ಕಲ್ಚೆರ್ಪೆ: ಪರಿಸರ ಸ್ನೇಹಿ ಬರ್ನಿಂಗ್‌ ಮೆಷಿನ್‌ ಪ್ರಾಯೋಗಿಕ ಚಾಲನೆ

ದಶಕಗಳ ತ್ಯಾಜ್ಯ ವಿಲೇ ಸಮಸ್ಯೆಯ ಪರಿಹಾರಕ್ಕೆ ಪ್ರಯತ್ನ

Team Udayavani, Oct 2, 2021, 5:28 AM IST

ಕಲ್ಚೆರ್ಪೆ: ಪರಿಸರ ಸ್ನೇಹಿ ಬರ್ನಿಂಗ್‌ ಮೆಷಿನ್‌ ಪ್ರಾಯೋಗಿಕ ಚಾಲನೆ

ಸುಳ್ಯ: ದಶಕಗಳಿಂದ ಸುಳ್ಯವನ್ನು ಕಾಡುತ್ತಿರುವ ತ್ಯಾಜ್ಯ ವಿಲೇವಾರಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಪರಿಸರ ಸ್ನೇಹಿ ಪ್ರಯತ್ನ ಪ್ರಾರಂಭಗೊಂಡಿದ್ದು ಪ್ರಾಯೋಗಿಕವಾಗಿ ಚಾಲನೆ ನೀಡಲಾಗಿದೆ.

ನಗರದ ಕಸ ಸಂಗ್ರಹಿಸುವ ಕಲ್ಚೆರ್ಪೆ ಡಂಪಿಂಗ್‌ ಯಾರ್ಡ್‌ನಲ್ಲಿ ಆಧುನಿಕ ತಂತ್ರಜ್ಞಾನ ಬಳಸಿರುವ ಬರ್ನಿಂಗ್‌ ಮೆಷಿನ್‌ ಚಾಲನೆಯ ಪ್ರಥಮ ಪ್ರಯತ್ನ ಯಶಸ್ವಿಯಾಗಿದೆ. ಇಲ್ಲಿ ಗ್ಯಾಸಿಫಿಕೇಶನ್‌ ಯಂತ್ರದ ಮೂಲಕ ಕಸವನ್ನು ಉರಿಸಿ ತ್ಯಾಜ್ಯ ನಾಶ ಮಾಡಲಾಗುತ್ತದೆ. ಪರಿಸರ ಸ್ನೇಹಿಯಾದ ಈ ಯಂತ್ರದಲ್ಲಿ ಕಸವನ್ನು ವಿಲೇವಾರಿ ಮಾಡಿದಾಗ ಗ್ಯಾಸ್‌ ಮತ್ತು ಬೂದಿ ದೊರೆಯಲಿದ್ದು ಇದನ್ನು ಮರು ಬಳಕೆ ಮಾಡಲು ಸಾಧ್ಯವಿದೆ.

40 ಲಕ್ಷ ರೂ.ವೆಚ್ಚ
ನಗರದಲ್ಲಿ ಪ್ರತೀ ದಿನ ಸಂಗ್ರಹವಾಗುವ ಕಸ ಮತ್ತು ಈಗಾಗಲೇ ಕಲ್ಚೆರ್ಪೆ ಹಾಗು ನಗರ ಪಂಚಾಯತ್‌ ಮುಂಭಾಗದಲ್ಲಿ ಶೇಖರಿಸಲಾಗಿರುವ ಕಸವನ್ನು ಯಂತ್ರದ ಮೂಲಕ ವಿಲೇವಾರಿ ಮಾಡಿ ಬರ್ನ್ ಮಾಡಲು ಉದ್ದೇಶಿಸಲಾಗಿದೆ.

ಸುಮಾರು 40 ಲಕ್ಷ ರೂ. ವೆಚ್ಚದಲ್ಲಿ ಅಳವಡಿಸಲಾದ ಬರ್ನಿಂಗ್‌ ಯಂತ್ರದಲ್ಲಿ ಒಂದು ಗಂಟೆಯಲ್ಲಿ 150 ಕೆಜಿ ತ್ಯಾಜ್ಯವನ್ನು ಉರಿಸಬಹುದು. ಪ್ರಾರಂಭದಲ್ಲಿ ಸಂಗ್ರಹ ಕಸ ಬರ್ನ್ ಮಾಡಲಾಗುತ್ತದೆ. ಅನಂತರ ದಿನಂಪ್ರತಿ ಸಂಗ್ರಹಿಸುವ ಕಸವನ್ನು ಪೂರ್ವದಲ್ಲಿ ವಿಂಗಡಿಸಿ ಅಗತ್ಯವಿರುವ ತ್ಯಾಜ್ಯಗಳನ್ನು ಬರ್ನ್ ಮಾಡಲಾಗುತ್ತದೆ.

ಇದನ್ನೂ ಓದಿ:ಸಿಂದಗಿ ಉಪ ಚುನಾವಣೆ : ನಾಜಿಯಾ ಶಕೀಲಾ ಅಂಗಡಿ ಜೆಡಿಎಸ್ ಅಭ್ಯರ್ಥಿ

ಏನಿದು ಕಸ ಸಮಸ್ಯೆ
ದಶಕಗಳಿಂದ ಕಾಡುವ ದೊಡ್ಡ ಸಮಸ್ಯೆ ಕಸ ವಿಲೇವಾರಿ. ಕಸ ಸಂಗ್ರಹಕ್ಕೆ ಮತ್ತು ವಿಲೇವಾರಿಗೆಂದು ಲಕ್ಷಾಂತರ ರೂ. ಖರ್ಚು ಮಾಡಲಾಗಿದೆ. ತ್ಯಾಜ್ಯ ವಿಲೇವಾರಿ ಘಟಕದ ಸ್ಥಳದ ವಿಚಾರದಲ್ಲಿ ಭಾರೀ ವಿರೋಧ ವ್ಯಕ್ತವಾಗಿ ಕೊನೆಗೂ ಪ್ರಾರಂಭಗೊಂಡಿತು. ಆದರೆ ಅಲ್ಲಿ ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡದ ಕಾರಣ ಕಸ ತುಂಬಿ ತುಳುಕಿತ್ತು. ಬೇರೆ ಹಲವು ಕಡೆಗಳಲ್ಲಿ ಜಾಗ ಹುಡುಕಿದರೂ ವಿರೋಧಗಳು ಮತ್ತು ತಾಂತ್ರಿಕ ಅಡಚಣೆಗಳಿಂದ ಸೂಕ್ತ ಜಾಗ ಸಿಕ್ಕಿರಲಿಲ್ಲ. ಕಲ್ಚೆರ್ಪೆ ಯಲ್ಲಿ ಕಸ ಹಾಕಲು ಸಾಧ್ಯವಾಗದ ಕಾರಣ ನಗರದಲ್ಲಿ ಸಂಗ್ರಹವಾಗುವ ತ್ಯಾಜ್ಯವನ್ನು ಕಳೆದ ಮೂರು ವರ್ಷಗಳಿಂದ ನಗರ ಪಂಚಾಯತ್‌ ಮುಂಭಾಗದ ಕಟ್ಟಡದಲ್ಲಿಯೇ ರಾಶಿ ಹಾಕಲಾಗಿತ್ತು. ಕಸದ ಸಮಸ್ಯೆ ಬಗ್ಗೆ ಸಚಿವರಾದಿಯಾಗಿ ವಿವಿಧ ಹಂತಗಳಲ್ಲಿ ಸಭೆ ನಡೆದಿತ್ತು.

ಎಂಟು ಗಂಟೆ ಸಾಕು
ದಿನ ನಿತ್ಯ ಸುಳ್ಯ ನಗರದಲ್ಲಿ ಒಂದು ಟನ್‌ಗಿಂತಲೂ ಹೆಚ್ಚು ಕಸ ಸಂಗ್ರಹ ಆಗುತ್ತದೆ. ಇಷ್ಟು ತ್ಯಾಜ್ಯವನ್ನು ಎಂಟು ಗಂಟೆಗಳಲ್ಲಿ ಬರ್ನ್ ಮಾಡಲು ಸಾಧ್ಯ. ಉರಿದಾಗ ನೀರು ಮಿಶ್ರಿತ ಬೂದಿ ಮತ್ತು ಗ್ಯಾಸ್‌ ದೊರೆಯುತ್ತದೆ. 150 ಕೆಜಿ ಕಸದಿಂದ 8ರಿಂದ 10 ಕೆಜಿ ಬೂದಿ ಉತ್ಪತ್ತಿ ಆಗುತ್ತದೆ. ಉತ್ಪತ್ತಿಯಾದ ಗ್ಯಾಸ್‌ ಅನ್ನು ಸಂಗ್ರಹಿಸಿ ಬಳಕೆ ಮಾಡಬಹುದು. ಅದೇ ರೀತಿ ಬೂದಿಯನ್ನು ಬೇರ್ಪಡಿಸಿ ಇಟ್ಟಿಗೆ ನಿರ್ಮಾಣ ಮತ್ತಿತರ ಅಗತ್ಯಗಳಿಗೆ ಬಳಸಬಹುದು. ಇಲ್ಲಿ ದೊರೆಯುವ ಗ್ಯಾಸ್‌ ಮತ್ತು ಬೂದಿಯನ್ನು ಪರಿಣಾಮಕಾರಿಯಾಗಿ ಮರು ಬಳಕೆ ಮಾಡುವ ಯೋಜನೆ ನಗರ ಆಡಳಿತದ್ದು. ಪ್ರಸ್ತುತ ಸುಮಾರು 2,500 ಟನ್‌ ಗೂ ಮಿಕ್ಕಿ ಕಸ ಕಲ್ಚಪೆìಯಲ್ಲಿ ರಾಶಿ ಬಿದ್ದಿದೆ. ಇದನ್ನು ಬರ್ನ್ ಮಾಡಿ ವಿಲೇವಾರಿ ಮಾಡುವ ಕಾರ್ಯ ಪ್ರಾರಂಭಿಸಲಾಗಿದೆ.

ಕಾರ್ಯಾರಂಭ
ಬರ್ನಿಂಗ್‌ ಯಂತ್ರ ಬಳಕೆ ಮೊದಲ ಹಂತದಲ್ಲಿ ಪ್ರಾಯೋಗಿಕವಾಗಿ ಯಶಸ್ವಿಯಾಗಿದ್ದು ಪೂರ್ಣ ಪ್ರಮಾಣದಲ್ಲಿ ಯಂತ್ರ ಕಾರ್ಯಾಚರಿಸಲು ಕೆಲವೊಂದು ಪರಿಕರಗಳನ್ನು ಅಳವಡಿಸಬೇಕಿದೆ. ಅವೆಲ್ಲವೂ ಪೂರ್ಣಗೊಂಡ ಬಳಿಕ ಇನ್ನೊಂದು ಹಂತದ ಪ್ರಾಯೋಗಿಕ ಪರೀಕ್ಷೆ ನಡೆಸಿ ಅಕ್ಟೋಬರ್‌ 10 ರ ಮೊದಲು ನಿರಂತರ ಕಾರ್ಯಾರಂಭ ಮಾಡುವ ಚಿಂತನೆ ಮಾಡಲಾಗಿದೆ.
-ವಿನಯ ಕುಮಾರ್‌ ಕಂದಡ್ಕ,
ಅಧ್ಯಕ್ಷ, ನಗರ ಪಂಚಾಯತ್‌, ಸುಳ್ಯ

ಟಾಪ್ ನ್ಯೂಸ್

Rain ಕರಾವಳಿ ಸಹಿತ ರಾಜ್ಯದ ವಿವಿಧೆಡೆ ಉತ್ತಮ ಮಳೆ, ನಾಲ್ಕು ಜೀವಹಾನಿ

Rain ಕರಾವಳಿ ಸಹಿತ ರಾಜ್ಯದ ವಿವಿಧೆಡೆ ಉತ್ತಮ ಮಳೆ, ನಾಲ್ಕು ಜೀವಹಾನಿ

Ambedkar ಇಲ್ಲದಿದ್ದರೆ ನೆಹರೂ ಮೀಸಲು ನೀಡುತ್ತಿರಲಿಲ್ಲ : ಮೋದಿ

Ambedkar ಇಲ್ಲದಿದ್ದರೆ ನೆಹರೂ ಮೀಸಲು ನೀಡುತ್ತಿರಲಿಲ್ಲ : ಮೋದಿ

ocon

ಲೀಡ್‌ ಕೊಡಿಸದಿದ್ದರೆ ಅಧಿಕಾರವೂ ಸಿಗದು; ಹುದ್ದೆ ಬಯಸುವ ಕಾರ್ಯಕರ್ತರಿಗೆ ಡಿಕೆಶಿ ಚಾಟಿ

Puttur ಅಂಗಳದಲ್ಲಿದ್ದ ವ್ಯಕ್ತಿ ಸಾವು ಸಿಡಿಲಾಘಾತ / ಹೃದಯಾಘಾತ ಶಂಕೆ

Puttur ಅಂಗಳದಲ್ಲಿದ್ದ ವ್ಯಕ್ತಿ ಸಾವು ಸಿಡಿಲಾಘಾತ / ಹೃದಯಾಘಾತ ಶಂಕೆ

Singapore Airlines; 3 ನಿಮಿಷಗಳಲ್ಲಿ 6 ಸಾವಿರ ಅಡಿ ಕುಸಿದ ವಿಮಾನ: 1 ಸಾವು

Singapore Airlines; 3 ನಿಮಿಷಗಳಲ್ಲಿ 6 ಸಾವಿರ ಅಡಿ ಕುಸಿದ ವಿಮಾನ: 1 ಸಾವು

ಚಲಿಸುತ್ತಿದ್ದ ಕಾರಿನ ಮೇಲೆ ಮರ ಬಿದ್ದು ಇಬ್ಬರಿಗೆ ಗಾಯ

Vitla ಚಲಿಸುತ್ತಿದ್ದ ಕಾರಿನ ಮೇಲೆ ಮರ ಬಿದ್ದು ಇಬ್ಬರಿಗೆ ಗಾಯ

Heavy Rain ಕರಾವಳಿ, ಕೊಡಗು ಜಿಲ್ಲೆಯಲ್ಲಿ ಗುಡುಗು ಸಹಿತ ಬಿರುಸಿನ ಮಳೆ

Heavy Rain ಕರಾವಳಿ, ಕೊಡಗು ಜಿಲ್ಲೆಯಲ್ಲಿ ಗುಡುಗು ಸಹಿತ ಬಿರುಸಿನ ಮಳೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Puttur ಅಂಗಳದಲ್ಲಿದ್ದ ವ್ಯಕ್ತಿ ಸಾವು ಸಿಡಿಲಾಘಾತ / ಹೃದಯಾಘಾತ ಶಂಕೆ

Puttur ಅಂಗಳದಲ್ಲಿದ್ದ ವ್ಯಕ್ತಿ ಸಾವು ಸಿಡಿಲಾಘಾತ / ಹೃದಯಾಘಾತ ಶಂಕೆ

ಚಲಿಸುತ್ತಿದ್ದ ಕಾರಿನ ಮೇಲೆ ಮರ ಬಿದ್ದು ಇಬ್ಬರಿಗೆ ಗಾಯ

Vitla ಚಲಿಸುತ್ತಿದ್ದ ಕಾರಿನ ಮೇಲೆ ಮರ ಬಿದ್ದು ಇಬ್ಬರಿಗೆ ಗಾಯ

Yelimale ಶಾಲೆಯ ತಡೆಗೋಡೆ ಕುಸಿತ; 20ಕ್ಕೂ ಅಧಿಕ ಕೋಳಿಗಳ ಸಾವು

Yelimale ಶಾಲೆಯ ತಡೆಗೋಡೆ ಕುಸಿತ; 20ಕ್ಕೂ ಅಧಿಕ ಕೋಳಿಗಳ ಸಾವು

Vasantha ಬಂಗೇರರಿಲ್ಲದೆ ರಾಜ್ಯ ರಾಜಕಾರಣಕ್ಕೆ ನಷ್ಟ: ಮುಖ್ಯಮಂತ್ರಿ ಸಿದ್ದರಾಮಯ್ಯ

Vasantha ಬಂಗೇರರಿಲ್ಲದೆ ರಾಜ್ಯ ರಾಜಕಾರಣಕ್ಕೆ ನಷ್ಟ: ಮುಖ್ಯಮಂತ್ರಿ ಸಿದ್ದರಾಮಯ್ಯ

Uppinangady: ಹೆದ್ದಾರಿ ತಡೆಗೋಡೆ ಕುಸಿತ

Uppinangady: ಹೆದ್ದಾರಿ ತಡೆಗೋಡೆ ಕುಸಿತ

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

Rain ಕರಾವಳಿ ಸಹಿತ ರಾಜ್ಯದ ವಿವಿಧೆಡೆ ಉತ್ತಮ ಮಳೆ, ನಾಲ್ಕು ಜೀವಹಾನಿ

Rain ಕರಾವಳಿ ಸಹಿತ ರಾಜ್ಯದ ವಿವಿಧೆಡೆ ಉತ್ತಮ ಮಳೆ, ನಾಲ್ಕು ಜೀವಹಾನಿ

Ambedkar ಇಲ್ಲದಿದ್ದರೆ ನೆಹರೂ ಮೀಸಲು ನೀಡುತ್ತಿರಲಿಲ್ಲ : ಮೋದಿ

Ambedkar ಇಲ್ಲದಿದ್ದರೆ ನೆಹರೂ ಮೀಸಲು ನೀಡುತ್ತಿರಲಿಲ್ಲ : ಮೋದಿ

ocon

ಲೀಡ್‌ ಕೊಡಿಸದಿದ್ದರೆ ಅಧಿಕಾರವೂ ಸಿಗದು; ಹುದ್ದೆ ಬಯಸುವ ಕಾರ್ಯಕರ್ತರಿಗೆ ಡಿಕೆಶಿ ಚಾಟಿ

Puttur ಅಂಗಳದಲ್ಲಿದ್ದ ವ್ಯಕ್ತಿ ಸಾವು ಸಿಡಿಲಾಘಾತ / ಹೃದಯಾಘಾತ ಶಂಕೆ

Puttur ಅಂಗಳದಲ್ಲಿದ್ದ ವ್ಯಕ್ತಿ ಸಾವು ಸಿಡಿಲಾಘಾತ / ಹೃದಯಾಘಾತ ಶಂಕೆ

Singapore Airlines; 3 ನಿಮಿಷಗಳಲ್ಲಿ 6 ಸಾವಿರ ಅಡಿ ಕುಸಿದ ವಿಮಾನ: 1 ಸಾವು

Singapore Airlines; 3 ನಿಮಿಷಗಳಲ್ಲಿ 6 ಸಾವಿರ ಅಡಿ ಕುಸಿದ ವಿಮಾನ: 1 ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.