ಪತಿ-ಪತ್ನಿಯ ಹೊಂದಾಣಿಕೆಯೇ ಜೀವನ: ಕುಲಕರ್ಣಿ
ಸ್ವಪ್ರತಿಷ್ಠೆಯಿಂದ ಕೇಳದವರಂತೆ ನಟನೆ ಮಾಡುತ್ತಾರೆ ಅಷ್ಟೇ
Team Udayavani, Nov 16, 2022, 6:36 PM IST
ಬೆಳಗಾವಿ: ನಾನೇಕೆ ಮಡದಿ ಮಾತನ್ನು ಕೇಳಬೇಕೆಂಬ ಅಹಂ ಬಿಟ್ಟು. ಸಾಮರಸ್ಯದ ಬದುಕಿಗೆ ಬೇಕಾಗುವಷ್ಟು ಮಡದಿ ಮಾತನ್ನು ಕೇಳಬೇಕು. ಯಾವ ಮಾತನ್ನು ಕೇಳಬೇಕು, ಕೇಳಬಾರದೆಂಬ ಪ್ರಜ್ಞೆ ಪತಿಯಲ್ಲಿರಬೇಕು. ಪತ್ನಿಯೂ ಸಹ ಎಲ್ಲ ಮಾತನ್ನು ಪತಿ ಕೇಳಲೇಬೇಕೆಂಬ ಹಠವಿರಬಾರದು ಒಟ್ಟಿನಲ್ಲಿ ಪತಿ, ಪತ್ನಿಯರ ನಡುವಿನ ಹೊಂದಾಣಿಕೆಯೇ ಜೀವನ ಎಂದು ಪ್ರೊ. ಜಿ. ಕೆ. ಕುಲಕರ್ಣಿ ಹೇಳಿದರು.
ನಗರದ ಹಾಸ್ಯಕೂಟದ ವತಿಯಿಂದ ಕನ್ನಡ ರಾಜ್ಯೋತ್ಸವದ ಅಂಗವಾಗಿ ಹಿಂದವಾಡಿಯ ಐ.ಎಮ್.ಇ.ಆರ್. ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಮಡದಿ ಮಾತು ಕೇಳಬೇಕೆ? ಎಂಬ ಹರಟೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಎಲ್. ಎಸ್. ಶಾಸ್ತ್ರಿ ಅವರು, ಮಡದಿ ಮಾತು ಕೇಳಬೇಕೆ ಎನ್ನುವ ಹರಟೆಯಲ್ಲಿ ನಮಗೆ ಸಿಗುವುದು ಅರ್ಧಸತ್ಯ. ಪತಿ ಪತ್ನಿ ನಡುವಿನ ನಗೆಹನಿಗಳು ನಮಗೆ ಧಾರಾಳವಾಗಿ ಸಿಗುತ್ತವೆ. ಪತಿ ಪತ್ನಿಯರ ನಡುವಿನ ನಂಬಿಕೆಯೇ ಜೀವನ ಎಂದು ಹೇಳಿದರು.
ಅತಿಥಿಗಳಾಗಿ ಆಗಮಿಸಿದ್ದ ಪ್ರೊ. ಎಂ. ಎಸ್ .ಇಂಚಲ ಮಾತನಾಡಿ, ಸಂಸಾರ ಸಾಗರ ಸುಗಮವಾಗಿ ಸಾಗಲು ಸಂಸಾರ ಸಸಾರವಾಗಲು ತೆಪ್ಪಗಿರಬೇಕು, ಮಡದಿ ಮಾತನ್ನು ಕೇಳಲೇ ಬೇಕು ಎಂದು ಹೇಳಿದರು.
ಎಲ್ಲರೂ ಮಡದಿ ಮಾತನ್ನು ಕೇಳುವವರೇ, ಸ್ವಪ್ರತಿಷ್ಠೆಯಿಂದ ಕೇಳದವರಂತೆ ನಟನೆ ಮಾಡುತ್ತಾರೆ ಅಷ್ಟೇ. ಮನೆ ನಂದಾದೀಪ ಬೆಳಗಲು ಬಂದಿರುವ ಮಡದಿ ಮಾತು ಕೇಳುವುದು ಅತ್ಯವಶ್ಯ. ವರನಟ ಡಾ. ರಾಜಕುಮಾರು, ಇನ್ಫೊಧೀಸಿಸ್ ನಾರಾಯಣಮೂರ್ತಿ ಮುಂತಾದ ಖ್ಯಾತನಾಮರ ಯಶಸ್ಸಿನ ಹಿಂದಿರುವ ಶಕ್ತಿಯೆಂದರೆ ಅವರ ಪತ್ನಿಯರು. ಇವರು ಯಾವ ಅಹಂಗೆ ಒಳಗಾಗದೇ ಮಡದಿ ಮಾತು ಕೇಳಿದ್ದರಿಂದಲೇ ಇಷ್ಟೆಲ್ಲ ಸಾಧಿ ಸಲು ಸಾಧ್ಯವಾಯಿತು ಎಂದು
ಗುಂಡೇನಟ್ಟಿ ಮಧುಕರ, ಎಂ. ಬಿ. ಹೊಸಳ್ಳಿ, ಅನುರಾಧಾ ಕಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದರು.
ಗಂಡನಿಗೂ ತನ್ನದೇ ಆದ ವ್ಯಕ್ತಿತ್ವ ಇರುತ್ತದೆ. ಮಡದಿ ಮಾತು ಕೇಳಿ ತನ್ನ ವ್ಯಕ್ತಿತ್ವ ಏಕೆ ಹಾಳು ಮಾಡಿಕೊಳ್ಳಬೇಕು. ಮಾತು ಕೇಳುವುದರಿಂದ ಮನೆಯಲ್ಲಿ ಅಶಾಂತಿ ವಾತಾವರಣ ನಿರ್ಮಾಣವಾಗುವ ಸಾಧ್ಯತೆಯೇ ಹೆಚ್ಚು. ಜೀವನದಲ್ಲಿ ಸಾಧಿಸಲು ಮಡದಿ ಮಾತು ಕೇಳಲೇಬೇಕೆಂದಿಲ್ಲ ಇದಕ್ಕೆ ಉತ್ತಮ ಉದಾಹರಣೆಯೆಂದರೆ ಮೋದಿ, ವಾಜಪೆಯಿ, ಕಲಾಂ ಮುಂತಾದವರು. ಅದಕ್ಕಾಗಿ ಮಡದಿ ಮಾತನ್ನು ಕೇಳಬಾರದೆಂದು ಜಿ. ಎಸ್. ಸೋನಾರ, ಅಶೋಕ ಮಳಗಲಿ, ಡಾ. ಶೈಲಜಾ ಕುಲಕರ್ಣಿ ತಮ್ಮ ವಾದ ಮಂಡಿಸಿದರು. ಧನಲಕ್ಷ್ಮೀ ಪಾಟೀಲ ಪ್ರಾರ್ಥಿಸಿದರು. ವಿಜಯಕುಮಾರ ಹಣ್ಣಿಕೇರಿ ಸ್ವಾಗತಿಸಿದರು. ಅರವಿಂದ ಹುನಗುಂದ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!
ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್ಕಮ್ ಹೊಟೇಲ್ನಲ್ಲಿ ವ್ಯವಸ್ಥೆ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
ಚನ್ನಮ್ಮನ ಕಿತ್ತೂರು: ಮಹಾನ್ ಯೋಗಿಗಳು-ಸೂಫಿ ಸಂತರ ನಾಡಿದು- ಶಿಲೇದಾರ
ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ
MUST WATCH
ಹೊಸ ಸೇರ್ಪಡೆ
Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!
ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ
Ranveer Singh : ʼಹನುಮಾನ್ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಟನೆ?
Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ
ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ