Hunagund: ನಿಯಮ ಪಾಲಿಸದೇ ರಸ್ತೆ ತಡೆ ನಿರ್ಮಾಣ


Team Udayavani, Dec 3, 2023, 1:03 PM IST

Hunagund: ನಿಯಮ ಪಾಲಿಸದೇ ರಸ್ತೆ ತಡೆ ನಿರ್ಮಾಣ

ಹುನಗುಂದ: ಪಟ್ಟಣ ಪ್ರವೇಶಿಸುವ ರಸ್ತೆ ಹಾಗೂ ಒಳ ರಸ್ತೆಗಳಲ್ಲಿ ನಿರ್ಮಿಸಿರುವ ರಸ್ತೆ ತಡೆ (ಹಂಪ್ಸ್‌)ಗಳಲ್ಲಿ ಸರ್ಕಾರ ನಿಯಮ ಪಾಲನೆಯಾಗದೇ ಇರುವುದರಿಂದ ವಾಹನ ಸವಾರರು ತೊಂದರೆ ಅನುಭವಿಸುವಂತಾಗಿದೆ.

ಹುನಗುಂದ ಪಟ್ಟಣ ಪ್ರಮುಖ ಸ್ಥಳವಾಗಿದ್ದು ರಾಜ್ಯ ಹೆದ್ದಾರಿ ಹಾದು ಹೋಗಿರುವುದರಿಂದ ವಾಹನಗಳ ಸಂಚಾರ ಹೆಚ್ಚಿದೆ. ರಾಷ್ಟ್ರೀಯ ಹೆದ್ದಾರಿಯಿಂದ ಸೇವಾ ರಸ್ತೆ ಮೂಲಕ ಬಾಗಲಕೋಟೆಯಿಂದ ಪಟ್ಟಣ ಪ್ರವೇಶಿಸುವ ಮತ್ತು ಐತಿಹಾಸಿಕ ಸ್ಥಳ ಕೂಡಲಸಂಗಮದಿಂದ ಹುನಗುಂದ ಪ್ರವೇಶಿಸುವಾಗ ಎಲ್ಲ ಕಡೆಗಳಲ್ಲಿ ರಸ್ತೆ ತಡೆ ನಿರ್ಮಿಸಲಾಗಿದೆ. ಆದರೆ ಸಾರಿಗೆ ಇಲಾಖೆ ನಿಯಮಗಳು ಪಾಲನೆಯಾಗಿಲ್ಲ. ಎಚ್ಚರಿಕೆ, ಬಣ್ಣದ ಬೋರ್ಡ್‌ ಹೀಗೆ ಸವಾರನಿಗೆ ರಸ್ತೆ ಸಾಗುವ ನಿಯಮಗಳೇ ಕಾಣುತ್ತಿಲ್ಲ.

ಉದಾಹರಣೆಗೆ ಇಲ್ಲಿನ ತಾಲೂಕು ಆಡಳಿತ ಮಿನಿ ವಿಧಾನಸೌಧ ಮುಂದೆ ಎರಡೂ ಬದಿ ಕಡೆ ರಸ್ತೆ ತಡೆ ಹಾಕಲಾಗಿದೆ. ಅವುಗಳಿಗೆ ಕಾನೂನಿನಂತೆ ಬಿಳಿ ಬಣ್ಣದ ಪಟ್ಟಿ ಇಲ್ಲದೆ ಇರುವುದರಿಂದ ಅದು ಸವಾರರಿಗೆ ಕಾಣಿಸದೆ ಈ ಸ್ಥಳದಲ್ಲಿ ಸಾಕಷ್ಟು ಅವಘಡಗಳು ಸಂಭವಿಸಿವೆ.

ಕೆಲವು ಸಲ ಸಣ್ಣಪುಟ್ಟ ಅಪಘಾತಗಳಾದರೆ, ಇನ್ನೂ ಕೆಲವು ಸಲ ತೀವ್ರತರ ಅಪಘಾತಗಳಾಗಿ ಆಸ್ಪತ್ರೆಗೆ ದಾಖಲಾದ ಉದಾಹರಣೆಗಳೂ ಉಂಟು. ಪ್ರತಿನಿತ್ಯ ಇಂತಹ ಘಟನೆಗಳು ನಡೆಯುತ್ತಿದ್ದರೂ ಅಧಿಕಾರಿಗಳು ಕಂಡೂ ಕಾಣದಂತಿದ್ದಾರೆ. ತಕ್ಷಣ ನಗರ ಪ್ರವೇಶಿಸುವ ಕಡೆ ಹಾಕಿರುವ ರಸ್ತೆಗಳಿಗೆ ಸಾರಿಗೆ ನಿಯಮದಂತೆ ಬೋರ್ಡ್‌ ಮತ್ತು ಬಣ್ಣ ಬಳಿಯಬೇಕಿದೆ.

ಹುನಗುಂದ ಪ್ರವೇಶಿಸುತ್ತಿರುವ ನಾಲ್ಕು ದಿಕ್ಕುಗಳಲ್ಲಿ ವಾಹನಗಳ ವೇಗ ನಿಯಂತ್ರಣಕ್ಕೆ ರಸ್ತೆತಡೆ ನಿರ್ಮಿಸಲಾಗಿದೆ. ನಿಯಮದಂತೆ ರಿಪ್ಲೆಕ್ಟರ್‌ ಅಳವಡಿಸಲು ಬಿಸಿಲಿನ ಪ್ರಖರತೆ ಕೊರತೆ ಇದ್ದುದರಿಂದ ತಡವಾಗಿದೆ. ಈ ಕುರಿತು ತಹಶೀಲ್ದಾರರು ಈಗಾಗಲೇ ತಿಳಿಸಿದ್ದಾರೆ. ಇಷ್ಟರಲ್ಲೆ ರಿಪ್ಲೆಕ್ಟರ್‌ ಅಳವಡಿಸಲಾಗುವುದು.
ವೆಂಕಟೇಶ ಹೂಲಗೇರಿ, ಪಿಡಬ್ಲ್ಯುಡಿ ಎಇಇ.

ಬಹುತೇಕ ಇಲಾಖೆ ಅಧಿಕಾರಿಗಳ ಕಾರ್ಯ ಚಟುವಟಿಕೆಯಲ್ಲಿ ನಿರ್ಲಕ್ಷ್ಯ ಮನೋಭಾವ ಎದ್ದು ಕಾಣುತ್ತಿದೆ. ಎಲ್ಲ ಇಲಾಖೆಗಳಲ್ಲಿ ಇರುವ ನಿರ್ಲಕ್ಷ್ಯದಿಂದ ಸಾರ್ವಜನಿಕರು ತಮ್ಮ ಕೆಲಸಕ್ಕೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
*ಕೃಷ್ಣ ಜಾಲಿಹಾಳ, ರೈತ ಮುಖಂಡ

*ವೀರೇಶ ಕುರ್ತಕೋಟಿ

ಟಾಪ್ ನ್ಯೂಸ್

6-pan

Liquid Nitrogen ಪಾನ್‌ ಸೇವಿಸಿ ಬಾಲಕಿ ಹೊಟ್ಟೆಯಲ್ಲಿ ರಂಧ್ರ

5-arrest

Arrest: ಬಾರ್‌ನಲ್ಲಿ ಮಾರಕಾಸ್ತ್ರ ತೋರಿಸಿ ಬೆದರಿಕೆ: ಇಬ್ಬ ರ ಸೆರೆ

4-bng

Bengaluru: ಶಾಸಕ ಮಹಾಂತೇಶ್‌ ಕೌಜಲಗಿ ಕಾರಿಗೆ ಡಿಕ್ಕಿ ಹೊಡೆದ ಚಾಲಕ ಸೆರೆ

3-bng

Road Mishap: ನೈಸ್‌ ರಸ್ತೆಯಲ್ಲಿ ಅಪರಿಚಿತ ವಾಹನ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಸಾವು

2-bng

Bengaluru ನಗರದಲ್ಲಿ ಮತ್ತೆ ರೇವ್‌ ಪಾರ್ಟಿ ನಶೆ

1-24-tuesday

Daily Horoscope: ಹೊಸ ವ್ಯವಹಾರ ಆರಂಭಿಸಲು ಚಿಂತನೆ, ಆರೋಗ್ಯ ತೃಪ್ತಿಕರ

Karnataka ಮೇಲ್ಮನೆ ಏರಲು ಮೂರು ಪಕ್ಷದಲ್ಲೂ ಪೈಪೋಟಿ

Karnataka ಮೇಲ್ಮನೆ ಏರಲು ಮೂರು ಪಕ್ಷದಲ್ಲೂ ಪೈಪೋಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-banahatti

Boys Drowned: ಬನಹಟ್ಟಿ ಕೆರೆಯಲ್ಲಿ ಮುಳುಗಿ ಇಬ್ಬರು ಬಾಲಕರು ಸಾವು      

Rabkavi-Banhatti; ರೋಹಿಣಿ ಮಳೆ ಒಲಿದರೆ ರೈತನ ಬಾಳೇ ಬಂಗಾರ

Rabkavi-Banhatti; ರೋಹಿಣಿ ಮಳೆ ಒಲಿದರೆ ರೈತನ ಬಾಳೇ ಬಂಗಾರ

6-rabakavi

Rabkavi Banhatti: ಶತಮಾನದ ಸೋಮವಾರಪೇಟೆ ಸಮಸ್ತ ದೈವ ಮಂಡಳಿಯ ಗರಡಿ ಮನೆ

3-mahalingapur

Mahalingpur: ತೆರಬಂಡಿ ಸ್ಪರ್ಧೆಯ ಹೋರಿ ದಾಖಲೆಯ 10.10 ಲಕ್ಷಕ್ಕೆ ಖರೀದಿಸಿದ ರೈತ

1-qweqwewqe

Rabkavi Banhatti: ಪ್ರಾಚೀನ ದೇವಸ್ಥಾನಕ್ಕೆ ಬೇಕಿದೆ ರಕ್ಷಣೆ

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

6-pan

Liquid Nitrogen ಪಾನ್‌ ಸೇವಿಸಿ ಬಾಲಕಿ ಹೊಟ್ಟೆಯಲ್ಲಿ ರಂಧ್ರ

5-arrest

Arrest: ಬಾರ್‌ನಲ್ಲಿ ಮಾರಕಾಸ್ತ್ರ ತೋರಿಸಿ ಬೆದರಿಕೆ: ಇಬ್ಬ ರ ಸೆರೆ

4-bng

Bengaluru: ಶಾಸಕ ಮಹಾಂತೇಶ್‌ ಕೌಜಲಗಿ ಕಾರಿಗೆ ಡಿಕ್ಕಿ ಹೊಡೆದ ಚಾಲಕ ಸೆರೆ

3-bng

Road Mishap: ನೈಸ್‌ ರಸ್ತೆಯಲ್ಲಿ ಅಪರಿಚಿತ ವಾಹನ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಸಾವು

2-bng

Bengaluru ನಗರದಲ್ಲಿ ಮತ್ತೆ ರೇವ್‌ ಪಾರ್ಟಿ ನಶೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.