ಗಣೇಶ ಬಂದ…
Team Udayavani, Aug 12, 2017, 3:56 PM IST
ಚೌತಿಗೆ ಎರಡು ವಾರಗಳಷ್ಟೇ ಇರೋದು. ಅಷ್ಟರಲ್ಲಿ ಗಣೇಶ, ನಮ್ಮ ಏರಿಯಾಗಳಿಗೆ, ಮನೆಗಳಿಗೆ, ಮನಗಳಿಗೆ ಬಂದುಬಿಡುತ್ತಾನೆ. ಅಲ್ಲಿಯವರೆಗೆ ನಮ್ಮ ಗಣೇಶ ಸುಮ್ಮನೆ ಕುಳಿತಿದ್ದಾನೆ ಎಂದುಕೊಳ್ಳದಿರಿ. ಶಿಲ್ಪಿ ಮತ್ತು ಕಲಾವಿದರ ಎದುರು ಕುಳಿತು ಬಣ್ಣ ಹಚ್ಚಿಸಿಕೊಳ್ಳುತ್ತಿದ್ದಾನೆ. ಚೌತಿಗೆ ಸಿಂಗಾರಗೊಳ್ಳುತ್ತಿದ್ದಾನೆ. ಚೌತಿಯ ಸಮಯದಲ್ಲಿ ವೇದಿಕೆಯಲ್ಲಿ ಪೀಠದ ಮೇಲೆ, ಹೂಮಾಲೆ ಧರಿಸಿದ ಗಣೇಶನನ್ನು ನೋಡಿದಂತೆಯೇ ಮಣ್ಣಿನಿಂದ ರೂಪುಗೊಳ್ಳುವ ಗಣೇಶನನ್ನು ನೋಡುವುದೂ ಒಂದು ಸಂಭ್ರಮ. ಅದಕ್ಕೇ ಬನಶಂಕರಿ, ಶ್ರೀನಿವಾಸನಗರ, ಮಾವಳ್ಳಿಗಳಲ್ಲಿ ಹುಡುಕಿಕೊಂಡು ಹೋದಾಗ, ಫಕ್ರುದ್ದೀನ್ ಕ್ಯಾಮೆರಾಗೆ ಸಿಕ್ಕ ಗಣೇಶ ಇಲ್ಲಿದ್ದಾನೆ.