Puttur ಪ್ರೀತಿ ವಿಚಾರ: ಯುವಕನಿಗೆ ಹಲ್ಲೆ, ಬೆದರಿಕೆ
Team Udayavani, Apr 7, 2024, 12:42 AM IST
ಪುತ್ತೂರು: ಯುವತಿಯೋರ್ವಳನ್ನು ಪ್ರೀತಿಸುತ್ತಿದ್ದ ವಿಚಾರದಲ್ಲಿ ತಂಡವೊಂದು ಯುವಕನಿಗೆ ಹಲ್ಲೆ ನಡೆಸಿ, ಜೀವ ಬೆದರಿಕೆಯೊಡ್ಡಿರುವ ಘಟನೆ ಕುರಿಯ ಮಲಾರ್ ಎಂಬಲ್ಲಿ ನಡೆದಿದ್ದು ಘಟನೆ ಕುರಿತು ಅಶ್ವಿತ್ ಕುಮಾರ್ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಮಲಾರ್ ಎಂಬಲ್ಲಿ ಕಟ್ಟಿಸಿದ ಹೊಸ ಮನೆಗೆ ಎ. 3ರಂದು ನೀರು ಹಾಕುತ್ತಿದ್ದ ಸಮಯ ಪರಿಚಯದ ಸಚಿನ್ ಮುಕ್ವೆ ಕರೆ ಮಾಡಿ, ನಿನ್ನಲ್ಲಿ ಮಾತನಾಡುವುದು ಇದೆ ಎಂದು ತಿಳಿಸಿದಾಗ, ಮಲಾರ್ನಲ್ಲಿದ್ದು, ದರ್ಬೆಗೆ ಬರುವುದಾಗಿ ತಿಳಿಸಿ, ಮಲಾರ್ನಿಂದ ತನ್ನ ಬೈಕ್ನಲ್ಲಿ ಹೊರಟು ಆರ್ಯಾಪು ಗ್ರಾಮದ ಕಲ್ಲಪೆìಯ ಮಾಣಿ-ಮೈಸೂರು ಹೆದ್ದಾರಿಯಲ್ಲಿ ಹೋಗುತ್ತಿದ್ದಾಗ ಸಚಿನ್ ಮುಕ್ವೆ ಹಾಗೂ ಇತರರು ಅಶ್ವಿತ್ ಕುಮಾರ್ನನ್ನು ನೋಡಿ ಕಾರನ್ನು ಬೈಕಿಗೆ ಅಡ್ಡ ಇಟ್ಟು ತಡೆದು ನಿಲ್ಲಿಸಿದ್ದಾರೆ.
ಅನಂತರ ಸಚಿನ್ ಮುಕ್ವೆ, ಅಂಕಿತ್ ಹಾಗೂ ಇತರ ಇಬ್ಬರು ಪರಿಚಯ ಇಲ್ಲದ ವ್ಯಕ್ತಿಗಳು ಕಾರಿನಿಂದ ಇಳಿದು ಅಶ್ವಿತ್ ಕುಮಾರ್ಮತ್ತು ಯುವತಿ ಮಧ್ಯೆ ಇರುವ ಪ್ರೀತಿ ವಿಚಾರವಾಗಿ, ಆಕೆಯ ವಿಚಾರಕ್ಕೆ ಬಂದರೆ ನಿನ್ನನ್ನು ಸಾಯಿಸುತ್ತೇವೆ ಎಂದು ಹೇಳಿ ಅವಾಚ್ಯ ಶಬ್ದಗಳಿಂದ ಬೈದು, ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಅಶ್ವಿತ್ ಕುಮಾರ್ ನೀಡಿರುದ ದೂರಿನಲ್ಲಿ ಆರೋಪಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಕುಂದಾಪುರ: ಅಪಾಯದಲ್ಲಿ ಕೋಡಿ ಸೀವಾಕ್- ಇಲಾಖೆ ನಿರ್ಲಕ್ಷ್ಯ
ಶಾಸಕ ಹರೀಶ್ ಪೂಂಜ ಬಂಧನ ಹೈಡ್ರಾಮ: ಪೊಲೀಸರ ಮೇಲೆ ರಾಜಕೀಯ ಒತ್ತಡ ಆರೋಪ
ಸುರತ್ಕಲ್, ಶಿಬರೂರು, ಕಟೀಲು ಮಾರ್ಗವಾಗಿ ನರ್ಮ್ ಬಸ್ ಸಂಚಾರ ಪುನರಾರಂಭ
Channapatna: ಪತ್ನಿಯನ್ನೇ ಹತ್ಯೆಗೈದು ಎಸ್ಕೇಪ್ ಆದ ಪತಿ… ಪೊಲೀಸರಿಂದ ಶೋಧ
IPL Eliminator ಪಂದ್ಯ; ಅಭ್ಯಾಸವನ್ನು ಕೈಬಿಟ್ಟ ಆರ್ ಸಿಬಿ: ಉಗ್ರ ಬೆದರಿಕೆ ಕಾರಣವೇ?