ಟಿ20 ವಿಶ್ವಕಪ್ಗೆ ಬಾಂಗ್ಲಾ ತಂಡ: ಮಹಮ್ಮದುಲ್ಲ ರಿಯಾದ್ಗೆ ಜಾಗವಿಲ್ಲ
Team Udayavani, Sep 14, 2022, 11:57 PM IST
ಢಾಕಾ: ಟಿ20 ವಿಶ್ವಕಪ್ಗೆ 15 ಸದಸ್ಯರ ತಂಡವನ್ನು ಪ್ರಕಟಿಸಿದ ಬಾಂಗ್ಲಾದೇಶ, ಅನುಭವಿ ಬ್ಯಾಟಿಂಗ್ ಆಲ್ರೌಂಡರ್ ಮಹಮ್ಮದುಲ್ಲ ರಿಯಾದ್ ಅವರನ್ನು ಕೈಬಿಟ್ಟು ಅಚ್ಚರಿ ಮೂಡಿಸಿದೆ. ಅವರು ಫಾರ್ಮ್ ನಲ್ಲಿಲ್ಲದಿರುವುದೇ ಇದಕ್ಕೆ ಕಾರಣ ಎಂಬುದಾಗಿ ತಂಡದ ನಿರ್ದೇಶಕ ಖಲೀದ್ ಮಹಮ್ಮದ್ ಸುಜೊನ್ ಹೇಳಿದರು.
ಈ ವರ್ಷದ ಆರಂಭದಲ್ಲಿ ಮಹಮ್ಮದುಲ್ಲ ಅವರನ್ನು ಟಿ20 ತಂಡದ ನಾಯಕತ್ವದಿಂದ ಕೆಳಗಿಳಿಸಲಾಗಿತ್ತು. 3 ವರ್ಷಗಳ ಬಳಿಕ, ಕಳೆದ ಏಷ್ಯಾ ಕಪ್ ವೇಳೆ ಬಾಂಗ್ಲಾ ತಂಡಕ್ಕೆ ಮರಳಿದ ಶಬ್ಬೀರ್ ಅಹ್ಮದ್ ಅವರನ್ನು ಮುಂದುವರಿಸಲಾಗಿದೆ. ಏಷ್ಯಾ ಕಪ್ನಲ್ಲಿ ಶಬ್ಬೀರ್ ಒಂದೇ ಪಂದ್ಯ ಆಡಿದ್ದರು. ಗಾಯದಿಂದ ಚೇತರಿಸಿಕೊಂಡ ನೂರುಲ್ ಹಸನ್ ಸೋಹನ್ ಮತ್ತು ಲಿಟನ್ ದಾಸ್ ವಾಪಸಾಗಿದ್ದಾರೆ.
ಬಾಂಗ್ಲಾದೇಶ ತಂಡ: ಶಕಿಬ್ ಅಲ್ ಹಸನ್ (ನಾಯಕ), ಶಬ್ಬೀರ್ ರೆಹಮಾನ್, ಮೆಹಿದಿ ಹಸನ್ ಮಿರಾಜ್, ಆಫಿಫ್ ಹುಸೇನ್ ಧ್ರುಬೊ, ಮೊಸದೆಕ್ ಹುಸೇನ್ ಸೈಕತ್, ಲಿಟನ್ ದಾಸ್, ಯಾಸಿರ್ ಅಲಿ ಚೌಧರಿ, ನೂರುಲ್ ಹಸನ್ ಸೋಹನ್, ಮುಸ್ತಫಿಜುರ್ ರೆಹಮಾನ್, ಮೊಹಮ್ಮದ್ ಸೈಫುದ್ದೀನ್, ನಾಸುಮ್ ಅಹ್ಮದ್, ಹಸನ್ ಮಹ್ಮದ್, ನಜ್ಮುಲ್ ಹುಸೇನ್, ಎಬಾದತ್ ಹುಸೇನ್, ಟಸ್ಕಿನ್ ಅಹ್ಮದ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sangeeth Sivan: ಮಾಲಿವುಡ್, ಬಾಲಿವುಡ್ನ ಖ್ಯಾತ ನಿರ್ದೇಶಕ ಸಂಗೀತ್ ಶಿವನ್ ನಿಧನ
Thirthahalli ಕುಪ್ಪಳ್ಳಿ; ಮನೆಗೆ ಆಕಸ್ಮಿಕ ಬೆಂಕಿ: ಅಪಾರ ಹಾನಿ!
ಎಲ್ಲಾ ಶೆಡ್ಯೂಲ್ ಮುಗಿದ ಬಳಿಕವಷ್ಟೇ ʼKGF -3ʼ.. ಬಿಗ್ ಅಪ್ಡೇಟ್ ಕೊಟ್ಟ ನಿರ್ದೇಶಕ ನೀಲ್
Goa ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮತದಾನ ಆಗಿದೆ: ಸಿಎಂ ಪ್ರಮೋದ್ ಸಾವಂತ್
ತೆಕ್ಕಟ್ಟೆ: ಅಪಾಯದಲ್ಲಿದ್ದ ನವಿಲಿನ ರಕ್ಷಣೆ