ರ್‍ಯಾಂಬ್ಲಿರ್‌ ಬ್ಯಾಡ್ಜ್ ಸಂಪಾದನೆ ಉದ್ದೇಶ: ವಿದ್ಯಾರ್ಥಿಗಳಿಂದ 700 ಕಿ.ಮೀ.ಸೈಕಲ್‌ ಯಾತ್ರೆ 


Team Udayavani, Nov 14, 2021, 3:20 AM IST

ರ್‍ಯಾಂಬ್ಲಿರ್‌ ಬ್ಯಾಡ್ಜ್ ಸಂಪಾದನೆ ಉದ್ದೇಶ: ವಿದ್ಯಾರ್ಥಿಗಳಿಂದ 700 ಕಿ.ಮೀ.ಸೈಕಲ್‌ ಯಾತ್ರೆ 

ಬಂಟ್ವಾಳ: ಸರಿಸುಮಾರು 700 ಕಿ.ಮೀ. ಸೈಕ್ಲಿಂಗ್‌ ನಡೆಸಿ ಬ್ಯಾಡ್ಜೊಂ ದನ್ನು ಸಂಪಾದಿಸುವ ಉದ್ದೇಶದಿಂದ ವಿದ್ಯಾರ್ಥಿಗಳ ತಂಡವೊಂದು ದಾವಣ ಗೆರೆಯಿಂದ ಹೊರಟಿದೆ. ಈಗಾಗಲೇ 330 ಕಿ.ಮೀ. ಸಾಗಿರುವ ತಂಡ ಶನಿವಾರ ಮಂಗಳೂರಿನಿಂದ ಆಗಮಿಸಿ ಬಿ.ಸಿ.ರೋಡ್‌ ಮೂಲಕ ಉಜಿರೆಯತ್ತ ತೆರಳಿದೆ.

ದಾವಣಗೆರೆ ಜಿಲ್ಲೆ ದಿ ಭಾರತ್‌ ಸ್ಕೌಟ್ಸ್‌ ಆ್ಯಂಡ್‌ ಗೈಡ್ಸ್‌ ಸಂಸ್ಥೆಯ ಮೂಲಕ ದಾವಣಗೆರೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಶ್ರೀ ವಿವೇಕಾನಂದ ರೋವರ್ಸ್‌ ಕ್ರೀವ್‌ನ ಒಟ್ಟು 17 ವಿದ್ಯಾರ್ಥಿಗಳು ಸೈಕಲ್‌ ಯಾತ್ರೆ ಹೊರಟಿದ್ದು, ರ್‍ಯಾಂಬ್ಲಿರ್‌ ಬ್ಯಾಡ್ಜ್ ಸಂಪಾದನೆಗಾಗಿ ಈ ರೀತಿಯಲ್ಲಿ ಸೈಕ್ಲಿಂಗ್‌ ನಡೆಸುತ್ತಿದ್ದಾರೆ.

10 ದಿನಗಳ ಸೈಕಲ್‌ ಯಾತ್ರೆ:

ನ. 8ರಂದು ದಾವಣಗೆರೆಯಿಂದ ಹೊರಟಿರುವ ವಿದ್ಯಾರ್ಥಿಗಳು ನ. 13ರಂದು ಬಂಟ್ವಾಳ ಮೂಲಕ ಉಜಿರೆಗೆ ಸಾಗಿದ್ದಾರೆ.  ನ. 14ರಂದು ಚಾರ್ಮಾಡಿ, ಮೂಡಿಗೆರೆ, ನ. 15ರಂದು ಚಿಕ್ಕಮಗಳೂರು, ಕಡೂರು, ನ. 16ರಂದು ಅಜ್ಜಂಪುರ, ಚನ್ನಗಿರಿ, ನ. 17ರಂದು ಸಂತೆಬೆನ್ನೂರು ಮೂಲಕ ಮತ್ತೆ ದಾವಣಗೆರೆ ತಲುಪಲಿದ್ದಾರೆ.

ಇಬ್ಬರು ನಾಯಕರು:

ಈ ವಿದ್ಯಾರ್ಥಿಗಳ ತಂಡಕ್ಕೆ ನಾಗಾಭರಣ ಹಾಗೂ ಮುಸ್ತಫಾರಝಾ ನಾಯಕರು. ಉಳಿದಂತೆ ಬಾನುಕುಮಾರ್‌, ಭರತ್‌ಕುಮಾರ್‌, ಹರೀಶ್‌ ಎಂ., ಗಿರೀಶ್‌, ಪೃಥ್ವಿ, ಆಕಾಶ್‌, ಪ್ರಭು, ಸತೀಶ್‌, ಪರಶುರಾಮಪ್ಪ, ಅಭಿಷೇಕ್‌ ಎಚ್‌.ಬಿ, ಗುರುಬಸವರಾಜು, ದೀಪಕ್‌, ಸುದೀಪ್‌, ಯುವರಾಜ್‌ ಹಾಗೂ ಚರಣ್‌ ಸೇರಿ 17 ಮಂದಿ ಇದ್ದಾರೆ. ಇವರಲ್ಲಿ ಇಬ್ಬರು ಸೀನಿಯರ್‌ಗಳು ಈ ಹಿಂದೆಯೇ ಇಂತಹ ಸೈಕಲ್‌ ಯಾತ್ರೆ ನಡೆಸಿದ್ದು, ಉಳಿದಂತೆ ಎಲ್ಲರಿಗೂ ಹೊಸ ಅನುಭವವಾಗಿದೆ.

ರಂಬೂಟಾನ್‌ ಸವಿದರು:

ಶನಿವಾರ ಮಧ್ಯಾಹ್ನ 2ರ ಸುಮಾರಿಗೆ ಬಿ.ಸಿ.ರೋಡ್‌ ಸರ್ಕಲ್‌ ಬಳಿ ತಲುಪಿದ ವಿದ್ಯಾರ್ಥಿಗಳ ತಂಡ ಸರ್ಕಲ್‌ನಲ್ಲಿ ರಸ್ತೆ ಬದಿ ರಂಬೂಟಾನ್‌ ಮಾರಾಟ ಮಾಡುತ್ತಿದ್ದ ವ್ಯಾಪಾರಿಯಿಂದ ರಂಬೂಟಾನ್‌ ಹಾಗೂ ಇತರ ಹಣ್ಣುಗಳನ್ನು ಖರೀದಿಸಿ ಸವಿದರು.  ಬಳಿಕ ಅಲ್ಲೇ ಹೆದ್ದಾರಿ ಬದಿ ನಿಂತು ಕೊಂಚ ವಿರಾಮ ಪಡೆದು ಮತ್ತೆ ತಮ್ಮ ಮುಂದಿನ ಹಾದಿಯತ್ತ ಸಾಗಿದರು.

ಸ್ಕೌಟ್ಸ್‌ ಆ್ಯಂಡ್‌ ಗೈಡ್ಸ್‌ ನಮ್ಮ ಜಿಲ್ಲಾ ಸಂಸ್ಥೆಯವರು ರೂಟ್‌ ಸೆಟ್‌ ಮಾಡಿ ಉಳಿದುಕೊಳ್ಳುವುದಕ್ಕೂ ವ್ಯವಸ್ಥೆ ಮಾಡಿರುತ್ತಾರೆ. ನಾವು ಅದರಂತೆ ನಿತ್ಯವೂ ಸೈಕ್ಲಿಂಗ್‌ ಮಾಡಿ ನಿರ್ದಿಷ್ಟ ಜಾಗವನ್ನು ತಲುಪಬೇಕಿದೆ. ಎಲ್ಲರೂ ಜತೆಯಾಗಿ ಮಾತನಾಡಿಕೊಂಡು ಸಾಗುವುದರಿಂದ ಯಾವುದೇ ಆಯಾಸ ಎನಿಸುವುದಿಲ್ಲ. ನಾಗಾಭರಣ, ಮುಸ್ತಫಾರಝಾ  ತಂಡದ ನಾಯಕರು

ಟಾಪ್ ನ್ಯೂಸ್

Rain ಕರಾವಳಿ ಸಹಿತ ರಾಜ್ಯದ ವಿವಿಧೆಡೆ ಉತ್ತಮ ಮಳೆ, ನಾಲ್ಕು ಜೀವಹಾನಿ

Rain ಕರಾವಳಿ ಸಹಿತ ರಾಜ್ಯದ ವಿವಿಧೆಡೆ ಉತ್ತಮ ಮಳೆ, ನಾಲ್ಕು ಜೀವಹಾನಿ

Ambedkar ಇಲ್ಲದಿದ್ದರೆ ನೆಹರೂ ಮೀಸಲು ನೀಡುತ್ತಿರಲಿಲ್ಲ : ಮೋದಿ

Ambedkar ಇಲ್ಲದಿದ್ದರೆ ನೆಹರೂ ಮೀಸಲು ನೀಡುತ್ತಿರಲಿಲ್ಲ : ಮೋದಿ

ocon

ಲೀಡ್‌ ಕೊಡಿಸದಿದ್ದರೆ ಅಧಿಕಾರವೂ ಸಿಗದು; ಹುದ್ದೆ ಬಯಸುವ ಕಾರ್ಯಕರ್ತರಿಗೆ ಡಿಕೆಶಿ ಚಾಟಿ

Puttur ಅಂಗಳದಲ್ಲಿದ್ದ ವ್ಯಕ್ತಿ ಸಾವು ಸಿಡಿಲಾಘಾತ / ಹೃದಯಾಘಾತ ಶಂಕೆ

Puttur ಅಂಗಳದಲ್ಲಿದ್ದ ವ್ಯಕ್ತಿ ಸಾವು ಸಿಡಿಲಾಘಾತ / ಹೃದಯಾಘಾತ ಶಂಕೆ

Singapore Airlines; 3 ನಿಮಿಷಗಳಲ್ಲಿ 6 ಸಾವಿರ ಅಡಿ ಕುಸಿದ ವಿಮಾನ: 1 ಸಾವು

Singapore Airlines; 3 ನಿಮಿಷಗಳಲ್ಲಿ 6 ಸಾವಿರ ಅಡಿ ಕುಸಿದ ವಿಮಾನ: 1 ಸಾವು

ಚಲಿಸುತ್ತಿದ್ದ ಕಾರಿನ ಮೇಲೆ ಮರ ಬಿದ್ದು ಇಬ್ಬರಿಗೆ ಗಾಯ

Vitla ಚಲಿಸುತ್ತಿದ್ದ ಕಾರಿನ ಮೇಲೆ ಮರ ಬಿದ್ದು ಇಬ್ಬರಿಗೆ ಗಾಯ

Heavy Rain ಕರಾವಳಿ, ಕೊಡಗು ಜಿಲ್ಲೆಯಲ್ಲಿ ಗುಡುಗು ಸಹಿತ ಬಿರುಸಿನ ಮಳೆ

Heavy Rain ಕರಾವಳಿ, ಕೊಡಗು ಜಿಲ್ಲೆಯಲ್ಲಿ ಗುಡುಗು ಸಹಿತ ಬಿರುಸಿನ ಮಳೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Puttur ಅಂಗಳದಲ್ಲಿದ್ದ ವ್ಯಕ್ತಿ ಸಾವು ಸಿಡಿಲಾಘಾತ / ಹೃದಯಾಘಾತ ಶಂಕೆ

Puttur ಅಂಗಳದಲ್ಲಿದ್ದ ವ್ಯಕ್ತಿ ಸಾವು ಸಿಡಿಲಾಘಾತ / ಹೃದಯಾಘಾತ ಶಂಕೆ

ಚಲಿಸುತ್ತಿದ್ದ ಕಾರಿನ ಮೇಲೆ ಮರ ಬಿದ್ದು ಇಬ್ಬರಿಗೆ ಗಾಯ

Vitla ಚಲಿಸುತ್ತಿದ್ದ ಕಾರಿನ ಮೇಲೆ ಮರ ಬಿದ್ದು ಇಬ್ಬರಿಗೆ ಗಾಯ

Yelimale ಶಾಲೆಯ ತಡೆಗೋಡೆ ಕುಸಿತ; 20ಕ್ಕೂ ಅಧಿಕ ಕೋಳಿಗಳ ಸಾವು

Yelimale ಶಾಲೆಯ ತಡೆಗೋಡೆ ಕುಸಿತ; 20ಕ್ಕೂ ಅಧಿಕ ಕೋಳಿಗಳ ಸಾವು

Vasantha ಬಂಗೇರರಿಲ್ಲದೆ ರಾಜ್ಯ ರಾಜಕಾರಣಕ್ಕೆ ನಷ್ಟ: ಮುಖ್ಯಮಂತ್ರಿ ಸಿದ್ದರಾಮಯ್ಯ

Vasantha ಬಂಗೇರರಿಲ್ಲದೆ ರಾಜ್ಯ ರಾಜಕಾರಣಕ್ಕೆ ನಷ್ಟ: ಮುಖ್ಯಮಂತ್ರಿ ಸಿದ್ದರಾಮಯ್ಯ

Uppinangady: ಹೆದ್ದಾರಿ ತಡೆಗೋಡೆ ಕುಸಿತ

Uppinangady: ಹೆದ್ದಾರಿ ತಡೆಗೋಡೆ ಕುಸಿತ

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

Rain ಕರಾವಳಿ ಸಹಿತ ರಾಜ್ಯದ ವಿವಿಧೆಡೆ ಉತ್ತಮ ಮಳೆ, ನಾಲ್ಕು ಜೀವಹಾನಿ

Rain ಕರಾವಳಿ ಸಹಿತ ರಾಜ್ಯದ ವಿವಿಧೆಡೆ ಉತ್ತಮ ಮಳೆ, ನಾಲ್ಕು ಜೀವಹಾನಿ

Ambedkar ಇಲ್ಲದಿದ್ದರೆ ನೆಹರೂ ಮೀಸಲು ನೀಡುತ್ತಿರಲಿಲ್ಲ : ಮೋದಿ

Ambedkar ಇಲ್ಲದಿದ್ದರೆ ನೆಹರೂ ಮೀಸಲು ನೀಡುತ್ತಿರಲಿಲ್ಲ : ಮೋದಿ

ocon

ಲೀಡ್‌ ಕೊಡಿಸದಿದ್ದರೆ ಅಧಿಕಾರವೂ ಸಿಗದು; ಹುದ್ದೆ ಬಯಸುವ ಕಾರ್ಯಕರ್ತರಿಗೆ ಡಿಕೆಶಿ ಚಾಟಿ

Puttur ಅಂಗಳದಲ್ಲಿದ್ದ ವ್ಯಕ್ತಿ ಸಾವು ಸಿಡಿಲಾಘಾತ / ಹೃದಯಾಘಾತ ಶಂಕೆ

Puttur ಅಂಗಳದಲ್ಲಿದ್ದ ವ್ಯಕ್ತಿ ಸಾವು ಸಿಡಿಲಾಘಾತ / ಹೃದಯಾಘಾತ ಶಂಕೆ

Singapore Airlines; 3 ನಿಮಿಷಗಳಲ್ಲಿ 6 ಸಾವಿರ ಅಡಿ ಕುಸಿದ ವಿಮಾನ: 1 ಸಾವು

Singapore Airlines; 3 ನಿಮಿಷಗಳಲ್ಲಿ 6 ಸಾವಿರ ಅಡಿ ಕುಸಿದ ವಿಮಾನ: 1 ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.