ಕೋವಿಡ್ ನಿಧಿಗೆ ದಾನ ಮಾಡಲು ತನ್ನ ಪ್ರೀತಿಯ ಆಡುಗಳನ್ನು ಮಾರಿದ 61 ರ  ವೃದ್ಧೆ.!

ತಾವು ಬಡವರಾಗಿದ್ದರೂ, ತಮ್ಮಗಿಂತ ಬಡವರಿದ್ದ ಕುಟುಂಬಕ್ಕೆ ಅಗತ್ಯ ಸೌಲಭ್ಯ ಹಾಗೂ ಅಕ್ಕಿಯನ್ನು ನೀಡುತ್ತಾರೆ.

Team Udayavani, May 27, 2021, 9:00 AM IST

Untitled-1

ಕೋವಿಡ್ ಕಾಲದಲ್ಲಿ ದುಡಿಮೆಯಿಲ್ಲದೆ ದಿನ ದೂಡುವುದೇ ಕಷ್ಟ. ಇಂಥ ಸಂಕಷ್ಟದ ಸಮಯದಲ್ಲೂ ಕೆಲವರು ಸಹಾಯಕ್ಕೆ ನಿಲ್ಲುತ್ತಿದ್ದಾರೆ. ಅಂಥವರೇ ರಿಯಲ್ ಲೈಫ್ ಹೀರೋಸ್. ಕೇರಳದ ಕೊಲ್ಲಂನಲ್ಲಿ ವಾಸಿಸುವ 61 ವರ್ಷದ ಸುಬೈದಾ ಎನ್ನುವ ವೃದ್ಧೆಯೊಬ್ಬರು ಇಂಥದ್ದೇ ಕಾರ್ಯವನ್ನು ಮಾಡಿ ಜನಮೆಚ್ಚಿಯೊಟ್ಟಿಗೆ ಸರ್ಕಾರದ ಮನಸ್ಸನ್ನು ಗೆದ್ದಿದ್ದಾರೆ.

ಕೋವಿಡ್ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದ್ದು, ಕೋವಿಡ್ ಲಸಿಕೆಗಾಗಿ ಜನ ಸಾಲುಗಟ್ಟಿ ಕಾಯುವುದು ಕೂಡ ಹೆಚ್ಚಾಗುತ್ತಿದೆ. ಕೇರಳ ಸರ್ಕಾರ ಕೋವಿಡ್ ನಿರ್ವಹಣೆಯನ್ನು ಮಾಡುತ್ತಿದ್ದು, ಕೋವಿಡ್ ಲಸಿಕೆಗಾಗಿ ಶುರು ಮಾಡಿದ ಮುಖ್ಯಮಂತ್ರಿ ಕೋವಿಡ್ ನಿಧಿಗೆ ಕೇರಳದಲ್ಲಿ ಭಾರೀ ಮನ್ನಣೆ ಸಿಕ್ಕಿದೆ.

ಸುಬೈದಾ ಅವರದು ಬಡ ಕುಟುಂಬ, ದಿನಿತ್ಯದ ಊಟ-ಬಟ್ಟೆ ನೀರಿಗೆ ಕೊರತೆಯಾಗದ ಕುಟುಂಬ. ಬಾಡಿಗೆ ಮನೆ. ಮನೆಯಲ್ಲೇ ಒಂದು ಸಣ್ಣ ಟೀ ಶಾಪ್. ಅಕ್ಕಪಕ್ಕದ ಮನೆಯವರಿಗೆ ಸುಬೈದಾ ಅವರ ಟೀ ಶಾಪ್ ಪರಿಚಿತ. ಆಗಾಗ ಬಂದು ಚಹಾ ಕುಡಿದು ಹೋಗುವ ಗ್ರಾಹಕರ ಆಸರೆ ಬಿಟ್ಟರೆ, ಸುಬೈದಾ ಅವರಿಗೆ ಹೇಳಿಕೊಳ್ಳುವಷ್ಟು ದೊಡ್ಡ ಆದಾಯ ಇಲ್ಲ. 61 ವರ್ಷದ ಸುಬೈದಾ ಮನೆಯಲ್ಲಿ ಮನೆಯ ಸದಸ್ಯರು ಬಿಟ್ಟರೆ, ಮುದಿ ಜೀವದ ಧ್ವನಿಗೆ ತಮ್ಮದೇ ಭಾಷೆಯಲ್ಲಿ ಪ್ರತಿಕ್ರಿಯೆ ನೀಡುವ ಆಡುಗಳಿವೆ.

ಆಡುಗಳನ್ನು ನೋಡಿಕೊಳ್ಳುವುದು,ಅವುಗಳ ಚಾಕರಿ ಮಾಡುವುದು, ಅವುಗಳಿಗೆ ಮೇವು ಹಾಕುವುದು ಎಲ್ಲವೂ ಸುಬೈದವೇ. ಒಂದು ವೇಳೆ ನಾವು ಮನೆಯಲ್ಲಿ ಅಷ್ಟೊಂದು ಆಡುಗಳಿದ್ದರೆ, ಅವುಗಳನ್ನು ಕಷ್ಟದ ಸಮಯದಲ್ಲಿ ಮಾರುತ್ತಿದ್ದೀವಿ ಇರಬೇಕು. ಆದರೆ ಸುಬೈದಾ ಅವರು ತಮ್ಮ ಆಡುಗಳನ್ನು ಮಾರಿದ ಉದ್ದೇಶ ಕೇಳಿದರೆ ನೀವೊಮ್ಮೆ ಅಚ್ಚರಿಗೊಳ್ಳಬಹುದು.

ಕೋವಿಡ್ ನಿಧಿಗೆ ಕೇರಳದಲ್ಲಿ ಸೆಲೆಬ್ರಿಟಿಗಳಿಂದ ಸಾಮಾನ್ಯ ಜನರವರೆಗೂ ದಾನವನ್ನು ನೀಡಿದ್ದಾರೆ. ಸಣ್ಣ ವಯಸ್ಸಿನ ಮಕ್ಕಳು ಕೋವಿಡ್ ನಿಧಿಗೆ ಹಣವನ್ನು ನೀಡಿವುದನ್ನು ಕಂಡ ಸುಬೈದಾ ಅವರಿಗೆ ತಾವು ಕೂಡ ಹೀಗೆ ಏನಾದರೂ ಸರ್ಕಾರಕ್ಕೆ ಸಹಾಯವಾಗುವ ನಿಟ್ಟಿನಲ್ಲಿ ಹಣವನ್ನು ನೀಡಬೇಕೆಂದುಕೊಳ್ಳುತ್ತಾರೆ. ಅದರೆ ಸುಬೈದಾ ಅವರ ಪರಿಸ್ಥಿತಿಯಲ್ಲಿ ಅದು ಅಷ್ಟು ಸುಲಭವಾಗಿರಲಿಲ್ಲ. ಇದ್ದ ಚಹಾದಂಗಡಿ ಲಾಕ್ ಡೌನ್ ನಿಂದ ಬಂದ್ ಆದ್ದಾಗ ಸುಬೈದಾ ಯೋಚಿಸಿದ ಯೋಜನೆ, ಕಾರ್ಯರೂಪಕ್ಕೆ ಬರುವುದು ಕಷ್ಟವಾಗಿತ್ತು.

ಸುಬೈದಾ ತಾವೂ ಏನೇ ಮಾಡಿ ಆದರೂ ಕೋವಿಡ್ ನಿಧಿಗೆ ತಮ್ಮ ಪುಟ್ಟ ಕೊಡುಗೆ ನೀಡುವ ಯೋಚನೆಯನ್ನು ಮಾತ್ರ ಬಿಡಲಿಲ್ಲ. ಈ ಬಗ್ಗೆ ತನ್ನ ಗಂಡನಲ್ಲಿ ಕೇಳಿದಾಗ ಗಂಡ ಕೂಡ ಹೆಂಡತಿಯ ಅಲೋಚನೆಗೆ ಸಾಥ್ ನೀಡುತ್ತಾರೆ. ಸುಬೈದಾ ಅವರು ಸಾಕಿಕೊಂಡ ಆಡುಗಳಲ್ಲಿ ನಾಲ್ಕು ಆಡುಗಳನ್ನು ಮಾರಿ ಅದರಿಂದ ಬಂದ ಹಣವನ್ನು ಕೋವಿಡ್ ನಿಧಿಗೆ ನೀಡಲು ನಿರ್ಧಾರಿಸುತ್ತಾರೆ.!

ತಾವು ಈ ರೀತಿ ಕೋವಿಡ್ ನಿಧಿಗೆ ಹಣ ನೀಡಲು ನಿರ್ಧಾರಿಸಿದ್ದೇನೆ ಎಂದು ಪೊಲೀಸರ ಬಳಿ ಕೇಳಿ ಸುಬೈದಾ ತಮ್ಮ ಸಣ್ಣ ಸಹಾಯವನ್ನು ಕೋವಿಡ್ ನಿಧಿಗೆ ನೀಡುವುದರ ಜತೆಗೆ ತಮ್ಮಗಿಂತ ಬಡವರಿದ್ದ ಕುಟುಂಬಕ್ಕೆ ಅಗತ್ಯ ಸೌಲಭ್ಯ ಹಾಗೂ ಅಕ್ಕಿಯನ್ನು ನೀಡುತ್ತಾರೆ.

ಸುಬೈದಾ ಅವರ ಈ ಕಾರ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವುದರ ಜತೆಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಪ್ರಮಾಣ ವಚನಕ್ಕೆ ವಿಶೇಷ ವ್ಯಕ್ತಿಯಾಗಿ ಆಹ್ವಾನವಾಗುತ್ತಾರೆ. ಸುಬೈದಾ ಅವರು ಮನೆಯಲ್ಲಿ ಹೃದಯ ಸಂಬಂಧಿ ಕಾಯಿಲೆಯಿಂದ ಹಾಸಿಗೆಯಲ್ಲಿ ಮಲಗಿರುವ ತನ್ನ ಗಂಡ ಹಾಗೂ ಅದೇ ಕಾಯಿಲೆಯಿಂದ ಬಳಲುತ್ತಿರುವ ಅವರ ತಮ್ಮನನ್ನು ನೋಡಿಕೊಳ್ಳುತ್ತಿದ್ದಾರೆ. ಸುಬೈದಾ ಅವರ ಮಕ್ಕಳು ದಿನಕೂಲಿ ನೌಕರರಾಗಿದ್ದಾರೆ.

ಕೋವಿಡ್ ನಿಧಿಗೆ ಸುಬೈದಾ ಅವರು ಮಾರಿದ ನಾಲ್ಕು ಆಡುಗಳ ವಿಷಯ ತಿಳಿದ ಸ್ಥಳೀಯ ಉದ್ಯಮಿಯೊಬ್ಬರು ಬದಲಾಗಿ, ಸ್ಥಳಿಯ ಉದ್ಯಮಿಯೊಬ್ಬರು, ಸುಬೈದಾ ಅವರಿಗೆ ಹೊಸ 5 ಆಡುಗಳನ್ನು ಉಡುಗೊರೆಯಾಗಿ ನೀಡುತ್ತಾರೆ.

ಕೋವಿಡ್ ಸಂಕಷ್ಟದಲ್ಲಿ ಇಂಥವರೇ ನಿಜವಾದ ಹೀರೋಸ್ ಹೇಳಿದರೆ ತಪ್ಪಾಗದು.

 

-ಸುಹಾನ್ ಶೇಕ್

ಟಾಪ್ ನ್ಯೂಸ್

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Food ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ

Food: ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಗದಗ: ತೋಟದಾರ್ಯ ಮಠ ಅನ್ನ-ಅಕ್ಷರ ದಾಸೋಹಕ್ಕೆ ಪ್ರಸಿದ್ಧ

ಗದಗ: ತೋಟದಾರ್ಯ ಮಠ ಅನ್ನ-ಅಕ್ಷರ ದಾಸೋಹಕ್ಕೆ ಪ್ರಸಿದ್ಧ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

ಚನ್ನಮ್ಮನ ಕಿತ್ತೂರು: ಮಹಾನ್‌ ಯೋಗಿಗಳು-ಸೂಫಿ ಸಂತರ ನಾಡಿದು- ಶಿಲೇದಾರ

ಚನ್ನಮ್ಮನ ಕಿತ್ತೂರು: ಮಹಾನ್‌ ಯೋಗಿಗಳು-ಸೂಫಿ ಸಂತರ ನಾಡಿದು- ಶಿಲೇದಾರ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ

ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.