ವರ್ಷದಲ್ಲಿ 12 ಬಾರಿ ಹಾವಿನ ಕಡಿತಕ್ಕೊಳಗಾದ ಮಹಿಳೆ… ಬದುಕುಳಿದಿದ್ದೇ ವಿಸ್ಮಯ
Team Udayavani, Jul 14, 2023, 11:06 AM IST
ಮಧ್ಯಪ್ರದೇಶ: ಹಾವಿನ ಸುದ್ದಿ ಮಾತನಾಡುವಾಗಲೇ ಮೈ ಜುಂ ಎನ್ನುತ್ತದೆ ಅಂತದರಲ್ಲಿ ಹನ್ನೆರಡು ಬಾರಿ ಹಾವಿನ ಕಡಿತಕ್ಕೊಳಗಾಗಿ ಬದುಕಿ ಬಂದ ಮಹಿಳೆಯ ಸ್ಥಿತಿ ಹೇಗಿರಬೇಡ ನಿಜಕ್ಕೂ ಇದೊಂದು ವಿಸ್ಮಯವೇ ಸರಿ.
ಹೌದು ಮಧ್ಯ ಪ್ರದೇಶದ ಮಂಡ್ಲಾ ಜಿಲ್ಲೆಯಲ್ಲಿರುವ ಮಹಿಳೆಯೊಬ್ಬರಿಗೆ ಹಾವೊಂದು ಬದ್ದ ವೈರಿಯಾಗಿ ಪರಿಣಮಿಸಿದೆ ಆಕೆ ಹೋದಲ್ಲೆಲ್ಲಾ ಹಾವುಗಳೇ ಆಕೆಯನ್ನು ಬೆನ್ನಟ್ಟುತ್ತಿವೆಯಂತೆ ಮನೆಯ ಒಳಗಿದ್ದರೂ, ಮನೆಯ ಹೊರಬಂದರೂ ಹಾವೂ ತನ್ನ ಬೆನ್ನ ಹಿಂದೆಯೇ ಬರುತ್ತದೆ ಎನ್ನುತ್ತಾರೆ ಈ ಮಹಿಳೆ.
ಈ ಮಹಿಳೆಗೆ ಕೇವಲ ಒಂದು ವರ್ಷದ ಅವಧಿಯಲ್ಲಿ ನಾಗರಹಾವು, ಕರಿ ನಾಗರ, ಕೊಳಕು ಮಂಡಲ ಸೇರಿದಂತೆ ಬರೋಬ್ಬರಿ ಹನ್ನೆರಡು ಹಾವುಗಳು ಕಚ್ಚಿವೆಯಂತೆ ಆದರೂ ಮಹಿಳೆ ಬದುಕಿರುವುದೇ ಪವಾಡ ಎಂದು ಹೇಳಬೇಕು. ಇದರ ನಡುವೆ ಕೇವಲ ಎಂಟು ದಿನದ ಅಂತರದಲ್ಲಿ ಎರಡು ಭಾರಿ ಹಾವಿನ ಕಡಿತಕ್ಕೆ ಒಳಗಾಗಿದ್ದರಂತೆ, ಆವಾಗಲೂ ಮಹಿಳೆ ತನ್ನ ಜೀವ ಉಳಿಸಿಕೊಂಡಿದ್ದಾರೆ.
ಮಹಿಳೆ ಹೇಳಿಕೆಯಂತೆ ತಮ್ಮ ಹಿರಿಯರ ಕಾಲದಿಂದಲೂ ನಾಗಾರಾಧನೆ ಮಾಡಿಕೊಂಡು ಬಂದಿರುವ ಕುಟುಂಬ ಈಗಲೂ ನಾವು ಆರಾಧನೆ ಮಾಡುತ್ತಿದ್ದೇವೆ ಆದರೂ ಹಾವುಗಳು ನನ್ನನು ಮಾತ್ರ ಯಾಕೆ ಹಿಂಬಾಲಿಸಿ ದಾಳಿ ಮಾಡುತ್ತವೆ ಎಂಬುದು ಗೊತ್ತಾಗುತ್ತಿಲ್ಲ ಎನ್ನುತ್ತಾರೆ.
ಮಹಿಳೆಯ ಪತಿಯ ಹೇಳಿಕೆಯಂತೆ ಹಾವುಗಳ ಕಡಿತಕ್ಕೆ ಪತ್ನಿ ಒಳಗಾದ ಮೇಲೆ ನಮ್ಮಿಂದ ಏನಾದರು ತೊಂದರೆ ಆಗಿದ್ದರೆ ಪರಿಹಾರಕ್ಕಾಗಿ ಕೆಲವೊಂದು ಪೂಜೆಗಳನ್ನೂ ಮಾಡಿದ್ದೆವು ಆದರೆ ಅದ್ಯಾವುದೂ ಫಲಿಸಲಿಲ್ಲ ಎನ್ನುತ್ತಾರೆ ಮಹಿಳೆಯ ಪತಿ.
ಸಾಕಷ್ಟು ಪೂಜೆ ನಡೆಸಿದ ಬಳಿಕವೂ ಹಾವುಗಳು ದಾಳಿ ಮಾಡಿದ್ದು ಇದರಿಂದ ಕುಟುಂಬವೇ ರೋಸಿ ಹೋಗಿವೆ.
ಸೂಕ್ತ ಚಿಕಿತ್ಸೆಯಿಂದ ಗುಣಮುಖ:
ಹಾವು ಕಡಿತಕ್ಕೆ ಒಳಗಾದ ಮಹಿಳೆ ಹೇಳಿಕೆಯಂತೆ ನಾವು ಪ್ರತಿಭಾರಿ ಹಾವಿನ ಕಡಿತಕ್ಕೆ ಒಳಗಾದಾಗ ಸಮಯ ವ್ಯರ್ಥ ಮಾಡದೆ ಕೂಡಲೇ ಆಸ್ಪತ್ರೆಗೆ ತೆರಳಿ ಸೂಕ್ತ ಚಿಕಿತ್ಸೆ ಪಡೆಯುತ್ತಿದ್ದೆ ಎನ್ನುತ್ತಾರೆ ಹಾವಿನ ಕಡಿತಕ್ಕೆ ಒಳಗಾದ ಮಹಿಳೆ. ಆದರೂ ಒಬ್ಬರೇ ವ್ಯಕ್ತಿಗೆ ಈ ರೀತಿ ಹಾವು ದಾಳಿ ಮಾಡಿರುವುದು ಬಹುಶ ವಿಪರ್ಯಾಸವೇ ಸರಿ.
ಇದನ್ನೂ ಓದಿ: Kushtagi: ಪಟ್ಟಣದ ಮೂರು ಮನೆಗಳಲ್ಲಿ ಕಳ್ಳತನ; ನಗದು ಚಿನ್ನಾಭರಣ, ಬೈಕ್ ಕದ್ದು ಪರಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
RSS ಕೂಡ ನಕಲಿ ಎಂದು ನಾಳೆ ಮೋದಿ ಹೇಳಬಹುದು : ಉದ್ಧವ್ ಠಾಕ್ರೆ ಕಿಡಿ
Election; ಪ್ರಧಾನಿ ಮೋದಿ ಯಾಕೆ ಮಂಗಳಸೂತ್ರ,ಧರ್ಮದ ಮೇಲೆ ಮತ ಕೇಳುತ್ತಾರೆ: ಪ್ರಿಯಾಂಕಾ ಗಾಂಧಿ
Priyanka Gandhi ಯಾಕೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ; ಇಲ್ಲಿದೆ ಅವರೇ ಕೊಟ್ಟ ಉತ್ತರ
Swati Maliwal Assault Case: ಕೇಜ್ರಿವಾಲ್ ಸಹಾಯಕ ಬಿಭವ್ ಕುಮಾರ್ ಬಂಧನ
Panaji: 55ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಪೋಸ್ಟರ್ ಅನಾವರಣ
MUST WATCH
ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ
ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು
ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ
ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್ಪಟೇಲ್ ಹೇಳಿಕೆ
ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ
ಹೊಸ ಸೇರ್ಪಡೆ
BJP ಕಚೇರಿಗೆ ಬರುತ್ತಿದ್ದೇವೆ.. ಎಲ್ಲರನ್ನೂ ಬಂಧಿಸಿ: ಪ್ರಧಾನಿಗೆ ಕೇಜ್ರಿವಾಲ್ ಸವಾಲು
Congress ಪಕ್ಷದಲ್ಲಿ ಔರಂಗಜೇಬನ ಆತ್ಮ ಸೇರಿಕೊಂಡಿದೆ: ಸಿಎಂ ಯೋಗಿ ವಾಗ್ದಾಳಿ
RSS ಕೂಡ ನಕಲಿ ಎಂದು ನಾಳೆ ಮೋದಿ ಹೇಳಬಹುದು : ಉದ್ಧವ್ ಠಾಕ್ರೆ ಕಿಡಿ
Gangavathi ಸಾಣಾಪೂರ ಕೆರೆಯಲ್ಲಿ ಮುಳುಗಿ ಯುವಕ ಮೃತ್ಯು
Ramanagara; ಅಪ್ರಾಪ್ತ ಮಕ್ಕಳ ಮೈಯನ್ನು ಕಾದ ಕಬ್ಬಿಣದಿಂದ ಸುಟ್ಟ ಮದ್ಯವ್ಯಸನಿ ತಂದೆ