ಸಂಸ್ಕೃತಿ, ಸಂಪ್ರದಾಯ; ಹೆಣ್ಣು ಮಕ್ಕಳ ಹಬ್ಬ ಗೌರಿ ಹುಣ್ಣಿಮೆ…

ಗೌರಿ ಹುಣ್ಣಿಮೆ ಹಬ್ಬದಂದು ಮಣ್ಣಿನಿಂದ ಮತ್ತು ಮರದ ಕಟ್ಟಿಗೆಯಿಂದ ತಯಾರಿಸಿದ ಗೌರಮ್ಮನನ್ನು ಕೂರಿಸುತ್ತಾರೆ.

Team Udayavani, Aug 29, 2022, 11:58 AM IST

ಸಂಸ್ಕೃತಿ, ಸಂಪ್ರದಾಯ; ಹೆಣ್ಣು ಮಕ್ಕಳ ಹಬ್ಬ ಗೌರಿ ಹುಣ್ಣಿಮೆ…

ಹಬ್ಬ ಹರಿದಿನಗಳು ಜನರ ಸಡಗರವನ್ನು ಮಾತ್ರ ಹೆಚ್ಚಿಸುವುದಿಲ್ಲ. ಬದಲಾಗಿ ಅವು ಸಂಸ್ಕೃತಿ, ಸಂಪ್ರದಾಯ, ಅಚಾರ ವಿಚಾರಗಳನ್ನು ಮುಂದಿನ ತಲೆಮಾರಿಗೆ ಹೊತ್ತು ಸಾಗುವ ನೌಕೆಗಳು.

ಗೌರಿ ಹುಣ್ಣಿಮೆ ಬಂತೆಂದರೆ ವಿಶೇಷವಾಗಿ ಮಹಿಳೆಯರಿಗೆ ಸಡಗರದ ವಾತಾವರಣ. ಸಕ್ಕರೆಯಿಂದ ವಿವಿಧ ಬಗೆಯ ಮೂರ್ತಿಗಳ ಮಧ್ಯೆ ದೀಪ, ಜಾನಪದ ಹಾಡುಗಳ ವಿಶಿಷ್ಟ ಸಮ್ಮಿಳಿತ ಇಲ್ಲಿ ಕಂಡುಬರುತ್ತದೆ.

ಪುರಾತನ ಕಾಲದಿಂದಲೂ ಸೀಗೆ ಹುಣ್ಣಿಮೆಯ ಅನಂತರ ಗೌರಮ್ಮನನ್ನು ಮನೆಯಲ್ಲಿ ಕೂಡಿಸುವ ಸಂಪ್ರದಾಯ ರೂಡಿಯಲ್ಲಿದೆ. ಗೌರಿ ಹುಣ್ಣಿಮೆ ಹಬ್ಬದಂದು ಮಣ್ಣಿನಿಂದ ಮತ್ತು ಮರದ ಕಟ್ಟಿಗೆಯಿಂದ ತಯಾರಿಸಿದ ಗೌರಮ್ಮನನ್ನು ಕೂರಿಸುತ್ತಾರೆ. ಈ ಗೌರಮ್ಮನಿಗೆ ಹದಿನೈದು ದಿನಗಳ ಕಾಲ ಪ್ರತೀ ಸಂಜೆಯ ಹೊತ್ತಿನಲ್ಲಿ ಚಂಡು ಹೂ ಮತ್ತು ಇನ್ನಿತರ ವಿಧವಿಧದ ಹೂಗಳಿಂದ ಅಲಂಕಾರ ಮಾಡಲಾಗುತ್ತದೆ. ಗೌರಿಯನ್ನು ನೆನೆದು ಅವಳ ಸಂಕಷ್ಟದ ಕುರಿತಾದ ಜಾನಪದ ಹಾಡುಗಳನ್ನು ಹಿರಿಯ ವಯಸ್ಸಿನ ಮಹಿಳೆಯರು ಹಾಡುತ್ತಾರೆ. ಅನಂತರ ಮಂಗಳಾರತಿ ಮಾಡಿ ಪ್ರಸಾದವನ್ನು ಹಂಚಲಾಗುತ್ತದೆ.

ಗೋಧಿ ಮತ್ತು ಮೈದಾ ಹಿಟ್ಟಿನಲ್ಲಿ ತಯಾರಿಸಿದ ಕಣಕದ ಆರತಿಯನ್ನು ವಿಶೇಷವಾಗಿ ದೇವಿಗೆ ಬೆಳಗಲಾಗುತ್ತದೆ. ಹದಿನೈದು ದಿನಗಳ ಕಾಲ ಗೌರಿಯನ್ನು ಭಕ್ತಿಯಿಂದ ಪೂಜೆ ಮಾಡಿದ ಬಳಿಕ ವಿಶೇಷವಾಗಿ ಅಲಂಕಾರವನ್ನು ಮಾಡಲಾಗುತ್ತದೆ. ಊರಿನ ಹಿರಿಯ ಮಹಿಳೆಯರನ್ನು ಗೌರಮ್ಮನ ಹಾಡುಗಳನ್ನು ಹಾಡಲು ವಿಶೇಷವಾಗಿ ಕರೆತರಲಾಗುತ್ತದೆ. ಎರಡು ಮೂರು ಗಂಟೆಗಳ ಕಾಲ ಗೌರಿಯ ಕುರಿತಾಗಿ ಹಾಡುಗಳನ್ನು ಹೇಳಿ ಗೌರಿಯನ್ನು ವಿಸರ್ಜನೆ ಮಾಡಲಾಗುತ್ತದೆ. ಪ್ರತೀ ಮನೆಯ ಹೆಣ್ಣು ಮಕ್ಕಳ ಹೆಸರನ್ನು ಹೇಳುವ ಮೂಲಕ ಹಾಡನ್ನು ಹಾಡಿ ಬಣ್ಣಿಸಲಾಗುತ್ತದೆ.

ಬನ್ನಿ ಮರದ ಕೆಳಗೆ ಗೌರಿಯ ವಿಸರ್ಜನೆ
ಹೆಣ್ಣು ಮಕ್ಕಳು ಹಾಡು ಹೇಳುತ್ತಾ, ಕೋಲಾಟವಾಡುತ್ತಾ ಗೌರಿಯ ವಿಸರ್ಜನೆಗೆ ತೆರಳುತ್ತಾರೆ. ಗದ್ದೆಯ ಬದಿಯಲ್ಲಿರುವ ಬನ್ನಿ ಮರದ ಕೆಳಗೆ ಗೌರಿಯನ್ನಿಟ್ಟು ಮತೊಂದು ಬಾರಿ ಪೂಜೆ ಮಾಡಿ ಹಿಂದಿರುಗುತ್ತಾರೆ. ಉತ್ತರ ಕರ್ನಾಟಕದ ಭಾಗದಲ್ಲಿ ಬನ್ನಿ ಮರಕ್ಕೆ ದೇವರ ಸ್ಥಾನವಿದೆ.

ಕೃಷಿಕರ ಹಬ್ಬ
ಗೌರಿ ಪ್ರತೀಯೊಂದು ಮನೆಯಲ್ಲಿಯೂ ನೆಲೆಸಿ ಸುಃಖ, ಶಾಂತಿ, ನೆಮ್ಮದಿ ನೀಡಲಿ, ಮತ್ತು ಕಾಲ ಕಾಲಕ್ಕೆ ಮಳೆ, ಬೆಳೆ ಬಂದು ಒಳ್ಳೆಯ ಫ‌ಸಲು ನೀಡಲಿ, ಮನೆಯ ತುಂಬೆಲ್ಲಾ ದವಸ, ಧಾನ್ಯ ತುಂಬಲಿ, ರೈತರಿಗೆ ಸಂತಸ ನೀಡಲಿ ಎಂದು ಆರಾಧಿಸಲಾಗುತ್ತದೆ. ಕೆಲವೆಡೆ ಈ ಹಬ್ಬ ಕೃಷಿಕರ ಹಬ್ಬ ಎಂದೇ ಪ್ರತೀತಿಯನ್ನು ಪಡೆದಿದೆ.

ಓಣಿ ಓಣಿ (ಏರಿಯಾ)ಗಳಿಗೆ ತಿರುಗಾಡಿಕೊಂಡು ಸಕ್ಕರೆ ಗೊಂಬೆಗಳನ್ನು ತಲೆಯ ಮೇಲೆ ಹೊತ್ತುಕೊಂಡು ಮನೆ ಮನೆಗೆ ಹೋಗಿ ಆರತಿ ಬೆಳಗುವ ವಾಡಿಕೆಯೂ ರೂಢಿಯಲ್ಲಿರುವುದು ಈ ಗೌರಿ ಹುಣ್ಣಿಮೆಯ ವಿಶೇಷವಾಗಿದೆ. ಉತ್ತರ ಕರ್ನಾಟಕದ ಹಳ್ಳಿಗಳಲ್ಲಿ ಇಂದಿಗೂ ಕೂಡ ಕುಟುಂಬಗಳು ಶ್ರದ್ಧೆ, ಭಯ, ಭಕ್ತಿಯಿಂದ ಗೌರಿ ಹುಣ್ಣಿಮೆಯ ಶಿಷ್ಟಾಚಾರಗಳನ್ನು ಪಾಲನೆ ಮಾಡುತ್ತಾ ಬರುತ್ತಿವೆ. ಆಧುನಿಕ ಕಾಲದಲ್ಲೂ ತನ್ನ ಮೂಲ ಸ್ವರೂಪವನ್ನು ಬದಲಿಸದೆ ಮೊದಲಿನಂತೆಯೇ ಗ್ರಾಮೀಣ ಸೊಗಡಿನ ಜಾನಪದ ಶೈಲಿಯಲ್ಲಿ ಗೌರಿ ಹುಣ್ಣಿಮೆ ತನ್ನ ಮೂಲ ಆಚರಣೆ, ಸಡಗರವನ್ನು ಉಳಿಸಿಕೊಂಡು ಬಂದಿದೆ.

 ಅನ್ನಪೂರ್ಣಾ ಕಲಬುರಗಿ ವಿ.ವಿ. 

ಟಾಪ್ ನ್ಯೂಸ್

Gangavati; ಕಿಷ್ಕಿಂಧಾ ಅಂಜನಾದ್ರಿ ಹುಂಡಿಯಲ್ಲಿ 30.21 ಲಕ್ಷ ರೂ.ಸಂಗ್ರಹ

Gangavati; ಕಿಷ್ಕಿಂಧಾ ಅಂಜನಾದ್ರಿ ಹುಂಡಿಯಲ್ಲಿ 30.21 ಲಕ್ಷ ರೂ.ಸಂಗ್ರಹ

Kottigehara ನಿಯಂತ್ರಣ ತಪ್ಪಿ ಆಟೋ ರಿಕ್ಷಾ ಪಲ್ಟಿ; ಚಾಲಕ ಮೃತ್ಯು

Kottigehara ನಿಯಂತ್ರಣ ತಪ್ಪಿ ಆಟೋ ರಿಕ್ಷಾ ಪಲ್ಟಿ; ಚಾಲಕ ಮೃತ್ಯು

Udupi: ಉಡುಪಿ ಪತ್ರಕರ್ತರಿಗೆ ‘ಪೋಕ್ಸೊ ಕಾಯಿದೆ ಮತ್ತು ಮಾಧ್ಯಮ’ ಕಾರ್ಯಾಗಾರ

Udupi: ಉಡುಪಿ ಪತ್ರಕರ್ತರಿಗೆ ‘ಪೋಕ್ಸೊ ಕಾಯಿದೆ ಮತ್ತು ಮಾಧ್ಯಮ’ ಕಾರ್ಯಾಗಾರ

Mandagadde; ಓವರ್ ಟೆಕ್ ಮಾಡಲು ಹೋಗಿ ಮರಕ್ಕೆ ಡಿಕ್ಕಿ ಹೊಡೆದ ಬಸ್ ; ಹಲವರಿಗೆ ಗಾಯ !

Mandagadde; ಓವರ್ ಟೆಕ್ ಮಾಡಲು ಹೋಗಿ ಮರಕ್ಕೆ ಡಿಕ್ಕಿ ಹೊಡೆದ ಬಸ್ ; ಹಲವರಿಗೆ ಗಾಯ !

Athani; ಲಕ್ಷ್ಮಣ್ ಸವದಿ ಸಹಮಾಲಿಕತ್ವದ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಪೋಟ; ಮಹಿಳೆ ಸಾವು

Athani; ಲಕ್ಷ್ಮಣ್ ಸವದಿ ಸಹಮಾಲಿಕತ್ವದ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಪೋಟ; ಮಹಿಳೆ ಸಾವು

Sagara; ಹಸಿರುಮಕ್ಕಿ ಲಾಂಚ್‌ ಸೇವೆ ತಾತ್ಕಾಲಿಕ ಸ್ಥಗಿತ

Sagara; ಹಸಿರುಮಕ್ಕಿ ಲಾಂಚ್‌ ಸೇವೆ ತಾತ್ಕಾಲಿಕ ಸ್ಥಗಿತ

2nd PUC Exam-2 Result Declared; 35.25% students passed

2nd PUC ಪರೀಕ್ಷೆ-2 ಫಲಿತಾಂಶ ಪ್ರಕಟ; ಶೇ. 35.25 ವಿದ್ಯಾರ್ಥಿಗಳು ಉತ್ತೀರ್ಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವಿನಾಯಕ ಗಣಗಳ ನಾಯಕ…ಗಣಪತಿಯ ಮದುವೆ ಬಗ್ಗೆ ಪುರಾಣ ಕಥೆಯಲ್ಲೇನಿದೆ…

ವಿನಾಯಕ ಗಣಗಳ ನಾಯಕ…ಗಣಪತಿಯ ಮದುವೆ ಬಗ್ಗೆ ಪುರಾಣ ಕಥೆಯಲ್ಲೇನಿದೆ…

web exclusive news ojijofkbh

ಭಾಂದವ್ಯ ಬೆಸೆಯುವ ರಾಷ್ಟ್ರೀಯ ಹಬ್ಬ ಗಣೇಶ ಚತುರ್ಥಿ

thumb gauri

ಗೌರಿಯ ಪ್ರಥಮ ಪೂಜೆ…ತವರಲ್ಲಿ ಮಾಡಿದ ಮೊದಲ ಹಬ್ಬ

CHAUTI GANESHA uv web exclusive thumb copy CHAUTI

ಗಣೇಶ ಚತುರ್ಥಿ: ಗಣೇಶನಿಂದ ನಾವು ಕಲಿಯೋದೇನು ? ಹೇಗಿರಬೇಕು ಸಾಂಪ್ರದಾಯಿಕ ಆಚರಣೆ

ಗಣೇಶೋತ್ಸವ ಸ್ಪೆಷಲ್ ; ವಿಶ್ವನಾಯಕ ವಿನಾಯಕ

ಗಣೇಶೋತ್ಸವ ಸ್ಪೆಷಲ್ ; ಶರಣು ಶರಣಯ್ಯ ಶರಣು ಬೆನಕ ನೀಡಯ್ಯ ಬಾಳಲ್ಲಿ ಬೆಳಗುವ ಬೆಳಕ

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

Gangavati; ಕಿಷ್ಕಿಂಧಾ ಅಂಜನಾದ್ರಿ ಹುಂಡಿಯಲ್ಲಿ 30.21 ಲಕ್ಷ ರೂ.ಸಂಗ್ರಹ

Gangavati; ಕಿಷ್ಕಿಂಧಾ ಅಂಜನಾದ್ರಿ ಹುಂಡಿಯಲ್ಲಿ 30.21 ಲಕ್ಷ ರೂ.ಸಂಗ್ರಹ

Kottigehara ನಿಯಂತ್ರಣ ತಪ್ಪಿ ಆಟೋ ರಿಕ್ಷಾ ಪಲ್ಟಿ; ಚಾಲಕ ಮೃತ್ಯು

Kottigehara ನಿಯಂತ್ರಣ ತಪ್ಪಿ ಆಟೋ ರಿಕ್ಷಾ ಪಲ್ಟಿ; ಚಾಲಕ ಮೃತ್ಯು

state’s state of education has deteriorated; N. Ravikumar

Bellary; ರಾಜ್ಯದ ಶಿಕ್ಷಣದ ಸ್ಥಿತಿ ಅಧೋಗತಿಗೆ ತಲುಪಿದೆ; ಎನ್.ರವಿಕುಮಾರ್

Udupi: ಉಡುಪಿ ಪತ್ರಕರ್ತರಿಗೆ ‘ಪೋಕ್ಸೊ ಕಾಯಿದೆ ಮತ್ತು ಮಾಧ್ಯಮ’ ಕಾರ್ಯಾಗಾರ

Udupi: ಉಡುಪಿ ಪತ್ರಕರ್ತರಿಗೆ ‘ಪೋಕ್ಸೊ ಕಾಯಿದೆ ಮತ್ತು ಮಾಧ್ಯಮ’ ಕಾರ್ಯಾಗಾರ

Mandagadde; ಓವರ್ ಟೆಕ್ ಮಾಡಲು ಹೋಗಿ ಮರಕ್ಕೆ ಡಿಕ್ಕಿ ಹೊಡೆದ ಬಸ್ ; ಹಲವರಿಗೆ ಗಾಯ !

Mandagadde; ಓವರ್ ಟೆಕ್ ಮಾಡಲು ಹೋಗಿ ಮರಕ್ಕೆ ಡಿಕ್ಕಿ ಹೊಡೆದ ಬಸ್ ; ಹಲವರಿಗೆ ಗಾಯ !

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.