ತೇಜಸ್ವಿ ಯಾದವ್ ಹುಡುಕಿ ಕೊಟ್ಟವರಿಗೆ 5,100 ರೂ.
Team Udayavani, Jun 22, 2019, 4:41 PM IST
ಜನರು ತೀವ್ರ ಸ್ವರೂಪದ ಸಮಸ್ಯೆಗಳಿಂದ ಸಂಕಷ್ಟ ಅನುಭವಿಸುವಾಗ ಸಂಸದ ಅಥವಾ ಶಾಸಕರಾದವರು ನಮಗೆ ಸಂಬಂಧವೇ ಇಲ್ಲವೆನ್ನುವಂತೆ ವರ್ತಿಸಿದರೆ ಅವರ ಗಮನ ಸೆಳೆಯಲು ಜನರು ಯಾವುದಾದ ರೊಂದು ಮಾರ್ಗ ಕಂಡುಕೊಳ್ಳುತ್ತಾರೆ. ಅದರಂತೆ ಬಿಹಾರದ ಸಾಮಾಜಿಕ ಕಾರ್ಯಕರ್ತ ರೊಬ್ಬರು, ತಮ್ಮ ನಾಯಕರ ಗಮನ ಸೆಳೆಯಲು ವಿಶಿಷ್ಟ ಪ್ರಯತ್ನ ಮಾಡಿದ್ದಾರೆ. ಆರ್ಜೆಡಿ ನಾಯಕ ತೇಜಸ್ವಿ ಯಾದವ್ರನ್ನು ಹುಡುಕಿಕೊಡುವಂತೆ ಅವರು ಮುಜಫರ್ಪುರದಲ್ಲಿ ಹೋರ್ಡಿಂಗ್ ಹಾಕಿ, ಪತ್ತೆ ಮಾಡಿಕೊಟ್ಟವರಿಗೆ 5,100 ರೂ. ಬಹುಮಾನ ನೀಡುವುದಾಗಿ ಬರೆದಿದ್ದಾರೆ. ಮಿದುಳು ಜ್ವರದಿಂದ ನೂರಾರು ಮಕ್ಕಳು ಮೃತರಾಗುತ್ತಿರುವ ವೇಳೆ ರಾಘೋಪುರ ಶಾಸಕರಾಗಿರುವ ತೇಜಸ್ವಿ ಎಲ್ಲಿಯೂ ಕಾಣಿಸಿಕೊಳ್ಳದಿರುವುದು ಮತ್ತು ಯಾವ ಕ್ರಮಕ್ಕೂ ಮುಂದಾಗದಿರುವ ಕಾರಣ ಈ ರೀತಿ ಮಾಡಿದ್ದಾರೆ.