ಭಗವದ್ಗೀತೆ ಪಾರ್ಕ್ ಧ್ವಂಸಕ್ಕೆ ಭಾರತದ ರಾಯಭಾರ ಕಚೇರಿ ಖಂಡನೆ
ಸೆ.28ರಂದು ಲೋಕಾರ್ಪಣೆ ಗೊಂಡಿದ್ದ ಉದ್ಯಾನ;ಬಿಲ್ಡರ್ನಿಂದಲೇ ತಾತ್ಕಾಲಿಕ ಬೋರ್ಡ್: ಬ್ರಾಂಪ್ಟನ್ ಮೇಯರ್ ಸ್ಪಷ್ಟನೆ
Team Udayavani, Oct 4, 2022, 12:14 AM IST
ಟೊರೊಂಟೊ: ಕೆನಡಾದ ಒಂಟಾರಿಯೊ ಪ್ರಾಂತದ ಬ್ರಾಂಪ್ಟನ್ ನಗರದಲ್ಲಿ ಇತ್ತೀಚಿಗಷ್ಟೇ ಲೋಕಾರ್ಪಣೆ ಮಾಡಿದ್ದ “ಶ್ರೀ ಭಗವದ್ಗೀತಾ ಉದ್ಯಾನ’ವನ್ನು ಕಿಡಿಗೇಡಿಗಳು ವಿಧ್ವಂಸಗೊಳಿಸಿರುವುದನ್ನು ಕೆನಡಾದ ಭಾರತೀಯ ರಾಯಭಾರ ಕಚೇರಿ ತೀವ್ರವಾಗಿ ಖಂಡಿಸಿದೆ.
ಈ ಹೇಯ ಘಟನೆ ಪೀಲ್ ಪೊಲೀಸರು ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ.
ಈ ಹಿಂದೆ ಟ್ರಾಯರ್ ಪಾರ್ಕ್ ಎಂದು ಕರೆಯುತ್ತಿದ್ದ ಉದ್ಯಾನವನಕ್ಕೆ ಸೆ.28ರಂದು “ಶ್ರೀ ಭಗವದ್ಗೀತಾ ಉದ್ಯಾನ’ ಎಂದು ಮರುನಾಮಕರಣಗೊಳಿಸಲಾಗಿತ್ತು.
ಅಂಥ ಘಟನೆ ನಡೆದಿಲ್ಲ: ಅಚ್ಚರಿಯ ವಿಚಾರವೆಂದರೆ, ಉದ್ಯಾನವನ್ನು ಧ್ವಂಸ ಮಾಡಲಾಗಿದೆ ಎಂದು ಖಚಿತಪಡಿಸಿದ್ದ ಬ್ರಾಂಪ್ಟನ್ ನಗರದ ಮೇಯರ್ ಪ್ಯಾಟ್ರಿಕ್ ಬ್ರೌನ್ ಉಲ್ಟಾ ಹೊಡೆದಿದ್ದಾರೆ.
“ಭಗವದ್ಗೀತಾ ಪಾರ್ಕ್ ಅನ್ನು ಧ್ವಂಸ ಮಾಡಲಾಗಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ತನಿಖೆಗೆ ಆದೇಶಿಸಲಾಗಿತ್ತು. ಖಾಲಿ ಇರುವ ಬೋರ್ಡ್ ಅನ್ನು ಬಿಲ್ಡರ್ ಅವರೇ ತಾತ್ಕಾಲಿಕವಾಗಿ ಹಾಕಿದ್ದು ಎಂದು ಗೊತ್ತಾಗಿದೆ. ಅಲ್ಲಿ ಶೀಘ್ರವೇ ಭಗವದ್ಗೀತಾ ಪಾರ್ಕ್ ಎಂದು ಹೊಸ ಬೋರ್ಡ್ ಅನ್ನು ಶೀಘ್ರವೇ ಹಾಕಲಾಗುತ್ತದೆ’ ಎಂದು ಟ್ವೀಟ್ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Israel- ಹೆಜ್ಬುಲ್ಲಾ ನಡುವೆ ಬಾಂಬ್ಗಳ ಸುರಿಮಳೆ! ; 100 ರಾಕೆಟ್ ಲಾಂಚರ್ ಧ್ವಂಸ
Pager ಸ್ಫೋಟಕ್ಕೆ ಕೇರಳ ವ್ಯಕ್ತಿಯ ಸಂಸ್ಥೆ ನಂಟು!
China: ಪಾಂಡಾ ಎಂದು ನಾಯಿಗೆ ಬಣ್ಣ ಬಳಿದು ಪ್ರವಾಸಿಗರಿಗೆ ಮೋಸ: ಬೌ.. ಬೌ.. ಎಂದಾಗಲೇ ಗೊತ್ತು
Labanon: ಲೆಬನಾನ್ ಪ್ರಯಾಣಿಕರು ಪೇಜರ್ಸ್, ವಾಕಿಟಾಕಿ ಒಯ್ಯುವಂತಿಲ್ಲ: ಕತಾರ್ ಏರ್ ವೇಸ್
ನಟಿಯಾಗುವ ಕನಸು ಕಂಡಿದ್ದ ಧ್ರುವಿ ಪಟೇಲ್ ಗೆ ‘Miss India Worldwide 2024’ ಕಿರೀಟ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.