Ireland T20 Series ಇಂದಿನಿಂದ : ಭಾರತದ ‘ತೃತೀಯ ತಂಡ’ದ ಸಾಮರ್ಥ್ಯ ಪರೀಕ್ಷೆ


Team Udayavani, Aug 18, 2023, 7:00 AM IST

1-wqeqewq

ಡಬ್ಲಿನ್‌: ವೆಸ್ಟ್‌ ಇಂಡೀಸ್‌ ಪ್ರವಾಸ ಮುಗಿಸಿದ ಟೀಮ್‌ ಇಂಡಿ ಯಾದ ಬಹುತೇಕ ಸದಸ್ಯರು ತವರಿಗೆ ಮರಳಿದರೆ, ಇತ್ತ ಭಾರತದ ಮತ್ತೂಂದು ತಂಡ ಐರ್ಲೆಂಡ್‌ಗೆ ಬಂದಿಳಿದಿದೆ. 3 ಪಂದ್ಯಗಳ ಟಿ20 ಸರಣಿಗೆ ಅಣಿಯಾಗಿದೆ. ಮೊದಲ ಮುಖಾಮುಖಿ ಶುಕ್ರವಾರ ನಡೆಯಲಿದೆ.

ಹಾಗೆ ನೋಡಹೋದರೆ ಎರಡು ಪ್ರಮುಖ ಕಾರಣಗಳಿಗಾಗಿ ಭಾರೀ ನಿರೀಕ್ಷೆ ಮೂಡಿಸಿದ ಸರಣಿ ಇದು. ಯಾರ್ಕರ್‌ ಸ್ಪೆಷಲಿಸ್ಟ್‌ ಜಸ್‌ಪ್ರೀತ್‌ ಬುಮ್ರಾ 11 ತಿಂಗಳ ಬಳಿಕ ಫಿಟ್‌ ಆಗಿ ತಂಡಕ್ಕೆ ಮರಳಿದ್ದಾರೆ. ಅಷ್ಟೇ ಅಲ್ಲ, ನಾಯಕತ್ವವನ್ನೂ ವಹಿಸಿದ್ದಾರೆ. ಇವರ ಫಿಟ್‌ನೆಸ್‌ ಮತ್ತು ಬೌಲಿಂಗ್‌ ಫಾರ್ಮ್ ಹೇಗಿದೆ ಎಂಬುದನ್ನು ಅರಿಯಬೇಕಾಗಿದೆ. ಮುಂಬರುವ ಏಷ್ಯಾ ಕಪ್‌, ಏಷ್ಯಾಡ್‌ ಹಾಗೂ ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯ ಹಿನ್ನೆಲೆಯಲ್ಲಿ ಬುಮ್ರಾ ಫಾರ್ಮ್ ಭಾರತದ ಪಾಲಿಗೆ ನಿರ್ಣಾಯಕ. ಬುಮ್ರಾ ಕ್ಲಿಕ್‌ ಆದರೆ ತಂಡವೇ ಕ್ಲಿಕ್‌ ಆದಂತೆ ಎನ್ನಲಡ್ಡಿಯಿಲ್ಲ.

ಇವರಂತೆಯೇ ಕರ್ನಾಟಕದ ಪೇಸರ್‌ ಪ್ರಸಿದ್ಧ್ ಕೃಷ್ಣ ಪಾಲಿಗೂ ಇದು ಪುನರಾಗಮನ ಸರಣಿಯಾಗಿದೆ. ಇವರ ಫಾರ್ಮ್ ಕೂಡ ನಿರ್ಣಾಯಕ. ಹಾಗೆಯೇ ಐರ್ಲೆಂಡ್‌ಗೆ ಬಂದಿರು ವುದು ಭಾರತದ “ನೆಕ್ಸ್ಟ್ ಜೆನ್‌ ಸ್ಟಾರ್‌ ಟೀಮ್‌’. ಅಂದರೆ ಮುಂದಿನ ಜನರೇಶನ್‌ನ ಮತ್ತೂಂದು ತಂಡ. ಈಗಾಗಲೇ ಹಾರ್ದಿಕ್‌ ಪಾಂಡ್ಯ ನೇತೃತ್ವದ ಟಿ20 ತಂಡ ವೆಸ್ಟ್‌ ಇಂಡೀಸ್‌ ಕೈಯಲ್ಲಿ ಅಪರೂಪದ ಸರಣಿ ಸೋಲುಂಡ ಬೆನ್ನಲ್ಲೇ ಬುಮ್ರಾ ಸಾರಥ್ಯದ ಮತ್ತೂಂದು ತಂಡ ಅಂತಾರಾಷ್ಟ್ರೀಯ ಸರಣಿಗೆ ಸಜ್ಜಾಗಿದೆ. ವಿಂಡೀಸ್‌ ವಿರುದ್ಧ ಆಡಿದ ಯಶಸ್ವಿ ಜೈಸ್ವಾಲ್‌, ಸಂಜು ಸ್ಯಾಮ್ಸನ್‌, ತಿಲಕ್‌ ವರ್ಮ, ರವಿ ಬಿಷ್ಣೋಯಿ, ಆರ್ಷದೀಪ್‌ ಸಿಂಗ್‌, ಮುಕೇಶ್‌ ಕುಮಾರ್‌ ಅವರೆಲ್ಲ ಐರ್ಲೆಂಡ್‌ ಸರಣಿಯಲ್ಲೂ ಆಡಲಿದ್ದಾರೆ. ಇವರಿಗೆಲ್ಲ ಇದು ಇನ್ನೊಂದು ಅವಕಾಶ ಎನ್ನಲಡ್ಡಿಯಿಲ್ಲ.

ಉಳಿದಂತೆ ರುತುರಾಜ್‌ ಗಾಯ ಕ್ವಾಡ್‌, ರಿಂಕು ಸಿಂಗ್‌, ಜಿತೇಶ್‌ ಶರ್ಮ, ವಾಷಿಂಗ್ಟನ್‌ ಸುಂದರ್‌, ಶಾಬಾಜ್‌ ಅಹ್ಮದ್‌ ಮೊದಲಾದವರೆಲ್ಲ ತಮಗೆ ಲಭಿಸಿದ ಅವಕಾಶವನ್ನು ಬಾಚಿಕೊಳ್ಳ ಬೇಕಾದ ಅಗತ್ಯವಿದೆ. ಇವರಲ್ಲಿ ಜಿತೇಶ್‌, ರಿಂಕು ಟೀಮ್‌ ಇಂಡಿಯಾ ಕ್ಯಾಪ್‌ ಧರಿಸುವುದು ಖಚಿತ. ಒಂದು ರೀತಿಯಲ್ಲಿ ಹೇಳುವು ದಾದರೆ ಇಂಥ ಬೇರೆ ಬೇರೆ ತಂಡಗಳಿಂದ ನಮ್ಮ ಕ್ರಿಕೆಟಿ ಗರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ ಆಡುವ ಅವಕಾಶ ವೇನೋಸಿಗುತ್ತದೆ. ಆದರೆ ಇಂಥ ಪ್ರಯೋಗಗಳಿಂದ ಬಲಿಷ್ಠ ತಂಡವೊಂದನ್ನು ಕಟ್ಟಲು ಎಷ್ಟರ ಮಟ್ಟಿಗೆ ಸಾಧ್ಯ ಎಂಬುದು ಪ್ರಶ್ನೆಯಾಗಿಯೇ ಉಳಿಯುತ್ತದೆ. ಮುಂದಿನ ವರ್ಷದ ಟಿ20 ವಿಶ್ವಕಪ್‌ ಸಮೀಪಿಸುವ ಹೊತ್ತಿಗೆ ಸಶಕ್ತ ತಂಡವೊಂದನ್ನು ಕಟ್ಟುವ ಭಾರತದ ಯೋಜನೆ ಫ‌ಲಪ್ರದವಾದೀತೇ ಎಂಬುದು ಯೋಚಿಸಬೇಕಾದ ಸಂಗತಿ.

ಈ ವಾರದ ಅಂತ್ಯಕ್ಕೆ ಭಾರತದ ಏಷ್ಯಾ ಕಪ್‌ ತಂಡ ಪ್ರಕಟಗೊ ಳ್ಳುವ ನಿರೀಕ್ಷೆ ಇದ್ದು, ಐರ್ಲೆಂಡ್‌ಗೆ ತೆರಳಿದ 3-4 ಮಂದಿಗಷ್ಟೇ ಸ್ಥಾನ ಲಭಿಸ ಬಹುದೆಂಬುದು ಮೇಲ್ನೋಟಕ್ಕೆ ಗೋಚರಿಸುವ ಸಂಗತಿ.

ಐರ್ಲೆಂಡ್‌ ಹೆಚ್ಚು ಬಲಿಷ್ಠ
ಭಾರತದ ಈಗಿನ ತರುಣರ ತಂಡ ಕ್ಕಿಂತ ಐರ್ಲೆಂಡ್‌ ತಂಡವೇ ಹೆಚ್ಚು ಬಲಿಷ್ಠ ಎಂಬುದರಲ್ಲಿ ಎರಡು ಮಾತಿಲ್ಲ. ಅಲ್ಲದೇ ಅದಕ್ಕೆ ತವರಿನ ಲಾಭವೂ ಇದೆ. ಹಿಂದಿನೆರಡು ಸರಣಿಗಳ ವೇಳೆ ವೈಟ್‌ವಾಶ್‌ ಕಳಂಕ ಮೆತ್ತಿಕೊಂಡಿದ್ದ ಐರ್ಲೆಂಡ್‌, ಈ ಬಾರಿ ಯಾವ ಕಾರಣಕ್ಕೂ ಸೋಲಿನ ಫ‌ಲಿತಾಂಶವನ್ನು ಪುನರಾವರ್ತಿಸದಿರಲು ಪಣತೊಟ್ಟಿದೆ.

ಆ್ಯಂಡ್ರೂé ಬಾಲ್ಬಿರ್ನಿ ಪಡೆಯಲ್ಲಿ ಬಹಳಷ್ಟು ಮಂದಿ ಟಿ20 ಸ್ಪೆಷಲಿಸ್ಟ್‌ ಆಟ ಗಾರರಿದ್ದಾರೆ. ಹ್ಯಾರಿ ಟೆಕ್ಟರ್‌, ಲೋರ್ಕನ್‌ ಟ್ಯುಕರ್‌, ಎಡಗೈ ಸ್ಪಿನ್ನರ್‌ ಜಾರ್ಜ್‌ ಡಾಕ್ರೆಲ್‌, ಎಡಗೈ ಸೀಮರ್‌ ಜೋಶ್‌ ಲಿಟ್ಲ ಹೆಚ್ಚು ಅಪಾಯಕಾರಿಗಳು.

ಭಾರತ: ಜಸ್‌ಪ್ರೀತ್‌ ಬುಮ್ರಾ (ನಾಯಕ), ರುತುರಾಜ್‌ ಗಾಯಕ್ವಾಡ್‌ (ಉಪನಾಯಕ), ಯಶಸ್ವಿ ಜೈಸ್ವಾಲ್‌, ತಿಲಕ್‌ ವರ್ಮ, ರಿಂಕು ಸಿಂಗ್‌, ಸಂಜು ಸ್ಯಾಮ್ಸನ್‌, ಜಿತೇಶ್‌ ಶರ್ಮ, ಶಿವಂ ದುಬೆ, ವಾಷಿಂಗ್ಟನ್‌ ಸುಂದರ್‌, ಶಾಬಾಜ್‌ ಅಹ್ಮದ್‌, ರವಿ ಬಿಷ್ಣೋಯಿ, ಪ್ರಸಿದ್ಧ್ ಕೃಷ್ಣ, ಅರ್ಷದೀಪ್‌ ಸಿಂಗ್‌, ಮುಕೇಶ್‌ ಕುಮಾರ್‌,
ಆವೇಶ್‌ ಖಾನ್‌.

ಐರ್ಲೆಂಡ್‌: ಆ್ಯಂಡ್ರ್ಯೂ ಬಾಲ್ಬಿರ್ನಿ (ನಾಯಕ), ಹ್ಯಾರಿ ಟೆಕ್ಟರ್‌, ಲೋರ್ಕನ್‌ ಟ್ಯುಕರ್‌, ರಾಸ್‌ ಅಡೈರ್‌, ಕರ್ಟಿಸ್‌ ಕ್ಯಾಂಫ‌ರ್‌, ಗ್ಯಾರೆತ್‌ ಡೆಲಾನಿ, ಜಾರ್ಜ್‌ ಡಾಕ್ರೆಲ್‌, ಫಿಯಾನ್‌ ಹ್ಯಾಂಡ್‌, ಜೋಶ್‌ ಲಿಟ್ಲ, ಬ್ಯಾರಿ ಮೆಕಾರ್ಥಿ, ಬೆನ್‌ ವೈಟ್‌, ಕ್ರೆಗ್‌ ಯಂಗ್‌, ಥಿಯೊ ವಾನ್‌ ವೇರ್ಕಾಮ್‌.

ಟಾಪ್ ನ್ಯೂಸ್

raghu bhat

Congress ಗಾಡ್ ಫಾದರ್ ಸಂಸ್ಕೃತಿ ಬಿಜೆಪಿಗೆ ಬಂದಿದೆ: ರಘುಪತಿ ಭಟ್

1-asasa

Cat ರಕ್ಷಣೆಗೆ ಭಾರೀ ಕಾರ್ಯಾಚರಣೆ ; ಕೊನೆಗೆ ಆಗಿದ್ದೆ ಬೇರೆ!: ವೈರಲ್ ವಿಡಿಯೋ ನೋಡಿ

priyanka-gandhi

Priyanka Gandhi ಯಾಕೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ; ಇಲ್ಲಿದೆ ಅವರೇ ಕೊಟ್ಟ ಉತ್ತರ

Swati Maliwal Assault Case: ಕೇಜ್ರಿವಾಲ್ ಸಹಾಯಕ ಬಿಭವ್ ಕುಮಾರ್ ಬಂಧನ

Swati Maliwal Assault Case: ಕೇಜ್ರಿವಾಲ್ ಸಹಾಯಕ ಬಿಭವ್ ಕುಮಾರ್ ಬಂಧನ

Hubli; ಅಂಜಲಿ ಹಂತಕ ಗಿರೀಶನ ಮೇಲೆ ಮತ್ತೊಂದು ಪ್ರಕರಣ ದಾಖಲು

Hubli; ಅಂಜಲಿ ಹಂತಕ ಗಿರೀಶನ ಮೇಲೆ ಮತ್ತೊಂದು ಪ್ರಕರಣ ದಾಖಲು

Smiling Buddha; ಬುದ್ಧ ನಕ್ಕ ಗಳಿಗೆಗೆ ಸ್ವರ್ಣ ಸಂಭ್ರಮ; ಮೊದಲ ಪರಮಾಣು ಪರೀಕ್ಷೆಗೆ 50 ವರ್ಷ

Smiling Buddha; ಬುದ್ಧ ನಕ್ಕ ಗಳಿಗೆಗೆ ಸ್ವರ್ಣ ಸಂಭ್ರಮ; ಮೊದಲ ಪರಮಾಣು ಪರೀಕ್ಷೆಗೆ 50 ವರ್ಷ

Agra: ಆಗ್ರಾದಲ್ಲಿ ತಲೆ ಎತ್ತಿದೆ ತಾಜ್‌ ಮಹಲ್‌ ಪ್ರತಿಸ್ಪರ್ಧಿ

Agra: ಆಗ್ರಾದಲ್ಲಿ ತಲೆ ಎತ್ತಿದೆ ತಾಜ್‌ ಮಹಲ್‌ ಪ್ರತಿಸ್ಪರ್ಧಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

RCB (2)

RCB ಭವಿಷ್ಯ ಮಳೆಯ ಕೈಯಲ್ಲಿ

1-asdad

Cricket; ಭಾರತ ತಂಡಕ್ಕೆ ಗೌತಮ್‌ ಗಂಭೀರ್‌ ಕೋಚ್‌?

1-wewqwqe

Usain Bolt; ನನ್ನ ದಾಖಲೆಗಳಿಗೆ ಸದ್ಯ ಯಾವುದೇ ಗಂಡಾಂತರವಿಲ್ಲ

1—–ewqeqwe

Sunil Chhetri; ಬೆಂಗಳೂರು ಎಫ್ಸಿ ಪರ ಆಡುವೆ

1-reee

Chess: ಸೋತ ಕಾರಣಕ್ಕೆ ಕಂಪ್ಯೂಟರ್‌ ಸ್ಕ್ರೀನ್‌ ಒಡೆದ ಕಾರ್ಲ್ಸನ್‌

MUST WATCH

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

ಹೊಸ ಸೇರ್ಪಡೆ

raghu bhat

Congress ಗಾಡ್ ಫಾದರ್ ಸಂಸ್ಕೃತಿ ಬಿಜೆಪಿಗೆ ಬಂದಿದೆ: ರಘುಪತಿ ಭಟ್

Vikasa parva Kannada movie

Kannada Movie; ಸೆನ್ಸಾರ್ ಪಾಸಾದ ‘ವಿಕಾಸ ಪರ್ವ’

1-asasa

Cat ರಕ್ಷಣೆಗೆ ಭಾರೀ ಕಾರ್ಯಾಚರಣೆ ; ಕೊನೆಗೆ ಆಗಿದ್ದೆ ಬೇರೆ!: ವೈರಲ್ ವಿಡಿಯೋ ನೋಡಿ

priyanka-gandhi

Priyanka Gandhi ಯಾಕೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ; ಇಲ್ಲಿದೆ ಅವರೇ ಕೊಟ್ಟ ಉತ್ತರ

Biography of Mother Teresa in web series

Mother Teresa; ವೆಬ್‌ ಸೀರೀಸ್‌ನಲ್ಲಿ ಮದರ್‌ ತೆರೇಸಾ ಜೀವನ ಚರಿತ್ರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.