ಕಿಡ್ನಿ ಕಲ್ಲು  ಮರುಕಳಿಸುವುದನ್ನು ತಡೆಯಲು ಆರೋಗ್ಯಕರ ಆಹಾರಾಭ್ಯಾಸ


Team Udayavani, Sep 17, 2017, 7:45 AM IST

Kidney-stone.jpg

ಒಮ್ಮೆಗೆ ಮುಗಿಯುವುದಿಲ್ಲ
ಕಿಡ್ನಿ ಕಲ್ಲನ್ನು ವಿಸರ್ಜಿಸುವುದು ವ್ಯಕ್ತಿಯೊಬ್ಬ ಅನುಭವಿಸಬಹುದಾದ ಅತ್ಯಂತ ನೋವಿನ ಅನುಭವ ಎಂದು ಆಗಾಗ ವರ್ಣಿಸಲಾಗುತ್ತದೆ. ದುರದೃಷ್ಟವಶಾತ್‌ ಅದು ಒಂದೇ ಬಾರಿಗೆ ಹೀಗೆ ವಿಸರ್ಜಿಸಿ ಮುಗಿದುಹೋಗುವುದಿಲ್ಲ. ಕೇವಲ ಒಂದು ಕಲ್ಲು ಮಾತ್ರ ಇದ್ದರೂ ಇನ್ನೊಂದು ಕಲ್ಲು ಉಂಟಾಗುವ ಸಾಧ್ಯತೆ ಅಧಿಕ ಎಂದು ಅಧ್ಯಯನಗಳು ತೋರಿಸಿಕೊಟ್ಟಿವೆ.  ಕಿಡ್ನಿಕಲ್ಲು ಉಳ್ಳ ರೋಗಿಗಳ ಪೈಕಿ ಶೇ.15ರಷ್ಟು ಮಂದಿ ವೈದ್ಯರು ಶಿಫಾರಸು ಮಾಡಿರುವ ಔಷಧಿಗಳನ್ನು ತೆಗೆದುಕೊಳ್ಳುವುದಿಲ್ಲ ಎಂದೂ ಮತ್ತು ಶೇ.41ರಷ್ಟು ಮಂದಿ ಕಲ್ಲುಗಳು ಮತ್ತೆ ಉಂಟಾಗುವುದನ್ನು ತಡೆಯುವುದಕ್ಕೋಸ್ಕರ ಶಿಫಾರಸು ಮಾಡಲಾದ ಪಥ್ಯಾಹಾರವನ್ನು ಅನುಸರಿಸುವುದಿಲ್ಲ ಎಂದೂ ಅಧ್ಯಯನಗಳು ಹೇಳುತ್ತವೆ. ಸರಿಯಾದ ಔಷಧಿ ಸೇವನೆ ಮತ್ತು ಆಹಾರ ಬದಲಾವಣೆಗಳನ್ನು ಅನುಸರಿಸದೆ ಇದ್ದರೆ ಕಲ್ಲುಗಳು ಮತ್ತೆ ಮತ್ತೆ ಉಂಟಾಗಬಹುದು; ಹೀಗೆ ಪದೇ ಪದೇ ಕಲ್ಲುಗಳು ರೂಪುಗೊಳ್ಳುವುದು ಮೂತ್ರಪಿಂಡಗಳ ಕಾಯಿಲೆಯ ಸಹಿತ ಇತರ ಆರೋಗ್ಯ ಸಮಸ್ಯೆಗಳ ಸೂಚನೆಯೂ ಆಗಿರಬಹುದು.

ಪ್ಯುರೈನ್‌ಯುಕ್ತ ಆಹಾರ 
ವಸ್ತುಗಳನ್ನು  ಮಿತಗೊಳಿಸಿ

ಕ್ಯಾಲ್ಸಿಯಂ ಓಕ್ಸಲೇಟ್‌ ಕಲ್ಲುಗಳ ಜತೆಗೆ ಬಹುಸಾಮಾನ್ಯವಾಗಿ ಉಂಟಾಗುವ ಇನ್ನೊಂದು ವಿಧವಾದ ಕಿಡ್ನಿಕಲ್ಲುಗಳೆಂದರೆ ಯೂರಿಕ್‌ ಆ್ಯಸಿಡ್‌ ಕಲ್ಲುಗಳು. ಕೆಂಪು ಮಾಂಸ, ಅಂಗಾಂಗ ಮಾಂಸ ಮತ್ತು ಚಿಪ್ಪುಮೀನುಗಳು ಪ್ಯುರೈನ್‌ಗಳೆಂದು ಕರೆಯಲ್ಪಡುವ ನೈಸರ್ಗಿಕ ರಾಸಾಯನಿಕ ಸಂಯುಕ್ತವನ್ನು ಅತ್ಯಧಿಕ ಪ್ರಮಾಣದಲ್ಲಿ ಹೊಂದಿರುತ್ತವೆ. ಆಹಾರದ ಮೂಲಕ ಪ್ಯುರೈನ್‌ ಹೆಚ್ಚು ಪ್ರಮಾಣದಲ್ಲಿ ದೇಹಕ್ಕೆ ಪೂರೈಕೆಯಾದರೆ ಯೂರಿಕ್‌ ಆ್ಯಸಿಡ್‌ ಉತ್ಪಾದನೆ ಅಧಿಕವಾಗುತ್ತದೆ ಹಾಗೂ ಮೂತ್ರಪಿಂಡಗಳು ಹೆಚ್ಚು ಆಮ್ಲವನ್ನು ಶೋಧಿಸಬೇಕಾಗುತ್ತದೆ. ಯೂರಿಕ್‌ ಆ್ಯಸಿಡ್‌ ಹೆಚ್ಚು ಪ್ರಮಾಣದಲ್ಲಿ ಶೋಧಿಸಲ್ಪಡುವುದರಿಂದ ಮೂತ್ರದ ಒಟ್ಟಾರೆ ಪಿಎಚ್‌ ಮಟ್ಟ ಕಡಿಮೆಯಾಗಿ ಮೂತ್ರ ಹೆಚ್ಚು ಆಮ್ಲಿàಯವಾಗುತ್ತದೆ. ಮೂತ್ರದಲ್ಲಿ ಆಮ್ಲ ಪ್ರಮಾಣ ಹೆಚ್ಚುವುದರಿಂದ ಯೂರಿಕ್‌ ಆ್ಯಸಿಡ್‌ ಕಲ್ಲುಗಳು ಉಂಟಾಗುವುದು ಸುಲಭಸಾಧ್ಯವಾಗುತ್ತದೆ. 

ಯೂರಿಕ್‌ ಆ್ಯಸಿಡ್‌ ಕಲ್ಲುಗಳು ಉಂಟಾಗುವುದನ್ನು ತಡೆಯಲು ಕೆಂಪು ಮಾಂಸ, ಅಂಗಾಂಗ ಮಾಂಸ, ಚಿಪ್ಪುಮೀನುಗಳಂತಹ ಆಹಾರ ಸೇವನೆಯನ್ನು ಮಿತಗೊಳಿಸಬೇಕು. ಅದರ ಬದಲಾಗಿ ತರಕಾರಿ ಮತ್ತು ಹಣ್ಣುಗಳು, ಇಡೀ ಧಾನ್ಯಗಳು ಮತ್ತು ಕಡಿಮೆ ಕೊಬ್ಬಿನಂಶವುಳ್ಳ ಹೈನುಉತ್ಪನ್ನಗಳಂತಹ ಆರೋಗ್ಯಯುತ ಆಹಾರ ಕ್ರಮವನ್ನು ಅನುಸರಿಸಬೇಕು. ಸಕ್ಕರೆ ಅದರಲ್ಲೂ ಫ್ರುಕ್ಟೋಸ್‌ ಕಾರ್ನ್ ಸಿರಪ್‌ ಬೆರೆತ ಸಿಹಿ ಪಾನೀಯಗಳು ಮತ್ತು ಆಹಾರವಸ್ತುಗಳ ಸೇವನೆಯನ್ನು ನಿಯಂತ್ರಿಸಿ. ಮದ್ಯವು ರಕ್ತದಲ್ಲಿ ಯೂರಿಕ್‌ ಆ್ಯಸಿಡ್‌ ಪ್ರಮಾಣವನ್ನು ವೃದ್ಧಿಸುವುದರಿಂದ ಮದ್ಯಪಾನದಿಂದ ದೂರವಿರಿ. ಪ್ರಾಣಿಜನ್ಯ ಪ್ರೊಟೀನ್‌ ಸೇವನೆಯನ್ನು ಕಡಿಮೆಗೊಳಿಸಿ, ಹೆಚ್ಚು ತರಕಾರಿ – ಹಣ್ಣುಹಂಪಲುಗಳನ್ನು ಸೇವಿಸುವುದರಿಂದ ಯೂರಿಕ್‌ ಆ್ಯಸಿಡ್‌ ಮಟ್ಟವನ್ನು ತಗ್ಗಿಸುವುದರ ಜತೆಗೆ ಕಿಡ್ನಿ ಕಲ್ಲು ಉಂಟಾಗುವ ಅಪಾಯವನ್ನು ದೂರ ಸರಿಸಬಹುದು. 

ಸ್ಟ್ರಾಂಗ್‌ ಕಾಫಿ, ಚಹಾ 
ಸೇವನೆಯನ್ನು ಕಡಿಮೆ ಮಾಡಿ

ಸ್ಟ್ರಾಂಗ್‌ ಅಥವಾ ಹಾಲು ಹಾಕದ ಕಡು ಕಾಫಿ ಮತ್ತು ಚಹಾದಲ್ಲಿ ಓಕ್ಸಲೇಟ್‌ಗಳು ಅತ್ಯಧಿಕ ಪ್ರಮಾಣದಲ್ಲಿರುತ್ತವೆ. ಇದು ಕಿಡ್ನಿಕಲ್ಲು ರೂಪುಗೊಳ್ಳುವ ಅಪಾಯವನ್ನು ಹೆಚ್ಚಿಸುತ್ತದೆ. ಹೀಗಾಗಿ ಕ್ಯಾಲ್ಸಿಯಂ ಓಕ್ಸಲೇಟ್‌ ಕಿಡ್ನಿಕಲ್ಲುಗಳುಳ್ಳುವರು ತೆಳು ಕಾಫಿ ಅಥವಾ ಚಹಾ ಕುಡಿಯಬಹುದು. ಆದರೆ ಸ್ಟ್ರಾಂಗ್‌ ಚಹಾ ಅಥವಾ ಕಾಫಿಯನ್ನು ವರ್ಜಿಸಬೇಕು. ಚಹಾ ಕಾಫಿ ಕುಡಿಯುವವರು ಹಾಲು ಬೆರೆಸಿದ ಚಹಾ ಅಥವಾ ಕಾಫಿಯನ್ನು ದಿನಕ್ಕೆ ಎರಡು ಕಪ್ಪುಗಳಂತೆ ಮಧ್ಯಮ ಪ್ರಮಾಣದಲ್ಲಿ ಸೇವಿಸುವುದು ಸೂಕ್ತವಾಗಿದೆ. 

ತೂಕ ಇಳಿಸಿಕೊಳ್ಳುವುದು
ಬೊಜ್ಜು  ಮತ್ತು ಕಿಡ್ನಿಕಲ್ಲು ರೂಪುಗೊಳ್ಳುವುದರ ನಡುವೆ ಸಂಬಂಧ ಇರುವುದನ್ನು ಹೊಸ ಸಂಶೋಧನೆಗಳು ತೋರಿಸಿಕೊಟ್ಟಿವೆ. ಬೊಜ್ಜು, ಅಧಿಕ ದೇಹತೂಕವುಳ್ಳ ಹೆಚ್ಚು ಸೊಂಟದ ಸುತ್ತಳತೆಯುಳ್ಳವರು ಕಿಡ್ನಿ ಕಲ್ಲುಗಳ ಅಪಾಯವನ್ನು ದೂರವಿರಿಸಲು ದೇಹತೂಕ ಇಳಿಸಿಕೊಳ್ಳಬೇಕು. ಸಂಸ್ಕರಿತ ಸಕ್ಕರೆ, ಕಡಿಮೆ ದ್ರವಾಹಾರ ಸೇವನೆ ಮತ್ತು ಪ್ಯುರೈನ್‌ ಹೆಚ್ಚು ಇರುವ ಆಹಾರ ಸೇವನೆಗೂ ಬೊಜ್ಜಿಗೂ ನಿಕಟ ಸಂಬಂಧವಿದೆ. ಈ ಎಲ್ಲ ಅಂಶಗಳು ಕಿಡ್ನಿ ಕಲ್ಲು ಉಂಟಾಗುವ ಅಪಾಯವನ್ನೂ ಹೆಚ್ಚಿಸುತ್ತವೆ. ಇಡೀ ಧಾನ್ಯಗಳು, ಹಣ್ಣುಗಳು, ತರಕಾರಿಗಳು ಮತ್ತು ಕಡಿಮೆ ಕೊಬ್ಬಿನಂಶ ಇರುವ ಮಾಂಸಾಹಾರ ಸಹಿತವಾದ ಆರೋಗ್ಯಕರ ಆಹಾರಸೇವನೆಯನ್ನು ರೂಢಿಸಿಕೊಳ್ಳುವುದು ದೇಹ ತೂಕ ಇಳಿಕೆಗೂ ಸಹಕಾರಿ; ಕಿಡ್ನಿ ಕಲ್ಲು ಮತ್ತು ಬೊಜ್ಜಿಗೆ ಸಂಬಂಧಿಸಿದ ಇತರ ಆರೋಗ್ಯ ಸಮಸ್ಯೆಗಳನ್ನು ದೂರವಿರಿಸುವುದಕ್ಕೂ ನೆರವಾಗುತ್ತದೆ. 

ಸಾಫ್ಟ್ ಡ್ರಿಂಕ್‌ ಮತ್ತು ಕೋಲಾ ವರ್ಜಿಸಿ ಪಾಸಾಕ್‌ ಆ್ಯಸಿಡ್‌ ಹೊಂದಿರುವ ಸಾಫ್ಟ್ಡ್ರಿಂಕ್‌ ಮತ್ತು ಕೋಲಾಗಳನ್ನು, ಅವುಗಳ ಯೂರಿಕ್‌ ಆಮ್ಲವೃದ್ಧಿಯ ಗುಣದಿಂದಾಗಿ ವರ್ಜಿಸಬೇಕು.

ಟಾಪ್ ನ್ಯೂಸ್

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-health-1

Autism: ಸ್ವಲೀನತೆ: ಹಾಗೆಂದರೇನು?

12-health

Ankylosing Spondylitis: ಹಾಗೆಂದರೇನು ? ಕಾರಣವೇನು ? ಚಿಕಿತ್ಸೆ ಹೇಗೆ

5-health

Health: ಸಿರಿಧಾನ್ಯಗಳು: ಪುಟ್ಟ ಧಾನ್ಯಗಳಾದರೂ ಪೌಷ್ಟಿಕಾಂಶಗಳ ಗಣಿ

5-ginger

Ginger: ಶುಂಠಿ ಆರೋಗ್ಯಕ್ಕೆ ಉಪಕಾರಿ

7-

Obsessive Psychiatry: ಗೀಳು ಮನೋರೋಗ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.