ಸಾಮಾನ್ಯ ಸೇವಾ ಕೇಂದ್ರ ಆರಂಭ
Team Udayavani, Feb 10, 2022, 2:25 PM IST
ಬಳಗಾನೂರು: ಪಟ್ಟಣದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಬಳಗಾನೂರು ವಲಯದ ಕಾರ್ಯಕ್ಷೇತ್ರದ ಸೇವಾ ಕೇಂದ್ರನ್ನು ಮುಖಂಡರಾದ ಮರಿಯಪ್ಪ ಅಂಬ್ಲಿ ಬುಧವಾರ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಶ್ರೀಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆಯಡಿ ಜನ ಸಾಮಾನ್ಯರಿಗೆ ಅನುಕೂಲವಾಗುವಂತಹ ಸೇವಾ ಕೇಂದ್ರವನ್ನು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ತೆರೆದಿದ್ದಾರೆ. ಸಕಾಲದಲ್ಲಿ ಹೆಚ್ಚಿನ ಸೇವಾ ಸೌಲಭ್ಯಗಳನ್ನು ಜನರು ಪಡೆಯುವ ಅವಕಾಶ ನೀಡಿದಂತಾಗಿದೆ ಎಂದರು.
ಪಪಂ ಸದಸ್ಯರಾದ ಬಸವರಾಜಸ್ವಾಮಿ ಗುಣಾರಿ, ಹುಸೆನ್ ಬಾಷಾ, ವಲಯದ ಮೇಲ್ವಿಚಾರಕ ರೇವಣಸಿದ್ದಯ್ಯ, ತಾಲೂಕು ನೋಡಲ್ ಅಧಿಕಾರಿ ಸರ್ವೇಶ, ಸೇವಾ ಪ್ರತಿನಿಧಿಗಳಾದ ಪದ್ಮಾವತಿ ಕಮ್ಮಾರ, ಪೂರ್ಣಿಮಾ, ಅಕ್ಕಮ್ಮ, ಸುಭಾಷಿನಿ, ಪಲ್ಲವಿ ನಾಯಕ್, ವಿಎಲ್ಎ ಚಂದ್ರಶೇಖರ, ಅಂಗನವಾಡಿ ಕಾರ್ಯಕರ್ತೆಯರಾದ ಜ್ಯೋತಿ, ನಾಗಮ್ಮ, ಆಶಾ ಕಾರ್ಯಕರ್ತೆ ವಿಜಯಲಕ್ಷ್ಮೀ, ಸ್ವಸಹಾಯ ಸಂಘದ ಸದಸ್ಯರು ಇದ್ದರು.