ನ್ಯೂ ಪನ್ವೆಲ್ನ ಶ್ರೀ ವೃಂದಾವನ್ ಬಾಬಾ ಮಠದಲ್ಲಿ ದಾಸರ ಭಜನಾಮೃತ
Team Udayavani, Mar 31, 2021, 11:13 AM IST
ಮುಂಬಯಿ: ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿಯವರ ಷಷ್ಠ éಬ್ದ ಸಂಭ್ರಮದ ಜ್ಞಾನ ವಾಹಿನಿ-2021 ಸಂಭ್ರಮದ ಪ್ರಯುಕ್ತ ಗುರುದೇವಾ ಸೇವಾ ಬಳಗ ಮುಂಬಯಿ, ಷಷ್ಠéಬ್ದ ಸಮಿತಿ ಮುಂಬಯಿ ಮತ್ತು ನವಿಮುಂಬಯಿ ಗುರು ಭಕ್ತರ ವತಿಯಿಂದ ಮುಂಬಯಿಯಲ್ಲಿ ನಡೆಯಲಿರುವ 60 ಕಾರ್ಯಕ್ರಮಗಳ ಪೈಕಿ 8ನೇ ಕಾರ್ಯಕ್ರಮವು ಮಾ. 25ರಂದು ಸಂಜೆ ಶ್ರೀ ವೃಂದಾವನ್ ಬಾಬಾ ಮಠ, ನ್ಯೂ ಪನ್ವೆಲ… ಇಲ್ಲಿ ಶ್ರೀ ದುರ್ಗಾಪರಮೇಶ್ವರೀ ಭಜನ ಮಂಡಳಿ ಕಾಮೋಟೆ ಪ್ರಸ್ತುತಿಯಲ್ಲಿ ದಾಸರ ಭಜನಾಮೃತ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಪನ್ವೆಲ್ ಮಹಾನಗರ ಪಾಲಿಕೆಯ ಸ್ಥಾಯೀ ಸಮಿತಿ ಅಧ್ಯಕ್ಷ ಸಂತೋಷ್ ಜಿ. ಶೆಟ್ಟಿ, ವೃಂದಾವನ್ ಬಾಬಾ ಮಠದ ಗುರು ಶೆಟ್ಟಿ ಕಾಪು, ಸುಧಾಕರ್ ಕೆಮೂ¤ರು, ರತ್ನಾಕರ್ ಶೆಟ್ಟಿ, ರವಿ ಶೆಟ್ಟಿ, ಸುದರ್ಶನ್ ಶೆಟ್ಟಿ, ನರೇಶ್ ಶೆಟ್ಟಿ, ಶಿವಾಜಿ ಶೆಟ್ಟಿ, ಸೀತಾರಾಮ್ ಶೆಟ್ಟಿ, ತುಳು ಕನ್ನಡ ವೆಲ್ಫೆàರ್ ಅಸೋಸಿಯೇಶನ್ ಕಾಮೋಟೆ ಇದರ ಬೇಬಿರಾಜ್ ಕೋಟ್ಯಾನ್, ಜಯಕರ ಬಿ. ಪೂಜಾರಿ, ಸುಜಿತ್ ಕೋಟ್ಯಾನ್, ಸರೋಜಿನಿ ಜೆ. ಪೂಜಾರಿ, ಜಯಂತಿ ಎಸ್. ಕೋಟ್ಯಾನ್ ಮತ್ತು ಶ್ರೀ ಶನೀಶ್ವರ ಮಂದಿರದ ಮಹಿಳಾ ಅಧ್ಯಕ್ಷೆ ಸ್ವರ್ಣಲತಾ ದಾಮೋರ ಶೆಟ್ಟಿ, ಕಾರ್ಯಕ್ರಮದ ಸಂಚಾಲಕ ದಾಮೋದರ ಶೆಟ್ಟಿ, ಸಂಯೋಜಕ ಅದ್ಯಾಪಾಡಿ ಗುತ್ತು ಕರುಣಾಕರ ಆಳ್ವ, ವಿ. ಕೆ. ಸುವರ್ಣ, ಪ್ರಭಾಕರ ಹೆಗ್ಡೆ, ಜಗದೀಶ್ ಶೆಟ್ಟಿ ಪನ್ವೆಲ…, ಅದ್ಯಪಾಡಿ ಬಾಲಕೃಷ್ಣ ಶೆಟ್ಟಿ ಹಾಗೂ ಗುರು ಭಕ್ತರೆಲ್ಲ ಸಹಕರಿಸಿದರು.