Kidnappe:ಮ್ಯೂಸಿಕ್ ಕಂಪನಿ ಸಿಇಒ ಅಪಹರಣ; ಶಿಂಧೆ ಬಣದ ಶಾಸಕನ ಪುತ್ರನ ವಿರುದ್ಧ FIR
ಗನ್ ಪಾಯಿಂಟ್ ಮೂಲಕ ಕಿಡ್ನಾಪ್ ಮಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
Team Udayavani, Aug 10, 2023, 3:05 PM IST
ಮುಂಬೈ: ಮ್ಯೂಸಿಕ್ ಕಂಪನಿಯ ಸಿಇಒ ಅವರನ್ನು ಗನ್ ಪಾಯಿಂಟ್ ಇಟ್ಟು ಅಪಹರಿಸಿರುವ ಆರೋಪದ ಮೇಲೆ ಸಿಎಂ ಶಿಂಧೆ ನೇತೃತ್ವದ ಶಿವಸೇನಾ ಶಾಸಕ ಪ್ರಕಾಶ್ ಸುರ್ವೇ ಪುತ್ರ ರಾಜ್ ಸುರ್ವೇ ವಿರುದ್ಧ ಮುಂಬೈ ಪೊಲೀಸರು ಪ್ರಕರಣ ದಾಖಲಿಸಿಕೊಂಡಿರುವುದಾಗಿ ವರದಿಯಾಗಿದೆ.
ಹಾಡಹಗಲೇ ತನ್ನ ಬೆಂಬಲಿಗರೊಂದಿಗೆ ಮ್ಯೂಸಿಕ್ ಕಂಪನಿಯೊಳಕ್ಕೆ ನುಗ್ಗಿದ ರಾಜ್ ಸುರ್ವೇ ಏಕಾಏಕಿ ಉದ್ಯಮಿ, ಸಿಇಒ ಮನೋಜ್ ಮಿಶ್ರಾಗೆ ಹಿಗ್ಗಾಮುಗ್ಗಾ ಹೊಡೆದು, ಗನ್ ಪಾಯಿಂಟ್ ಮೂಲಕ ಕಿಡ್ನಾಪ್ ಮಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಆದಿ ಶಕ್ತಿ ಪ್ರೈವೇಟ್ ಲಿಮಿಟೆಡ್ ಮ್ಯೂಸಿಕ್ ಕಂಪನಿಯ ಸಿಇಒ ಮನೋಜ್ ಮಿಶ್ರಾ ಅವರನ್ನು ಅಪಹರಿಸಿಕೊಂಡು ಹೋಗಿರುವ ಬಗ್ಗೆ ಕಚೇರಿಯ ಸಿಬಂದಿಗಳು ಮುಂಬೈ ಪೊಲೀಸರಿಗೆ ಮಾಹಿತಿ ನೀಡಿದ್ದು, ಬಳಿಕ ಮಿಶ್ರಾ ಅವರನ್ನು ರಕ್ಷಿಸಿರುವುದಾಗಿ ವರದಿ ವಿವರಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ ಸುರ್ವೇ ಹಾಗೂ ಇತರ 10 ಮಂದಿ ವಿರುದ್ಧ ಎಫ್ ಐಆರ್ ದಾಖಲಾಗಿದೆ. ವರದಿಯಂತೆ, ಮನೋಜ್ ಮಿಶ್ರಾ ಅವರನ್ನು ಅಪಹರಿಸಿಕೊಂಡು ಶಾಸಕರ ಕಚೇರಿಗೆ ಕರೆತಂದು ಗನ್ ಇಟ್ಟು ಬೆದರಿಸಿ ಕೆಲವೊಂದು ದಾಖಲೆಗೆ ಸಹಿ ಹಾಕಿಸಿಕೊಂಡಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಿನಿಮಾ ಶೈಲಿಯಲ್ಲಿ ಚಲಿಸುತ್ತಿದ್ದ ಟ್ರಕ್ನಿಂದ ಕಳ್ಳತನ… ವಿಡಿಯೋ ನೋಡಿ ಬೆಚ್ಚಿಬಿದ್ದ ಜನ
Watch Video: ಕೇದಾರದಲ್ಲಿ ಲ್ಯಾಂಡ್ ಆಗುತ್ತಿದ್ದ ವೇಳೆ ನೆಲಕ್ಕಪ್ಪಳಿಸಿದ ಹೆಲಿಕ್ಯಾಪ್ಟರ್…
Dabangg!; ಬಂಧನಕ್ಕಾಗಿ 4 ಮಹಡಿ ಏರಿ ವಾರ್ಡ್ಗೇ ನುಗ್ಗಿದ ಪೊಲೀಸ್ ಜೀಪ್!
Watch SHOLY Real Ending: ಶೋಲೆ ಸಿನಿಮಾದ ರಿಯಲ್ ಕ್ಲೈಮ್ಯಾಕ್ಸ್ ಬದಲಾಯಿಸಿದ್ದೇಕೆ?
Instagram reel ಹುಚ್ಚಾಟ ; 100 ಅಡಿಯಿಂದ ನೀರಿಗೆ ಧುಮುಕಿದ ಯುವಕನ ಅಂತ್ಯ!
MUST WATCH
ಹೊಸ ಸೇರ್ಪಡೆ
ಪ್ಲಾಸ್ಟಿಕ್ಗೆ ಪರ್ಯಾಯವಾಗಬಲ್ಲ ಮೆಕ್ಕೆಜೋಳ, ಸಬ್ಬಕ್ಕಿಯ ಕ್ಯಾರಿಬ್ಯಾಗ್!
ಮಳೆಗಾಲಕ್ಕೆ ಸಜ್ಜುಗೊಂಡಿಲ್ಲ ನಾಗೋಡಿ ಘಾಟಿ
Love jihadಶ್ರೀರಾಮ ಸೇನೆಯಿಂದ ರಾಜ್ಯದ 6 ಕಡೆ ಕಾರ್ಯಾಚರಣೆ; ಲವ್ ಜೆಹಾದ್ ತಡೆಗೆ ಸಹಾಯವಾಣಿ
ದುಬಾರಿ ದರಕ್ಕೆ ವಿದ್ಯುತ್ ಖರೀದಿ; ಅಗ್ಗದ ದರಕ್ಕೆ ಮಾರಾಟ; 10 ರೂ.ಗೆ ಖರೀದಿ,3 ರೂ.ಗೆ ಮಾರಾಟ
Chikkaballapur ನಾಗನಕಲ್ಲುಗಳ ಎದುರು ನಾಗರಹಾವುಗಳ ಪ್ರತ್ಯಕ್ಷ