ರಾಜ್ಯಮಟ್ಟದ ಮಕ್ಕಳ ಸಾಹಿತ್ಯ ಕಮ್ಮಟಕ್ಕೆ ಚಾಲನೆ
Team Udayavani, Feb 18, 2017, 3:15 PM IST
ಧಾರವಾಡ: ಕಲ್ಪನೆಗೆ ಆಲೋಚನಾ ಶಕ್ತಿ ಸೇರಿದರೆ ಅದ್ಭುತ ಕವಿತೆ ಹೊರಹೊಮ್ಮಲು ಸಾಧ್ಯ ಎಂದು ಹಿರಿಯ ಸಾಹಿತಿ ಡಾ| ಗುರುಲಿಂಗ ಕಾಪಸೆ ಹೇಳಿದರು. ನಗರದಲ್ಲಿ ಕರ್ನಾಟಕ ಬಾಲವಿಕಾಸ ಅಕಾಡೆಮ ಸಭಾಂಗಣದಲ್ಲಿ ಶುಕ್ರವಾರದಿಂದ ಮೂರು ದಿನಗಳ ಕಾಲ ಹಮ್ಮಿಕೊಂಡ ರಾಜ್ಯಮಟ್ಟದ ಮಕ್ಕಳ ಸಾಹಿತ್ಯ ಕಮ್ಮಟ ಉದ್ಘಾಟಿಸಿ ಮಾತನಾಡಿದರು.
ಸಾಹಿತ್ಯ ರಚನೆ ಒಂದು ತಪಸ್ಸು. ಅದನ್ನು ನಿರಂತರ ಅಧ್ಯಯನ, ಬರವಣಿಗೆ, ಹವ್ಯಾಸದ ರೂಢಿಯಿಂದಲೇ ಒಲಿಯುವುದು ಎಂದರು. ಮಕ್ಕಳಿಗಾಗಿ ಸಾಹಿತ್ಯ ರಚಿಸುವವರು ಅವರ ಮನಸ್ಸು ಅರಿಯಬೇಕು. ನಂತರ ಅವಳ ಮನಸ್ಸಿನ ಆಳಕ್ಕಿಳಿದು, ಭಾವನೆ, ಆಸೆ-ಆಕಾಂಕ್ಷೆ ಅರಿತು, ಮಕ್ಕಳಂತಾಗಿ ಸಾಹಿತ್ಯ ರಚಿಸಿದಾಗ ಮಕ್ಕಳಿಗೆ ರುಚಿಸುತ್ತದೆ.
ರಚಿಸುವ ಕವಿತೆ ವ್ಯಾಕರಣ, ಲಯಬದ್ಧವಾಗಿ ಇದ್ದಾಗ, ಭಾವ ತುಂಬಿ ಹಾಡಲು ಸಾಧ್ಯ ಎಂದರು. ಕವಿಸಂ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಮಾತನಾಡಿ, ಮಕ್ಕಳು ಕಣ್ಣಿಗೆ ಗೋಚರಿಸಿದ ಹಾಗೂ ಗೋಚರಿಸದ ಕಲ್ಪನಾತೀತ ಸಾಹಿತ್ಯ ರಚಿಸುತ್ತಾರೆ. ಈ ವೇಳೆ ಮುಕ್ತವಾಗಿ ಅವರ ವಿಚಾರಗಳನ್ನು ಆಲಿಸುವ, ಆಸ್ವಾದಿಸುವ ಗುಣ ಮಕ್ಕಳ ಸಾಹಿತಿಗಳಿಗೆ ಇರಬೇಕು.
ಮಕ್ಕಳಲ್ಲಿ ಅಡಗಿರುವ ಭಾವನೆಗಳನ್ನು ಹೇಗೆ ಹೊರ ತೆಗೆಯಬೇಕು. ಅವರನ್ನು ಸಾಹಿತ್ಯ ಕೃಷಿಯ ಚಟುವಟಿಕೆಗೆ ಅಣಿಗೊಳಿಸಬೇಕು. ಅದರಲ್ಲೂ ಸರ್ಕಾರಿ, ಹಿಂದುಳಿದ ವರ್ಗಗಳ, ವಸತಿ ಶಾಲೆಗಳ ಮಕ್ಕಳ ಪ್ರತಿಭೆ ಗುರುತಿಸುವ ಉದ್ದೇಶದಿಂದ ಆಯ್ದ 40 ಜನರನ್ನು ಕಮ್ಮಟಕ್ಕೆ ಆಯ್ಕೆ ಮಾಡಿದೆ ಎಂದರು. ರಂಗ ನಿರ್ದೇಶಕಿ ಎಸ್. ಮಾಲತಿ ಮಾತನಾಡಿ, ಟಿವಿ, ಮೊಬೈಲ್ಗಳ ಪ್ರಭಾವದಿಂದ ಮಕ್ಕಳ ಬದುಕು ಸೊರಗುತ್ತಿದೆ.
ಅವರಿಗೆ ಸಂಸ್ಕೃತಿ, ಭಾಷೆ, ಮೌಲ್ಯಗಳು ಸಿಗುತ್ತಿಲ್ಲ. ವೇಗದ ಬದುಕಿನಿಂದ ನಮ್ಮಲ್ಲಿ ಚಿಂತನೆ ಹಾಗೂ ನಾನೇನು ಎಂಬ ಆತ್ಮವಿಮರ್ಶೆ ಸಹ ಇಲ್ಲವಾಗಿದೆ. ಅಪ್ರಾಮಾಣಿಕತೆ, ಭ್ರಷ್ಟಾಚಾರ ತಾಂಡವಾಡುತ್ತಿರುವ ಇಂದಿನ ಸಮಾಜದಲ್ಲಿ ಮಕ್ಕಳು ಉತ್ತಮವಾಗಿ ಬದುಕಲು ಸಾಧ್ಯವಿಲ್ಲ. ಸಂಪೂರ್ಣ ಕತ್ತಲೆ ಆವರಿಸಿರುವ ಸಂದರ್ಭದಲ್ಲಿ ಕಮ್ಮಟ ಎನ್ನುವಂತಹ ಸಣ್ಣ ಹಣತೆ ಹಚ್ಚುವ ಮೂಲಕ ಬೆಳಕು ಮೂಡಿಸುವ ಕೆಲಸ ನಡೆಯುತ್ತಿರುವುದು ಶ್ಲಾಘನೀಯ ಎಂದರು.
ಅಕಾಡೆಮಿ ಅಧ್ಯಕ್ಷ ವೇದವ್ಯಾಸ ಕೌಲಗಿ ಅಧ್ಯಕ್ಷತೆ ವಹಿಸಿದ್ದರು. ಯೋಜನಾಧಿಕಾರಿ ಮಲ್ಲಿಕಾರ್ಜುನ ಮಾಲಿಗೇರ, ಸಾಹಿತಿಗಳಾದ ನಿಂಗಣ್ಣ ಕುಂಟಿ, ವಿವಿಧ ಜಿಲ್ಲೆಗಳ ಮಕ್ಕಳ ಸಾಹಿತಿಗಳು, ಇತರರು ಇದ್ದರು. ಕಮ್ಮಟ ನಿರ್ದೇಶಕ ಡಾ|ನಿಂಗು ಸೊಲಗಿ ಸ್ವಾಗತಿಸಿ, ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli; ಜಾನುವಾರು ಮೇಯಿಸಲು ಹೋಗಿದ್ದ ಯುವಕ ಸಿಡಿಲು ಬಡಿದು ಸಾವು
CBI ಗೆ ಕೊಡುವ ಅಗತ್ಯವಿಲ್ಲ; ಅಂಜಲಿ ಪ್ರಕರಣ ಕೂಡ ಸಿಐಡಿಗೆ:ಡಾ.ಜಿ.ಪರಮೇಶ್ವರ್
Hubballi; ನೇಹಾ, ಅಂಜಲಿ ನಿವಾಸಗಳಿಗೆ ಡಾ.ಜಿ.ಪರಮೇಶ್ವರ್ ಭೇಟಿ
Hubli; ಅಂಜಲಿ ಕುಟುಂಬಸ್ಥರಿಗೆ ಸರ್ಕಾರ ಪರಿಹಾರ ಘೋಷಿಸಬೇಕು: ಶಂಕರ ಪಾಟೀಲ್ ಮುನೇನಕೊಪ್ಪ
Hubli: ರೌಡಿಶೀಟರ್ ಮೇಲೆ ಗ್ಯಾಂಗ್ ನಿಂದ ಹಲ್ಲೆ; ಪೊಲೀಸರಿಗೆ ಅವಾಜ್ ಹಾಕಿದ ರೌಡಿ
MUST WATCH
ಹೊಸ ಸೇರ್ಪಡೆ
Rain ಕರಾವಳಿ ಸಹಿತ ರಾಜ್ಯದ ವಿವಿಧೆಡೆ ಉತ್ತಮ ಮಳೆ, ನಾಲ್ಕು ಜೀವಹಾನಿ
Ambedkar ಇಲ್ಲದಿದ್ದರೆ ನೆಹರೂ ಮೀಸಲು ನೀಡುತ್ತಿರಲಿಲ್ಲ : ಮೋದಿ
ಲೀಡ್ ಕೊಡಿಸದಿದ್ದರೆ ಅಧಿಕಾರವೂ ಸಿಗದು; ಹುದ್ದೆ ಬಯಸುವ ಕಾರ್ಯಕರ್ತರಿಗೆ ಡಿಕೆಶಿ ಚಾಟಿ
Puttur ಅಂಗಳದಲ್ಲಿದ್ದ ವ್ಯಕ್ತಿ ಸಾವು ಸಿಡಿಲಾಘಾತ / ಹೃದಯಾಘಾತ ಶಂಕೆ
Singapore Airlines; 3 ನಿಮಿಷಗಳಲ್ಲಿ 6 ಸಾವಿರ ಅಡಿ ಕುಸಿದ ವಿಮಾನ: 1 ಸಾವು