ಕುತೂಹಲಕಾರಿ ಕಥೆ ಹೇಳಲು ರೆಡಿಯಾದ ನಿರೂಪ್ ಭಂಡಾರಿ;ಜೂ.6ಕ್ಕೆ ವಿಂಡೋ ಸೀಟ್‌ ಟ್ರೈಲರ್ ಬಿಡುಗಡೆ

ವಿಂಡೋ ಸೀಟ್ ಅಂದ್ರೆ ಪ್ರತಿಯೊಬ್ಬರಿಗೂ ಒಂದೊಂದು ರೀತಿಯ ನೆನಪುಗಳಿರುತ್ತವೆ, ಕಥೆಗಳಿರುತ್ತವೆ.

Team Udayavani, Jun 3, 2022, 2:34 PM IST

ಕುತೂಹಲಕಾರಿ ಕಥೆ ಹೇಳಲು ರೆಡಿಯಾದ ನಿರೂಪ್ ಭಂಡಾರಿ;ಜೂ.6ಕ್ಕೆ ವಿಂಡೋ ಸೀಟ್‌ ಟ್ರೈಲರ್ ಬಿಡುಗಡೆ

ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಈಗಂತೂ ಭಿನ್ನ ವಿಭಿನ್ನ ಟೈಟಲ್ ಹಾಗೂ ಚಿತ್ರಕತೆಗಳ ಸಿನಿಮಾಗಳು ಮೂಡಿಬರ್ತಿವೆ. ಅದೇ ಸಾಲಿಗೆ ಸೇರುವ ಮತ್ತೊಂದು ವಿಭಿನ್ನ ಕಥಾಹಂದರದ ಸಿನಿಮಾ ವಿಂಡೋ ಸೀಟ್. ಶೀತಲ್ ಶೆಟ್ಟಿ ನಿರ್ದೇಶನದ ಚೊಚ್ಚಲ ಸಿನಿಮಾ ಇದು. ಹೀಗಾಗಿ ಸಿನಿಮಾ ಬಗ್ಗೆ ಕುತೂಹಲ ಹೆಚ್ಚಿದೆ. ನಿರೂಪ್ ಭಂಡಾರಿ, ನಟಿಯರಾದ ಅಮೃತಾ ಅಯ್ಯಂಗಾರ್ ಹಾಗೂ ಸಂಜನಾ ಆನಂದ್ ಮುಖ್ಯ ಭೂಮಿಕೆಯಲ್ಲಿರುವ ವಿಂಡೋ ಸೀಟ್ ಸಿನಿಮಾ ಟೈಟಲ್ ಫಿಕ್ಸ್ ಆದ ದಿನದಿಂದ್ಲೂ ತನ್ನದೇ ಆದ ವಿಶೇಷತೆಗಳಿಂದ ಸಿನಿ ಪ್ರಿಯರ ಗಮನ ಸೆಳೆಯುತ್ತಿದೆ. ಈಗಾಗ್ಲೇ ಹೊರಬಂದಿರೋ ಚಿತ್ರದ ಟೀಸರ್, ಹಾಡು ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿಸಿವೆ. ಸದ್ಯ ಚಿತ್ರದ ಟ್ರೈಲರ್ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ.

ಹೌದು, ಟೀಸರ್, ಸಾಂಗ್ಸ್ ನೋಡಿ ಖುಷಿ ಪಟ್ಟಿದ್ದ ಪ್ರೇಕ್ಷಕರು ವಿಂಡೋಸೀಟ್ ಚಿತ್ರದ ಟ್ರೈಲರ್ ನ್ನು ಕಣ್ತುಂಬಿಕೊಳ್ಳಲು ಕಾಯ್ತಿದ್ದಾರೆ. ಸದ್ಯ ಚಿತ್ರತಂಡ ಚಿಕ್ಕದೊಂದು ಸೊಗಸಾದ ಪ್ರೋಮೋ ರಿವೀಲ್ ಮಾಡಿದ್ದು ಆ ಮೂಲಕ ತಮ್ಮ ಸಿನಿಮಾದ ಟ್ರೈಲರ್ ರಿಲೀಸ್ ಡೇಟ್ ನ್ನು ತಿಳಿಸಿದೆ. ಜೂನ್ 6ಕ್ಕೆ ವಿಂಡೋ ಸೀಟ್ ಸಿನಿಮಾ ಟ್ರೈಲರ್ ರಿಲೀಸ್ ಆಗಲಿದೆ. ಅಂದಹಾಗೆ ನಿರೂಪ್ ಭಂಡಾರಿ ಅವರ ಭಾವನಾತ್ಮಕ ನಿರೂಪಣೆಯ ಈ ಪ್ರೋಮೋ ಪ್ರೇಕ್ಷಕರನ್ನು ತನ್ನತ್ತ ಸೆಳೆಯುತ್ತೆ.

ವಿಂಡೋ ಸೀಟ್ ಅಂದ್ರೆ ಪ್ರತಿಯೊಬ್ಬರಿಗೂ ಒಂದೊಂದು ರೀತಿಯ ನೆನಪುಗಳಿರುತ್ತವೆ, ಕಥೆಗಳಿರುತ್ತವೆ. ಆದ್ರೆ ವಿಂಡೋ ಸೀಟ್ ಅನ್ನೋ ಟೈಟಲ್ ನಲ್ಲೇ ಮೂಡಿಬರ್ತಿರುವ ಈ ಚಿತ್ರದಲ್ಲಿ ಏನೆಲ್ಲಾ ಕುತೂಹಲಕಾರೀ ವಿಚಾರಗಳಿರುತ್ತವೆ ಅನ್ನೋದನ್ನು ಟ್ರೈಲರ್ ನಲ್ಲಿ ತಿಳಿಸಲಿದೆ ಚಿತ್ರತಂಡ. ಆ ಟ್ರೈಲರ್ ಹೇಗಿರಲಿದೆ ಅನ್ನೋದ್ರ ಚಿಕ್ಕ ಝಲಕ್ ಈ ಪ್ರೋಮೋ. ಚಿತ್ರದ ನಾಯಕ ರಘು ವಿಂಡೋ ಸೀಟ್ ಕಹಾನಿಯಲ್ಲಿ ನಗು, ಅಳು, ನ್ಯಾಯಕ್ಕಾಗಿ ಹೋರಾಟ, ಪ್ರೀತಿ ಈ ಎಲ್ಲದರ ಸಮ್ಮಿಶ್ರಣವಿದೆ ಅಂದ್ಮೇಲೆ ಸಿನಿಮಾದಲ್ಲಿ ಸಂತಿಂಗ್ ಸ್ಪೆಷಾಲಿಟಿ ಇದೆ ಅನ್ನೋದ್ರಲ್ಲಿ ಸಂದೇಹವಿಲ್ಲ.

ತಮ್ಮದೇ ಶೈಲಿಯ ನಿರೂಪಣೆ ಮೂಲಕ ಜನಪ್ರಿಯರಾಗಿದ್ದ ಶೀತಲ್ ಶೆಟ್ಟಿ ಸಿನಿಮಾ ಫೀಲ್ಡ್ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ರು. ನಟಿಯಾಗಿಯೂ ಸೈ ಅನ್ನಿಸಿಕೊಂಡ ಶೀತಲ್ ಗೆ ಹೆಚ್ಚು ಒಲವಿದ್ದದ್ದು ನಿರ್ದೇಶನದಲ್ಲಿ. ಹೀಗಾಗಿ ಸಂಗಾತಿ ಮತ್ತು ಕಾರು ಅನ್ನೋ ಎರಡು ಕಿರುಚಿತ್ರಗಳನ್ನು ಡೈರೆಕ್ಟ್ ಮಾಡಿ ಎಲ್ಲರಿಂದ ಮೆಚ್ಚುಗೆ ಗಳಿಸಿದ್ರು. ಇದೀಗ ವಿಂಡೋ ಸೀಟ್ ಸಿನಿಮಾ ಮೂಲಕ ಪೂರ್ಣಪ್ರಮಾಣದ ನಿರ್ದೇಶಕಿಯಾಗಿ ಗುರುತಿಸಿಕೊಂಡಿದ್ದಾರೆ. ಅಂದಹಾಗೆ ಕೆಎಸ್ ಕೆ ಬ್ಯಾನರ್ ನಲ್ಲಿ ಜಾಕ್ ಮಂಜು ಈ ಚಿತ್ರವನ್ನು ನಿರ್ಮಿಸಿದ್ದಾರೆ. ವಿಂಡೋ ಸೀಟ್ ಗೆ ಮ್ಯೂಸಿಕ್ ಮಾಂತ್ರಿಕ ಅರ್ಜುನ್ ಜನ್ಯಾ ಸಂಗೀತ ಸಂಯೋಜಿಸಿದ್ದಾರೆ. ಸಾಗರದ ಸುಂದರ ತಾಣಗಳಲ್ಲಿ ಈ ಚಿತ್ರವನ್ನು ಚಿತ್ರೀಕರಿಸಲಾಗಿದೆ. ಸದ್ಯ ಹೊರಬಂದಿರೋ ಪ್ರೋಮೋ ಟ್ರೈಲರ್ ಬಗ್ಗೆ ಪ್ರೇಕ್ಷಕರ ಕುತೂಹಲವನ್ನು ದುಪ್ಪಟ್ಟು ಮಾಡಿದೆ.

ಟಾಪ್ ನ್ಯೂಸ್

Athani; ಲಕ್ಷ್ಮಣ್ ಸವದಿ ಸಹಮಾಲಿಕತ್ವದ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಪೋಟ; ಮಹಿಳೆ ಸಾವು

Athani; ಲಕ್ಷ್ಮಣ್ ಸವದಿ ಸಹಮಾಲಿಕತ್ವದ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಪೋಟ; ಮಹಿಳೆ ಸಾವು

Sagara; ಹಸಿರುಮಕ್ಕಿ ಲಾಂಚ್‌ ಸೇವೆ ತಾತ್ಕಾಲಿಕ ಸ್ಥಗಿತ

Sagara; ಹಸಿರುಮಕ್ಕಿ ಲಾಂಚ್‌ ಸೇವೆ ತಾತ್ಕಾಲಿಕ ಸ್ಥಗಿತ

2nd PUC Exam-2 Result Declared; 35.25% students passed

2nd PUC ಪರೀಕ್ಷೆ-2 ಫಲಿತಾಂಶ ಪ್ರಕಟ; ಶೇ. 35.25 ವಿದ್ಯಾರ್ಥಿಗಳು ಉತ್ತೀರ್ಣ

13

Poonam Pandey: ನನ್ನ ಬೆತ್ತಲೆ ವಿಡಿಯೋ ಲೀಕ್‌ ಮಾಡಿದ್ದೇ ನನ್ನ ಮಾಜಿ ಗೆಳೆಯ – ಪೂನಂ ಪಾಂಡೆ

12-hondisi-bareyiri

YouTube ನಲ್ಲಿ ಹೊಂದಿಸಿ ಬರೆಯಿರಿ; ಉಚಿತವಾಗಿ ನೋಡಿ, ಇಷ್ಟವಾದರೆ ಕಾಸು ಹಾಕಿ…

Politics: ರಾಜ್ಯ ಸರ್ಕಾರ ಎಲ್ಲ ರಂಗಗಳಲ್ಲಿ ವಿಫಲ; ವರ್ಷದ ಸಾಧನೆ ಶೂನ್ಯ; ಬೊಮ್ಮಾಯಿ ಟೀಕೆ

Politics: ರಾಜ್ಯ ಸರ್ಕಾರ ಎಲ್ಲ ರಂಗಗಳಲ್ಲಿ ವಿಫಲ; ವರ್ಷದ ಸಾಧನೆ ಶೂನ್ಯ; ಬೊಮ್ಮಾಯಿ ಟೀಕೆ

11

ಪಂಚಮಸಾಲಿ ಮೀಸಲಾತಿ ಹೋರಾಟದಲ್ಲಿ ಸರ್ಕಾರದ ಪರ ಮೃದು ಧೋರಣೆ ಇಲ್ಲ: ಮೃತ್ಯುಂಜಯ ಸ್ವಾಮೀಜಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14

Bank Of Bhagyalakshmi: ಬ್ಯಾಂಕ್‌ನತ್ತ ದೀಕ್ಷಿತ್‌ ಚಿತ್ತ

13-ragini-dance

Ragini Dwivedi; ಸಂಜು ಜೊತೆ ರಾಗಿಣಿ ಡ್ಯಾನ್ಸ್‌ ; ಮಂಗ್ಲಿ ಹಾಡಿಗೆ ಭರ್ಜರಿ ಸ್ಟೆಪ್

12-hondisi-bareyiri

YouTube ನಲ್ಲಿ ಹೊಂದಿಸಿ ಬರೆಯಿರಿ; ಉಚಿತವಾಗಿ ನೋಡಿ, ಇಷ್ಟವಾದರೆ ಕಾಸು ಹಾಕಿ…

8

ಪತಿಯಿಂದಲೇ ಭೀಕರವಾಗಿ ಹತ್ಯೆಗೀಡಾದ ಸ್ಯಾಂಡಲ್‌ ವುಡ್‌ ನಟಿ, ಕಾಂಗ್ರೆಸ್‌ ಮುಖಂಡೆ

Sandalwood: ರಿಷಿ ಖುಷಿ!: ಅಕೌಂಟ್‌ಗೆ ಮತ್ತೊಂದು ಚಿತ್ರ ತ್ತೊ

Sandalwood: ರಿಷಿ ಖುಷಿ!: ಅಕೌಂಟ್‌ಗೆ ಮತ್ತೊಂದು ಚಿತ್ರ ತ್ತೊ

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

colon cancer

Colon Cancer; ಸಂಕೇತಗಳು ಮತ್ತು ಲಕ್ಷಣಗಳು, ರೋಗನಿರ್ಣಯ ಮತ್ತು ಚಿಕಿತ್ಸೆ

Athani; ಲಕ್ಷ್ಮಣ್ ಸವದಿ ಸಹಮಾಲಿಕತ್ವದ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಪೋಟ; ಮಹಿಳೆ ಸಾವು

Athani; ಲಕ್ಷ್ಮಣ್ ಸವದಿ ಸಹಮಾಲಿಕತ್ವದ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಪೋಟ; ಮಹಿಳೆ ಸಾವು

New Kannada serial: ಕಿರುತೆರೆಯತ್ತ ದಿವ್ಯಾ ಉರುಡುಗ

New Kannada serial: ಕಿರುತೆರೆಯತ್ತ ದಿವ್ಯಾ ಉರುಡುಗ

Sagara; ಹಸಿರುಮಕ್ಕಿ ಲಾಂಚ್‌ ಸೇವೆ ತಾತ್ಕಾಲಿಕ ಸ್ಥಗಿತ

Sagara; ಹಸಿರುಮಕ್ಕಿ ಲಾಂಚ್‌ ಸೇವೆ ತಾತ್ಕಾಲಿಕ ಸ್ಥಗಿತ

14

Bank Of Bhagyalakshmi: ಬ್ಯಾಂಕ್‌ನತ್ತ ದೀಕ್ಷಿತ್‌ ಚಿತ್ತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.