ಹಿರಿಮಗನ ದೂರದೃಷ್ಠಿ


Team Udayavani, Feb 9, 2017, 3:45 AM IST

story.jpg

ಒಂದೂರಿನಲ್ಲಿ ರಾಮರಾಯ ಎಂಬವರಿಗೆ ಮೂರು ಮಕ್ಕಳಿರುತ್ತಾರೆ. ಅವರಿಗೆ ವಿದ್ಯೆ, ಶಿಸ್ತು ನೀಡಿ ಸುಖವಾಗಿ ಸಾಕಿರುತ್ತಾರೆ. ಹೀಗೆ ದೊಡ್ಡವರಾದ ಮೇಲೆ ಅವರ ಜ್ಞಾನ ಪರೀಕ್ಷೆ ಮಾಡಬೇಕೆಂದು ಮೂವರನ್ನು ಕರೆದು ಅಯ್ನಾ ಮಕ್ಕಳಿರಾ, ನನಗೆ ವಯಸ್ಸಾಯಿತು. ನಿಮ್ಮಗೆ ಓದು, ಬರಹ ಎಲ್ಲವನ್ನು ಕಲಿಸಿ ವಿದ್ಯಾವಂತರನ್ನಾಗಿ ಮಾಡಿದ್ದೇನೆ. ಹಾಗಾಗಿ ನಿಮ್ಮ ವಿದ್ಯೆಗಿಂತ ಜ್ಞಾನ ಎಷ್ಟಿದೆ ಎಂಬುದನ್ನು ನಾನು ಪರೀಕ್ಷಿಸಬೇಕು ಎಂದನು. ಮೂವರು ಒಪ್ಪಿದರು. 

ನೀವು ಮೂವರಿಗೂ ಒಂದೊಂದು ಚಿನ್ನದ ಬಳೆ ನೀಡುತ್ತೇನೆ. ಅದನ್ನು ಸದ್ವಿನಿಯೋಗದಿಂದ ಬಳಸಿಕೊಳ್ಳಿ. ಮೂರು ತಿಂಗಳ ಕಾಲಾವಧಿ ನೀಡುತ್ತೇನೆ ಎಂದು ಚಿನ್ನದ ಬಳೆಯನ್ನು ನೀಡಿ ಶುಭವಾಗಲಿ ಎಂದು ಹಾರೈಸಿ ಕಳಿಸುತ್ತಾನೆ.

ನಂತರ ಮೂವರು ಒದೊಂದು ದಿಕ್ಕಿಗೆ ಹೊರಡುತ್ತಾರೆ. ಮೂರು ತಿಂಗಳ ನಂತರ ಕಿರಿಯವ ಬಂದು ನಾನು ಪೂರ್ವದ ದಿಕ್ಕಿನಲ್ಲಿ ಸಾಗಿ ಅಲ್ಲಿರುವ ಸಾಧುಗಳ ಬಳಿ ಶಿಷ್ಯನಾಗಿ ಉತ್ತಮ ನೀತಿಗಳನ್ನು ಕಲಿತೆ. ಗುರು ಕಾಣಿಕೆಗೆ ಬಳೆ ಅರ್ಪಿಸಿದೆ ಎಂದನು. ರಾಮರಾಯ ಬೇಷ್‌ ಎಂದು ಬೆನ್ನು ತಟ್ಟಿದ. ಮರುದಿನ ಮಧ್ಯಮದವ ಬಂದು ನಾನು ಬಳೆಯನ್ನು ಮಾರಿ. ಬಂದ ಹಣವನ್ನು ಬಡವರಿಗೆ, ನಿರಾ]ತರಿಗೆ ಹಂಚಿದೆ. ಅವರು ನನ್ನನ್ನು ಪ್ರೀತಿ ಆದರಗಳಿಂದ ಸತ್ಕರಿಸಿದರು ಎಂದ. ಜನರ ಮೆಚ್ಚುಗೆ ಪಡೆದನೆಂದು ಸಂತಸಗೊಂಡ ರಾಮರಾಯ. 

ಆದರೆ ಹಿರಿಯ ಮಗ ವರ್ಷವಾದರೂ ಬರಲಿಲ್ಲ. ಅಷ್ಟರಲ್ಲಿ ತನ್ನಿಬ್ಬರೂ ಮಕ್ಕಳಿಗೂ ಮದುವೆ ಮಾಡಿದ. ಇಂದಲ್ಲ ನಾಳೆ ಬರುತ್ತಾನೆಂದು ಕಾದರೂ ಎರಡು, ಮೂರು ವರ್ಷವಾದರೂ ಬರಲಿಲ್ಲ. ತಂದೆ ಹುಡುಕಿಕೊಂಡು ಹೊರಟ. ತಂದಿದ್ದ ಹಣವೆಲ್ಲ ಖಾಲಿಯಾಗಿ ಒಂದೂರಿನಲ್ಲಿ ತಂಗಿದ. 

ಅಲ್ಲಿಗೆ ಧಾವಿಸಿದ ಅಪರಿಚಿತ ಯುವಕ ರಾಮರಾಯನ ಸ್ಥಿತಿ ತಿಳಿದು, “ಅಯ್ನಾ ನೀನೇನು ಚಿಂತಿಸಬೇಡ. ನಮ್ಮೂರಿನ ನಾಯಕರು ಈ ತರ ಬರಿದಾದ ಜನಗಳಿಗೋಸ್ಕರವೇ ಒಂದು ಶಾಲೆಯನ್ನು ನಿರ್ಮಿಸಿ¨ªಾರೆ. ಅಲ್ಲಿ ನೀನು ನಮ್ಮ ನಾಯಕರು ಹೇಳಿದ ಕೆಲಸ ಮಾಡು. ಅದು ಕೃಷಿಯಾಗಿರಲಿ, ಗೋ ಸಾಕಾಣೆ ಅಥವ ಬೇರಾವುದೇ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸು. ನಿನ್ನ ಯೋಗ ಕ್ಷೇಮಗಳನ್ನ ಅವರು ನೋಡಿಕೊಳ್ಳುತ್ತಾರೆ, ಆದರೆ ನೀನು ನಿಯತ್ತಿನಿಂದ ಶ್ರಮಿಸಿ ದುಡಿಯಬೇಕು’ ಎಂದು ತಿಳಿಸುತ್ತಾನೆ. 

ಅಪರಿಚಿತನ ಮಾತಿಗೆ ಒಪ್ಪಿ ರಾಮರಾಯರು ನಾಯಕನಿರುವ ಕಡೆ ಹೋಗುತ್ತಾರೆ. ಈತನನ್ನು ಕಂಡಕೂಡಲೇ ನಾಯಕನು ಸಂತೋಷದಿಂದ ರಾಮರಾಯನ ಕಾಲಿಗೆ ಬೀಳುತ್ತಾನೆ. 

ವಿಚಾರಿಸಿದಾಗ ಅವನೇ ರಾಮರಾಯನ ಹಿರಿಮಗನೆಂದು ತಿಳಿಯುತ್ತದೆ. ಅವನು ತನ್ನ ವೃತ್ತಾಂತವನ್ನು ತಂದೆಗೆ ವಿವರಿಸುತ್ತಾನೆ. 

” ನೀವು ನೀಡಿದ ಬಳೆಯನ್ನು ನೀಡಿ ಒಬ್ಬ ಬಡವನಿಂದ ಜಮೀನನ್ನು ಪಡೆದೆ. ಅಲ್ಲಿ ದವಸ, ಧಾನ್ಯಗಳನ್ನ ಬಿತ್ತಿ ಕಷ್ಟ ಪಟ್ಟು ಬೆವರು ಹರಿಸಿ ದುಡಿದೆ. ಫ‌ಸಲು ಚೆನ್ನಾಗಿ ಬರಲು ಅದನ್ನು ಮಾರಾಟ ಮಾಡಿ ಒಳ್ಳೆಯ ಮತ್ತಷ್ಟು ಜಾಗ ಖರೀದಿಸಿ ಬಡವರಿಗೆ, ನಿರುದ್ಯೋಗಿಗಳಿಗೆ ಕೆಲಸ ನೀಡಿ ಆಶ್ರಯ ನೀಡುತ್ತಿದ್ದೇನೆ. ಕಾಯಕವೇ ಕೈಲಾಸವೆಂದು ಅವರು ಸ್ವಾವಲಂಬಿಗಳಾಗಿ ಬದುಕುತ್ತಿ¨ªಾರೆ’ ರಾಮರಾಯ ಮಗನ ಸಾತ್ವಿಕ ಗುಣಗಳಿಗೆ ಸೋತು ಖುಷಿಯಿಂದ  ತಬ್ಬಿಕೊಳ್ಳುತ್ತಾನೆ. ಇಬ್ಬರು ಮಕ್ಕಳನ್ನು ಕರೆಸಿಕೊಂಡು ಎಲ್ಲರೂ ಸುಖದಿಂದ ಬಾಳುತ್ತಾರೆ. 
ನೀತಿ: ಮಾಡುವ ಕೆಲಸದಲ್ಲಿ ಸಾತ್ವಿಕ ಚಿಂತನೆಗಳಿದ್ದರೆ ಫ‌ಲ ದೊರೆಯುತ್ತದೆ.

– ಎಡೆಯೂರು ಪಲ್ಲವಿ

ಟಾಪ್ ನ್ಯೂಸ್

1—ewqewqe

IPL; ಅಗ್ರಸ್ಥಾನಿ ರಾಜಸ್ಥಾನ್‌-ಲಕ್ನೋ: ಬಲಿಷ್ಠರ ಸೆಣಸಾಟ

congress

BJP ಅಭ್ಯರ್ಥಿ ಅವಿರೋಧ ಆಯ್ಕೆ: ಸೂರತ್‌ನ ಕಾಂಗ್ರೆಸ್‌ ಅಭ್ಯರ್ಥಿ ಉಚ್ಚಾಟನೆ

1-visa

India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1—ewqewqe

IPL; ಅಗ್ರಸ್ಥಾನಿ ರಾಜಸ್ಥಾನ್‌-ಲಕ್ನೋ: ಬಲಿಷ್ಠರ ಸೆಣಸಾಟ

congress

BJP ಅಭ್ಯರ್ಥಿ ಅವಿರೋಧ ಆಯ್ಕೆ: ಸೂರತ್‌ನ ಕಾಂಗ್ರೆಸ್‌ ಅಭ್ಯರ್ಥಿ ಉಚ್ಚಾಟನೆ

1-visa

India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.