ಐಶಾರಾಮಿ ಆಸ್ಪತ್ರೆ ಬದಲು ಬಡವರಿಗಾಗಿ ಗ್ರಾಮದಲ್ಲೇ 10 ರೂ.ಶುಲ್ಕದ ಕ್ಲಿನಿಕ್ ಸ್ಥಾಪಿಸಿದ ನೂರಿ


Team Udayavani, Mar 17, 2021, 7:20 PM IST

ಐಶಾರಾಮಿ ಆಸ್ಪತ್ರೆ ಬದಲು ಬಡವರಿಗಾಗಿ ಗ್ರಾಮದಲ್ಲೇ 10 ರೂ.ಶುಲ್ಕದ ಕ್ಲಿನಿಕ್ ಸ್ಥಾಪಿಸಿದ ನೂರಿ

ಸ್ವಾರ್ಥ. ಎಲ್ಲರೊಳಗೂ ಇರುವ ಬೇರು. ಇದ್ದಷ್ಟು ಬೇಕು, ಬೇಕೆನ್ನುವುದು ಸಿಕ್ಕಾಗ ಮತ್ತಷ್ಟು ಬೇಕೆನ್ನುವ ಸ್ವಾರ್ಥದ ಯುಗದಲ್ಲಿ ಇನ್ನೊಬ್ಬರ ಮುಖದಲ್ಲಿ, ಇನ್ನೊಬ್ಬರ ಬದುಕಿನಲ್ಲಿ ನೆಮ್ಮದಿಯ ನಗು ತರುವ ಕೆಲವೊಂದಿಷ್ಟು ವ್ಯಕ್ತಿಗಳ ವ್ಯಕ್ತಿತ್ವ ನಾಲ್ಕು ಜನಗಳ ನಡುವೆ ಇದ್ದರೂ ಬೆಳಕಿಗೆ ಬಾರದೆ ಇರುತ್ತದೆ.

ನೂರಿ ಪರ್ವಿನ್. ವಿಜಯವಾಡದಲ್ಲಿ ಹುಟ್ಟಿ, ಆಂಧ್ರಪ್ರದೇಶದ ಕಡಪದಲ್ಲಿ ಎಂ.ಬಿ.ಬಿ.ಎಸ್ ಕಲಿಕೆಯನ್ನು ಪೂರ್ತಿಗೊಳಿಸುತ್ತಾರೆ. ನೂರಿ, ಕಲಿಯುತ್ತಾ ತನ್ನ ಊರು ಕಡಪದಲ್ಲಿ ಅಲ್ಲಿಯ ಬಡವರ್ಗ ಆಸ್ಪತ್ರೆಯ ದುಬಾರಿ ಚಿಕಿತ್ಸೆಯನ್ನು ಪಡೆಯಲು ಕಷ್ಟ ಪಡುತ್ತಿರುವುದನ್ನು ನೋಡುತ್ತಾರೆ. ಇದು ನೂರಿಯಲ್ಲಿ ಮಾನವೀಯತೆಯ ಮೌಲ್ಯವನ್ನು ಹುಟ್ಟುವಂತೆ ಮಾಡುತ್ತದೆ.

ನೂರಿ ಇರುವ ಊರಿನಲ್ಲಿ ಬಡ ವರ್ಗದ ಜನತೆಗೆ ಆಸ್ಪತ್ರೆ ಚಿಕಿತ್ಸೆ ಕೈಗೆಟುಕುವ ದರದಲ್ಲಿ ಸಿಗಬೇಕು ಎನ್ನುವ ಉಮೇದು ನೂರಿಯಲ್ಲಿ ಇರುತ್ತದೆ. ಅದೇ ಕಾರಣಕ್ಕೆ ನೂರಿ ತಮ್ಮ ಊರು ಕಡಪದಲ್ಲೇ, ಗ್ರಾಮೀಣ ಜನರಿಗೆ ಹತ್ತಿರವಾಗುವಂತೆ ತಮ್ಮದೊಂದು ಪುಟ್ಟ ಕ್ಲಿನಿಕ್ ನ್ನು ತೆರೆಯುತ್ತಾರೆ. ದಿನ ಕಳೆದಂತೆ ನೂರಿಯ ಪುಟ್ಟ ಕ್ಲಿನಿಕ್ ಗೆ ಜನಸಾಮಾನ್ಯರು ಅಂದರೆ ಹೆಚ್ಚಾಗಿ ಬಡ ವರ್ಗದ ಜನ ಸಾಲು ಗಟ್ಟಿ ನಿಲ್ಲುತ್ತಾರೆ. ನೂರಿಯ ಕ್ಲಿನಿಕ್ ಕಡಪದಲ್ಲಿ ಮಾತ್ರವಲ್ಲ ಅಕ್ಕಪಕ್ಕದ ಊರಿಗೂ ವಿಶೇಷವಾಗಿ ಆಕರ್ಷಣೆ ಆಗುತ್ತದೆ. ಅದಕ್ಕೆ ಕಾರಣ ನೂರಿಯ ಮಾನವೀಯತೆಯ ಮನಸ್ಸು.

ರೋಗಿ ಪರೀಕ್ಷೆಗೆ 10 ರೂಪಾಯಿ ಶುಲ್ಕ.! :

ಡಾಕ್ಟರ್ ನೂರಿ ಕ್ಲಿನಿಕ್ ಗೆ ಬರುವ ರೋಗಿಯ ಪರೀಕ್ಷೆಗೆ ಅವರು ತೆಗೆದುಕೊಳ್ಳುವ ಶುಲ್ಕ ಕೇವಲ 10 ರೂಪಾಯಿ ಮಾತ್ರ. ಹೊರ ರೋಗಿಗಳಿಗೆ 10 ರೂಪಾಯಿ ಆದ್ರೆ, ಒಳರೋಗಿಗಳಿಗೆ ಒಂದು ಬೆಡ್ ಗೆ 40 ರೂಪಾಯಿಯಂತೆ ಶುಲ್ಕ ತೆಗೆದುಕೊಳ್ಳುತ್ತಾರೆ.

ನೂರಿ ಕ್ಲಿನಿಕ್ ಗೆ ಹೆಚ್ಚಾಗಿ ಬರುವವರು ಬಡ ಕುಟುಂಬದ ಜನರು. ನೂರಿಯ ಕ್ಲಿನಿಕ್ ಬಗ್ಗೆ ಹಾಗೂ ಅವಳ ಮಾನವೀಯತೆಯನ್ನು ನೋಡಿ  ಅಪ್ಪ ಅಮ್ಮನಿಗೆ ತುಂಬಾ ಖುಷಿ ಆಗುತ್ತದೆ. ನೂರಿಯ 10 ರೂಪಾಯಿ ಶುಲ್ಕದ ಯೋಜನೆ  ಗೆ ಹಾಗೂ ಮಾನವೀಯತೆಯ ಮೌಲ್ಯ  ಮೂಡಲು ಅಪ್ಪ ಅಮ್ಮನೇ ಪ್ರೇರಣೆ ಎನ್ನುತ್ತಾರೆ ನೂರಿ.

ಇದಲ್ಲದೆ ಬಡವರಿಗಾಗಿ ಸರ್ಕಾರದ ಮೆಡಿಕಲ್ ಯೋಜನೆಗಳನ್ನು ಮಾಡಿಕೊಡುತ್ತಾರೆ. ಸರ್ಕಾರದಿಂದ ಇರುವ ಎಲ್ಲಾ ಯೋಜನೆಗಳ ಕುರಿತು ನೂರಿ ಬಡ ಕುಟುಂಬಕ್ಕೆ ಮಾಹಿತಿ ನೀಡಿ ಯೋಜನೆಯನ್ನು ಪಡೆದುಕೊಳ್ಳಲು ನೆರವಾಗುತ್ತಾರೆ.

ನೂರಿ ಕ್ಲಿನಿಕ್ ಆರಂಭಿಸುವ‌ ಮೊದಲು ‘Healthy Inspiring Young India’, ‘Noor Charitable Trust’ ಎಂಬ ಎನ್.ಜಿ.ಓ ಸ್ಥಾಪಿಸಿ ಅದರಲ್ಲಿ ಆರೋಗ್ಯ ಹಾಗೂ ಶಿಕ್ಷಣದ ಕುರಿತು ಸಹಾಯವನ್ನು ಮಾಡುತ್ತಿದ್ದರು.

ನೂರಿ ಮುಂದೆ ಸೈಕಾಲಜಿಯಲ್ಲಿ ಪಿ.ಜಿ ಶಿಕ್ಷಣವನ್ನು ಮಾಡಿ, ಬಡ ಜನರಿಗೆ ಸೂಕ್ತ ಬೆಲೆಯಲ್ಲಿ ಲಭ್ಯವಾಗುವ ಆಸ್ಪತ್ರೆಯನ್ನು ನಿರ್ಮಿಸುವ ಉದ್ದೇಶವನ್ನು ಹೊಂದಿದ್ದಾರೆ.

ಸುಹಾನ್ ಶೇಕ್

ಟಾಪ್ ನ್ಯೂಸ್

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಸಾವು, 22 ಮಂದಿಗೆ ಗಾಯ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kambalaHigh-tech touch for Kambala race

Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ

JIO SPACE FIBER 1

JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?

thumb news web exclusive uv (2) (1)

“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…

thumb web ex (1) (1) (1) (1) (1) (1) copy (1)

ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!

web exclusive keer

ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಸಾವು, 22 ಮಂದಿಗೆ ಗಾಯ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.