IPL 2023: ಇಂದು ಗುಜರಾತ್‌-ರಾಜಸ್ಥಾನ್‌ ಫೈಟ್‌: IPLನ ಎರಡು ಬಲಿಷ್ಠ ತಂಡಗಳ ನಡುವೆ ಹಣಾಹಣಿ


Team Udayavani, Apr 16, 2023, 7:05 AM IST

raj gt

ಅಹ್ಮದಾಬಾದ್‌: ಐಪಿಎಲ್‌ನ ಎರಡು ಬಲಿಷ್ಠ ತಂಡಗಳಾದ ಗುಜರಾತ್‌ ಟೈಟಾನ್ಸ್‌ ಮತ್ತು ರಾಜಸ್ಥಾನ್‌ ರಾಯಲ್ಸ್‌ ರವಿವಾರ ಅಹ್ಮದಾಬಾದ್‌ನಲ್ಲಿ ದೊಡ್ಡ ಪಂದ್ಯವೊಂದಕ್ಕೆ ಸಾಕ್ಷಿಯಾಗಲಿವೆ. ಇವೆ ರಡೂ ಕಳೆದ ಸಲದ ಫೈನಲಿಸ್ಟ್‌ಗಳೆಂಬುದನ್ನು ಮರೆಯುವಂತಿಲ್ಲ.

ಎರಡೂ ತಂಡಗಳು 4 ಪಂದ್ಯಗಳಲ್ಲಿ ಮೂರನ್ನು ಗೆದ್ದು ಮೊದಲೆರಡು ಸ್ಥಾನ ಅಲಂಕರಿಸಿವೆ. ರನ್‌ರೇಟ್‌ನಲ್ಲಿ ಮುಂದಿರುವ ರಾಜಸ್ಥಾನ್‌ ಅಗ್ರಸ್ಥಾನದಲ್ಲಿದೆ. ಮತ್ತೆ ಮೇಲೇರುವ ಹಂಬಲ ಪಾಂಡ್ಯ ಪಡೆಯದ್ದು, ತವರಿನ ಅಂಗಳ ಲಾಭವಾಗಿ ಪರಿಣಮಿಸಬಹುದೆಂಬ ಲೆಕ್ಕಾಚಾರ ಗುಜರಾತ್‌ ತಂಡದ್ದು.

ಐಪಿಎಲ್‌ ಚರಿತ್ರೆಯೂ ಗುಜರಾತ್‌ ಪರವಾ ಗಿಯೇ ಇದೆ. ರಾಜಸ್ಥಾನ್‌ ವಿರುದ್ಧ ಆಡಿದ ಮೂರೂ ಪಂದ್ಯಗಳಲ್ಲಿ ಅದು ಜಯ ಸಾಧಿಸಿದೆ. ಇದರಲ್ಲಿ 2022ರ ಫೈನಲ್‌ ಕೂಡ ಒಂದು. ಇದ ರಲ್ಲಿ ಪಾಂಡ್ಯ ಪಡೆಯದ್ದು 7 ವಿಕೆಟ್‌ ವಿಕ್ಟರಿ. 11 ಎಸೆತ ಬಾಕಿ ಉಳಿದಿರುವಂತೆಯೇ ಗುಜರಾತ್‌ ಚಾಂಪಿಯನ್‌ ಆಗಿ ಹೊರಹೊಮ್ಮಿತ್ತು. ಹೀಗಾಗಿ ಸ್ಯಾಮ್ಸನ್‌ ಪಡೆ ಸೋಲಿನ ಸರಪಳಿ ಕಡಿದು ಕೊಂಡೀತೇ ಎಂಬುದೊಂದು ಕುತೂಹಲ.

ಎರಡೂ ತಂಡಗಳು ಸಮಬಲ ಎಂಬುದರಲ್ಲಿ ಅನುಮಾನವಿಲ್ಲ. ಆದರೆ ಗುಜರಾತ್‌ಗೆ ತವರಿನ ಲಾಭವಿದೆ. ಪಾಂಡ್ಯ ಸಾರಥ್ಯದಲ್ಲಿ ಅದು ಅಹ್ಮದಾಬಾದ್‌ನಲ್ಲಿ ಈವರೆಗೆ ಸೋಲನು ಭವಿಸಿಲ್ಲ. ಏಕೈಕ ಸೋಲು ಮೊನ್ನೆ ಕೋಲ್ಕತಾ ವಿರುದ್ಧ ಎದುರಾಗಿತ್ತು. ಆಗ ರಶೀದ್‌ ಖಾನ್‌ ನಾಯಕರಾಗಿದ್ದರು.

ಕೈಕೊಟ್ಟ ಸ್ಯಾಮ್ಸನ್‌ ಫಾರ್ಮ್
ಬಿಗ್‌ ಹಿಟ್ಟರ್‌ಗಳ ಲೆಕ್ಕಾಚಾರದಲ್ಲಿ ಎರಡೂ ತಂಡಗಳದ್ದು ಸಮಬಲದ ಸಾಮರ್ಥ್ಯ. ಆದರೆ ರಾಜಸ್ಥಾನ್‌ ನಾಯಕ ಸಂಜು ಸ್ಯಾಮ್ಸನ್‌ ಅವರ ಸೊನ್ನೆಯ ನಂಟು ಬಿಗಿಯಾಗುತ್ತಿದೆ. ಡೆಲ್ಲಿ ಮತ್ತು ಚೆನ್ನೈ ವಿರುದ್ಧ ಅವರು ಖಾತೆಯನ್ನೇ ತೆರೆದಿರಲಿಲ್ಲ. ಯಶಸ್ವಿ ಜೈಸ್ವಾಲ್‌, ಜಾಸ್‌ ಬಟ್ಲರ್‌, ಪಡಿಕ್ಕಲ್‌, ಹೆಟ್‌ಮೈರ್‌, ಹೋಲ್ಡರ್‌ ಅವರೆಲ್ಲ ರಾಜಸ್ಥಾನ್‌ ಬ್ಯಾಟಿಂಗ್‌ ಸರದಿಯ ಪ್ರಮುಖರು.
ಬೌಲಿಂಗ್‌ ವಿಭಾಗದಲ್ಲಿ ಸ್ಪಿನ್ನರ್‌ಗಳೇ ಸ್ಟಾರ್. ಅಶ್ವಿ‌ನ್‌, ಚಹಲ್‌, ಝಂಪ ದಾಳಿಯನ್ನು ನಿಭಾಯಿಸಿ ನಿಲ್ಲುವುದರಲ್ಲಿ ಗುಜರಾತ್‌ ಯಶಸ್ಸು ಅಡಗಿದೆ ಎನ್ನಬಹುದು.

ಪಾಂಡ್ಯ ಪರದಾಟ
ಗುಜರಾತ್‌ ತಂಡದ ಏಕೈಕ ಸಮಸ್ಯೆಯೆಂದರೆ ನಾಯಕ ಹಾರ್ದಿಕ್‌ ಪಾಂಡ್ಯ ಅವರ ಬ್ಯಾಟಿಂಗ್‌ ಫಾರ್ಮ್. ಆದರೆ ಅದೃಷ್ಟ ಗಟ್ಟಿಯಾಗಿದೆ. ಉಳಿದಂತೆ ಸಾಹಾ, ಗಿಲ್‌, ಸಾಯಿ ಸುದರ್ಶನ್‌, ಮಿಲ್ಲರ್‌, ತೆವಾಟಿಯಾ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ನೀಡುತ್ತ ಬಂದಿದ್ದಾರೆ. ಶಮಿ, ಮೋಹಿತ್‌ ಶರ್ಮ, ಅಲ್ಜಾರಿ ಜೋಸೆಫ್, ರಶೀದ್‌ ಖಾನ್‌, ಜೋಶುವ ಲಿಟ್ಲ ಅವರ ಬೌಲಿಂಗ್‌ ದಾಳಿ ಕೂಡ ಹರಿತವಾಗಿದೆ.

ಟಾಪ್ ನ್ಯೂಸ್

8

ಪತಿಯಿಂದಲೇ ಭೀಕರವಾಗಿ ಹತ್ಯೆಗೀಡಾದ ಸ್ಯಾಂಡಲ್‌ ವುಡ್‌ ನಟಿ, ಕಾಂಗ್ರೆಸ್‌ ಮುಖಂಡೆ

7

ಬಿಜೆಪಿಯವರು ಬಜೆಟ್ ಓದುವುದಿಲ್ಲ,ಅವರಿಗೆ ಎಕನಾಮಿಕ್ಸ್ ಗೊತ್ತಾಗುವುದಿಲ್ಲ: ಸಿಎಂ ಸಿದ್ದರಾಮಯ್ಯ

ಅಪಘಾತದಿಂದ ತೀವ್ರ ಗಾಯ: ಆಂಬ್ಯುಲೆನ್ಸ್ ಬರುವವರೆಗೆ ಸೆಲ್ಫಿಗೆ ಪೋಸ್‌ ಕೊಟ್ಟ ಯುವತಿಯರು.!

ಅಪಘಾತದಿಂದ ತೀವ್ರ ಗಾಯ: ಆಂಬ್ಯುಲೆನ್ಸ್ ಬರುವವರೆಗೆ ಸೆಲ್ಫಿಗೆ ಪೋಸ್‌ ಕೊಟ್ಟ ಯುವತಿಯರು.!

5

ಜಾರ್ಜಿಯಾದಲ್ಲಿ ಕಾರು ಪಲ್ಟಿಯಾಗಿ ಮೂವರು ಇಂಡೋ-ಅಮೆರಿಕನ್‌ ವಿದ್ಯಾರ್ಥಿಗಳು ದುರ್ಮರಣ

Sandalwood: ರಿಷಿ ಖುಷಿ!: ಅಕೌಂಟ್‌ಗೆ ಮತ್ತೊಂದು ಚಿತ್ರ ತ್ತೊ

Sandalwood: ರಿಷಿ ಖುಷಿ!: ಅಕೌಂಟ್‌ಗೆ ಮತ್ತೊಂದು ಚಿತ್ರ ತ್ತೊ

Chitradurga: ಮಳೆಯಿಂದ ವಿದ್ಯುತ್‌ ಕಡಿತ; ಮೊಬೈಲ್ ಬ್ಯಾಟರಿಯ ಬೆಳಕಿನಲ್ಲೇ ರೋಗಿಗೆ ಚಿಕಿತ್ಸೆ

Chitradurga: ಮಳೆಯಿಂದ ವಿದ್ಯುತ್‌ ಕಡಿತ; ಮೊಬೈಲ್ ಬ್ಯಾಟರಿಯ ಬೆಳಕಿನಲ್ಲೇ ರೋಗಿಗೆ ಚಿಕಿತ್ಸೆ

Shiradi Ghat: ಶಿರಾಡಿ ಘಾಟ್ ನಲ್ಲಿ ಭೀಕರ ಅಪಘಾತ; ಬಂಟ್ವಾಳ ಮೂಲದ ತಾಯಿ ಮಗ ದುರ್ಮರಣ

Shiradi Ghat: ಶಿರಾಡಿ ಘಾಟ್ ನಲ್ಲಿ ಭೀಕರ ಅಪಘಾತ; ಬಂಟ್ವಾಳ ಮೂಲದ ತಾಯಿ ಮಗ ದುರ್ಮರಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-adsadasdas

IPL ಮೊದಲ ಕ್ವಾಲಿಫೈಯರ್‌ ಇಂದು; ಕೆಕೆಆರ್‌-ಹೈದರಾಬಾದ್‌ ಬಿಗ್‌ ಹಿಟ್ಟರ್ ಫೈಟ್‌

pvs

Malaysia Masters ಬ್ಯಾಡ್ಮಿಂಟನ್‌ ; ಬ್ರೇಕ್‌ ಮುಗಿಸಿ ಆಡಲಿಳಿದ ಪಿ.ವಿ.ಸಿಂಧು

Rohan Bopanna

Paris Olympics; ಬಾಲಾಜಿ, ಭಾಂಬ್ರಿ: ಜತೆಗಾರನ ಹೆಸರು ಸೂಚಿಸಿದ ಬೋಪಣ್ಣ

1-wwewqe

Retirement ಬಗ್ಗೆ ಧೋನಿ ಏನೂ ಹೇಳಿಲ್ಲ: ಸಿಎಸ್‌ಕೆ

1-fff

Geneva Open ಟೆನಿಸ್‌: ಸುಮಿತ್‌ಗೆ ಸೋಲು

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

8

ಪತಿಯಿಂದಲೇ ಭೀಕರವಾಗಿ ಹತ್ಯೆಗೀಡಾದ ಸ್ಯಾಂಡಲ್‌ ವುಡ್‌ ನಟಿ, ಕಾಂಗ್ರೆಸ್‌ ಮುಖಂಡೆ

7

ಬಿಜೆಪಿಯವರು ಬಜೆಟ್ ಓದುವುದಿಲ್ಲ,ಅವರಿಗೆ ಎಕನಾಮಿಕ್ಸ್ ಗೊತ್ತಾಗುವುದಿಲ್ಲ: ಸಿಎಂ ಸಿದ್ದರಾಮಯ್ಯ

ಅಪಘಾತದಿಂದ ತೀವ್ರ ಗಾಯ: ಆಂಬ್ಯುಲೆನ್ಸ್ ಬರುವವರೆಗೆ ಸೆಲ್ಫಿಗೆ ಪೋಸ್‌ ಕೊಟ್ಟ ಯುವತಿಯರು.!

ಅಪಘಾತದಿಂದ ತೀವ್ರ ಗಾಯ: ಆಂಬ್ಯುಲೆನ್ಸ್ ಬರುವವರೆಗೆ ಸೆಲ್ಫಿಗೆ ಪೋಸ್‌ ಕೊಟ್ಟ ಯುವತಿಯರು.!

10-hunsur

Hunsur: ಬಿರುಗಾಳಿ ಮಳೆಗೆ ಹಾರಿಹೋದ ಮನೆ ಮೇಲ್ಚಾವಣಿ, ಬ್ಯಾರನ್‌ಗೂ ಹಾನಿ

5

ಜಾರ್ಜಿಯಾದಲ್ಲಿ ಕಾರು ಪಲ್ಟಿಯಾಗಿ ಮೂವರು ಇಂಡೋ-ಅಮೆರಿಕನ್‌ ವಿದ್ಯಾರ್ಥಿಗಳು ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.