ಸಂಸದೆ ಸಾಧ್ವಿ ವಿರುದ್ಧ ದೂರು: ಉದ್ಯಮಿಗೆ ನೇರವಾಗಿ ಬಂದು ದೂರು ನೀಡಲು ಪೊಲೀಸರಿಂದ ನೋಟಿಸ್
Team Udayavani, Dec 28, 2022, 8:56 AM IST
ಶಿವಮೊಗ್ಗ: ಶಿವಮೊಗ್ಗದಲ್ಲಿ ನಡೆದ ಹಿಂಜಾವೇ ತ್ರೈ ವಾರ್ಷಿಕ ಸಮ್ಮೇಳನದಲ್ಲಿ ಪ್ರಚೋದನಕಾರಿ ರೀತಿ ಮಾತಾನಾಡಿದ್ದ ಸಂಸದೆ ಸಾಧ್ವಿ ಪ್ರಜ್ಞಾಸಿಂಗ್ ವಿರುದ್ಧ ದೂರು ನೀಡಿದ್ದ ದೆಹಲಿಯಲ್ಲಿರುವ ಉದ್ಯಮಿಗೆ ಕೋಟೆ ಪೊಲೀಸರು ನೇರವಾಗಿ ಬಂದು ದೂರು ನೀಡಿ ಎಂದು ನೋಟಿಸ್ ಜಾರಿ ಮಾಡಿದ್ದಾರೆ.
ಇತ್ತೀಚೆಗೆ ಶಿವಮೊಗ್ಗದಲ್ಲಿ ನಡೆದ ಹಿಂಜಾವೇ ತ್ರೈ ವಾರ್ಷಿಕ ಸಮ್ಮೇಳನದಲ್ಲಿ ಸಂಸದೆ ಸಾಧ್ವಿ ಪ್ರಜ್ಞಾಸಿಂಗ್ ಅವರು ಲವ್ ಜಿಹಾದ್ನ ಬಗ್ಗೆ ಮಾತನಾಡುತ್ತಾ ಮನೆಯಲ್ಲಿರುವ ತರಕಾರಿ ಹೆಚ್ಚುವ ಚಾಕುವನ್ನು ಹೆಚ್ಚು ಚೂಪಾಗಿಟ್ಟಿರಿ ಎಂದು ಹೇಳಿಕೆ ನೀಡಿದ್ದರು. ಇದು ಪ್ರಚೋದನಕಾರಿ ಮಾತು ಎಂದು ಸ್ವಾಧ್ವಿ ವಿರುದ್ಧ ಉದ್ಯಮಿ ತೆಹಸೀನ್ ಪೂನಾವಾಲಾ ಟ್ವೀಟ್ ಮೂಲಕ ಎಸ್ಪಿ ಮಿಥುನ್ ಕುಮಾರ್ ಅವರಿಗೆ ಮನವಿ ಮಾಡಿದ್ದರು.
ಇದಕ್ಕೆ ಪ್ರತಿಕ್ರಿಯೆಯಾಗಿ ಮಾಹಿತಿಯನ್ನು ಡಿಜಿಟಲ್ ರೂಪದಲ್ಲಿ ಸ್ವೀಕರಿಸಿರುವುದರಿಂದ, ಅದನ್ನು ಕಳುಹಿಸುವ ವ್ಯಕ್ತಿಯ ದೃಢೀಕರಣವನ್ನು ಪರಿಶೀಲಿಸಬೇಕು. ಅಲ್ಲದೆ, ಸುಪ್ರೀಂ ಕೋರ್ಟ್ನ ಲಲಿತಾ ಕುಮಾರಿ ತೀರ್ಪಿನ ಪ್ರಕಾರ, ಸ್ವೀಕರಿಸಿದ ಮಾಹಿತಿಯ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಮತ್ತು ಪ್ರಾಥಮಿಕ ತನಿಖೆ ನಡೆಸಲು ಅಥವಾ ಎಫ್ಐಆರ್ ದಾಖಲಿಸಲು ಸೆಕ್ಷನ್ 154 ರ ಅಡಿಯಲ್ಲಿ ದೂರುದಾರ ನೇರವಾಗಿ ಬಂದು ದೂರು ದಾಖಲಿಸಬೇಕು. ದೂರುದಾರ ತೆಹಸೀನ್ ಪೂನಾವಾಲಾ ಇಂದು ಬೆಳಗ್ಗೆ (ಡಿ.28 ರಂದು) 11 ಗಂಟೆಯ ಒಳಗೆ ಠಾಣೆಗೆ ಬಂದು ದೂರು ದಾಖಲಿಸಿ ಎಂದು ನೋಟಿಸ್ ಕಳುಹಿಸಿದ್ದಾರೆ.
I have filed a complaint against #PragyaThakur ji (MP) for the hate speech that she delivered on 25.12.2022 at Shivamogga with the SP shri G.K Mithun Kumar.
Requesting Shivamogga police to kindly register an FIR u/s 153-A, 153-B,268,295-A,298,504,508 (IPC).@CMOkamoto @BSBommai pic.twitter.com/KxNXpYUHS5— Tehseen Poonawalla Official 🇮🇳 (@tehseenp) December 26, 2022
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rain ಕರಾವಳಿ ಸಹಿತ ರಾಜ್ಯದ ವಿವಿಧೆಡೆ ಉತ್ತಮ ಮಳೆ, ನಾಲ್ಕು ಜೀವಹಾನಿ
ಲೀಡ್ ಕೊಡಿಸದಿದ್ದರೆ ಅಧಿಕಾರವೂ ಸಿಗದು; ಹುದ್ದೆ ಬಯಸುವ ಕಾರ್ಯಕರ್ತರಿಗೆ ಡಿಕೆಶಿ ಚಾಟಿ
PU ಪರೀಕ್ಷೆ-2: ವಿಜ್ಞಾನ ವಿದ್ಯಾರ್ಥಿಗಳದ್ದೇ ಸಿಂಹಪಾಲು
MLC Elections: ಬಿಜೆಪಿಯಲ್ಲಿ 3 ಸ್ಥಾನಕ್ಕೆ 30 ಆಕಾಂಕ್ಷಿಗಳು
DK Shivakumar ರಕ್ಷಿಸಿದರೆ ಮುಂದೆ ಬೆಲೆ ತೆರಬೇಕಾಗುತ್ತದೆ: ಎಚ್ಡಿಕೆ ಎಚ್ಚರಿಕೆ
MUST WATCH
ಹೊಸ ಸೇರ್ಪಡೆ
Kerala; ಕೇಂದ್ರದ ಸವಾಲು ನಡುವೆ ರಾಜ್ಯದ ಆದಾಯ ಹೆಚ್ಚಳ: ಕೇರಳ ಸಚಿವ
Rain ಕರಾವಳಿ ಸಹಿತ ರಾಜ್ಯದ ವಿವಿಧೆಡೆ ಉತ್ತಮ ಮಳೆ, ನಾಲ್ಕು ಜೀವಹಾನಿ
Ambedkar ಇಲ್ಲದಿದ್ದರೆ ನೆಹರೂ ಮೀಸಲು ನೀಡುತ್ತಿರಲಿಲ್ಲ : ಮೋದಿ
ಲೀಡ್ ಕೊಡಿಸದಿದ್ದರೆ ಅಧಿಕಾರವೂ ಸಿಗದು; ಹುದ್ದೆ ಬಯಸುವ ಕಾರ್ಯಕರ್ತರಿಗೆ ಡಿಕೆಶಿ ಚಾಟಿ
Puttur ಅಂಗಳದಲ್ಲಿದ್ದ ವ್ಯಕ್ತಿ ಸಾವು ಸಿಡಿಲಾಘಾತ / ಹೃದಯಾಘಾತ ಶಂಕೆ