Jailer: ಮೊದಲ ದಿನವೇ ದಾಖಲೆ ಬರೆಯುತ್ತಾ ʼಜೈಲರ್‌ʼ?; 1stಡೇ ಎಷ್ಟು ಕೆಲಕ್ಷನ್‌ ಮಾಡಬಹುದು?

ನಾರ್ತ್‌ ಇಂಡಿಯಾದಲ್ಲೂ ʼಜೈಲರ್‌ʼಗೆ ಜೈಕಾರ

Team Udayavani, Aug 10, 2023, 3:20 PM IST

Jailer: ಮೊದಲ ದಿನವೇ ದಾಖಲೆ ಬರೆಯುತ್ತಾ ʼಜೈಲರ್‌ʼ?: 1stಡೇ ಎಷ್ಟು ಕೆಲಕ್ಷನ್‌ ಮಾಡಬಹುದು?

ಚೆನ್ನೈ: ಬಹು ನಿರೀಕ್ಷಿತ ʼಜೈಲರ್‌ʼ ಇಂದು ವಿಶ್ವದೆಲ್ಲೆಡೆ ತೆರೆಕಂಡಿದೆ. ಸಾವಿರಾರು ಸ್ಕ್ರೀನ್‌ ಗಳಲ್ಲಿ ರಜಿನಿಕಾಂತ್‌ ಅವರನ್ನು ನೋಡಿ ಅಭಿಮಾನಿಗಳು ಶಿಳ್ಳೆ, ಚಪ್ಪಾಳೆಯಿಂದ ಜೈಕಾರ ಹಾಕಿದ್ದಾರೆ. ಥಿಯೇಟರ್‌ ಹೊರಗೆ ಪಟಾಕಿಗಳನ್ನು ಸಿಡಿಸಿ ʼತಲೈವಾʼ ಅವರ ʼಜೈಲರ್‌ʼಗೆ ಅದ್ಧೂರಿ ಸ್ವಾಗತ ಕೋರಿದ್ದಾರೆ.

ʼಜೈಲರ್‌ʼ ಫಸ್ಟ್‌ ಡೇ ಫಸ್ಟ್‌ ಶೋನಿಂದಲೇ ಹೌಸ್‌ ಫುಲ್‌ ಪ್ರದರ್ಶನ ಕಾಣುತ್ತಿದೆ. ರಿಲೀಸ್‌ ಗೂ ಮುನ್ನ ಇದ್ದ ಸಿನಿಮಾ ಬಗೆಗಿನ ಹೈಪ್‌ ರಿಲೀಸ್‌ ಬಳಿಕ ಮತ್ತಷ್ಟು ಹೆಚ್ಚಾಗಿದೆ. ಆರಂಭಿಕವಾಗಿ ಸಿನಿಮಾಕ್ಕೆ ಪಾಸಿಟಿವ್‌ ರೆಸ್ಪಾನ್ಸ್‌ ಕೇಳಿ ಬರುತ್ತಿದೆ.

ಫೈಟ್‌ ಸೀನ್ಸ್‌, ರಜಿನಿ ಮಾಸ್‌ ಲುಕ್‌, ಅನಿರುದ್ಧ್‌ ಮ್ಯೂಸಿಕ್‌, ಡಾರ್ಕ್‌ ಕಾಮಿಡಿಯಿಂದ ಸಿನಿಮಾ ಬಾಕ್ಸ್‌ ಆಫೀಸ್‌ ನಲ್ಲಿ ಮೊದಲ ದಿನವೇ ದೊಡ್ಡಮಟ್ಟದ ಕಮಾಯಿ ಮಾಡುವ ಸೂಚನೆಯನ್ನು ನೀಡಿದೆ. ನಾಳೆ (ಆ.11 ರಂದು) ಬಾಲಿವುಡ್‌ ನ ʼಗದರ್‌ -2ʼ, ʼಓ ಮೈ ಗಾಡ್-‌2ʼ ಸಿನಿಮಾಗಳು ತೆರೆಗೆ ಬರಲಿದೆ. ಈ ಎರಡು ಬಿಗ್‌ ಸಿನಿಮಾಗಳು ಉತ್ತರ ಭಾರತದಲ್ಲಿ ದೊಡ್ಡ ಓಪನಿಂಗ್‌ ಪಡೆಯುವ ಸಾಧ್ಯತೆಯಿದೆ. ಇತ್ತ ಸೌತ್‌ ನಲ್ಲಿ ʼಜೈಲರ್‌ʼ ತನ್ನ ನಾಗಾಲೋಟವನ್ನು ಮುಂದುವರೆಸಲಿದೆ.

ಇದನ್ನೂ ಓದಿ: Shruti Haasan: ಪ್ರಿಯಕರನ ಹೂಸು ನನ್ನಗಿಷ್ಟ ಎಂದ ನಟಿ ಶ್ರುತಿ ಹಾಸನ್.!‌

ʼಸ್ಯಾಕ್ನಿಲ್ಕ್ʼ ವರದಿಯ ಪ್ರಕಾರ ʼಜೈಲರ್‌ʼ ಮೊದಲ ದಿನ 50 ಕೋಟಿ ರೂಪಾಯಿಯ ಕಮಾಯಿ ಮಾಡುವ ಮೂಲಕ ಕಾಲಿವುಡ್‌ ನಲ್ಲಿ ಬಿಗೆಸ್ಟ್‌ ಓಪನಿಂಗ್‌ ಪಡೆದುಕೊಳ್ಳುವ ಸಾಧ್ಯತೆಯಿದೆ ಎಂದು ವರದಿ ತಿಳಿಸಿದೆ.

ದಕ್ಷಿಣದ ಪ್ರೇಕ್ಷಕರು ‘ಗದರ್ 2’ ಮತ್ತು ‘ಓ ಮೈ ಗಾಡ್‌ – 2’ ಗಿಂತ ‘ಜೈಲರ್’ ಅನ್ನು ವೀಕ್ಷಿಸಲು ಬಯಸುತ್ತಾರೆ. ಹಿಂದಿಗಿಂತ ತಮಿಳು ಹಾಗೂ ತೆಲುಗಿನಲ್ಲಿ ಸಿನಿಮಾ ಹೆಚ್ಚಾಗಿ ರಿಲೀಸ್‌ ಆಗಿದೆ. ಈ ಕಾರಣದಿಂದ ಬೇರೆ ರಾಜ್ಯಗಳಲ್ಲಿ ವಾಸಿಸುತ್ತಿರುವ ತಮಿಳು – ತೆಲುಗು ಪ್ರೇಕ್ಷಕು ಈ ಸಿನಿಮಾವನ್ನೇ ಹೆಚ್ಚಾಗಿ ನೋಡುತ್ತಾರೆ. ‘ಗದರ್ ‘2 ಮತ್ತು ‘ಓ ಮೈ ಗಾಡ್- 2’ ಚಿತ್ರಗಳ ಗುರಿ ಉತ್ತರ ಭಾರತ, ಮಹಾರಾಷ್ಟ್ರ ಕಡೆಯ ಪ್ರೇಕ್ಷಕರಾಗಿರುತ್ತಾರೆ ಎಂದು ಸಿನಿಮಾ ವ್ಯಾಪಾರ ತಜ್ಞ ರಮೇಶ್ ಬಾಲಾ “ಇಂಡಿಯಾ ಟುಡೇʼಗೆ ಹೇಳಿದ್ದಾರೆ.

ʼಜೈಲರ್‌ʼ ನಲ್ಲಿ ರಜಿನಿಕಾಂತ್‌ ಜೊತೆ ಜಾಕಿ ಶ್ರಾಫ್, ರಮ್ಯಾ ಕೃಷ್ಣನ್, ತಮನ್ನಾ ,ವಿನಾಯಕನ್ ಮುಂತಾದವರು ನಟಿಸಿದ್ದಾರೆ. ಮೋಹನ್‌ಲಾಲ್, ಶಿವ ರಾಜ್‌ಕುಮಾರ್ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ.

 

ಟಾಪ್ ನ್ಯೂಸ್

Man finds Rs 9,900 crore in his bank account

Bhadohi; ಯು.ಪಿ ವ್ಯಕ್ತಿಯ ಖಾತೆಗೆ ಬರೋಬ್ಬರಿ 9,900 ಕೋಟಿ ರೂ ಜಮೆ! ಆಗಿದ್ದೇನು?

Udupi Gitanjali Silk, Shantisagar Hotel founder Neere Bailur Govinda Naik passes away

Udupi ಗೀತಾಂಜಲಿ ಸಿಲ್ಕ್, ಶಾಂತಿಸಾಗರ್ ಹೊಟೇಲ್ ಸಂಸ್ಥಾಪಕ ನೀರೆ ಬೈಲೂರು ಗೋವಿಂದ ನಾಯಕ್ ನಿಧನ

Vijayapura ಎಪಿಎಂಸಿ ಮಾರುಕಟ್ಟೆಯಲ್ಲಿ ಯುವಕನ‌ ಹತ್ಯೆ; ಆಪ್ತರ ಮೇಲೆ ಶಂಕೆ

Vijayapura ಎಪಿಎಂಸಿ ಮಾರುಕಟ್ಟೆಯಲ್ಲಿ ಯುವಕನ‌ ಹತ್ಯೆ; ಆಪ್ತರ ಮೇಲೆ ಶಂಕೆ

twin terror attacks in Jammu and Kashmir

Jammu and Kashmir ಉಗ್ರ ದಾಳಿ; ಮಾಜಿ ಸರಪಂಚ್ ಸಾವು, ಇಬ್ಬರು ಪ್ರವಾಸಿಗರಿಗೆ ಗಾಯ

Man of the match ಪ್ರಶಸ್ತಿ ಸಿಗಬೇಕಾಗಿದ್ದು ನನಗಲ್ಲ…: ಫಾಫ್ ಡುಪ್ಲೆಸಿಸ್ ಹೀಗಂದಿದ್ಯಾಕೆ?

Man of the match ಪ್ರಶಸ್ತಿ ಸಿಗಬೇಕಾಗಿದ್ದು ನನಗಲ್ಲ…: ಫಾಫ್ ಡುಪ್ಲೆಸಿಸ್ ಹೀಗಂದಿದ್ಯಾಕೆ?

ಕೆರೆ ಅಭಿವೃದ್ಧಿಗೆ ಒಮ್ಮೆಯೂ ತಲೆ ಎತ್ತಿ ನೋಡದ ಇಲಾಖೆ; ಆಟದ ಮೈದಾನದಂತಾದ ಬಾವದಕೆರೆ

ಕೆರೆ ಅಭಿವೃದ್ಧಿಗೆ ಒಮ್ಮೆಯೂ ತಲೆ ಎತ್ತಿ ನೋಡದ ಇಲಾಖೆ; ಆಟದ ಮೈದಾನದಂತಾದ ಬಾವದಕೆರೆ

1-24-sunday

Daily Horoscope: ವಿರಾಮ ಆಚರಣೆಯ ನಡುವೆ ಹೊಸ ಕಾರ್ಯಗಳ ಪ್ರಸ್ತಾವ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12

Cannes‌ Film Festival: ಕೇನ್ಸ್ ನಲ್ಲಿ ಪ್ರದರ್ಶನ ಕಾಣಲಿದೆ ಭಾರತದ ಈ 7 ಸಿನಿಮಾಗಳು

11

ಹೃದಯ ಸಂಬಂಧಿ ಕಾಯಿಲೆ: ಬಿಗ್‌ ಬಾಸ್‌ ಖ್ಯಾತಿ, ನಟಿ ರಾಖಿ ಸಾವಂತ್‌ ಆಸ್ಪತ್ರೆಗೆ ದಾಖಲು

Ramayana: 100, 200.. ಕೋಟಿಯಲ್ಲ ʼರಾಮಾಯಣʼ ಮೊದಲ ಪಾರ್ಟ್‌ನ ಬಜೆಟ್ಟೇ 835 ಕೋಟಿ ರೂ.

Ramayana: 100, 200.. ಕೋಟಿಯಲ್ಲ ʼರಾಮಾಯಣʼ ಮೊದಲ ಪಾರ್ಟ್‌ನ ಬಜೆಟ್ಟೇ 835 ಕೋಟಿ ರೂ.

Bollywood: ಜೂನ್‌ನಿಂದಲೇ ಬ್ಯುಸಿಯಾಗಲಿದೆ ಬಾಲಿವುಡ್; ಶುರುವಾಗಲಿದೆ ರಿಲೀಸ್‌ ಭರಾಟೆ

Bollywood: ಜೂನ್‌ನಿಂದಲೇ ಬ್ಯುಸಿಯಾಗಲಿದೆ ಬಾಲಿವುಡ್; ಶುರುವಾಗಲಿದೆ ರಿಲೀಸ್‌ ಭರಾಟೆ

Bollywood: 2026ರ ಗಣರಾಜ್ಯೋತ್ಸವಕ್ಕೆ ಸನ್ನಿ ಡಿಯೋಲ್‌  ʼಬಾರ್ಡರ್‌ -2ʼ ರಿಲೀಸ್?‌

Bollywood: 2026ರ ಗಣರಾಜ್ಯೋತ್ಸವಕ್ಕೆ ಸನ್ನಿ ಡಿಯೋಲ್‌ ʼಬಾರ್ಡರ್‌ -2ʼ ರಿಲೀಸ್?‌

MUST WATCH

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

ಹೊಸ ಸೇರ್ಪಡೆ

4-mother

Mother: ತಾಯಿಯ ವೃತ್ತಿಗಳು; ಆಕ್ಯುಪೇಷನಲ್‌ ಥೆರಪಿಯ ಒಳನೋಟಗಳು

3-sirsi

Sirsi: ಬಾರದ ಹೈನು ಪ್ರೋತ್ಸಾಹ; ಶೀಘ್ರ ಬಿಡುಗಡೆಗೆ ಒತ್ತಾಯ

2-hunsur

Hunsur: ಹೆದ್ದಾರಿ ಸರ್ವೆ ಕಾರ್ಯ ತಡೆದು ರೈತರ ಆಕ್ರೋಶ

Man finds Rs 9,900 crore in his bank account

Bhadohi; ಯು.ಪಿ ವ್ಯಕ್ತಿಯ ಖಾತೆಗೆ ಬರೋಬ್ಬರಿ 9,900 ಕೋಟಿ ರೂ ಜಮೆ! ಆಗಿದ್ದೇನು?

Udupi Gitanjali Silk, Shantisagar Hotel founder Neere Bailur Govinda Naik passes away

Udupi ಗೀತಾಂಜಲಿ ಸಿಲ್ಕ್, ಶಾಂತಿಸಾಗರ್ ಹೊಟೇಲ್ ಸಂಸ್ಥಾಪಕ ನೀರೆ ಬೈಲೂರು ಗೋವಿಂದ ನಾಯಕ್ ನಿಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.