ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ.ಮಂಜುನಾಥ್ ಸೇವಾವಧಿ 1 ವರ್ಷ ವಿಸ್ತರಣೆ
Team Udayavani, Jul 18, 2022, 9:50 PM IST
ಬೆಂಗಳೂರು: ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್ ಮಂಜುನಾಥ ಅವರನ್ನು ಒಂದು ವರ್ಷದ ಅವಧಿಗೆ ನಿರ್ದೇಶಕರಾಗಿ ಮುಂದುವರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಡಾ. ಸಿ.ಎನ್. ಮಂಜುನಾಥ ಅವರ ಸೇವಾವಧಿ ಜುಲೈ 20ರಂದು ಅಂತ್ಯಗೊಳ್ಳಲಿದ್ದು, ಸಾರ್ವಜನಿಕರು ಮತ್ತು ಸಂಸ್ಥೆಯ ಹಿತದೃಷ್ಠಿಯಿಂದ 2023ರ ಜುಲೈ 19 ರವರೆಗೆ ಅವರ ಸೇವೆಯನ್ನು ಮುಂದುವರಿಸಲಾಗಿದೆ ಎಂದು ಸರ್ಕಾರ ಆದೇಶದಲ್ಲಿ ತಿಳಿಸಿದೆ.
ಡಾ. ಸಿ.ಎನ್. ಮಂಜುನಾಥ ಅವರ ಸೇವೆಯನ್ನು ಮುಂದುವರಿಸುವಂತೆ ಜಯದೇವ ಸಂಸ್ಥೆಯ ಸಿಬ್ಬಂದಿ ಪ್ರತಿಭಟನೆ ನಡೆಸಿತ್ತು. ಅಲ್ಲದೇ ಸಾರ್ವಜನಿಕ ವಲಯದಿಂದಲೂ ಅವರನ್ನು ಮುಂದುವರಿಸುವಂತೆ ಸಾಕಷ್ಟು ಆಗ್ರಹವೂ ಕೇಳಿ ಬಂದಿತ್ತು.