ಬಂಟ್ವಾಳ : ಮಳೆಯಿಂದ ಹಲವೆಡೆ ಹಾನಿ, ಪೆರಾಜೆ ಗ್ರಾಮದಲ್ಲಿ 2 ಮನೆಗಳಿಗೆ ನುಗ್ಗಿದ ನೀರು
Team Udayavani, Jun 14, 2021, 3:51 PM IST
ಬಂಟ್ವಾಳ: ಬಂಟ್ವಾಳ ತಾಲೂಕಿನಲ್ಲಿ ಮುಂಗಾರಿನ ಅಬ್ಬರ ಜೋರಾಗಿಯೇ ಕಂಡು ಬಂದಿದ್ದು, ಸೋಮವಾರ ಬೆಳಗ್ಗಿನಿಂದಲೇ ಧಾರಾಕಾರ ಮಳೆಯಾಗುತ್ತಿದೆ. ಮಳೆಯ ತೀವ್ರತೆಯ ಪರಿಣಾಮ ಹಲವು ಮನೆಗಳಿಗೆ ಹಾನಿ ಸಂಭವಿಸಿದ್ದು, ಪೆರಾಜೆ ಗ್ರಾಮ ನಿವಾಸಿ ನೆಬಿಸ್ಸಾ ಹಾಗೂ ಅವ್ವಮ್ಮ ಅವರ ಮನೆಗೆ ಗುಡ್ಡದ ನೀರು ನುಗ್ಗಿ ಕೃತಕ ನೆರೆಯ ಸ್ಥಿತಿ ಉಂಟಾಗಿತ್ತು.
ಪೆರಾಜೆ ಗ್ರಾಮದ ಅಬ್ದುಲ್ ಹಕೀಂ ಅವರ ಕಾಂಪೌಂಡ್ ಗೆ ಮಳೆಯಿಂದ ಹಾನಿಯಾಗಿದೆ. ವಿಟ್ಲ ಕಸಬಾ ಗ್ರಾಮದಲ್ಲಿ ಬರೆ ಕುಸಿದು ಬಚ್ಚಲು ಮನೆಗೆ ಹಾನಿಯಾಗಿದೆ. ಅನಂತಾಡಿ ಗ್ರಾಮದ ಪೊಯ್ಯೆ ಮನೆ ಮಹಾಬಲ ಮಡಿವಾಳ ಅವರ ತೋಟದಲ್ಲಿ ಅಡಿಕೆ ಮರಗಳು ಗಾಳಿಯ ರಭಸಕ್ಕೆ ಧರೆಗುರುಳಿವೆ.
ತೆಂಕಕಜೆಕಾರು ಗ್ರಾಮದ ಕುರುವರಗೋಳಿಯಲ್ಲಿ ವೀರಪ್ಪ ಪೂಜಾರಿ ಅವರ ಕಚ್ಚಾ ಮನೆಯ ಹಿಂಭಾಗದ ತಡೆಗೋಡೆ ಕುಸಿದು ಮನೆಗೆ ಸಂಪೂರ್ಣ ಹಾನಿಯಾಗಿದೆ. ಸಜೀಪಮುನ್ನೂರು ಅಬ್ದುಲ್ ಹಮೀದ್ ಅವರ ಮನೆಗೂ ಮಳೆಯಿಂದ ಹಾನಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ
ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ
Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್ ಎಂ. ಪೈ ಬ್ಲಾಕ್ ಇಂದು ಲೋಕಾರ್ಪಣೆ
Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್ ಪೋಸ್ಟ್ ವರದಿ
Kerala; ಒಂದೇ ವೇದಿಕೆಯಲ್ಲಿ 150 ಅವಳಿಗಳ ಸಂಭ್ರಮ