Cricket World Cup: ಲಂಕೆಗೆ ಕಾದಿದೆ ದಕ್ಷಿಣ ಆಫ್ರಿಕಾ ಸವಾಲು
Team Udayavani, Oct 7, 2023, 6:25 AM IST
ಹೊಸದಿಲ್ಲಿ: ವಿಶ್ವಕಪ್ ಇತಿಹಾಸದ ನತದೃಷ್ಟ ತಂಡಗಳಲ್ಲಿ ಮುಂಚೂಣಿಯಲ್ಲಿರುವ ದಕ್ಷಿಣ ಆಫ್ರಿಕಾ ಮೊದಲ ಐಸಿಸಿ ಟ್ರೋಫಿಯ ನಿರೀಕ್ಷೆಯೊಂದಿಗೆ ಶನಿವಾರ ಕಣಕ್ಕಿಳಿಯಲಿದೆ. ಎದುರಾಳಿ ಶ್ರೀಲಂಕಾ.
ಎರಡೂ ತಂಡಗಳು ಪ್ರಮುಖ ಆಟಗಾರರ ಗೈರಿನೊಂದಿಗೆ ಆಡಬೇಕಿದೆ. ದಕ್ಷಿಣ ಆಫ್ರಿಕಾ ಆ್ಯನ್ರಿಚ್ ನೋರ್ಜೆ ಮತ್ತು ಸಿಸಾಂಡ ಮಗಾಲ ಅವರ ಸೇವೆಯಿಂದ ವಂಚಿತವಾಗಿದೆ. ಆದರೆ ಈ ಸ್ಥಾನವನ್ನು ತುಂಬಬಲ್ಲ ಸಮರ್ಥ ಬೌಲರ್ ಹರಿಣಗಳ ಪಡೆಯಲ್ಲಿದ್ದಾರೆ. ಇವರೆಂದರೆ ಅನುಭವಿ ಕಾಗಿಸೊ ರಬಾಡ ಮತ್ತು 23 ವರ್ಷದ ಪ್ರತಿಭಾನ್ವಿತ ವೇಗಿ ಗೆರಾಲ್ಡ್ ಕೋಟ್ಝೀ
ಆದರೆ ಲಂಕಾ ಸ್ಥಿತಿ ಇದಕ್ಕಿಂತ ಭಿನ್ನ. ಈ ದ್ವೀಪರಾಷ್ಟ್ರಕ್ಕೆ ಸ್ಟಾರ್ ಆಟಗಾರರ ಬಲವಾದ ಆಘಾತ ತಟ್ಟಿದೆ. ಫ್ರಂಟ್ಲೆçನ್ ಪೇಸ್ ಬೌಲರ್ಗಳಾದ ದುಷ್ಮಂತ ಚಮೀರ, ಲಹಿರು ತಿರಿಮನ್ನೆ, ಲೆಗ್ಸ್ಪಿನ್ನಿಂಗ್ ಆಲ್ರೌಂಡರ್ ವನಿಂದು ಹಸರಂಗ ಅವರ ಗೈರು ಲಂಕೆಯನ್ನು ಖಂಡಿತವಾಗಿಯೂ ಗಾಢವಾಗಿ ತಟ್ಟಲಿದೆ.
ದ. ಆಫ್ರಿಕಾ ಬಲಿಷ್ಠ ತಂಡ
ಕಾಗದದಲ್ಲಿ ದಕ್ಷಿಣ ಆಫ್ರಿಕಾ ಲಂಕೆಗಿಂತಲೂ ಬಲಿಷ್ಠವಾದ ತಂಡ. ಟೆಂಬ ಬವುಮ ನೇತೃತ್ವದಲ್ಲಿ ಮೊದಲ ಸಲ ವಿಶ್ವಕಪ್ ಆಡುತ್ತಿದೆ. ಆರಂಭಿಕನಾಗಿ ಇಳಿಯುವ ಬವುಮ, ಕೀಪರ್ ಕ್ವಿಂಟನ್ ಡಿ ಕಾಕ್, ಬಿಗ್ ಹಿಟ್ಟರ್ ಡೇವಿಡ್ ಮಿಲ್ಲರ್, ಹೆನ್ರಿಕ್ ಕ್ಲಾಸೆನ್ ಅವರನ್ನೊಳಗೊಂಡ ಬ್ಯಾಟಿಂಗ್ ಲೈನ್ಅಪ್ ಅತ್ಯಂತ ಅಪಾಯಕಾರಿ. ಲಂಕಾ ಬೌಲಿಂಗ್ ಪಡೆ ಇವರನ್ನು ನಿಯಂತ್ರಿಸಿದರಷ್ಟೇ ಯಶಸ್ಸು ಸಾಧ್ಯ.
ಎಡಗೈ ಸ್ಪಿನ್ನರ್ ದುನಿತ್ ವೆಲ್ಲಲಗೆ, ಲಹಿರು ಕುಮಾರ, ದಿಲ್ಶನ್ ಮದುಶಂಕ, ಮತೀಶ ಪತಿರಣ, ಕಸುನ್ ರಜಿತ ಲಂಕೆಯ ಪೇಸ್ ವಿಭಾಗದ ಪ್ರಮುಖರಾಗಿದ್ದು, ಹರಿಣಗಳನ್ನು ತಡೆಯುವ ಅಸಾಮಾನ್ಯ ಸವಾಲೊಂದು ಇವರ ಮುಂದಿದೆ.
ಲಂಕೆಯ ಸಾಮಾನ್ಯ ಬ್ಯಾಟಿಂಗ್
ಶ್ರೀಲಂಕಾದ ಬ್ಯಾಟಿಂಗ್ ಸರದಿ ಪರ್ವಾಗಿಲ್ಲ ಎಂಬ ಮಟ್ಟದ್ದು. ನಾಯಕ ದಿಮುತ್ ಕರುಣಾರತ್ನೆ, ಪಥುಮ್ ನಿಸ್ಸಂಕ, ಕುಸಲ್ ಪೆರೆರ, ಸದೀರ ಸಮರ ವಿಕ್ರಮ, ಚರಿತ ಅಸಲಂಕ ಅವರಿಂದ ಎವರೇಜ್ ಬ್ಯಾಟಿಂಗ್ ನಿರೀಕ್ಷಿಸಲಡ್ಡಿಯಿಲ್ಲ. ಆದರೆ ವಿಶ್ವಕಪ್ನಂಥ ಬಿಗ್ ಟೂರ್ನಿಗೆ ಈ ಬ್ಯಾಟಿಂಗ್ ಬಲ ಖಂಡಿತ ಸಾಲದು.
ತವರಲ್ಲೇ ನಡೆದ ಕಳೆದ ಏಷ್ಯಾ ಕಪ್ ಪಂದ್ಯಾವಳಿಯಲ್ಲಿ ಶ್ರೀಲಂಕಾ ಫೈನಲ್ ಪ್ರವೇಶಿಸಿತಾದರೂ ಭಾರತದೆದುರು ಶೋಚನೀಯ ಬ್ಯಾಟಿಂಗ್ ನಡೆಸಿ ಶರಣಾಗಿತ್ತು. ವಿಶ್ವಕಪ್ ಹೊತ್ತಿನಲ್ಲಿ ಲಂಕೆಗೆ ಎದುರಾದ ಮರ್ಮಾಘಾತ ಇದು. ಇದಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳುವ ರೀತಿಯಲ್ಲಿ ಲಂಕಾ ಪಡೆ ಹೋರಾಟ ಆರಂಭಿಸಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IPL 2024; ಪಂಜಾಬ್ ವಿರುದ್ಧ ಸೋಲು; ಅಂಪೈರ್ ಜತೆ ವಾಗ್ವಾದಕ್ಕಿಳಿದ ಗೌತಮ್ ಗಂಭೀರ್
ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ
Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್ ನಲ್ಲಿ ಪತ್ತೆ!
W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ
Muddebihal: ಹೆಂಡತಿಗೆ ಚೂರಿ ಇರಿದು ಪರಾರಿಯಾದ ಗಂಡ