ್‌ ಹಿಡಿದು ತಲುಪಿದಾಗ ಗಂಟೆ ಅಪರಾಹ್ನ ಒಂದೂವರೆ. ಅಷ್ಟೊತ್ತಿಗಾಗಲೇ ಅಲ್ಲಿ ಪ್ರಸಾದ ಭೋಜನ ಶುರುವಾಗಿತ್ತು. ಪ್ರಸಾದ ಭೋಜನ ಪೂರೈಸಿದೆ. ದೇವರ ದರುಶನಕ್ಕಾಗಿ 3ಗಂಟೆ ವರೆಗೆ ಕಾದೆ. (ದೇಗುಲ ತೆರೆಯೋವರೆಗೆ) ಗಣಪನ ದರ್ಶನಕ್ಕಾಗಿ ಅದಾಗಲೇ ಹಲವು ಜನ ಕ್ಯೂ ನಲ್ಲಿದ್ದರು. ಪುರಾಣ ಪ್ರಸಿದ್ಧ ಕ್ಷೇತ್ರದಲ್ಲಿ ಬೆಳ್ಳಿಯ ಕವಚಧಾರಿ ಗಣಪನ ಅಲಂಕಾರ ಅವರ್ಣನೀಯ. ದಿನನಿತ್ಯ ಸಾವಿರಾರು ಭಕ್ತರು ಆಗಮಿಸಿ, ವಿನಾಯಕನ ದರ್ಶನ ಪಡೆಯುತ್ತಾರೆ.

  ಸುಭಾಸ್‌ ಮಂಚಿ, ಮಂಗಳೂರು ವಿ.ವಿ.

ಅನನ್ಯ ಅನುಭವ, ಅನೂಹ್ಯ ಪ್ರಭಾವ
ಕಾರಣಿಕದ ಇಡಗುಂಜಿ ಗಣಪನ ದರ್ಶನ ಏನೋ ಹೊಸ ಉತ್ಸಾಹ ಮೂಡಿಸಿತ್ತು. ಸೀದಾ ಸಾದಾ ಮುಂಬಯಿಯಿಂದ ಕುಡ್ಲಕ್ಕೆ ಬರಬೇಕಿದ್ದ ನಾನು ಏಕಾಂಗಿ ಪರ್ಯಟನೆಗೆ ಹೆಜ್ಜೆ ಇಟ್ಟಿದ್ದೆ. ಹೊರಗಡೆ ಧೋ… ಎಂದು ಸುರಿಯುತ್ತಿದ್ದ ವರ್ಷಧಾರೆಗೆ ಬಿಡುವೇ ಸಿಕ್ಕಿರಲಿಲ್ಲ. ಪ್ರತೀ ಬಾರಿಯ ನವ ಪಯಣ ಪ್ರೇರಣೆಯಾಯಿತು. ಆದಾಗ್ಯೂ ಹೊಸ ಊರು, ಹೊಸ ಜನರು, ಬೆಂಬಿಡದ ಮಳೆನೀರು, ಕೈಕೊಟ್ಟ ಚಾರ್ಜರು, ಕೈಬಿಡದ ದೇವರು ಸೇರಿ ಒಂದೊಳ್ಳೆ ಅನುಭವ ನೀಡಿದ್ದಂತೂ ಸತ್ಯ!

ಗಣೇಶ್‌ ಹೆಗಡೆ ಹೊನ್ನಾವರ

ಟಾಪ್ ನ್ಯೂಸ್

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ

17

Team India: ಟಿ20 ವಿಶ್ವಕಪ್‌ ತಂಡ ರಾಹುಲ್‌ಗೆ ಚಾನ್ಸ್‌, ಹಾರ್ದಿಕ್‌ ಪಾಂಡ್ಯಗೆ ಕೊಕ್‌?

Horoscope: ಈ ರಾಶಿಯವರಿಗೆ ಹಿತಶತ್ರುಗಳ ಒಳಸಂಚಿನ ಬಗೆಗೆ ಎಚ್ಚರವಿರಲಿ

Horoscope: ಈ ರಾಶಿಯವರು ಹಿತಶತ್ರುಗಳ ಒಳಸಂಚಿನ ಬಗೆಗೆ ಎಚ್ಚರದಿಂದಿರಬೇಕು

1-NG

JEE; ಮಹಾರಾಷ್ಟ್ರ ರೈತನ ಮಗ ಮೇನ್‌ ಟಾಪರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

16-adu-jeevitham

Movie Review: ಆಡು ಜೀವಿದಂ

14-fusion

Rural Life: ಗ್ರಾಮೀಣ ಬದುಕಿನ ಮೆಲುಕು

13-uv-fusion

MOTHER: ತಾಯಿಗಿಂತ ಮಿಗಿಲಾದ ದೇವರಿಲ್ಲ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ

17

Team India: ಟಿ20 ವಿಶ್ವಕಪ್‌ ತಂಡ ರಾಹುಲ್‌ಗೆ ಚಾನ್ಸ್‌, ಹಾರ್ದಿಕ್‌ ಪಾಂಡ್ಯಗೆ ಕೊಕ್‌?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.