ಶಿರಸಿ : ಕೊಪ್ಪಳಗದ್ದೆ ಕೆರೆ ಅಭಿವೃದ್ದಿಗೆ ಜೀವಜಲ ಚಿಂತನೆ, ಸಮಾಲೋಚನೆ


Team Udayavani, Sep 18, 2021, 3:41 PM IST

ಶಿರಸಿ : ಕೊಪ್ಪಳಗದ್ದೆ ಕೆರೆ ಅಭಿವೃದ್ದಿಗೆ ಜೀವಜಲ ಚಿಂತನೆ, ಸಮಾಲೋಚನೆ

ಶಿರಸಿ: ದಿನದಿಂದ‌ ದಿನಕ್ಕೆ‌ ತನ್ನ‌ಕಾರ್ಯ ಬಾಹುಳ್ಯ ವಿಸ್ತಾರಗೊಳಿಸಿಕೊಳ್ಳುತ್ತಿರುವ ಶಿರಸಿಯ ಜೀವ ಜಲ‌ಕಾರ್ಯಪಡೆ ಮುಂದಿನ ದಿನಗಳಲ್ಲಿ ಗ್ರಾಮೀಣ‌ ಭಾಗದ ಕೆರೆಗಳ ಅಭಿವೃದ್ದಿಗೆ ಚಿಂತನೆ ನಡೆಸಿದೆ.

ಈವರೆಗೆ ನಗರ ಭಾಗದ ಕೆರೆಯ ಅಭಿವೃದ್ದಿಗೆ ದೃಢ ಹೆಜ್ಜೆ ಇಟ್ಟು‌ ನಿರಂತರ ನಿರ್ವಹಣೆ ಕೂಡ‌ ಮಾಡುತ್ತಿರುವ ಜೀವ ಜಲ ಕಾರ್ಯಪಡೆ ತಾಲೂಕಿನ ಯಡಹಳ್ಳಿ ಗ್ರಾ.ಪಂ.ವ್ಯಾಪ್ತಿಯ ಕರಸುಳ್ಳಿಯ‌ ಕೊಪ್ಪಳಗದ್ದೆ ಕೆರೆ ಅಭಿವೃದ್ದಿಗೆ ಕೂಡ ಚಿಂತಿಸಿದೆ.

ಎರಡು ಎಕರೆ‌ ಮೂರು ಗುಂಟೆ ವಿಸ್ತೀರ್ಣದ ಕೊಪ್ಪಳ ಗದ್ದೆ ಕೆರೆ ಕರಸುಳ್ಳಿಯ ಪುರಾತನ ಜಲಮೂಲವಾಗಿದ್ದು ಸುತ್ತಲಿನ ನಲ್ವತ್ತಕ್ಕೂ ಅಧಿಕ ಎಕರೆ ಅಡಿಕೆ, ಭತ್ತದ ಗದ್ದೆಗಳಿಗೆ ನೀರುಣಿಸುವ ಜಲಪಾತ್ರವಾಗಿದೆ. ಮೂವತ್ತಕ್ಕೂ ಅಧಿಕ ವೈದಿಕ‌ ಕುಟುಂಬಗಳು ನಂಬಿದ ಅಡಿಕೆ ಬೇಸಾಯದ ಜೀವನಾಧಾರ ಕೆರೆ ಕೂಡ ಇದೇ ಆಗಿದೆ.

ಇದನ್ನೂ ಓದಿ :ಅನಿತಾ ಭಟ್‌ ಸಿನಿಮಾದ ಟೈಟಲ್‌ ಲಾಂಚ್‌ ಮಾಡಿದ್ದಾರೆ ಶ್ರೀಮುರುಳಿ!

ಈ ಕೆರೆಯ ಅಭಿವೃದ್ದಿ ಗ್ರಾಮಸ್ಥರ ಕನಸಾಗಿತ್ತು. ಕಳೆದ ಹಲವು ವರ್ಷಗಳಿಂದ ಕೆರೆ ಹೂಳೆತ್ತುವ ಕುರಿತು ಪ್ರಯತ್ನಿಸಿದ್ದರು. ಕಳೆದ ಎರಡು‌ ತಿಂಗಳ ಹಿಂದೆ ಮಾಧ್ಯಮಗಳಲ್ಲೂ ಈ ಕೆರೆಯ ಸಮಗ್ರ ಅಭಿವೃದ್ದಿ ಬಗ್ಗೆ ಪ್ರಸ್ತಾಪಿಸಿ ವರದಿ ಪ್ರಕಟಿಸಿದ್ದವು.

ಇದನ್ನು ಗಮನಿಸಿದ್ದ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್ ಅವರು, ಸದಸ್ಯ ಅನಿಲ‌ ನಾಯಕ ಅವರ ಜೊತೆ ಈಚೆಗೆ ಕೆರೆಯ ಸ್ಥಿತಿಗಳನ್ನು‌ ವೀಕ್ಷಿಸಿದರು.

ಕೆರೆಯ ದಂಡೆ ಬಲ‌ಪಡಿಸುವದು, ಕೆರೆಯ ಹೂಳೆತ್ತಿಸುವದು, ಎತ್ತಿದ ಹೂಳು ಹಾಕುವ ಸ್ಥಳಗಳು ಸೇರಿದಂತೆ ಆಗಬೇಕಾದ ಕಾರ್ಯಗಳ ಕುರಿತು ಗ್ರಾಮಸ್ಥರ ಜೊತೆ ಸಮಾಲೋಚಿಸಿದರು.

ತಾಲೂಕಿನ ಪಶ್ಚಿಮ‌ ಭಾಗದಲ್ಲಿ ಎರಡು‌ ಎಕರೆ ಕ್ಷೇತ್ರದ ಕೆರೆ ಇದಾಗಿದ್ದು, ಯಾವುದೇ ಅತಿಕ್ರಮಣ ಕೂಡ ಆಗದೇ ಇದೆ. ಇದರ ಸಮಗ್ರಿ ಅಭಿವೃದ್ದಿ ಆಗಬೇಕು. ಬಹುಕಾಲದ ಕನಸು ಗ್ರಾಮದ್ದು ಎಂದು ಸ್ಥಳೀಯರು ಮನವಿ‌ ಮಾಡಿದರು.

ಜೀವ ಜಲ‌ ಕಾರ್ಯಪಡೆ‌ ಮುಂದಿನ ಏಪ್ರಿಲ್ ಮೇ ತಿಂಗಳಲ್ಲಿ ಈ ಕೆರೆ ಅಭಿವೃದ್ದಿ ಕೈಗೆತ್ತಿಕೊಳ್ಳಲು ಆಸಕ್ತವಾಗಿದೆ.
– ಶ್ರೀನಿವಾಸ ಹೆಬ್ಬಾರ, ಅಧ್ಯಕ್ಷರು , ಜೀವ ಜಲ‌ ಕಾರ್ಯಪಡೆ, ಶಿರಸಿ

ನಮ್ಮ ಗ್ರಾಮದ ದೊಡ್ಡ ‌ಕೆರೆ. ಇದೊಂದು ಜಲ‌ ಪಾತ್ರೆ. ಇದರ ಅಭಿವೃದ್ಧಿ ನಮ್ಮ ಬಹು ಕಾಲದ‌ ಕನಸು. ಅದು ಸಾಕಾರ ಆದರೆ ಸಾಕು.
– ಕರಸುಳ್ಳಿ ಗ್ರಾಮಸ್ಥರು

ಟಾಪ್ ನ್ಯೂಸ್

ಸಂಚಾರ ಯೋಗ್ಯವಲ್ಲದ ಹಡಗುಗಳ ಬಗ್ಗೆ ನಿಗಾ: ಡಾ| ರಮಣ

Mangaluru ಸಂಚಾರ ಯೋಗ್ಯವಲ್ಲದ ಹಡಗುಗಳ ಬಗ್ಗೆ ನಿಗಾ: ಡಾ| ರಮಣ

Weather ಕಡಲಬ್ಬರ ತುಸು ಜೋರು; ಗಾಳಿ ಬಿರುಸು

Weather ಕಡಲಬ್ಬರ ತುಸು ಜೋರು; ಗಾಳಿ ಬಿರುಸು

Udupi ಮಲ್ಪೆ ಬೀಚ್‌ನಲ್ಲಿ ವಾಟರ್‌ ಗೇಮ್‌ ಸ್ಥಗಿತ

Udupi ಮಲ್ಪೆ ಬೀಚ್‌ನಲ್ಲಿ ವಾಟರ್‌ ಗೇಮ್‌ ಸ್ಥಗಿತ

Manjeshwar: ಆಟವಾಡುತ್ತಿದ್ದ 8 ವರ್ಷದ ಬಾಲಕಿ ಕುಸಿದು ಬಿದ್ದು ಸಾವು

Manjeshwar: ಆಟವಾಡುತ್ತಿದ್ದ 8 ವರ್ಷದ ಬಾಲಕಿ ಕುಸಿದು ಬಿದ್ದು ಸಾವು

Kota ಕಾರ್ಮಿಕನ ಮೇಲೆ ಚಿರತೆ ದಾಳಿ; ಆಸ್ಪತ್ರೆಗೆ ದಾಖಲು

Kota ಕಾರ್ಮಿಕನ ಮೇಲೆ ಚಿರತೆ ದಾಳಿ; ಆಸ್ಪತ್ರೆಗೆ ದಾಖಲು

1-qweqewqe

BSNL 4G; ಆಗಸ್ಟ್‌ನಲ್ಲಿ ದೇಶಾದ್ಯಂತ ಸೇವೆ: ಮೂಲಗಳು

Kasaragod ಸಾರಿಗೆ ಬಸ್‌ಗಳಲ್ಲಿ ಕೆಮರಾ ಅಳವಡಿಕೆ

Kasaragod ಸಾರಿಗೆ ಬಸ್‌ಗಳಲ್ಲಿ ಕೆಮರಾ ಅಳವಡಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Election ಹಂತ 2: ಮತದಾನದ ಹಕ್ಕು ಚಲಾವಣೆಗೆ ಸಕಲ ಸಿದ್ಧತೆ

Lok Sabha Election ಹಂತ 2: ಮತದಾನದ ಹಕ್ಕು ಚಲಾವಣೆಗೆ ಸಕಲ ಸಿದ್ಧತೆ

ICSE: ರಾಜ್ಯದ ವಿದ್ಯಾರ್ಥಿಗಳಿಗೆ‌ ಶೇ. 99 ಮೀರಿದ ಫ‌ಲಿತಾಂಶ; ವಿದ್ಯಾರ್ಥಿನಿಯರೇ ಮೇಲುಗೈ

ICSE: ರಾಜ್ಯದ ವಿದ್ಯಾರ್ಥಿಗಳಿಗೆ‌ ಶೇ. 99 ಮೀರಿದ ಫ‌ಲಿತಾಂಶ; ವಿದ್ಯಾರ್ಥಿನಿಯರೇ ಮೇಲುಗೈ

Lok Sabha ಚುನಾವಣೆ ಪ್ರಕ್ರಿಯೆ ವೀಕ್ಷಣೆಗೆ 5 ದೇಶಗಳ ತಂಡ ಬೆಳಗಾವಿಗೆ

Lok Sabha ಚುನಾವಣೆ ಪ್ರಕ್ರಿಯೆ ವೀಕ್ಷಣೆಗೆ 5 ದೇಶಗಳ ತಂಡ ಬೆಳಗಾವಿಗೆ

ರಾಜ್ಯ ಕಾಂಗ್ರೆಸ್‌ ಸರಕಾರ ಸಂಪೂರ್ಣ ನಿಷ್ಕ್ರಿಯ: ಬಿ.ವೈ.ವಿಜಯೇಂದ್ರ

ರಾಜ್ಯ ಕಾಂಗ್ರೆಸ್‌ ಸರಕಾರ ಸಂಪೂರ್ಣ ನಿಷ್ಕ್ರಿಯ: ಬಿ.ವೈ.ವಿಜಯೇಂದ್ರ

Congress ಗೆಲುವಿನಲ್ಲಿದೆ ಮಹಿಳೆಯರ ಗೆಲುವು: ಸಿಎಂ ಸಿದ್ದರಾಮಯ್ಯ

Congress ಗೆಲುವಿನಲ್ಲಿದೆ ಮಹಿಳೆಯರ ಗೆಲುವು: ಸಿಎಂ ಸಿದ್ದರಾಮಯ್ಯ

MUST WATCH

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

ಹೊಸ ಸೇರ್ಪಡೆ

ಸಂಚಾರ ಯೋಗ್ಯವಲ್ಲದ ಹಡಗುಗಳ ಬಗ್ಗೆ ನಿಗಾ: ಡಾ| ರಮಣ

Mangaluru ಸಂಚಾರ ಯೋಗ್ಯವಲ್ಲದ ಹಡಗುಗಳ ಬಗ್ಗೆ ನಿಗಾ: ಡಾ| ರಮಣ

Weather ಕಡಲಬ್ಬರ ತುಸು ಜೋರು; ಗಾಳಿ ಬಿರುಸು

Weather ಕಡಲಬ್ಬರ ತುಸು ಜೋರು; ಗಾಳಿ ಬಿರುಸು

Udupi ಮಲ್ಪೆ ಬೀಚ್‌ನಲ್ಲಿ ವಾಟರ್‌ ಗೇಮ್‌ ಸ್ಥಗಿತ

Udupi ಮಲ್ಪೆ ಬೀಚ್‌ನಲ್ಲಿ ವಾಟರ್‌ ಗೇಮ್‌ ಸ್ಥಗಿತ

Manjeshwar: ಆಟವಾಡುತ್ತಿದ್ದ 8 ವರ್ಷದ ಬಾಲಕಿ ಕುಸಿದು ಬಿದ್ದು ಸಾವು

Manjeshwar: ಆಟವಾಡುತ್ತಿದ್ದ 8 ವರ್ಷದ ಬಾಲಕಿ ಕುಸಿದು ಬಿದ್ದು ಸಾವು

Kota ಕಾರ್ಮಿಕನ ಮೇಲೆ ಚಿರತೆ ದಾಳಿ; ಆಸ್ಪತ್ರೆಗೆ ದಾಖಲು

Kota ಕಾರ್ಮಿಕನ ಮೇಲೆ ಚಿರತೆ ದಾಳಿ; ಆಸ್ಪತ್ರೆಗೆ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.