200 crores ರೂ. ದಾನ ಮಾಡಿ ಸನ್ಯಾಸತ್ವ ಸ್ವೀಕರಿಸಿದ ಶ್ರೀಮಂತ
Team Udayavani, Apr 15, 2024, 12:37 AM IST
ಅಹ್ಮದಾಬಾದ್: ಗುಜರಾತಿನ ಶ್ರೀಮಂತರೊಬ್ಬರು ಆಡಂಬರದ ಜೀವನದಿಂದ ಬೇಸರಗೊಂಡು, ಸುಮಾರು 200 ಕೋ. ರೂ. ಮೌಲ್ಯದ ಆಸ್ತಿಪಾಸ್ತಿ ಗಳನ್ನು ದಾನ ಮಾಡಿ ಸನ್ಯಾಸತ್ವ ಸ್ವೀಕರಿಸಿದ್ದಾರೆ. ಗುಜರಾತ್ನ ಸಾಬರ್ಕಾಂತಾ ಜಿಲ್ಲೆಯ ಶತಕೋಟಿ ಒಡೆಯ ಭಾವೇಶ್ ಭಂಡಾರಿ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.
ಮೂಲತಃ ಜೈನ ಸಮುದಾಯಕ್ಕೆ ಸೇರಿದವರಾದ ಭಂಡಾರಿ, ತಪಸ್ಸು ಮತ್ತು ಭಕ್ತಿಯ ಕುರಿತು ಅಪಾರ ನಂಬಿಕೆ ಹೊಂದಿದ್ದು, ಧಾರ್ಮಿಕ ಚಟುವಟಿಕೆಗಳಲ್ಲಿ ಸಕ್ರಿಯ ವಾಗಿ ಪಾಲ್ಗೊಳ್ಳಲು ಈ ರೀತಿ ಮಾಡಿದ್ದಾರೆ. 2022 ರಲ್ಲೇ ತಮ್ಮ ಮಕ್ಕಳು ಸನ್ಯಾಸತ್ವ ಸ್ವೀಕರಿಸಿದ್ದು, ಭಂಡಾರಿಗೆ ಸ್ಫೂರ್ತಿ ನೀಡಿದೆ. ಆಧುನಿಕ ಜೀವನ ಪದ್ಧತಿ ಹಾಗೂ ಆಡಂಬರದ ಜೀವನದಿಂದ ಬೇಸ ತ್ತಿದ್ದು, ಪತ್ನಿಯೊಂದಿಗೆ ಸನ್ಯಾಸತ್ವ ಸ್ವೀಕರಿಸಿದ್ದಾರೆ.