ಏಕದಿನದ ಯಶಸ್ವಿ ಚೇಸಿಂಗ್‌ ದಾಖಲೆ: ಅಂತಿಮ ಓವರ್‌ನಲ್ಲಿ ಅತ್ಯಧಿಕ ರನ್‌ ಚೇಸ್


Team Udayavani, Nov 27, 2020, 4:25 PM IST

ಏಕದಿನದ ಯಶಸ್ವಿ ಚೇಸಿಂಗ್‌ ದಾಖಲೆ: ಅಂತಿಮ ಓವರ್‌ನಲ್ಲಿ ಅತ್ಯಧಿಕ ರನ್‌ ಚೇಸ್

ವೃತ್ತಿಪರ ಬ್ಯಾಟ್ಸ್‌ಮನ್‌ಗಳ ಆಟವಾಗಿರುವ ಏಕದಿನ ಹಾಗೂ ಟಿ20 ಕ್ರಿಕೆಟ್‌ನಲ್ಲಿ ಚೇಸಿಂಗ್‌ ಎಂಬುದು ಈಗ ಸಮಸ್ಯೆಯೇ ಅಲ್ಲ. ಪಿಚ್‌ ಬ್ಯಾಟ್ಸ್‌ಮನ್‌ಗಳಿಗೆ ಸಹಕರಿಸಿದರೆ ಎಷ್ಟೇ ದೊಡ್ಡ ಮೊತ್ತವನ್ನೂ ನಿರಾಯಾಸವಾಗಿ ಹಿಂದಿಕ್ಕಬಹುದು. ಅಂತಿಮ ಓವರಿನಲ್ಲಿ ಬೃಹತ್‌ ಮೊತ್ತದ ಸವಾಲಿದ್ದರೂ ವಿಚಲಿತರಾಗಬೇಕಿಲ್ಲ.

ಹಾಗಾದರೆ ಏಕದಿನ ಪಂದ್ಯದ ಕೊನೆಯ ಓವರಿನಲ್ಲಿ ಅತ್ಯಧಿಕ ರನ್‌ ಬಾರಿಸಿ ಜಯಶಾಲಿಯಾದ ತಂಡ ಯಾವುದು ಎಂಬುದೊಂದು ಕುತೂಹಲದ ಸಂಗತಿ. ಇದಕ್ಕೆ ಉತ್ತರವಾಗುವ ತಂಡ ನ್ಯೂಜಿಲ್ಯಾಂಡ್‌. ಎದುರಾಳಿ ಶ್ರೀಲಂಕಾ. ಇದೇನೂ ತೀರಾ ಹಿಂದಿನ ಪಂದ್ಯವಲ್ಲ. 2013ರ ಹಂಬಂತೋಟ ಮುಖಾಮುಖಿ.

ಇಲ್ಲಿ ನ್ಯೂಜಿಲ್ಯಾಂಡ್‌ ಗೆಲುವಿಗೆ ಕೊನೆಯ ಓವರಿನಲ್ಲಿ 20 ರನ್‌ ಸವಾಲು ಎದುರಾಗಿತ್ತು. ಅದು ಒಟ್ಟು 25 ರನ್‌ ಬಾರಿಸಿ ಜಯಭೇರಿ ಮೊಳಗಿಸಿತು.

 ಕಿವೀಸ್‌ಗೆ ಕಠಿನ ಸವಾಲು

ಮಳೆಯಿಂದ ಇಲ್ಲೇ ನಡೆಯಬೇಕಿದ್ದ ಮೊದಲ ಪಂದ್ಯ ರದ್ದುಗೊಂಡಿತ್ತು. ದ್ವಿತೀಯ ಮುಖಾಮುಖೀಗೂ ಮಳೆ ಎದುರಾಯಿತು. ಶ್ರೀಲಂಕಾ 23 ಓವರ್‌ಗಳಲ್ಲಿ ಒಂದಕ್ಕೆ 138 ರನ್‌ ಪೇರಿಸಿತು. ನ್ಯೂಜಿಲ್ಯಾಂಡಿಗೆ ಡಿ-ಎಲ್‌ ನಿಯಮದಂತೆ 23 ಓವರ್‌ಗಳಿಂದ 198 ರನ್‌ ತೆಗೆಯುವ ಕಠಿನ ಸವಾಲು ಎದುರಾಯಿತು.

11ನೇ ಓವರ್‌ ವೇಳೆ ಕಿವೀಸ್‌ ಸ್ಥಿತಿ 68ಕ್ಕೆ 4. ಟಾಮ್‌ ಲ್ಯಾಥಂ-ಲ್ಯೂಕ್‌ ರಾಂಚಿ 9.3 ಓವರ್‌ಗಳಿಂದ 93 ರನ್‌ ಜತೆಯಾಟ ನಡೆಸಿ ತಂಡವನ್ನು ಮೇಲೆತ್ತಿದರು. ಆದರೆ 21ನೇ ಓವರಿನಲ್ಲಿ ಇಬ್ಬರೂ ಒಟ್ಟೊಟ್ಟಿಗೇ ನಿರ್ಗಮಿಸಿದಾಗ ಲಂಕಾ ಮೇಲುಗೈ ಸಾಧಿಸಿತು.

ನಥನ್‌ ಮೆಕಲಮ್‌ ಮತ್ತು ಜಿಮ್ಮಿ ನೀಶಮ್‌.

ಕಿವೀಸ್‌ 13 ಎಸೆತಗಳಿಂದ 33 ರನ್‌ ತೆಗೆಯುವ ಒತ್ತಡದಲ್ಲಿತ್ತು. ಈ ಹಂತದಲ್ಲಿ ಸಿಡಿದು ನಿಂತವರೇ ನಥನ್‌ ಮೆಕಲಮ್‌ ಮತ್ತು ಜಿಮ್ಮಿ ನೀಶಮ್‌. ಲಸಿತ ಮಾಲಿಂಗ ಪಾಲಾದ 22ನೇ ಓವರಿನ ಮೊದಲ ಹಾಗೂ ಕೊನೆಯ ಎಸೆತದಲ್ಲಿ ಮೆಕಲಮ್‌ ಬೌಂಡರಿ ಸಿಡಿಸಿದರು. ಕೊನೆಯ ಓವರಿನಲ್ಲಿ 20 ರನ್‌ ತೆಗೆಯುವ ಸವಾಲು ಎದುರಾಯಿತು.

ಬೌಲರ್‌ ರಂಗನ ಹೆರಾತ್‌. ಮೊದಲೆರಡು ಎಸೆತಗಳಲ್ಲಿ ನೀಶಮ್‌ 3 ರನ್‌ ತೆಗೆದರು. ಮೆಕಲಮ್‌ ಸತತ ಎಸೆತಗಳಲ್ಲಿ ಬೌಂಡರಿ, ಸಿಕ್ಸರ್‌ ಬಾರಿಸಿದರು. ಅಷ್ಟೇ ಅಲ್ಲ, ಕೊನೆಯ ಎರಡೂ ಎಸೆತಗಳನ್ನು ಲಾಂಗ್‌-ಆಫ್‌ ಹಾಗೂ ಲಾಂಗ್‌-ಆನ್‌ ಮೂಲಕ ಸಿಕ್ಸರ್‌ಗೆ ರವಾನಿಸಿ ತಂಡದ ಜಯಭೇರಿ ಮೊಳಗಿಸಿದರು. ಹೆರಾತ್‌ ಅವರ ಆ ಓವರಿನಲ್ಲಿ ಒಟ್ಟು 25 ರನ್‌ ಹರಿದು ಹೋಯಿತು!

* ಇಂಗ್ಲೆಂಡ್‌ ಸಾಧನೆ

ಇದಕ್ಕೂ ಮೊದಲಿನ ದಾಖಲೆ 1987ರ “ಬೆನ್ಸನ್‌ ಆ್ಯಂಡ್‌ ಹೆಜಸ್‌’ ತ್ರಿಕೋನ ಸರಣಿಯ ವೇಳೆ ನಿರ್ಮಾಣಗೊಂಡಿತ್ತು. ಸಿಡ್ನಿಯಲ್ಲಿ ಏರ್ಪಟ್ಟ ಆತಿಥೇಯ ಆಸ್ಟ್ರೇಲಿಯ ವಿರುದ್ಧದ ಮೇಲಾಟದಲ್ಲಿ ಇಂಗ್ಲೆಂಡ್‌ ಅಂತಿಮ ಓವರಿನಲ್ಲಿ 18 ರನ್‌ ಬಾರಿಸಿ ಗೆದ್ದು ಬಂದಿತ್ತು.

ಅಲನ್‌ ಲ್ಯಾಂಬ್

ಮೊದಲು ಬ್ಯಾಟಿಂಗ್‌ ನಡೆಸಿದ ಆಸ್ಟ್ರೇಲಿಯ 8ಕ್ಕೆ 233 ರನ್‌ ಗಳಿಸಿತ್ತು. ಇಂಗ್ಲೆಂಡ್‌ 47ನೇ ಓವರ್‌ ಮುಕ್ತಾಯಕ್ಕೆ 7 ವಿಕೆಟಿಗೆ 202 ರನ್‌ ಗಳಿಸಿದಾಗ ಪಂದ್ಯ ರೋಚಕ ಅಂತ್ಯ ಕಾಣುವ ಎಲ್ಲ ಸಾಧ್ಯತೆ ನಿಚ್ಚಳವಾಯಿತು. ಆದರೂ ಬ್ರೂಸ್‌ ರೀಡ್‌ ಪಾಲಾದ ಕೊನೆಯ ಓವರಿನಲ್ಲಿ 18 ರನ್‌ ತೆಗೆಯುವ ಒತ್ತಡ ಇಂಗ್ಲೆಂಡ್‌ ಮೇಲಿತ್ತು. ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ಅಲನ್‌ ಲ್ಯಾಂಬ್‌ ಸಾಹಸದಿಂದ ಇಂಗ್ಲೆಂಡ್‌ ಅಮೋಘ ಜಯವೊಂದನ್ನು ಕಂಡಿತು.

ಟಾಪ್ ನ್ಯೂಸ್

10-ramanagara

Ramanagara ಅಪಘಾತ; ವಿದ್ಯಾರ್ಥಿಗಳ ಪ್ರತಿಭಟನೆ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Patanjali Ads case:‌ಖುದ್ದು ಹಾಜರಾಗಿ- ಬಾಬಾ ರಾಮ್‌ ದೇವ್‌, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್

Patanjali Ads case:‌ಖುದ್ದು ಹಾಜರಾಗಿ- ಬಾಬಾ ರಾಮ್‌ ದೇವ್‌, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್

Vande Bharat: 1.5 ವರ್ಷದಲ್ಲಿ ವಂದೇ ಭಾರತ್‌ಗೆ 50 ಬಾರಿ ಕಲ್ಲೆಸೆತ

Vande Bharat: 1.5 ವರ್ಷದಲ್ಲಿ ವಂದೇ ಭಾರತ್‌ಗೆ 50 ಬಾರಿ ಕಲ್ಲೆಸೆತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kambalaHigh-tech touch for Kambala race

Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ

JIO SPACE FIBER 1

JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?

thumb news web exclusive uv (2) (1)

“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…

thumb web ex (1) (1) (1) (1) (1) (1) copy (1)

ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!

web exclusive keer

ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

10-ramanagara

Ramanagara ಅಪಘಾತ; ವಿದ್ಯಾರ್ಥಿಗಳ ಪ್ರತಿಭಟನೆ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

9-udupi

ಶ್ರೀ ನಿತ್ಯಾನಂದ ಸ್ವಾಮಿ ಮಂದಿರ ಮಠ; ಧ್ಯಾನ ಮಂದಿರ, ಭೋಜನ ಶಾಲೆ ನಿರ್ಮಾಣ ಕಾಮಗಾರಿಗೆ ಚಾಲನೆ

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.