ತೀರ್ಥಹಳ್ಳಿ: ಶ್ರೀ ರಾಮೇಶ್ವರ ಕ್ಷೇತ್ರದಲ್ಲಿ ಎಳ್ಳಮಾವಾಸ್ಯೆ ಜಾತ್ರೆ: ಭಕ್ತರಿಂದ ತೀರ್ಥಸ್ನಾನ
Team Udayavani, Jan 11, 2024, 10:09 AM IST
ತೀರ್ಥಹಳ್ಳಿ: ಪುರಾಣ ಪ್ರಸಿದ್ಧ ಐತಿಹಾಸಿಕ ಹಿನ್ನೆಲೆ ಇರುವ ಶ್ರೀ ರಾಮೇಶ್ವರ ದೇವರ ಎಳ್ಳಮಾವಾಸ್ಯೆ ಜಾತ್ರೆ ಮಂಗಳವಾರದಿಂದ ಆರಂಭವಾಗಿದ್ದು ಗುರುವಾರ ತುಂಗಾನದಿ ಮಧ್ಯದಲ್ಲಿರುವ ಪರಶುರಾಮ ಕೊಂಡದಲ್ಲಿ ಸಾವಿರಾರು ಭಕ್ತರು ಸರದಿ ಸಾಲಿನಲ್ಲಿ ನಿಂತು ತೀರ್ಥ ಸ್ನಾನ ಮಾಡಿದರು.
ಗುರುವಾರ ನಸುಕಿನಲ್ಲಿ ಶ್ರೀ ರಾಮೇಶ್ವರ ದೇವರ ಪಲ್ಲಕ್ಕಿ ಉತ್ಸವ ನದಿ ದಡಕ್ಕೆ ಆಗಮಿಸಿ ರಾಮಕೊಂಡಕ್ಕೆ ಪೂಜೆ ಸಲ್ಲಿಸಿದ ನಂತರ ಭಕ್ತರು ನದಿಯಲ್ಲಿ ಮಿಂದು ಶ್ರೀ ರಾಮೇಶ್ವರ ದೇವರ ದರ್ಶನ ಪಡೆದು ಪುನೀತರಾದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಗೀತಾ ರಮೇಶ್ ಮತ್ತು ತೆಪ್ಪೋತ್ಸವ ಸಮಿತಿಯ ಸಂಚಾಲಕ ಸೊಪ್ಪುಗುಡ್ಡೆ ರಾಘವೇಂದ್ರ ತಹಸೀಲ್ದಾರ್ ಜಕ್ಕಣ್ಣ ಗೌಡರ್ ,ಪ ಪಂ ಸದಸ್ಯರಾದ ಸುಶೀಲಾ ಶೆಟ್ಟಿ ಹಾಗೂ ಜಾತ್ರಾ ಸಮಿತಿಯ ಸದಸ್ಯರು ಸೇರಿದಂತೆ ಸಾವಿರಾರು ಭಕ್ತರು ಉಪಸ್ಥಿತರಿದ್ದರು.
ಇತ್ತೀಚಿನ ಕೆಲವು ಬೆಳವಣಿಗೆ ಹಿನ್ನೆಲೆಯಲ್ಲಿ ಸುರಕ್ಷತೆಯ ದೃಷ್ಟಿಯಿಂದ ಡಿವೈಎಸ್ಪಿ ಗಜಾನನ ವಾಮನ ಸುತಾರ ಮಾರ್ಗದರ್ಶನದಲ್ಲಿ
ಬಿಗಿ ಪೋಲಿಸ್ ಬಂದೋಬಸ್ತ್ ಮಾಡಲಾಗಿತ್ತು.
ತೀರ್ಥ ಸ್ನಾನ ಎಂದರೆ ಏನು?
ಪರಶುರಾಮ ತಂದೆಯ ಆದೇಶದಂತೆ ತಾಯಿ ರೇಣುಕಾದೇವಿಯ ಶಿರಚ್ಛೇದನ ಮಾಡುತ್ತಾನೆ. ಆನಂತರ ಮಾತೃಹತ್ಯಾದೋಷದಿಂದ ತನ್ನ ಮುಕ್ತಿ
ಹೇಗೆಂದು ತಂದೆಯನ್ನೇ ಕೇಳುತ್ತಾನೆ. “ನೀನು ಕೊಡಲಿಯನ್ನು ಎಲ್ಲಾ ನದಿಗಳಲ್ಲಿಯೂ ಅದ್ದಿ ತೊಳೆಯತ್ತಾ ಹೋಗು. ನಿನ್ನ ಪರಶುವಿನಲ್ಲಿ
ಅಂಟಿದ ರಕ್ತದ ಕಲೆ ಪೂರ್ತಿ ತೊಳೆಯುತ್ತದೋ ಅಲ್ಲಿಗೆ ದೋಷ ಕಳೆದಂತೆ. ಆ ನೀರು ಪವಿತ್ರ ತೀರ್ಥವಾಗುತ್ತದೆ’ ಎಂದು ಜಮದಗ್ನಿ ಹೇಳುತ್ತಾನೆ.
ತಂದೆಯ ಮಾತಿನಂತೆ ಪರಶುರಾಮ ಸಂಚಾರ ಹೊರಟು ಎಲ್ಲಾ ನದಿ, ತೀರ್ಥಗಳಲ್ಲೂ ತನ್ನ ಪರಶುವನ್ನು ತೊಳೆದರೂ ಅದರಲ್ಲಿ ಅಡಗಿದ್ದ ಎಳ್ಳು
ಕಾಳಿನಷ್ಟು ರಕ್ತದ ಕಲೆ ಹಾಗೆಯೇ ಉಳಿಯಿತಂತೆ. ಕೊನೆಗೆ ತುಂಗೆಯ ಈ ಪ್ರದೇಶದಲ್ಲಿ ಕೊಡಲಿಯನ್ನು ತೊಳೆದಾಗ ಅದರಲ್ಲಿದ್ದ ಎಳ್ಳಿನ ಕಾಳಿನಷ್ಟು ಗಾತ್ರದ ಕಲೆ ಮಾಯವಾಯಿತಂತೆ. ಅದು ಮಾರ್ಗಶಿರ ಬಹುಳ ಅಮಾವಾಸ್ಯೆ.
ಪರಶುರಾಮನ ಮಾತೃಹತ್ಯಾದೋಷವನ್ನು ಪರಿಹಾರ ಮಾಡಿದ ಈ ತುಂಗಾ ನದಿಯಲ್ಲಿ ಸರ್ವಶಕ್ತಿಯೂ ಪ್ರವಹಿಸುತ್ತದೆ. ಜನರ ಪಾಪವನ್ನೆಲ್ಲಾ ತೊಳೆದು ಪುನೀತರನ್ನಾಗಿಸುತ್ತದೆ ಎಂಬ ಪ್ರತೀತಿಬೆಳೆಯಿತು. ಈ ಕಾರಣಕ್ಕಾಗಿ ಲಕ್ಷಾಂತರ ಜನರು ರಾಮಕೊಂಡದಲ್ಲಿ ಮುಳುಗಿ ತೀರ್ಥಸ್ನಾನ ಮಾಡಿ ಪಾವನರಾಗುತ್ತಾರೆ.
ಇದನ್ನೂ ಓದಿ: Bantwal: ಬೆಳಂಬೆಳಿಗ್ಗೆ ತಾಯಿ, ಮಗಳಿಗೆ ಚಾಕು ತೋರಿಸಿ ನಗನಗದು ದೋಚಿದ ಮುಸುಕುಧಾರಿಗಳು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gadag: ರಥೋತ್ಸವ ವೇಳೆ ರಥದ ಗಾಲಿಗೆ ಸಿಲುಕಿ ಇಬ್ಬರು ಭಕ್ತರು ಮೃತ್ಯು
Vedganga ನದಿಯಲ್ಲಿ ಮುಳುಗಿ ನಾಲ್ವರು ಮೃತ್ಯು:ಇಬ್ಬರು ಬೆಳಗಾವಿಯವರು
Congress ಗಾಡ್ ಫಾದರ್ ಸಂಸ್ಕೃತಿ ಬಿಜೆಪಿಗೆ ಬಂದಿದೆ: ರಘುಪತಿ ಭಟ್
ಅವ್ಯವಸ್ಥೆ… ಕಾಶಿಯಲ್ಲಿ ಕಾಲು ಸಂಕ- ಬಟ್ಟೆ ಒಗೆಯುವ ಕಲ್ಲಾಗಿದೆ ಕೆಳದಿ ಸಾಮ್ರಾಜ್ಯದ ಶಾಸನ
PU ಕಂಪ್ಯೂಟರ್ ಸೈನ್ಸ್, ಸೈಕಾಲಜಿಗೂ ಎನ್ಸಿಇಆರ್ಟಿ ಪಠ್ಯ
MUST WATCH
ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ
ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು
ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ
ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್ಪಟೇಲ್ ಹೇಳಿಕೆ
ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ
ಹೊಸ ಸೇರ್ಪಡೆ
Marks card ಕೊಡಲು ಲಂಚ: ಶಿಕ್ಷಣ ಇಲಾಖೆ ಅಧಿಕಾರಿಗಳಿಬ್ಬರು ಲೋಕಾಯುಕ್ತ ಬಲೆಗೆ
Vijayapura;ದಲಿತರ ಭವನ ನಿರ್ಮಾಣಕ್ಕೆ ಮುಸ್ಲಿಮರ ವಿರೋಧ:ಪೊಲೀಸರ ಮಧ್ಯಸ್ಥಿಕೆ
Banavasi ; ಕ್ರಿಕೆಟ್ ಆಡುತ್ತಿದ್ದ ಬಾಲಕ ಸಿಡಿಲಿಗೆ ಬಲಿ
Gadag: ರಥೋತ್ಸವ ವೇಳೆ ರಥದ ಗಾಲಿಗೆ ಸಿಲುಕಿ ಇಬ್ಬರು ಭಕ್ತರು ಮೃತ್ಯು
RCB vs CSK ರೋಚಕ ಪಂದ್ಯಕ್ಕೆ ಮಳೆ ಅಡ್ಡಿ: ಬೌಲಿಂಗ್ ಆಯ್ಕೆ ಮಾಡಿಕೊಂಡ ಚೆನ್ನೈ