ಚೀನಾ ಸೈನಿಕರ ಪತ್ತೆಗಾಗಿ ಹೊಸ ತಂತ್ರಜ್ಞಾನ : ಗಡಿ ಉಲ್ಲಂಘನೆ ತಪ್ಪಿಸಲು ಈ ಪ್ರಯತ್ನ
ಮೊದಲ ಹಂತದಲ್ಲಿ ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್ನ ಎಲ್ಎಸಿ ಬಳಿ ಅಳವಡಿಕೆ
Team Udayavani, Oct 30, 2021, 10:30 PM IST
ನವದೆಹಲಿ: ಭಾರತ, ಚೀನಾ ಗಡಿ ಪ್ರದೇಶಗಳಲ್ಲಿ ಗಸ್ತು ತಿರುಗುವ ನೆಪದಲ್ಲಿ ಭಾರತದ ಗಡಿಯೊಳಗೆ ಗುಟ್ಟಾಗಿ ಅತಿಕ್ರಮಣ ಪ್ರವೇಶ ಮಾಡುವ ಚೀನಾ ಸೈನಿಕರು ಹಾಗೂ ಅವರ ವಾಹನಗಳನ್ನು ಪತ್ತೆ ಹಚ್ಚುವಂಥ ವೈಜ್ಞಾನಿಕ ವ್ಯವಸ್ಥೆಯೊಂದನ್ನು ಭಾರತೀಯ ಸೇನೆ ಸಿದ್ಧಪಡಿಸಿದೆ.
ಕೃತಕ ಬುದ್ಧಿಮತ್ತೆ (ಎ.ಐ) ಹಾಗೂ ಇನ್ನಿತರ ತಂತ್ರಜ್ಞಾನಗಳ ಮೂಲಕ ಈ ವ್ಯವಸ್ಥೆ ಸಿದ್ಧಪಡಿಸಲಾಗಿದ್ದು, ಇದನ್ನೀಗಾಗಲೇ ಭಾರತ- ಚೀನಾ ನಡುವಿನ ನೈಜ ಗಡಿ ರೇಖೆಯಲ್ಲಿ (ಎಲ್ಎಸಿ) ಅಳವಡಿಸಲಾಗಿದೆ.
ಹೇಗೆ ಕೆಲಸ ಮಾಡುತ್ತೆ ಈ ವ್ಯವಸ್ಥೆ?
ಇಷ್ಟು ದಿನಗಳ ಕಾಲ ಭಾರತದ ಗಡಿ ರೇಖೆಯ ಬಳಿಗೆ ಬಂದು ಹೋಗಿರುವಂಥ ಎಲ್ಲಾ ಸೈನಿಕರ ಮುಖ ಹಾಗೂ ದೇಹಾಕೃತಿಯ ಮಾಹಿತಿಯ ದತ್ತಾಂಶವನ್ನು ಈ ವ್ಯವಸ್ಥೆಯಡಿ ಸಂಗ್ರಹಿಸಲಾಗಿದೆ. ಗಡಿ ರೇಖೆಯ ಬಳಿ ಯಾವುದೇ ಚೀನಾ ಸೈನಿಕ ಬಂದರೆ, ಅದರ ಮಾಹಿತಿಯನ್ನು ಕಲೆಹಾಕುವ ಈ ವ್ಯವಸ್ಥೆ, ಅದನ್ನು ತನ್ನಲ್ಲಿ ಈಗಾಗಲೇ ಅಡಕವಾಗಿರುವ ಚೀನಾದ ಸೈನಿಕರ ದತ್ತಾಂಶದೊಂದಿಗೆ ತಾಳೆ ಹಾಕಿ, ಸೈನಿಕರ ಆಗಮನದ ಬಗ್ಗೆ ಸೇನೆಗೆ ಸಂದೇಶ ರವಾನಿಸುತ್ತದೆ. ಇದಕ್ಕೆ ತಕ್ಕಂಥ ಸಾಫ್ಟ್ವೇರ್ ಅನ್ನು ಸಿದ್ಧಪಡಿಸಿ ಇದರಲ್ಲಿ ಅಳವಡಿಸಲಾಗಿದೆ ಎಂದು ಸೇನಾ ಕಮಾಂಡರ್ ಲೆ.ಜ. ಮನೋಜ್ ಪಾಂಡೆ ತಿಳಿಸಿದ್ದಾರೆ.
ಇದನ್ನೂ ಓದಿ : 10 ಲಕ್ಷ ರೂ.ಮೌಲ್ಯದ ಅಕ್ರಮ ಮದ್ಯ-ವಾಹನ ವಶ, ನಾಲ್ವರ ಬಂಧನ
ಎಲ್ಲೆಲ್ಲಿದೆ ಈ ವ್ಯವಸ್ಥೆ?
ಎರಡೂ ದೇಶಗಳ ನಡುವೆ ನೈಜ ಗಡಿ ರೇಖೆ (ಎಲ್ಎಸಿ) ಹಾದುಹೋಗಿರುವ ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್ ಬಳಿ ಇದನ್ನು ಅಳವಡಿಸಲಾಗಿದೆ. ಇದಲ್ಲದೆ, ತವಾಂಗ್ ಜಿಲ್ಲೆಯ ನಮಕಾ ಚು ಕಣಿವೆ, ಸಮೊರಂಗ್ ಚು ಹಾಗೂ ಯಾಂಗ್ಸೆ ಎಂಬ ಮೂರು ಕಡೆಗಳಲ್ಲಿ ಈ ಹಿಂದೆ ಚೀನಾ ಸೈನಿಕರು ವಿನಾಕಾರಣ ಗಡಿ ಉಲ್ಲಂ ಸಿದ್ದಾರೆ. ಹಾಗಾಗಿ, ಆ ಪ್ರಾಂತ್ಯಗಳಲ್ಲೂ ಈ ವ್ಯವಸ್ಥೆ ಅಳವಡಿಸಲಾಗುತ್ತದೆ ಎಂದು ತವಾಂಗ್ ಸೆಕ್ಟರ್ನಲ್ಲಿ ಸೇವೆ ಸಲ್ಲಿಸುತ್ತಿರುವ ಸೇನೆಯ ಮೇಜರ್ ಭವ್ಯಾ ಶರ್ಮಾ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Panaji; ಮೇ 11 ರಿಂದ ಗೋವಾದಲ್ಲಿ ಕೆಲವೆಡೆ ತುಂತುರು ಮಳೆ ಸಾಧ್ಯತೆ
Goa ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮತದಾನ ಆಗಿದೆ: ಸಿಎಂ ಪ್ರಮೋದ್ ಸಾವಂತ್
Adani-Ambaniಯಿಂದ ಎಷ್ಟು ಕಪ್ಪು ಹಣ ಪಡೆದಿದ್ದೀರಿ? ರಾಹುಲ್ ವಿರುದ್ಧ ಮೋದಿ ವಾಗ್ದಾಳಿ
Heavy Rain: ನಿರ್ಮಾಣ ಹಂತದಲ್ಲಿದ್ದ ಅಪಾರ್ಟ್ಮೆಂಟ್ನ ಗೋಡೆ ಕುಸಿದು 7 ಮಂದಿ ಸಾವು
ಏಕಾಏಕಿ ಯು-ಟರ್ನ್ ತೆಗೆದ ಟ್ರಕ್ ಚಾಲಕ… ಕಾರು ಡಿಕ್ಕಿ ಹೊಡೆದು 6 ಮಂದಿ ಸ್ಥಳದಲ್ಲೇ ಮೃತ್ಯು
MUST WATCH
ಹೊಸ ಸೇರ್ಪಡೆ
Panaji; ಮೇ 11 ರಿಂದ ಗೋವಾದಲ್ಲಿ ಕೆಲವೆಡೆ ತುಂತುರು ಮಳೆ ಸಾಧ್ಯತೆ
ಶಿವಮೊಗ್ಗ: ಹಾಡಹಗಲೇ ನಡುರಸ್ತೆಯಲ್ಲಿ ಇಬ್ಬರು ರೌಡಿಶೀಟರ್ ಗಳ ಭೀಕರ ಹತ್ಯೆ, ಬಿಗುವಿನ ವಾತಾವರಣ
Sangeeth Sivan: ಮಾಲಿವುಡ್, ಬಾಲಿವುಡ್ನ ಖ್ಯಾತ ನಿರ್ದೇಶಕ ಸಂಗೀತ್ ಶಿವನ್ ನಿಧನ
Thirthahalli ಕುಪ್ಪಳ್ಳಿ; ಮನೆಗೆ ಆಕಸ್ಮಿಕ ಬೆಂಕಿ: ಅಪಾರ ಹಾನಿ!
ಎಲ್ಲಾ ಶೆಡ್ಯೂಲ್ ಮುಗಿದ ಬಳಿಕವಷ್ಟೇ ʼKGF -3ʼ.. ಬಿಗ್ ಅಪ್ಡೇಟ್ ಕೊಟ್ಟ ನಿರ್ದೇಶಕ ನೀಲ್