US Open; ಮೊದಲ ಸುತ್ತಲ್ಲೇ ಮುಗ್ಗರಿಸಿದ ವೀನಸ್‌ ವಿಲಿಯಮ್ಸ್‌


Team Udayavani, Aug 30, 2023, 11:38 PM IST

1-wqewq

ನ್ಯೂಯಾರ್ಕ್‌: ಆತಿಥೇಯ ದೇಶದ 43 ವರ್ಷದ ಆಟಗಾರ್ತಿ ವೀನಸ್‌ ವಿಲಿಯಮ್ಸ್‌ ಮೊದಲ ಸುತ್ತಿನಲ್ಲೇ ಸೋಲನುಭವಿಸಿ ಯುಎಸ್‌ ಓಪನ್‌ ಕೂಟದಿಂದ ನಿರ್ಗಮಿಸಿದ್ದಾರೆ. ಬಹುಶಃ ಇದು ಅವರ ಕೊನೆಯ ಗ್ರ್ಯಾನ್‌ಸ್ಲಾಮ್‌ ಪಂದ್ಯವಾಗಿರಲೂಬಹುದು ಎಂದು ಭಾವಿಸಿದ ವೀಕ್ಷಕರು ಎದ್ದು ನಿಂತು ಗೌರವ ಸಲ್ಲಿಸಿದರು.

2000 ಮತ್ತು 2001ರ ಚಾಂಪಿಯನ್‌ ಆಗಿರುವ ವೀನಸ್‌ ವಿಲಿಯಮ್ಸ್‌ “ಆರ್ಥರ್‌ ಆ್ಯಶ್‌ ಸ್ಟೇಡಿಯಂ’ನಲ್ಲಿ ತವರಿನ ಕೂಟದ 100ನೇ ಪಂದ್ಯ ಆಡಲಿಳಿದಿದ್ದರು. ಎದುರಾಳಿ ಬೆಲ್ಜಿಯಂನ ಅರ್ಹತಾ ಆಟಗಾರ್ತಿ ಗ್ರೀಟ್‌ ಮಿನ್ನೆನ್‌. ಇವರು 6-1, 6-1 ಅಂತರದಿಂದ ವೀನಸ್‌ ಅವರನ್ನು ಬಗ್ಗುಬಡಿದರು. ಇಲ್ಲಿ ಆಡಲಾದ ಮೊದಲ ಸುತ್ತಿನ 22 ಪಂದ್ಯಗಳಲ್ಲಿ ವೀನಸ್‌ ಅನುಭವಿಸಿದ ಮೊದಲ ಸೋಲು ಇದಾಗಿದೆ. 26 ವರ್ಷದ ಗ್ರೀಟ್‌ ಮಿನ್ನೆನ್‌ ಕುರಿತು ಹೇಳುವುದಾದರೆ, ವೀನಸ್‌ ವಿಲಿಯಮ್ಸ್‌ ಯುಎಸ್‌ ಓಪನ್‌ನಲ್ಲಿ ಮೊದಲ ಸಲ ಫೈನಲ್‌ ತಲುಪಿದ ವೇಳೆ (1997) ಮಿನ್ನೆನ್‌ ಕೇವಲ ಒಂದು ತಿಂಗಳ ಶಿಶು!

ಪೆಗುಲಾ, ಕೀಸ್‌ ಮುನ್ನಡೆ
3ನೇ ಶ್ರೇಯಾಂಕದ ಜೆಸ್ಸಿಕಾ ಪೆಗುಲಾ, ಮಾಜಿ ಫೈನಲಿಸ್ಟ್‌ ಮ್ಯಾಡಿಸನ್‌ ಕೀಸ್‌ ದ್ವಿತೀಯ ಸುತ್ತಿಗೆ ಮುನ್ನಡೆದಿದ್ದಾರೆ. ಮಾಂಟ್ರಿಯಲ್‌ ಪ್ರಶಸ್ತಿ ಗೆದ್ದು ಇಲ್ಲಿ ಆಡಲಿಳಿದ ಪೆಗುಲಾ 6-2, 6-2 ಅಂತರದಿಂದ ಇಟಲಿಯ ಕ್ಯಾಮಿಲಾ ಜಾರ್ಜಿ ಅವರನ್ನು ಮಣಿಸಿದರು, ಕೀಸ್‌ ನೆದರ್ಲೆಂಡ್ಸ್‌ನ
ಅರಾಂತ್ಸಾ ರುಸ್‌ ವಿರುದ್ಧ 6-2, 6-4ರಿಂದ ಗೆದ್ದು ಬಂದರು. ಆದರೆ ಫ್ರಾನ್ಸ್‌ನ 7ನೇ ಶ್ರೇಯಾಂಕಿತೆ ಕ್ಯಾರೋಲಿನ್‌ ಗಾರ್ಸಿಯಾ ಚೀನದ ಅರ್ಹತಾ ಆಟಗಾರ್ತಿ ಯಫಾನ್‌ ವಾಂಗ್‌ ವಿರುದ್ಧ 4-6, 1-6 ಅಂತರದ ಆಘಾತಕಾರಿ ಸೋಲನುಭವಿಸಿದರು.

ಅಲ್ಕರಾಜ್‌ ಎದುರಾಳಿ ಗಾಯಾಳು
ಜರ್ಮನ್‌ ಎದುರಾಳಿ ಡೊಮಿನಿಕ್‌ ಕೋಫ‌ರ್‌ ಗಾಯಾಳಾದ ಕಾರಣ ಹಾಲಿ ಚಾಂಪಿಯನ್‌ ಕಾರ್ಲೋಸ್‌ ಅಲ್ಕರಾಜ್‌ ಸುಲಭದಲ್ಲಿ ಮೊದಲ ಸುತ್ತು ದಾಟಿದರು. ಕೋಫ‌ರ್‌ ಪಾದದ ನೋವಿಗೊಳಗಾಗಿ ಪಂದ್ಯ ತ್ಯಜಿಸಿದರು. ಆಗ ಅಲ್ಕರಾಜ್‌ 6-2, 3-2 ಮುನ್ನಡೆಯಲ್ಲಿದ್ದರು. ಇವರ ಮುಂದಿನ ಎದುರಾಳಿ ದಕ್ಷಿಣ ಆಫ್ರಿಕಾ ಲಾಯ್ಡ ಹ್ಯಾರಿಸ್‌.

ಕೂಟದ ನೆಚ್ಚಿನ ಆಟಗಾರ ಡ್ಯಾನಿಲ್‌ ಮಡ್ವೆಡೇವ್‌ ಸುಲಭದಲ್ಲಿ ಮೊದಲ ಸುತ್ತು ದಾಟಿದ್ದಾರೆ. 3ನೇ ಶ್ರೇಯಾಂಕದ ಅವರು 6-1, 6-1, 6-0 ಅಂತರದಿಂದ ಆ್ಯಟಿಲ್ಲ ಬಲಾಝ್ ವಿರುದ್ಧ ಮೇಲುಗೈ ಸಾಧಿಸಿದರು. 2012ರ ಚಾಂಪಿಯನ್‌ ಆ್ಯಂಡಿ ಮರ್ರೆ 6-2, 7-5, 6-3ರಿಂದ ಕಾರೆಂಟೀನ್‌ ಮೌಟೆಟ್‌ ಅವರನ್ನು; 2016ರ ವಿಜೇತ ಸ್ಟಾನಿಸ್ಲಾಸ್‌ ವಾವ್ರಿಂಕ 7-6 (7-5), 6-4, 6-4 ಅಂತರದಿಂದ ಜಪಾನ್‌ನ ಯೊಶಿಹಿಟೊ ನಿಶಿಯೋಕ ಅವರನ್ನು ಮಣಿಸಿದರು.

ಕಶನೋವ್‌ಗೆ ಆಘಾತ
ಕಳೆದ ವರ್ಷದ ಸೆಮಿಫೈನಲಿಸ್ಟ್‌ ಕರೆನ್‌ ಕಶನೋವ್‌ ಆಘಾತಕಾರಿ ಸೋಲು ದ್ವಿತೀಯ ದಿನದ ಬಿಗ್‌ ಅಪ್‌ಸೆಟ್‌ ಎನಿಸಿತು. ಅಮೆರಿಕದ ವೈಲ್ಡ್‌ಕಾರ್ಡ್‌ ಆಟಗಾರ ಮೈಕಲ್‌ ಮೋಹ್‌ 6-2, 6-4, 6-2ರಿಂದ ಈ ಪಂದ್ಯ ಗೆದ್ದರು. ಅಲೆಕ್ಸಾಂಡರ್‌ ಜ್ವೆರೇವ್‌, ಕಾಮ್‌ ನೂರಿ ಮೊದಲ ಸುತ್ತು ದಾಟಿದ ಇತರ ಶ್ರೇಯಾಂಕಿತ ಆಟಗಾರರು.

ಟಾಪ್ ನ್ಯೂಸ್

Gangavati; ಕಿಷ್ಕಿಂಧಾ ಅಂಜನಾದ್ರಿ ಹುಂಡಿಯಲ್ಲಿ 30.21 ಲಕ್ಷ ರೂ.ಸಂಗ್ರಹ

Gangavati; ಕಿಷ್ಕಿಂಧಾ ಅಂಜನಾದ್ರಿ ಹುಂಡಿಯಲ್ಲಿ 30.21 ಲಕ್ಷ ರೂ.ಸಂಗ್ರಹ

Kottigehara ನಿಯಂತ್ರಣ ತಪ್ಪಿ ಆಟೋ ರಿಕ್ಷಾ ಪಲ್ಟಿ; ಚಾಲಕ ಮೃತ್ಯು

Kottigehara ನಿಯಂತ್ರಣ ತಪ್ಪಿ ಆಟೋ ರಿಕ್ಷಾ ಪಲ್ಟಿ; ಚಾಲಕ ಮೃತ್ಯು

Udupi: ಉಡುಪಿ ಪತ್ರಕರ್ತರಿಗೆ ‘ಪೋಕ್ಸೊ ಕಾಯಿದೆ ಮತ್ತು ಮಾಧ್ಯಮ’ ಕಾರ್ಯಾಗಾರ

Udupi: ಉಡುಪಿ ಪತ್ರಕರ್ತರಿಗೆ ‘ಪೋಕ್ಸೊ ಕಾಯಿದೆ ಮತ್ತು ಮಾಧ್ಯಮ’ ಕಾರ್ಯಾಗಾರ

Mandagadde; ಓವರ್ ಟೆಕ್ ಮಾಡಲು ಹೋಗಿ ಮರಕ್ಕೆ ಡಿಕ್ಕಿ ಹೊಡೆದ ಬಸ್ ; ಹಲವರಿಗೆ ಗಾಯ !

Mandagadde; ಓವರ್ ಟೆಕ್ ಮಾಡಲು ಹೋಗಿ ಮರಕ್ಕೆ ಡಿಕ್ಕಿ ಹೊಡೆದ ಬಸ್ ; ಹಲವರಿಗೆ ಗಾಯ !

Athani; ಲಕ್ಷ್ಮಣ್ ಸವದಿ ಸಹಮಾಲಿಕತ್ವದ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಪೋಟ; ಮಹಿಳೆ ಸಾವು

Athani; ಲಕ್ಷ್ಮಣ್ ಸವದಿ ಸಹಮಾಲಿಕತ್ವದ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಪೋಟ; ಮಹಿಳೆ ಸಾವು

Sagara; ಹಸಿರುಮಕ್ಕಿ ಲಾಂಚ್‌ ಸೇವೆ ತಾತ್ಕಾಲಿಕ ಸ್ಥಗಿತ

Sagara; ಹಸಿರುಮಕ್ಕಿ ಲಾಂಚ್‌ ಸೇವೆ ತಾತ್ಕಾಲಿಕ ಸ್ಥಗಿತ

2nd PUC Exam-2 Result Declared; 35.25% students passed

2nd PUC ಪರೀಕ್ಷೆ-2 ಫಲಿತಾಂಶ ಪ್ರಕಟ; ಶೇ. 35.25 ವಿದ್ಯಾರ್ಥಿಗಳು ಉತ್ತೀರ್ಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-adsadasdas

IPL ಮೊದಲ ಕ್ವಾಲಿಫೈಯರ್‌ ಇಂದು; ಕೆಕೆಆರ್‌-ಹೈದರಾಬಾದ್‌ ಬಿಗ್‌ ಹಿಟ್ಟರ್ ಫೈಟ್‌

pvs

Malaysia Masters ಬ್ಯಾಡ್ಮಿಂಟನ್‌ ; ಬ್ರೇಕ್‌ ಮುಗಿಸಿ ಆಡಲಿಳಿದ ಪಿ.ವಿ.ಸಿಂಧು

Rohan Bopanna

Paris Olympics; ಬಾಲಾಜಿ, ಭಾಂಬ್ರಿ: ಜತೆಗಾರನ ಹೆಸರು ಸೂಚಿಸಿದ ಬೋಪಣ್ಣ

1-wwewqe

Retirement ಬಗ್ಗೆ ಧೋನಿ ಏನೂ ಹೇಳಿಲ್ಲ: ಸಿಎಸ್‌ಕೆ

1-fff

Geneva Open ಟೆನಿಸ್‌: ಸುಮಿತ್‌ಗೆ ಸೋಲು

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

Gangavati; ಕಿಷ್ಕಿಂಧಾ ಅಂಜನಾದ್ರಿ ಹುಂಡಿಯಲ್ಲಿ 30.21 ಲಕ್ಷ ರೂ.ಸಂಗ್ರಹ

Gangavati; ಕಿಷ್ಕಿಂಧಾ ಅಂಜನಾದ್ರಿ ಹುಂಡಿಯಲ್ಲಿ 30.21 ಲಕ್ಷ ರೂ.ಸಂಗ್ರಹ

Kottigehara ನಿಯಂತ್ರಣ ತಪ್ಪಿ ಆಟೋ ರಿಕ್ಷಾ ಪಲ್ಟಿ; ಚಾಲಕ ಮೃತ್ಯು

Kottigehara ನಿಯಂತ್ರಣ ತಪ್ಪಿ ಆಟೋ ರಿಕ್ಷಾ ಪಲ್ಟಿ; ಚಾಲಕ ಮೃತ್ಯು

state’s state of education has deteriorated; N. Ravikumar

Bellary; ರಾಜ್ಯದ ಶಿಕ್ಷಣದ ಸ್ಥಿತಿ ಅಧೋಗತಿಗೆ ತಲುಪಿದೆ; ಎನ್.ರವಿಕುಮಾರ್

Udupi: ಉಡುಪಿ ಪತ್ರಕರ್ತರಿಗೆ ‘ಪೋಕ್ಸೊ ಕಾಯಿದೆ ಮತ್ತು ಮಾಧ್ಯಮ’ ಕಾರ್ಯಾಗಾರ

Udupi: ಉಡುಪಿ ಪತ್ರಕರ್ತರಿಗೆ ‘ಪೋಕ್ಸೊ ಕಾಯಿದೆ ಮತ್ತು ಮಾಧ್ಯಮ’ ಕಾರ್ಯಾಗಾರ

Mandagadde; ಓವರ್ ಟೆಕ್ ಮಾಡಲು ಹೋಗಿ ಮರಕ್ಕೆ ಡಿಕ್ಕಿ ಹೊಡೆದ ಬಸ್ ; ಹಲವರಿಗೆ ಗಾಯ !

Mandagadde; ಓವರ್ ಟೆಕ್ ಮಾಡಲು ಹೋಗಿ ಮರಕ್ಕೆ ಡಿಕ್ಕಿ ಹೊಡೆದ ಬಸ್ ; ಹಲವರಿಗೆ ಗಾಯ !

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.