ಒಂದೇ ದಿನದಲ್ಲಿ 170 ಟನ್‌ ಕಬ್ಬು ಕಟಾವು; ಕಬ್ಬು ಕಡಿದು ಕಾರ್ಖಾನೆಗೆ ಸಾಗಣೆ


Team Udayavani, Mar 11, 2024, 5:52 PM IST

ಒಂದೇ ದಿನದಲ್ಲಿ 170 ಟನ್‌ ಕಬ್ಬು ಕಟಾವು; ಕಬ್ಬು ಕಡಿದು ಕಾರ್ಖಾನೆಗೆ ಸಾಗಣೆ

ಉದಯವಾಣಿ ಸಮಾಚಾರ
ಮುಧೋಳ: ಒಂದೇ ದಿನದಲ್ಲಿ 170 ಟನ್‌ ಕಬ್ಬು ಕಡಿದು ಕಾರ್ಖಾನೆಗೆ ಸಾಗಿಸುವ ಮೂಲಕ ತಾಲೂಕಿನ ಕುಳಲಿ ಗ್ರಾಮದ ಜೈ ಹನುಮಾನ ಕಬ್ಬಿನ ಗ್ಯಾಂಗ್‌ ಸದಸ್ಯರು ನೂತನ ದಾಖಲೆ ನಿರ್ಮಿಸಿದ್ದಾರೆ. ಗ್ರಾಮದ ಈರಪ್ಪ ಜಾಮಗೊಂಡ ಅವರ ಜಮೀನಿನಲ್ಲಿನ ಕಬ್ಬನ್ನು ಕಡಿದ ಗ್ಯಾಂಗ್‌ ಸದಸ್ಯರು ಜಮಖಂಡಿ ತಾಲೂಕಿನ ಸಾಯಿಪ್ರಿಯಾ ಕಾರ್ಖಾನೆಗೆ ಸಾಗಿಸಿದ್ದಾರೆ. ದಿನಪೂರ್ತಿ ಕಬ್ಬು ಕಟಾವು ಕಾರ್ಯದಲ್ಲಿ ತೊಡಗಿಕೊಂಡಿದ್ದ ಗ್ಯಾಂಗ್‌ ಸದಸ್ಯರು ಊಟವಿಲ್ಲದೆ ನಿರಂತರ 18 ಗಂಟೆಗಳ
ಕಾಲ ಕಬ್ಬು ಕಟಾವು ಕಾರ್ಯದಲ್ಲಿ ತೊಡಗಿದ್ದರು.

ನಸುಕಿನಜಾವ ಆರಂಭ: ಸಾಮಾನ್ಯವಾಗಿ ಗ್ರಾಮೀಣ ಪ್ರದೇಶದಲ್ಲಿನ ಕಬ್ಬಿನ ಗ್ಯಾಂಗ್‌ ಸದಸ್ಯರೆಲ್ಲ ನಸುಕಿನ ಜಾವದಲ್ಲಿಯೇ
ಕಾರ್ಯಾರಂಭ ಮಾಡುತ್ತಾರೆ. ಅದೇ ರೀತಿ ಕುಳಲಿಯ ಜೈ ಹನುಮಾನ ಕಬ್ಬಿನ ಗ್ಯಾಂಗ್‌ ಸದಸ್ಯರು ಬೆಳಗಿನ ಜಾವ 3ಗಂಟೆಗೆ ಕಬ್ಬು
ಕಟಾವು ಕಾರ್ಯದಲ್ಲಿ ತೊಡಗಿಕೊಂಡಿದ್ದರು. ರಾತ್ರಿ 9ಗಂಟೆವರೆಗೆ ನಿರಂತರವಾಗಿ ಕಬ್ಬು ಕಟಾವು ಕಾರ್ಯದಲ್ಲಿ ತೊಡಗಿದ್ದರು. ಗ್ಯಾಂಗ್‌ ನವರಿಗೆ ಕಾರ್ಯ ಸ್ಥಳದಲ್ಲಿಯೇ ಸಹಾಯಕರು  ನೀರಿನ ವ್ಯವಸ್ಥೆ ಕಲ್ಪಿಸಿ ಕಬ್ಬು ಕಟಾವು ಕಾರ್ಯಕ್ಕೆ ಹುರಿದುಂಬಿಸುವ ದೃಶ್ಯ ಕಂಡುಬರುತ್ತಿತ್ತು.

ಸಾಯಿಪ್ರಿಯಾಗೆ ಕಾರ್ಖಾನೆಗೆ ಕಬ್ಬು ರವಾನೆ:
ಕುಳಲಿ ಗ್ರಾಮದಿಂದ ಹಿಪ್ಪರಗಿ ಗ್ರಾಮದ ಸರಹದ್ದಿನಲ್ಲಿರುವ ಸಾಯಿಪ್ರಿಯಾ ಕಾರ್ಖಾನೆಗೆ ಕಬ್ಬು ಸಾಗಿಸಲಾಗಿದೆ. ಒಟ್ಟು 8 ಸಾರಿಗೆಯಂತೆ ಒಟ್ಟು 18 ಟ್ರಾಕ್ಟರ್‌ ಟ್ರೇಲರ್‌ಗಳಲ್ಲಿ ಕಬ್ಬು ಸಾಗಣೆ ಮಾಡಲಾಗಿದೆ. ಕಬ್ಬು ಕಟಾವು ಮಾಡಿದಂತೆ ಹಿಂದಿನ ಸಹಾಯಕರು ಮಿಂಚಿನ ವೇಗದಲ್ಲಿ ಲೋಡ್‌ ಮಾಡಿ ಸಾಗಣೆಗೆ ಅನುವು ಮಾಡಿಕೊಟ್ಟಿದ್ದಾರೆ. ಇದೆಲ್ಲದರ ಪರಿಣಾಮ ಕೇವಲ 18 ಗಂಟೆಯಲ್ಲಿ 170 ಟನ್‌ ಕಬ್ಬು ಕಟಾವು ಸಾಧ್ಯವಾಗಿದೆ.

ಜೈ ಹನುಮಾನ ಕಬ್ಬಿನ ಗ್ಯಾಂಗ್‌: ಕುಳಲಿ ಗ್ರಾಮದಲ್ಲಿರುವ ನಗರಗಟ್ಟಿ ತೋಟದ ಜೈಹನುಮಾನ ಕಬ್ಬಿನ ಗ್ಯಾಂಗ್‌ನಲ್ಲಿ ಅಂದಾಜು 20 ಸದಸ್ಯರು ಕಾರ್ಯನಿರ್ವಹಿಸುತ್ತಾರೆ. ಹಲವಾರು ವರ್ಷಗಳಿಂದ ಕಬ್ಬು ಕಟಾವು ಕಾರ್ಯದಲ್ಲಿ ಈ ಗ್ಯಾಂಗ್‌ ಸದಸ್ಯರು ತೊಡಗಿಕೊಂಡಿದ್ದಾರೆ.ಇದೀಗ ರಬಕವಿ-ಬನಹಟ್ಟಿ ತಾಲೂಕಿನ ನಾವಲಗಿ ಗ್ರಾಮದಲ್ಲಿನ ಈರಪ್ಪ ಜಾಮಗೊಂಡ ಅವರ ಹೊಲದಲ್ಲಿ ಕಬ್ಬು ಕಟಾವು ಮಾಡಿದ್ದಾರೆ.

ಗ್ರಾಮಸ್ಥರಿಂದ ಸನ್ಮಾನ: ಒಂದೇ ದಿನದಲ್ಲಿ 170 ಟನ್‌ ಕಬ್ಬು ಕಟಾವು ಮಾಡಿರುವ ಜೈ ಹನುಮಾನ ಕಬ್ಬಿನ ಗ್ಯಾಂಗ್‌ ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಗ್ಯಾಂಗ್‌ ಕಾರ್ಮಿಕರ ಕಾರ್ಯದಿಂದ ಸಂತಸಗೊಂಡಿರುವ ಗ್ರಾಮಸ್ಥರು ಗ್ಯಾಂಗ್‌ ಸದಸ್ಯರಿಗೆ ಗುಲಾಲು ಎರಚಿ ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಗ್ಯಾಂಗ್‌ ಸದಸ್ಯರು ಕಬ್ಬು ಕಟಾವು ಮಾಡಲು ಕಬ್ಬಿನ ಹೊಲಕ್ಕೆ ಹೋದಾಗ ಕುಳಲಿ ಗ್ರಾಮಸ್ಥರು ಸೇರಿದಂತೆ ಅಕ್ಕಪಕ್ಕದ ಗ್ರಾಮದ ಸಾರ್ವಜನಿಕರು  ತಂಡೋಪತಂಡವಾಗಿ ತೆರಳಿ ಕಾರ್ಮಿಕರ ಶ್ರಮಕ್ಕೆ ಹುರಿದುಂಬಿಸು ಕಾರ್ಯ ಮಾಡಿದರು.

ನಮ್ಮ ಹೊಲದಲ್ಲಿನ ಕಬ್ಬು ಕಟಾವು ಕುಳಲಿ ಗ್ರಾಮದ ಜೈಹನುಮಾನ ಕಬ್ಬಿನ ಗ್ಯಾಂಗ್‌ನವರು ಬಂದಾಗ ಇದೊಂದು ಅಸಾಧ್ಯದ ಕೆಲಸವೆಂದು ಭಾವಿಸಿದ್ದೆ. ಆದರೆ ಕಬ್ಬು ಗ್ಯಾಂಗ್‌ ಸದಸ್ಯರು ಛಲ ಬಿಡದೆ ತಮ್ಮ ಕಾರ್ಯದಲ್ಲಿ ತೊಡಗಿಕೊಂಡು ನಿರಂತರ
ಪರಿಶ್ರಮದಿಂದ 170 ಟನ್‌ ಕಬ್ಬು ಸಾಗಿಸಿ ದೊಡ್ಡ ಸಾಧನೆ ಮಾಡಿರುವುದು ನನಗೂ ಹೆಚ್ಚು ಸಂತಸವನ್ನುಂಟು ಮಾಡಿದೆ.
ಈರಪ್ಪ ಜಾಮಗೊಂಡ
ಕಬ್ಬಿನ ಹೊಲದ ಮಾಲೀಕ

*ಗೋವಿಂದಪ್ಪ ತಳವಾರ

ಟಾಪ್ ನ್ಯೂಸ್

GalaxyCI

GalaxEye; ರಾತ್ರಿಯಲ್ಲೂ ಭೂಮಿ ಚಿತ್ರ ಕ್ಲಿಕ್ಕಿಸುವ ಟೆಕ್ನಾಲಜಿ ಪರೀಕ್ಷೆ

BJP is certain to win in 300 constituencies: Prashant Kishore’s future

Loksabha; ಬಿಜೆಪಿಗೆ 300 ಕ್ಷೇತ್ರಗಳಲ್ಲಿ ಜಯ ನಿಶ್ಚಿತ: ಪ್ರಶಾಂತ್‌ ಕಿಶೋರ್‌ ಭವಿಷ್ಯ

MDH, Everest products passed the quality test!

ಗುಣಮಟ್ಟ ಪರೀಕ್ಷೆಯಲ್ಲಿ ಎಂಡಿಎಚ್‌, ಎವರೆಸ್ಟ್‌ ಉತ್ಪನ್ನಗಳು ಪಾಸ್‌!

Rain ಕರಾವಳಿ ಸಹಿತ ರಾಜ್ಯದ ವಿವಿಧೆಡೆ ಉತ್ತಮ ಮಳೆ, ನಾಲ್ಕು ಜೀವಹಾನಿ

Rain ಕರಾವಳಿ ಸಹಿತ ರಾಜ್ಯದ ವಿವಿಧೆಡೆ ಉತ್ತಮ ಮಳೆ, ನಾಲ್ಕು ಜೀವಹಾನಿ

Ambedkar ಇಲ್ಲದಿದ್ದರೆ ನೆಹರೂ ಮೀಸಲು ನೀಡುತ್ತಿರಲಿಲ್ಲ : ಮೋದಿ

Ambedkar ಇಲ್ಲದಿದ್ದರೆ ನೆಹರೂ ಮೀಸಲು ನೀಡುತ್ತಿರಲಿಲ್ಲ : ಮೋದಿ

ocon

ಲೀಡ್‌ ಕೊಡಿಸದಿದ್ದರೆ ಅಧಿಕಾರವೂ ಸಿಗದು; ಹುದ್ದೆ ಬಯಸುವ ಕಾರ್ಯಕರ್ತರಿಗೆ ಡಿಕೆಶಿ ಚಾಟಿ

Puttur ಅಂಗಳದಲ್ಲಿದ್ದ ವ್ಯಕ್ತಿ ಸಾವು ಸಿಡಿಲಾಘಾತ / ಹೃದಯಾಘಾತ ಶಂಕೆ

Puttur ಅಂಗಳದಲ್ಲಿದ್ದ ವ್ಯಕ್ತಿ ಸಾವು ಸಿಡಿಲಾಘಾತ / ಹೃದಯಾಘಾತ ಶಂಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-banahatti

Boys Drowned: ಬನಹಟ್ಟಿ ಕೆರೆಯಲ್ಲಿ ಮುಳುಗಿ ಇಬ್ಬರು ಬಾಲಕರು ಸಾವು      

Rabkavi-Banhatti; ರೋಹಿಣಿ ಮಳೆ ಒಲಿದರೆ ರೈತನ ಬಾಳೇ ಬಂಗಾರ

Rabkavi-Banhatti; ರೋಹಿಣಿ ಮಳೆ ಒಲಿದರೆ ರೈತನ ಬಾಳೇ ಬಂಗಾರ

6-rabakavi

Rabkavi Banhatti: ಶತಮಾನದ ಸೋಮವಾರಪೇಟೆ ಸಮಸ್ತ ದೈವ ಮಂಡಳಿಯ ಗರಡಿ ಮನೆ

3-mahalingapur

Mahalingpur: ತೆರಬಂಡಿ ಸ್ಪರ್ಧೆಯ ಹೋರಿ ದಾಖಲೆಯ 10.10 ಲಕ್ಷಕ್ಕೆ ಖರೀದಿಸಿದ ರೈತ

1-qweqwewqe

Rabkavi Banhatti: ಪ್ರಾಚೀನ ದೇವಸ್ಥಾನಕ್ಕೆ ಬೇಕಿದೆ ರಕ್ಷಣೆ

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

GalaxyCI

GalaxEye; ರಾತ್ರಿಯಲ್ಲೂ ಭೂಮಿ ಚಿತ್ರ ಕ್ಲಿಕ್ಕಿಸುವ ಟೆಕ್ನಾಲಜಿ ಪರೀಕ್ಷೆ

BJP is certain to win in 300 constituencies: Prashant Kishore’s future

Loksabha; ಬಿಜೆಪಿಗೆ 300 ಕ್ಷೇತ್ರಗಳಲ್ಲಿ ಜಯ ನಿಶ್ಚಿತ: ಪ್ರಶಾಂತ್‌ ಕಿಶೋರ್‌ ಭವಿಷ್ಯ

47 Lakhs collected for Kanhaiya Campaign!

Kanhaiya Kumar ಕ್ಯಾಂಪೇನ್‌ಗೆ 47 ಲಕ್ಷ ರೂ. ದೇಣಿಗೆ ಸಂಗ್ರಹ!

MDH, Everest products passed the quality test!

ಗುಣಮಟ್ಟ ಪರೀಕ್ಷೆಯಲ್ಲಿ ಎಂಡಿಎಚ್‌, ಎವರೆಸ್ಟ್‌ ಉತ್ಪನ್ನಗಳು ಪಾಸ್‌!

Balagopal

Kerala; ಕೇಂದ್ರದ ಸವಾಲು ನಡುವೆ ರಾಜ್ಯದ ಆದಾಯ ಹೆಚ್ಚಳ: ಕೇರಳ ಸಚಿವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.