ತೈಲ ಬೆಲೆ ನಿತ್ಯ ಬದಲಾವಣೆ; ಗ್ರಾಹಕನಿಗೆ ತುಸು ನೆಮ್ಮದಿ


Team Udayavani, Jun 17, 2017, 10:41 AM IST

petrolpumps-1.jpg

ಪ್ರತಿನಿತ್ಯ ಪೆಟ್ರೋಲು ಮತ್ತು ಡೀಸಿಲ್‌ ಬೆಲೆ ಪರಿಷ್ಕರಿಸುವ ಪದ್ಧತಿ ಶುಕ್ರವಾರದಿಂದ ದೇಶಾದ್ಯಂತ ಜಾರಿಗೆ ಬಂದಿದೆ. 2010ರಲ್ಲಿ ಪೆಟ್ರೋಲು ಮತ್ತು 2014ರಲ್ಲಿ ಡೀಸಿಲ್‌ ಇಂಧನಗಳ ಬೆಲೆಯನ್ನು ನಿಯಂತ್ರಣ ಮುಕ್ತಗೊಳಿಸಿದ ಬಳಿಕ ಆಗಿರುವ ಬಹಳ ದೊಡ್ಡ ಬದಲಾವಣೆಯಿದು. ಸರಕಾರಿ ನಿಯಂತ್ರಣದಲ್ಲಿದ್ದ ಪೆಟ್ರೋಲು ಮತ್ತು ಡೀಸಿಲ್‌ ಬೆಲೆ ನಿರ್ಧರಿಸುವ ಅಧಿಕಾರವನ್ನು ಆಯಾಯ ಕಂಪೆನಿಗಳಿಗೆ ವರ್ಗಾಯಿಸಿದ ಅಂದಿನ ಯುಪಿಎ ಕ್ರಮವೂ ಬಹಳ ಕ್ರಾಂತಿಕಾರಕವಾಗಿತ್ತು. ಅನಂತರ 15 ದಿನಗಳಿಗೊಮ್ಮೆ ದರ ಪರಿಷ್ಕರಿಸುವ ಪದ್ಧತಿ ಜಾರಿಗೆ ಬಂತು.

ಆರಂಭದಲ್ಲಿ ಈ ಬದಲಾವಣೆಗಳಿಗೆ ಭಾರೀ ವಿರೋಧ ವ್ಯಕ್ತವಾದರೂ ಕ್ರಮೇಣ ಜನರು ಈ ವ್ಯವಸ್ಥೆಗೆ ಒಗ್ಗಿಕೊಂಡರು. ಈಗ ನಿತ್ಯ ದರ ಪರಿಷ್ಕರಿಸುವ ವಿಚಾರದಲ್ಲೂ ಇದೇ ಪುನರಾವರ್ತನೆಯಾಗುತ್ತಿದೆ. ಪೆಟ್ರೋಲು  ಪಂಪ್‌ಗ್ಳ ಮಾಲಕರು ಹಲವು ಕಾರಣಗಳನ್ನೊಡ್ಡಿ ನಿತ್ಯ ದರ ಪರಿಷ್ಕರಿಸುವ ಪದ್ಧತಿಯನ್ನು ವಿರೋಧಿಸುತ್ತಿದ್ದಾರೆ. ಐದು
ನಗರಗಳಲ್ಲಿ ಮೇ 1ರಿಂದ ಪ್ರಾಯೋಗಿಕವಾಗಿ ಈ ಪದ್ಧತಿಯನ್ನು ಅಳವಡಿಸಿ ನೋಡಲಾಗಿತ್ತು. ಇದು ಯಶಸ್ವಿಯಾಗಿರುವುದರಿಂದ ದೇಶದ ಉಳಿದೆಡೆಯೂ ಯಶಸ್ವಿಯಾಗುವ ವಿಶ್ವಾಸದಿಂದ ಸರಕಾರ ಮುಂದಡಿಯಿಟ್ಟಿದೆ.

ನಿತ್ಯ ತೈಲ ಕಂಪೆನಿಗಳು ಡೀಲರ್‌ಗಳಿಗೆ ಎಸ್‌ಎಂಎಸ್‌ ಮೂಲಕ ಅಂದಿನ ಬೆಲೆಯನ್ನು ಕಳುಹಿಸುತ್ತವೆ. ಪಂಪ್‌ಗ್ಳಲ್ಲಿ ಇದೇ ಬೆಲೆಯನ್ನು ವಸೂಲು ಮಾಡಬೇಕು. ಹೆಚ್ಚು ವಸೂಲು ಮಾಡುವುದು ಪತ್ತೆಯಾದರೆ ಭಾರೀ ದಂಡ
ವಿಧಿಸಲಾಗುವುದು. ಪೆಟ್ರೋಲು ಪಂಪ್‌ಗ್ಳಲ್ಲಿ ನಿತ್ಯವೂ ಎದ್ದುಕಾಣುವಂತೆ ಡೀಸಿಲ್‌ ಮತ್ತು ಪೆಟ್ರೋಲು ಬೆಲೆಯನ್ನು ಪ್ರದರ್ಶಿಸಬೇಕು. ಹಾಗೆಂದು ನಿತ್ಯ ದೊಡ್ಡ ಮೊತ್ತದ ವ್ಯತ್ಯಾಸವೇನೂ ಆಗುವುದಿಲ್ಲ. ಗರಿಷ್ಠವೆಂದರೆ 50
ಪೈಸೆಗಳ ತನಕ ವ್ಯತ್ಯಾಸವಾಗಬಹುದು. ಅಲ್ಲದೆ ಪಂಪ್‌ನಿಂದ ಪಂಪ್‌ ಗೆ ಕೆಲವು ಪೈಸೆಗಳ ವ್ಯತ್ಯಾಸವೂ ಇರಬಹುದು. ಬೇರೆ ಬೇರೆ ಕಂಪೆನಿಗಳ ಬೆಲೆಗಳಲ್ಲಿ ತುಸು ವ್ಯತ್ಯಾಸವಿರುವುದು ಇದಕ್ಕೆ ಕಾರಣ. ಅಂತಾರಾಷ್ಟ್ರೀಯ 
ಕಚ್ಚಾತೈಲ ಬೆಲೆ ಮತ್ತು  ರೂಪಾಯಿ -ಡಾಲರ್‌ ವಿನಿಮಯ ದರವನ್ನು ಹೊಂದಿಕೊಂಡು ಅಂದಂದಿನ ತೈಲ ಬೆಲೆ ನಿರ್ಧಾರವಾಗುತ್ತದೆ.

ಹಿಂದೆಯೂ ತೈಲ ಬೆಲೆ ನಿಗದಿಗೆ ಇದೇ ಆಧಾರವಾಗಿತ್ತು. ಆದರೆ 15 ದಿನಗಳ ಸರಾಸರಿಯ ಮೇಲೆ ಬೆಲೆ ಹೆಚ್ಚು ಕಮ್ಮಿ ಆಗುತ್ತಿತ್ತು. ಆದರೆ ಈಗ ಪ್ರತಿ ದಿನದ ಮಾರುಕಟ್ಟೆ ದರಕ್ಕೆ ತಕ್ಕಂತೆ ಇಳಿಕೆ ಹೆಚ್ಚಳ ಆಗಲಿರುವುದೊಂದೇ
ವ್ಯತ್ಯಾಸ. 15 ದಿನಗಳಿಗೊಮ್ಮೆ ಪರಿಷ್ಕರಣೆಯಾದಾಗ ಗ್ರಾಹಕ ಈ ಅವಧಿಯಲ್ಲಿ ಏರಿಕೆಯಾದ ಬೆಲೆಯನ್ನೂ ತೆರಬೇಕಿತ್ತು. ಹೊಸ ಪದ್ಧತಿಯಲ್ಲಿ ಈ ಅನಗತ್ಯ ಹೊರೆಯಿಲ್ಲ. ಒಂದು ವೇಳೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಭಾರೀ ಪ್ರಮಾಣದಲ್ಲಿ ಕಡಿಮೆಯಾದರೆ ಅದರ ಪೂರ್ಣ ಲಾಭ ಗ್ರಾಹಕನಿಗೆ ಸಿಗಲಿದೆ. ಅಂತೆಯೇ ಡಾಲರ್‌ ಎದುರು ರೂಪಾಯಿ ಚೇತರಿಕೆ ಕಂಡರೂ ಗ್ರಾಹಕನಿಗೆ ತುಸು ಪ್ರಯೋಜನವಾಗುತ್ತದೆ. 

ನಿತ್ಯ ಇಂಧನ ತುಂಬಿಸಿಕೊಳ್ಳುವವರಿಗೆ ಈ ಪದ್ಧತಿಯಲ್ಲಿ ಲಾಭವೂ ಇದೆ, ನಷ್ಟವೂ ಇದೆ. ಪಾಕ್ಷಿಕ ಪರಿಷ್ಕರಣೆ ಪದ್ಧತಿಯಲ್ಲಿ ಮಾರುಕಟ್ಟೆ ಹೊರತಾದ ಕೆಲವು ಕಾರಣಗಳಿಗೆ ಬೆಲೆ ಪರಿಷ್ಕರಣೆಯನ್ನು ಮುಂದೂಡಲಾಗುತ್ತಿತ್ತು.
ಬಹುತೇಕ ಸಂದರ್ಭದಲ್ಲಿ ಚುನಾವಣೆ ಸನ್ನಿಹಿತವಾಗುವಾಗ ಪೆಟ್ರೋಲು ಮತ್ತು ಡೀಸಿಲ್‌ ಬೆಲೆ ಹೆಚ್ಚಾದರೆ ಆಡಳಿತ ಪಕ್ಷಕ್ಕೆ ಮುಜುಗರವಾಗುತ್ತಿತ್ತು.  ಹೀಗಾಗಿ ಪರಿಷ್ಕರಣೆ ಮುಂದಕ್ಕೆ ಹೋಗುತ್ತಿತ್ತು. ನಿತ್ಯ ಪರಿಷ್ಕರಣೆಯಾಗುವ ಪಾರದರ್ಶಕ ವ್ಯವಸ್ಥೆಯಲ್ಲಿ ಪೆಟ್ರೋಲು ಮತ್ತು ಡೀಸಿಲ್‌ ಬೆಲೆಯೊಂದಿಗೆ ರಾಜಕೀಯ ಮಾಡುವ ಅವಕಾಶ ಸರಕಾರಕ್ಕೆ ಇರುವುದಿಲ್ಲ. ನಿಜವಾಗಿ ಪ್ರತಿದಿನ ಮಧ್ಯರಾತ್ರಿ ಬೆಲೆ ಬದಲಾವಣೆಯಾಗಬೇಕಿತ್ತು. ಆದರೆ ಈ ವ್ಯವಸ್ಥೆಗೆ
ಪಂಪ್‌ ಮಾಲಕರು ಭಾರೀ ವಿರೋಧ ವ್ಯಕ್ತಪಡಿಸಿದ ಕಾರಣ ಈಗ ಬೆಳಗ್ಗೆ 6 ಗಂಟೆಗೆ ಬೆಲೆ ನಿಗದಿಯಾಗುತ್ತದೆ. ಮಧ್ಯರಾತ್ರಿ ಬೆಲೆ ಬದಲಾವಣೆಯಾದರೆ ಇದಕ್ಕಾಗಿಯೇ ಪಂಪ್‌ಗ್ಳಲ್ಲಿ ಸಿಬಂದಿಯನ್ನು ಇಡಬೇಕಿತ್ತು. ಈ ಸಮಸ್ಯೆ ಈಗ ಪರಿಹಾರವಾಗಿರುವುದರಿಂದ ಪಂಪ್‌ ಮಾಲಕರು ಹೆಚ್ಚು ತಕರಾರು ಮಾಡುವುದು ಸರಿಯಲ್ಲ.

ಅತ್ಯಧಿಕ ತೈಲ ಆಮದು ಮಾಡಿಕೊಳ್ಳುವ ದೇಶಗಳ ಪೈಕಿ ಭಾರತ ಮೂರನೇ ಸ್ಥಾನದಲ್ಲಿದೆ. ಪಳೆಯುಳಿಕೆ ಇಂಧನ ಬೆಲೆಯೇ ಹಣದುಬ್ಬರ ಹಾಗೂ ಆರ್ಥಿಕತೆಯ ಇತರ ಅಂಶಗಳನ್ನು ನಿಯಂತ್ರಿಸುತ್ತಿದೆ. ಬೆಲೆಯನ್ನು
ನಿಯಂತ್ರಣ ಮುಕ್ತಗೊಳಿಸಿದ್ದರೂ ಇನ್ನೂ ಅದರ ಪ್ರಯೋಜನ ಜನರಿಗೆ ಸಿಕ್ಕಿಲ್ಲ. ಇನ್ನು ಮುಂದೆಯಾದರೂ ಬೆಲೆ ಸ್ಥಿತ್ಯಂತರದ ಪೂರ್ಣ ಲಾಭ ಗ್ರಾಹಕನಿಗೆ ಸಿಗುವಂತಾಗಬೇಕು.

ಟಾಪ್ ನ್ಯೂಸ್

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಗದಗ: ತೋಟದಾರ್ಯ ಮಠ ಅನ್ನ-ಅಕ್ಷರ ದಾಸೋಹಕ್ಕೆ ಪ್ರಸಿದ್ಧ

ಗದಗ: ತೋಟದಾರ್ಯ ಮಠ ಅನ್ನ-ಅಕ್ಷರ ದಾಸೋಹಕ್ಕೆ ಪ್ರಸಿದ್ಧ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

ಚನ್ನಮ್ಮನ ಕಿತ್ತೂರು: ಮಹಾನ್‌ ಯೋಗಿಗಳು-ಸೂಫಿ ಸಂತರ ನಾಡಿದು- ಶಿಲೇದಾರ

ಚನ್ನಮ್ಮನ ಕಿತ್ತೂರು: ಮಹಾನ್‌ ಯೋಗಿಗಳು-ಸೂಫಿ ಸಂತರ ನಾಡಿದು- ಶಿಲೇದಾರ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ

ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.