Vijayapura: ಸಿಡಿಲಿಗೆ ಗುಣಕಿ ಗ್ರಾಮದಲ್ಲಿ ಜೋಡೆತ್ತು ಬಲಿ
Team Udayavani, Mar 30, 2024, 10:54 PM IST
ವಿಜಯಪುರ : ಶನಿವಾರ ರಾತ್ರಿ ಬಿರುಗಾಳಿ ಸಹಿತ ಸಿಡಿಲು ಅಪ್ಪಳಿಸಿ ರೈತರೊಬ್ಬರ ಜೋಡೆತ್ತು ಬಲಿಯಾಗಿರುವ ಘಟನೆ ವಿಜಯಪುರ ತಾಲೂಕಿನ ಗುಣಕಿ ಗ್ರಾಮದಲ್ಲಿ ನಡೆದಿದೆ. ನಾನಾಗೌಡ ಮಲ್ಲಪ್ಪ ಬಿರಾದಾರ ಎಂಬ ರೈತರಿಗೆ ಸೇರಿದ ಜೋಡೆತ್ತು ಸಿಡಿಲಿಗೆ ಬಲಿಯಾಗಿವೆ.
ತೋಟದ ಮನೆಯ ಎದುರು ಕಟ್ಟಲಾಗಿದ್ದ ಜೋಡೆತ್ತಿಗೆ ಸಿಡಿಲು ಬಡಿದು ಸ್ಥಳದಲ್ಲೇ ಮೃತಪಟ್ಟಿವೆ. ಕೃಷಿಗೆ ಆಸರೆಯಾಗಿದ್ದ ಜೋಡೆತ್ತುಗಳ ಸಾವಿನಿಂದ ರೈತ ನಾನಾಗೌಡ ಅವರಿಗೆ ಸುಮಾರು1.50 ಲಕ್ಷ ರೂ. ನಷ್ಟವಾಗಿದೆ. ಸುದ್ದಿ ತಿಳಿಯುತ್ತಲೇ ವಿಜಯಪುರ ಗ್ರಾಮೀಣ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura;ದೌರ್ಜನ್ಯದಿಂದ ನೊಂದು ದಯಾ ಮರಣಕ್ಕೆ ಮನವಿ ಸಲ್ಲಿಸಿದ ನಾಲ್ವರ ಕಟುಂಬ
Vijayapura; ಕಚೇರಿ ಆವರಣದಲ್ಲೇ ಮದ್ಯ ಸೇವಿಸಿದ ಹೆಸ್ಕಾಂ ಜೆಇ ವಿಡಿಯೋ ವೈರಲ್
Vijayapura ಎಪಿಎಂಸಿ ಮಾರುಕಟ್ಟೆಯಲ್ಲಿ ಯುವಕನ ಹತ್ಯೆ; ಆಪ್ತರ ಮೇಲೆ ಶಂಕೆ
Vijayapura;ದಲಿತರ ಭವನ ನಿರ್ಮಾಣಕ್ಕೆ ಮುಸ್ಲಿಮರ ವಿರೋಧ:ಪೊಲೀಸರ ಮಧ್ಯಸ್ಥಿಕೆ
ಕ್ಯಾಂಟರ್ ಅಡ್ಡಗಟ್ಟಿ 32 ಲಕ್ಷ ರೂ. ದರೋಡೆ: ಖಾರದ ಪುಡಿ ಎರಚಿ ಹಲ್ಲೆ, ಇಬ್ಬರಿಗೆ ಗಾಯ