ಪ್ರವಾಸಿಗರ ಉತ್ಸಾಹ ಹೆಚ್ಚಿಸಿದ ಜಲ ಕ್ರೀಡೆ
Team Udayavani, Oct 16, 2021, 12:53 PM IST
ಶ್ರೀರಂಗಪಟ್ಟಣ: ಈ ಬಾರಿಯ ಮೈಸೂರು ದಸರಾದಲ್ಲಿ ಹೆಚ್ಚಿನ ಪ್ರವಾಸಿಗರನ್ನು ಸೆಳೆಯಲು ಯುವಜನ ಕ್ರೀಡಾ ಇಲಾಖೆ ಮಂಡ್ಯ ಜಿಲ್ಲಾಡಳಿತ KRS ಡ್ಯಾಂ ಹಿನ್ನೀರಿನಲ್ಲಿ ಜಲಕ್ರೀಡೆ ಆಯೋಜಿಸಿದ್ದು, ಪ್ರವಾಸಿಗರ ಉತ್ಸಾಹ ಹೆಚ್ಚಿಸಿದೆ.
ಶ್ರೀರಂಗಪಟ್ಟಣ ತಾಲೂಕಿನ KRS ಹಿನ್ನೀರಿನ ವೇಣು ಗೋಪಾಲಸ್ವಾಮಿ ದೇವಾ ಲಯದ ಬಳಿ ಈ ಜಲ ಕ್ರೀಡೆ ಆಯೋಜಿಸಿದ್ದು, ಜಸ್ಕೀ ಬೋಟ್ ಸೇರಿದಂತೆ ಇನ್ನಿತರ ಮೋಟಾರ್ ಬೋಟ್ ನಲ್ಲಿ ಪ್ರವಾಸಿಗರಿಗೆ ಸುರಕ್ಷತಾ ಸಾಧನದೊಂದಿಗೆ ಹಿನ್ನೀರಿನಲ್ಲಿ ಮನೋರಂಜನೆ ಈ ಜ ನೀಡುತ್ತಿದೆ.
ಹಿನ್ನೀರಿನಲ್ಲಿ ಆಯೋಜಿಸಿರುವ ಈ ಜಲಕ್ರೀಡೆಗೆ ಹೆಚ್ಚಿನ ಪ್ರವಾಸಿರು ಫಿದಾ ಆಗಿದ್ದು ಜಸ್ಕೀ ಬೋಟ್ ರೈಡಿಂಗ್ ಮಾಡಿ ಎಂಜಾಯ್ ಮಾಡ್ತಿದ್ದಾರೆ.