Mangaluru ನಿಷೇಧಿತ ಮಾದಕ ವಸ್ತು ಸೇವನೆ: 6 ಯುವಕರ ಬಂಧನ
Team Udayavani, Dec 4, 2023, 8:47 PM IST
ಮಂಗಳೂರು: ಪೊಲೀಸರು ನಗರದ ವಿವಿಧೆಡೆ ಕಾರ್ಯಾಚರಣೆ ನಡೆಸಿ ನಿಷೇಧಿತ ಮಾದಕ ವಸ್ತು ಸೇವನೆ ಮಾಡಿದ 6 ಮಂದಿಯನ್ನು ಬಂಧಿಸಿ ಎನ್ಡಿಪಿಎಸ್ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಡಿ. 2ರಂದು ಸಂಜೆ ನಗರದ ಜೈಲು ರಸ್ತೆಯ ಬಳಿ ಅಮಲಿನಲ್ಲಿದ್ದಂತೆ ಕಂಡು ಬಂದ ಮುರುಡೇಶ್ವರದ ಶಶಾಂಕ್ ಜೈವಂತ್(21)ನನ್ನು ವಿಚಾರಿಸಿದಾಗ ಆತ ಮಾದಕ ವಸ್ತು ಸೇವನೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ.
ರಾತ್ರಿ 8 ಗಂಟೆಗೆ ಎಸ್ಡಿಎಂ ಕಾಲೇಜು ಬಳಿ ಡ್ರಗ್ಸ್ ಸೇವನೆ ಮಾಡಿದ್ದ ಅಳಕೆಯ ಸೂರ್ಯಪ್ರತಾಪ್ ಸಿಂಗ್(21)ನನ್ನು ಬಂಧಿಸಲಾಗಿದೆ. ರಾತ್ರಿ 8.30ಕ್ಕೆ ಕರಾವಳಿ ಮೈದಾನದ ಬಳಿ ಡ್ರಗ್ಸ್ ಸೇವಿಸಿದ್ದ ಬಾಗಲಕೋಟೆಯ ಯಮನೂರ್ (22) ಮತ್ತು ನಂದನ್(20)ನನ್ನು ಬಂಧಿಸಲಾಗಿದೆ.
ಸಂಜೆ 7.45ಕ್ಕೆ ಬಲ್ಮಠ ಗ್ರೌಂಡ್ ಬಳಿ ಡ್ರಗ್ಸ್ ಸೇವಿಸಿದ್ದ ಸುಂಕದಕಟ್ಟೆಯ ದೀಕ್ಷಿತ್ (27) ಮತ್ತು ಅಶೋಕ ನಗರದ ಭೀಮಣ್ಣ ಗೋಗಿ (24)ನನ್ನು ಬಂಧಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hasan: ಲೈಂಗಿಕ ದೌರ್ಜನ್ಯ ಪ್ರಕರಣ; 20 ದಿನಗಳ ನಂತರ ತವರಿಗೆ ಆಗಮಿಸಿದ ಎಚ್.ಡಿ.ರೇವಣ್ಣ
ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿದ್ದ ಪತ್ನಿ ಮೇಲೆ ಬ್ಲೇಡ್ನಿಂದ ಹಲ್ಲೆ ಮಾಡಿ ಪರಾರಿಯಾದ ಪತಿ
ಪತಿಯಿಂದಲೇ ಭೀಕರವಾಗಿ ಹತ್ಯೆಗೀಡಾದ ಸ್ಯಾಂಡಲ್ ವುಡ್ ನಟಿ, ಕಾಂಗ್ರೆಸ್ ಮುಖಂಡೆ
ಬಿಜೆಪಿಯವರು ಬಜೆಟ್ ಓದುವುದಿಲ್ಲ,ಅವರಿಗೆ ಎಕನಾಮಿಕ್ಸ್ ಗೊತ್ತಾಗುವುದಿಲ್ಲ: ಸಿಎಂ ಸಿದ್ದರಾಮಯ್ಯ
ಅಪಘಾತದಿಂದ ತೀವ್ರ ಗಾಯ: ಆಂಬ್ಯುಲೆನ್ಸ್ ಬರುವವರೆಗೆ ಸೆಲ್ಫಿಗೆ ಪೋಸ್ ಕೊಟ್ಟ ಯುವತಿಯರು.!