ಕೊಂಬು ಮುರಿದು ಗಾಯಗೊಂಡಿದ್ದ ಹೋರಿ ರಕ್ಷಣೆ
Team Udayavani, Apr 4, 2022, 9:37 PM IST
ಸಾಗರ: ಇಲ್ಲಿನ ಚಾಮರಾಜಪೇಟೆಯ ವ್ಯಾಪ್ತಿಯಲ್ಲಿ ಹೋರಿಯೊಂದಕ್ಕೆ ಕೊಂಬು ಮುರಿದು ಗಾಯವಾಗಿದ್ದ ಹಿನ್ನೆಲೆಯಲ್ಲಿ ಬಜರಂಗದಳ, ವಿಶ್ವಹಿಂದೂ ಪರಿಷತ್ ಮತ್ತಿತರ ಗೋಪ್ರೇಮಿ ಸಂಘಟನೆಗಳು ಸೂಕ್ತ ಚಿಕಿತ್ಸೆ ನೀಡಿ, ಪುಣ್ಯಕೋಟಿ ಗೋಶಾಲೆಗೆ ಕಳುಹಿಸಿಕೊಟ್ಟ ಘಟನೆ ಸೋಮವಾರ ನಡೆದಿದೆ.
ಕಳೆದ ನಾಲ್ಕಾರು ದಿನಗಳಿಂದ ಬೀಡಾಡಿ ಹೋರಿಯೊಂದರ ಕೊಂಬು ಕಿತ್ತು ತೀವ್ರವಾದ ರಕ್ತಸ್ರಾವವಾಗುತ್ತಿತ್ತು. ಖಾಸಗಿ ಬಸ್ ಹಳೆಯ ನಿಲ್ದಾಣ, ನಗರಠಾಣೆ ವ್ಯಾಪ್ತಿ ಪರದಾಡುತ್ತಿದ್ದ ಹೋರಿಯನ್ನು ಗಮನಿಸಿದ ಬಜರಂಗದಳ, ವಿಶ್ವಹಿಂದುಪರಿಷತ್ ಕಾರ್ಯಕರ್ತರು ಸುಮಾರು 6 ತಾಸುಗಳ ಕಾರ್ಯಾಚರಣೆ ನಡೆಸಿ, ಪೇಟೆ ಠಾಣೆಯ ಮುಂಭಾಗದಲ್ಲಿ ಹೋರಿಯನ್ನು ಹಿಡಿಯುವಲ್ಲಿ ಸಫಲರಾಗಿದ್ದಾರೆ.
ನಂತರ ಪಶು ಇಲಾಖೆಯ ತಜ್ಞರ ನೆರವಿನಿಂದ ಸೂಕ್ತ ಚಿಕಿತ್ಸೆ ಕೊಡಿಸಿದ್ದಾರೆ. ಚಿಕಿತ್ಸೆ ಪಡೆದುಕೊಂಡ ಹೋರಿಯನ್ನು ಸಮೀಪದ ಪುಣ್ಯಕೋಟಿ ಗೋಶಾಲೆಗೆ ಕಳಿಸಿಕೊಡಲಾಗಿದೆ.
ಇದನ್ನೂ ಓದಿ:ಸಂಘಟನೆಯ ಹೆಸರಿನಲ್ಲಿ ಶೋಚನೀಯ ಪರಿಸ್ಥಿತಿ ನಿರ್ಮಾಣ : ಶ್ರೀಈಶ್ವರಾನಂದಪುರಿ ಸ್ವಾಮೀಜಿ ವಿಷಾದ
ಬಜರಂಗದಳ ಸಂಚಾಲಕ ಸಂತೋಷ ಶಿವಾಜಿ, ರಾಘವೇಂದ್ರ ಕಾಮತ್, ಸುನೀಲ್, ರುದ್ರಪ್ಪ, ಕಿರಣ್ ಗೌಡ, ಮಂಜು ಗೌಡ, ಆಟೋ ಕಿರಣ್, ಆಟೋ ಆಶೋಕ, ಸುದರ್ಶನ, ದೀಪು, ಉಲ್ಲಾಸ, ವರ್ಷಿತ್, ಅಭಿಷೇಕ್ ಆಟೋ ಗಣೇಶ್ ಮತ್ತಿತರರು ಸಹಕಾರ ನೀಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಅವ್ಯವಸ್ಥೆ… ಕಾಶಿಯಲ್ಲಿ ಕಾಲು ಸಂಕ- ಬಟ್ಟೆ ಒಗೆಯುವ ಕಲ್ಲಾಗಿದೆ ಕೆಳದಿ ಸಾಮ್ರಾಜ್ಯದ ಶಾಸನ
Shivamogga:ಮಳೆ ಬಂತೆಂದು ಖುಷಿಪಡುತ್ತಿದ್ದ ರೈಲು ಪ್ರಯಾಣಿಕರಿಂದಲೇ ಹಿಡಿಶಾಪ!
Gopal Krishna Belur ಯಾರಿಂದಲೂ ರಾಜ್ಯ ಸರ್ಕಾರ ಅಲ್ಲಾಡಿಸಲು ಆಗಲ್ಲ
Shimoga; ಪ್ಲಾಸ್ಟಿಕ್ ನುಂಗಿದ್ದ ಹಾವು ರಕ್ಷಣೆ
BJPಯಲ್ಲಿ ನನಗೆ ಅನ್ಯಾಯವಾದಾಗ ರಘುಪತಿ ಭಟ್ ಸ್ಪರ್ಧೆ ಬೇಡ ಅಂದಿದ್ದರು: ಆಯನೂರು
MUST WATCH
ಹೊಸ ಸೇರ್ಪಡೆ
ಬಿಜೆಪಿಯವರು ಬಜೆಟ್ ಓದುವುದಿಲ್ಲ,ಅವರಿಗೆ ಎಕನಾಮಿಕ್ಸ್ ಗೊತ್ತಾಗುವುದಿಲ್ಲ: ಸಿಎಂ ಸಿದ್ದರಾಮಯ್ಯ
ಅಪಘಾತದಿಂದ ತೀವ್ರ ಗಾಯ: ಆಂಬ್ಯುಲೆನ್ಸ್ ಬರುವವರೆಗೆ ಸೆಲ್ಫಿಗೆ ಪೋಸ್ ಕೊಟ್ಟ ಯುವತಿಯರು.!
Hunsur: ಬಿರುಗಾಳಿ ಮಳೆಗೆ ಹಾರಿಹೋದ ಮನೆ ಮೇಲ್ಚಾವಣಿ, ಬ್ಯಾರನ್ಗೂ ಹಾನಿ
ಜಾರ್ಜಿಯಾದಲ್ಲಿ ಕಾರು ಪಲ್ಟಿಯಾಗಿ ಮೂವರು ಇಂಡೋ-ಅಮೆರಿಕನ್ ವಿದ್ಯಾರ್ಥಿಗಳು ದುರ್ಮರಣ
Davangere: ಮರ ಬಿದ್ದು ಕಾರು ಜಖಂ; ಚಾಲಕ ಪ್ರಾಣಾಪಾಯದಿಂದ ಪಾರು