ಯಶಸ್ವಿಯಾಗಿ ಕ್ಷುದ್ರಗ್ರಹಕ್ಕೆ ಡಿಕ್ಕಿಯಾದ ಡಾರ್ಟ್‌! ಮೊದಲ ಬಾರಿಗೆ ನಾಸಾದಿಂದ ಇಂಥ ಪ್ರಯೋಗ

ಕ್ಷುದ್ರಗ್ರಹದ ಅಪ್ಪಳಿಸುವಿಕೆಯಿಂದ ಭೂಮಿಯನ್ನು ರಕ್ಷಿಸಲು ಈ ಪ್ರಯತ್ನ

Team Udayavani, Sep 28, 2022, 7:50 AM IST

ಯಶಸ್ವಿಯಾಗಿ ಕ್ಷುದ್ರಗ್ರಹಕ್ಕೆ ಡಿಕ್ಕಿಯಾದ ಡಾರ್ಟ್‌! ಮೊದಲ ಬಾರಿಗೆ ನಾಸಾದಿಂದ ಇಂಥ ಪ್ರಯೋಗ

ವಾಷಿಂಗ್ಟನ್‌: ಬಾಹ್ಯಾಕಾಶದಲ್ಲಿ ಸತತ 10 ತಿಂಗಳ ಕಾಲ ಹಾರಾಟ ನಡೆಸುತ್ತಿದ್ದ ನಾಸಾದ “ಡಾರ್ಟ್‌’ ಬಾಹ್ಯಾಕಾಶ ನೌಕೆಯು ಮಂಗಳವಾರ ಯಶಸ್ವಿಯಾಗಿ ಕ್ಷುದ್ರಗ್ರಹವೊಂದಕ್ಕೆ ಅಪ್ಪಳಿಸಿದೆ.

ಭವಿಷ್ಯದಲ್ಲಿ ಭೂಮಿಗೆ ಅಪ್ಪಳಿಸಿ ಹಾನಿ ಉಂಟುಮಾಡಬಹುದಾದ ಬಾಹ್ಯಾಕಾಶ ಶಿಲೆಗಳನ್ನು ಸುರಕ್ಷಿತವಾಗಿ ತಳ್ಳಬಹುದೇ ಎಂಬುದನ್ನು ಪರೀಕ್ಷಿಸುವುದೇ ಈ ಯೋಜನೆಯ ಉದ್ದೇಶವಾಗಿತ್ತು. ಇದೇ ಮೊದಲ ಬಾರಿಗೆ ನಾಸಾ ಇಂಥದ್ದೊಂದು ಪರೀಕ್ಷೆಗೆ ಕೈಹಾಕಿದೆ.

ಜಗತ್ತಿನ ಮೊದಲ ಗ್ರಹೀಯ ರಕ್ಷಣಾ ತಂತ್ರಜ್ಞಾನ ಎಂದು ಪರಿಗಣಿಸಲ್ಪಟ್ಟಿರುವ ದಿ ಡಬಲ್‌ ಆ್ಯಸ್ಟರಾಯ್ಡ ರೀಡೈರೆಕ್ಷನ್‌ ಟೆಸ್ಟ್‌(ಡಾರ್ಟ್‌) ಎಂಬ ಬಾಹ್ಯಾಕಾಶ ನೌಕೆಯು ಭೂಮಿಯಿಂದ 6.8 ದಶಲಕ್ಷ ಮೈಲು ದೂರದಲ್ಲಿದ್ದ ಕೇವಲ 160 ಮೀಟರ್‌ ವ್ಯಾಸ ಹೊಂದಿರುವ ಡೈಮಾಫ‌ìಸ್‌ ಎಂಬ ಕ್ಷುದ್ರಗ್ರಹಕ್ಕೆ ಅಪ್ಪಳಿಸಿದೆ. ಡೈಮಾಫ‌ìಸ್‌ ಕ್ಷುದ್ರಗ್ರಹವು ಬರೋಬ್ಬರಿ 780 ಮೀಟರ್‌ನ ಡಿಡಿಮೋಸ್‌ ಎಂಬ ದೊಡ್ಡ ಕ್ಷುದ್ರಗ್ರಹದ ಕಕ್ಷೆಯಲ್ಲಿ ಸುತ್ತುತ್ತಿದೆ.

ಬಾಹ್ಯಾಕಾಶ ನೌಕೆಯು ಅಪ್ಪಳಿಸುವ ತೀವ್ರತೆಗೆ ಕ್ಷುದ್ರಗ್ರಹವು ಅಲುಗಾಡುವುದೇ ಅಥವಾ ತಳ್ಳಲ್ಪಡುವುದೇ ಎಂಬುದನ್ನು ನಾಸಾ ಅಧ್ಯಯನ ನಡೆಸಲಿದೆ. ಮಂಗಳವಾರದ ಪರೀಕ್ಷೆಯ ಫ‌ಲಿತಾಂಶ ತಿಳಿಯಲು ಇನ್ನೂ ಕೆಲವು ವಾರಗಳು ಬೇಕಾಗಬಹುದು.

ಭೂಮಿಯಲ್ಲಿರುವಂಥ ದೂರದರ್ಶಕಗಳನ್ನು ಬಳಸಿಕೊಂಡು ಅದನ್ನು ಅರಿಯಲಾಗುತ್ತದೆ. ನೌಕೆಯ ಅಪ್ಪಳಿಸುವಿಕೆಯಿಂದ ಕ್ಷುದ್ರಗ್ರಹವನ್ನು ತಳ್ಳಲು ಸಾಧ್ಯವಾದರೆ, ಭವಿಷ್ಯದಲ್ಲಿ ಭೂಮಿಯನ್ನು ರಕ್ಷಿಸಲು ಅನುಕೂಲವಾಗುತ್ತದೆ ಎಂದು ನಾಸಾ ಹೇಳಿದೆ.


ರಕ್ಷಣಾತ್ಮಕ ಕ್ರಮ ಅತಿ ಮುಖ್ಯ
ನಾಸಾದ ಈ ಯೋಜನೆಯಿಂದಾಗಿ ಭೂಮಿಯನ್ನು ಭವಿಷ್ಯದ ಸಂಭಾವ್ಯ ಕ್ಷುದ್ರಗ್ರಹ ಅಪ್ಪಳಿಸುವಿಕೆಯಿಂದ ರಕ್ಷಿಸಲು ಸಾಧ್ಯವಾಗಲಿದೆ. ಸುಮಾರು 66 ದಶಲಕ್ಷ ವರ್ಷಗಳ ಹಿಂದೆ ಬೃಹತ್‌ ಕ್ಷುದ್ರಗ್ರಹ ಅಪ್ಪಳಿಸಿದ್ದರಿಂದಲೇ ಭೂಮಿಯಲ್ಲಿದ್ದ ಡೈನೋಸಾರ್‌ ಸಂತತಿ ಅಳಿಸಿಹೋಯಿತು. ಭೂಮಿಯು ಹಲವು ಕ್ಷುದ್ರಗಳಿಂದ ಸುತ್ತುವರಿದಿದೆ. ಆ ಪೈಕಿ ಕೆಲವು ಅತ್ಯಂತ ಅಪಾಯಕಾರಿ. ಮುಂದೆ ಭೂಮಿಗೆ ಅವು ಅಪ್ಪಳಿಸದಂತೆ ರಕ್ಷಣಾತ್ಮಕ ಕ್ರಮಗಳನ್ನು ನಾವು ಕೈಗೊಳ್ಳಬೇಕಾದ್ದು ಮುಖ್ಯ ಎಂದು ಬೆಂಗಳೂರಿನ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್ ಆ್ಯಸ್ಟ್ರೋಫಿಸಿಕ್ಸ್‌ ವಿಜ್ಞಾನಿ ಕ್ರಿಸಿ#ನ್‌ ಕಾರ್ತಿಕ್‌ ಹೇಳಿದ್ದಾರೆ.

ಎಷ್ಟು ದೂರದಲ್ಲಿತ್ತು ಕ್ಷುದ್ರಗ್ರಹ? – 6.8 ದಶಲಕ್ಷ ಮೈಲು
ಕ್ಷುದ್ರಗ್ರಹದ ವ್ಯಾಸ – 160 ಮೀಟರ್‌
ಡಾರ್ಟ್‌ ನೌಕೆಯ ತೂಕ- 570 ಕೆ.ಜಿ.
ಅಪ್ಪಳಿಸಿದ ವೇಗ ಗಂಟೆಗೆ- 22,530 ಕಿ.ಮೀ.

ಟಾಪ್ ನ್ಯೂಸ್

Tragedy: ಪೈಪ್ ಲೈನ್ ಚೆಕ್ ಮಾಡುವ ವೇಳೆ ದುರಂತ: ನೀರಿನ ಟ್ಯಾಂಕ್ ಗೆ ಬಿದ್ದು ಮೂವರ ದುರ್ಮರಣ

Tragedy: ಪೈಪ್ ಲೈನ್ ತಪಾಸಣೆ ವೇಳೆ ದುರಂತ… ನೀರಿನ ಹೊಂಡಕ್ಕೆ ಬಿದ್ದು ಮೂವರ ದುರ್ಮರಣ

Exam 2

SSLC ಪರೀಕ್ಷೆ-2 ಜೂನ್‌ 7ರಿಂದ ; ನೋಂದಣಿಗೆ ಮೇ 16ರ ವರೆಗೆ ಅವಕಾಶ

34

GT Vs CSK: ನಿರ್ಗಮನ ಬಾಗಿಲಲ್ಲಿ ಗುಜರಾತ್‌ ಪ್ಲೇ ಆಫ್‌ ಜಪದಲ್ಲಿ ಚೆನ್ನೈ

1-24-friday

Daily Horoscope: ಉದ್ಯೋಗ ಸ್ಥಾನದಲ್ಲಿ ಬದಲಾದ ವಿಭಾಗಕ್ಕೆ ಹೊಂದಾಣಿಕೆ

1-wqeqewwqe

India ಲೋಕಸಭೆ ಚುನಾವಣೆಯಲ್ಲಿ ಅಮೆರಿಕ ಹಸ್ತಕ್ಷೇಪ: ರಷ್ಯಾ ಆರೋಪ

police crime

Sandeshkhali ಪ್ರಕರಣಕ್ಕೆ ದಿಢೀರ್‌ ತಿರುವು : ಇಬ್ಬರು ಸಂತ್ರಸ್ತೆಯರಿಂದ ದೂರು ವಾಪಸ್‌!

Exam

SSLC; ಕೃಪಾಂಕದಿಂದ 1.70 ಲಕ್ಷ ವಿದ್ಯಾರ್ಥಿಗಳು ಪಾಸ್‌!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wqeqewwqe

India ಲೋಕಸಭೆ ಚುನಾವಣೆಯಲ್ಲಿ ಅಮೆರಿಕ ಹಸ್ತಕ್ಷೇಪ: ರಷ್ಯಾ ಆರೋಪ

Insects: ಮಹಿಳೆಯ ಮೂಗಿನಲ್ಲಿ ನೂರಾರು ಹುಳಗಳು ಪತ್ತೆ!

Insects: ಮಹಿಳೆಯ ಮೂಗಿನಲ್ಲಿ ನೂರಾರು ಹುಳಗಳು ಪತ್ತೆ!

1-wqewee

Saudi Arabia; ಭೂಮಿ ನೀಡಲು ಒಪ್ಪದಿದ್ದರೆ ಹತ್ಯೆ: ಬಿಬಿಸಿ ವರದಿ

Student Missing: ಅಮೆರಿಕದಲ್ಲಿ ಮತ್ತೋರ್ವ ವಿದ್ಯಾರ್ಥಿ ನಾಪತ್ತೆ… ಕಂಗಾಲಾದ ಕುಟುಂಬ

Student Missing: ಅಮೆರಿಕದಲ್ಲಿ ಮತ್ತೋರ್ವ ವಿದ್ಯಾರ್ಥಿ ನಾಪತ್ತೆ… ಕಂಗಾಲಾದ ಕುಟುಂಬ

Tulu Movie: ಕತಾರ್ ನಲ್ಲಿ ವಿಜೃಂಭಿಸಿದ ತುಳು ಚಿತ್ರ “ತುಡರ್”         

Tulu Movie: ಕತಾರ್ ನಲ್ಲಿ ವಿಜೃಂಭಿಸಿದ ತುಳು ಚಿತ್ರ “ತುಡರ್”         

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

Tragedy: ಪೈಪ್ ಲೈನ್ ಚೆಕ್ ಮಾಡುವ ವೇಳೆ ದುರಂತ: ನೀರಿನ ಟ್ಯಾಂಕ್ ಗೆ ಬಿದ್ದು ಮೂವರ ದುರ್ಮರಣ

Tragedy: ಪೈಪ್ ಲೈನ್ ತಪಾಸಣೆ ವೇಳೆ ದುರಂತ… ನೀರಿನ ಹೊಂಡಕ್ಕೆ ಬಿದ್ದು ಮೂವರ ದುರ್ಮರಣ

Exam 2

SSLC ಪರೀಕ್ಷೆ-2 ಜೂನ್‌ 7ರಿಂದ ; ನೋಂದಣಿಗೆ ಮೇ 16ರ ವರೆಗೆ ಅವಕಾಶ

34

GT Vs CSK: ನಿರ್ಗಮನ ಬಾಗಿಲಲ್ಲಿ ಗುಜರಾತ್‌ ಪ್ಲೇ ಆಫ್‌ ಜಪದಲ್ಲಿ ಚೆನ್ನೈ

1-24-friday

Daily Horoscope: ಉದ್ಯೋಗ ಸ್ಥಾನದಲ್ಲಿ ಬದಲಾದ ವಿಭಾಗಕ್ಕೆ ಹೊಂದಾಣಿಕೆ

31

Congress: ಕುಮಾರಸ್ವಾಮಿ, ದೇವರಾಜೇಗೌಡ ವಿರುದ್ಧ ಎಸ್‌ಐಟಿಗೆ ಕಾಂಗ್ರೆಸ್‌ ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.