![1-sdsddsa](https://www.udayavani.com/wp-content/uploads/2024/06/1-sdsddsa-415x276.jpg)
Kidnappe:ಮ್ಯೂಸಿಕ್ ಕಂಪನಿ ಸಿಇಒ ಅಪಹರಣ; ಶಿಂಧೆ ಬಣದ ಶಾಸಕನ ಪುತ್ರನ ವಿರುದ್ಧ FIR
ಗನ್ ಪಾಯಿಂಟ್ ಮೂಲಕ ಕಿಡ್ನಾಪ್ ಮಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
Team Udayavani, Aug 10, 2023, 3:05 PM IST
![Kidnappe:ಮ್ಯೂಸಿಕ್ ಕಂಪನಿ ಸಿಇಒ ಅಪಹರಣ; ಶಿಂಧೆ ಬಣದ ಶಾಸಕನ ಪುತ್ರನ ವಿರುದ್ಧ FIR](https://www.udayavani.com/wp-content/uploads/2023/08/Mumbai-620x343.jpg)
ಮುಂಬೈ: ಮ್ಯೂಸಿಕ್ ಕಂಪನಿಯ ಸಿಇಒ ಅವರನ್ನು ಗನ್ ಪಾಯಿಂಟ್ ಇಟ್ಟು ಅಪಹರಿಸಿರುವ ಆರೋಪದ ಮೇಲೆ ಸಿಎಂ ಶಿಂಧೆ ನೇತೃತ್ವದ ಶಿವಸೇನಾ ಶಾಸಕ ಪ್ರಕಾಶ್ ಸುರ್ವೇ ಪುತ್ರ ರಾಜ್ ಸುರ್ವೇ ವಿರುದ್ಧ ಮುಂಬೈ ಪೊಲೀಸರು ಪ್ರಕರಣ ದಾಖಲಿಸಿಕೊಂಡಿರುವುದಾಗಿ ವರದಿಯಾಗಿದೆ.
ಹಾಡಹಗಲೇ ತನ್ನ ಬೆಂಬಲಿಗರೊಂದಿಗೆ ಮ್ಯೂಸಿಕ್ ಕಂಪನಿಯೊಳಕ್ಕೆ ನುಗ್ಗಿದ ರಾಜ್ ಸುರ್ವೇ ಏಕಾಏಕಿ ಉದ್ಯಮಿ, ಸಿಇಒ ಮನೋಜ್ ಮಿಶ್ರಾಗೆ ಹಿಗ್ಗಾಮುಗ್ಗಾ ಹೊಡೆದು, ಗನ್ ಪಾಯಿಂಟ್ ಮೂಲಕ ಕಿಡ್ನಾಪ್ ಮಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಆದಿ ಶಕ್ತಿ ಪ್ರೈವೇಟ್ ಲಿಮಿಟೆಡ್ ಮ್ಯೂಸಿಕ್ ಕಂಪನಿಯ ಸಿಇಒ ಮನೋಜ್ ಮಿಶ್ರಾ ಅವರನ್ನು ಅಪಹರಿಸಿಕೊಂಡು ಹೋಗಿರುವ ಬಗ್ಗೆ ಕಚೇರಿಯ ಸಿಬಂದಿಗಳು ಮುಂಬೈ ಪೊಲೀಸರಿಗೆ ಮಾಹಿತಿ ನೀಡಿದ್ದು, ಬಳಿಕ ಮಿಶ್ರಾ ಅವರನ್ನು ರಕ್ಷಿಸಿರುವುದಾಗಿ ವರದಿ ವಿವರಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ ಸುರ್ವೇ ಹಾಗೂ ಇತರ 10 ಮಂದಿ ವಿರುದ್ಧ ಎಫ್ ಐಆರ್ ದಾಖಲಾಗಿದೆ. ವರದಿಯಂತೆ, ಮನೋಜ್ ಮಿಶ್ರಾ ಅವರನ್ನು ಅಪಹರಿಸಿಕೊಂಡು ಶಾಸಕರ ಕಚೇರಿಗೆ ಕರೆತಂದು ಗನ್ ಇಟ್ಟು ಬೆದರಿಸಿ ಕೆಲವೊಂದು ದಾಖಲೆಗೆ ಸಹಿ ಹಾಕಿಸಿಕೊಂಡಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್
![1-sdsddsa](https://www.udayavani.com/wp-content/uploads/2024/06/1-sdsddsa-415x276.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![ಐಸಿಯುನಲ್ಲಿದ್ದ ತಂದೆಯ ಮುಂದೆಯೇ ನೆರವೇರಿತು ಮಗಳ ಮದುವೆ: ಭಾವುಕ ಕ್ಷಣದ ವಿಡಿಯೋ ವೈರಲ್](https://www.udayavani.com/wp-content/uploads/2024/06/14-8-150x90.jpg)
ಐಸಿಯುನಲ್ಲಿದ್ದ ತಂದೆಯ ಮುಂದೆಯೇ ನೆರವೇರಿತು ಮಗಳ ಮದುವೆ: ಭಾವುಕ ಕ್ಷಣದ ವಿಡಿಯೋ ವೈರಲ್
![2](https://www.udayavani.com/wp-content/uploads/2024/06/2-13-150x90.jpg)
Viral Video: ಎಂಜಲು ಉಗುಳಿ ಗ್ರಾಹಕನಿಗೆ ಫೇಸ್ ಮಸಾಜ್ ಮಾಡಿದ್ದ ಕ್ಷೌರಿಕ ಬಂಧನ
![telangana](https://www.udayavani.com/wp-content/uploads/2024/06/telangana-150x76.jpg)
Telangana: ನೀರಿನಲ್ಲಿ ಮೃತದೇಹ ತೇಲುತ್ತಿದೆ ಎಂದು ದಡಕ್ಕೆ ಎಳೆದು ತಬ್ಬಿಬ್ಬಾದ ಪೊಲೀಸರು…
![Video: ಮೀಟಿಂಗ್ ವೇಳೆ ಅಧಿಕಾರಿಗಳ ಮೇಲೆ ಕೋಪ… ಕಡತವನ್ನು ಎತ್ತಿ ಬಿಸಾಡಿದ ಮೇಯರ್](https://www.udayavani.com/wp-content/uploads/2024/06/video-150x84.jpg)
Video: ಮೀಟಿಂಗ್ ವೇಳೆ ಅಧಿಕಾರಿಗಳ ಮೇಲೆ ಕೋಪ… ಕಡತವನ್ನು ಬಿಸಾಡಿ ಆಕ್ರೋಶ ಹೊರ ಹಾಕಿದ ಮೇಯರ್
![ದ್ವಿಚಕ್ರ ವಾಹನಕ್ಕೆ ಪೆಟ್ರೋಲ್ ಹಾಕಿದ ಬಳಿಕ ಪ್ಯಾಂಟ್ ಬಿಚ್ಚಿ Payment ಆಯ್ತು ಎಂದ ಯುವತಿ!](https://www.udayavani.com/wp-content/uploads/2024/06/Bunk-150x98.jpg)
ದ್ವಿಚಕ್ರ ವಾಹನಕ್ಕೆ ಪೆಟ್ರೋಲ್ ಹಾಕಿದ ಬಳಿಕ ಪ್ಯಾಂಟ್ ಬಿಚ್ಚಿ Payment ಆಯ್ತು ಎಂದ ಯುವತಿ!
MUST WATCH
ಹೊಸ ಸೇರ್ಪಡೆ
![1-sdsddsa](https://www.udayavani.com/wp-content/uploads/2024/06/1-sdsddsa-150x100.jpg)
Allu Arjun ‘ಪುಷ್ಪ 2 ದಿ ರೂಲ್’ ಬಿಡುಗಡೆ ದಿನಾಂಕ ಘೋಷಿಸಿದ ಚಿತ್ರ ತಂಡ
![1-aasdsadsa-dad](https://www.udayavani.com/wp-content/uploads/2024/06/1-aasdsadsa-dad-150x87.jpg)
Bihar; ಮುಸ್ಲಿಂ ಮತ್ತು ಯಾದವರ ಕೆಲಸ ಮಾಡುವುದಿಲ್ಲ: ಜೆಡಿಯು ಸಂಸದ
![1-asdsdsad](https://www.udayavani.com/wp-content/uploads/2024/06/1-asdsdsad-150x98.jpg)
Poll debut; ವಯನಾಡು ಕ್ಷೇತ್ರ ತಂಗಿಗೆ ಬಿಟ್ಟುಕೊಟ್ಟ ರಾಹುಲ್: ನಾಳೆ ರಾಜೀನಾಮೆ
![Bantwal ಹಳೆಯ ದ್ವೇಷಕ್ಕೆ ಬೆಂಕಿಗಾಹುತಿಯಾಯಿತು ಸ್ನೇಹಿತನ ಬೈಕ್ ….](https://www.udayavani.com/wp-content/uploads/2024/06/BIKE-BANTWAL-150x104.jpg)
Bantwal ಸ್ನೇಹಿತರಿಬ್ಬರ ದ್ವೇಷ; ಅಮಾಯಕ ಯುವಕನ ಬೈಕ್ ಭಸ್ಮ
![1-dharwad](https://www.udayavani.com/wp-content/uploads/2024/06/1-dharwad-150x84.jpg)
Dharwad; ನೇಚರ್ ವ್ಯೂ ಫೋಟೋಗ್ರಫಿ, ರೀಲ್ಸ್ ಗೆ 16 ರ ಬಾಲಕರಿಬ್ಬರು ಬಲಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.