ಪಾಕ್‌ ಪತಿಯಿಂದ ಹಿಂಸೆಗೆ ಗುರಿಯಾದ ಭಾರತೀಯ ಪತ್ನಿಗೆ ಸುಶ್ಮಾ ನೆರವು


Team Udayavani, Mar 21, 2017, 12:16 PM IST

Sushma Swaraj-700.jpg

ಹೊಸದಿಲ್ಲಿ : ಪಾಕಿಸ್ಥಾನದಲ್ಲಿ ತನ್ನ ಗಂಡ, ಅತ್ತೆ, ಮಾವನಿಂದ ದೈಹಿಕ ಹಾಗೂ ಮಾನಸಿಕ ಕಿರುಕುಳಕ್ಕೆ ಗುರಿಯಾಗಿರುವ ಭಾರತದ ಹೈದರಾಬಾದಿನ ಮಹಿಳೆ, ತನ್ನನ್ನು ಈ ದಯನೀಯ ಸ್ಥಿತಿಯಿಂದ ಪಾರುಗೊಳಿಸುವಂತೆ ಕೋರಿ ಕಳುಹಿಸಿದ ವಿಡಿಯೋ ಸಂದೇಶಕ್ಕೆ ತತ್‌ಕ್ಷಣವೇ ಸ್ಪಂದಿಸಿರುವ ವಿದೇಶ ವ್ಯವಹಾರಗಳ ಸಚಿವೆ ಸುಶ್ಮಾ ಸ್ವರಾಜ್‌ ಅವರು ಇದೀಗ ಭಾರತೀಯ ಮಹಿಳೆಯನ್ನು ಭಾರತಕ್ಕೆ ಕರೆತರುತ್ತಿದ್ದಾರೆ.

ಮೊಹಮ್ಮದೀಯ ಬೇಗಂ ಗೆ 1996ರಲ್ಲಿ , ತಾನು ಒಮಾನ್‌ ನವನು ಎಂದು ಹೇಳಿಕೊಂಡಿದ್ದ ಮುಹಮ್ಮದ್‌ ಯೂನಿಸ್‌ ಎಂಬಾತನೊಂದಿಗೆ ಟೆಲಿಫೋನ್‌ ಮೂಲಕ ನಿಖಾಹ್‌ ಆಗಿತ್ತು. ಮದುವೆ ಆದೊಡನೆಯೇ ಮೊಹಮ್ಮದೀಯ ಬೇಗಂ, ಮಸ್ಕತ್‌ನಲ್ಲಿ ಮೆಕ್ಯಾನಿಕ್‌ ಆಗಿ ದುಡಿಯುತ್ತಿದ್ದ ಪತಿಯನ್ನು ಸೇರಿಕೊಂಡಳು. ಮದುವೆಯಾಗಿ 12 ವರ್ಷಗಳ ಬಳಿಕ, ತನ್ನ ಪತಿ ಯೂನಿಸ್‌ ಪಾಕಿಸ್ಥಾನದವನೆಂದು ಮೊಹಮ್ಮದೀಯಾಗೆ ಗೊತ್ತಾಗಿ ಆಕೆಗೆ ಆಘಾತವಾಯಿತು. ಅ ಸಂದರ್ಭದಲ್ಲಿ ಮಸ್ಕತ್‌ನಲ್ಲಿನ ತನ್ನ ಉದ್ಯೋಗವನ್ನು ಕಳೆದುಕೊಂಡಿದ್ದ ಆತ ಪಾಕಿಸ್ಥಾನಕ್ಕೆ ಮರಳಿದ.

ಯೂನಿಸ್‌ನಿಂದ ಐದು ಮಕ್ಕಳ ತಾಯಿಯಾದ ಮೊಹಮ್ಮದೀಯಳ ಕೊನೇ ಪುತ್ರ ಪಾಕಿಸ್ಥಾನದಲ್ಲಿ ಜನಿಸಿದ್ದಾನೆ. ಐದು ಮಂದಿ ಮಕ್ಕಳಲ್ಲಿ ಮೂವರು ಪುತ್ರರು, ಇಬ್ಬರು ಪುತ್ರಿಯರು. ಇಷ್ಟಾಗಿಯೂ ಯೂನಿಸ್‌ ಈಚೆಗೆ ಬೇರೊಬ್ಬ ಪಾಕ್‌ ಮಹಿಳೆಯನ್ನು ಮದುವೆಯಾಗಿದ್ದಾನೆ.

ಮೊಹಮ್ಮದೀಯಳ ತಂದೆ ಮೊಹಮ್ಮದ್‌ ಅಕ್‌ಬರ್‌ ಭಾರತದ ಹೈದರಾಬಾದ್‌ನಲ್ಲಿ ಸೈಕಲ್‌ ಮೆಕ್ಯಾನಿಕ್‌. ತಾಯಿ ಹಜಾರಾ ಬೇಗಂ ಗೆ ಮನೆವಾರ್ತೆ.

ಪಾಕಿಸ್ಥಾನದಲ್ಲಿ ತನ್ನ ಗಂಡ,ಅತ್ತೆ ಮತ್ತು ಮಾವ ತನಗೆ ನೀಡುತ್ತಿರುವ ಹಿಂಸೆ, ಯಾತನೆಯನ್ನು ತಡೆಯಲಾರದೆ ಮಗಳು ಕಳುಹಿಸಿದ್ದ  ವಿಡಿಯೋ ಸಂದೇಶವನ್ನು ಮೊಹಮ್ಮದ್‌ ಅಕ್‌ಬರ್‌ ಅವರು ನೇರವಾಗಿ ಸುಶ್ಮಾ ಸ್ವರಾಜ್‌ ಅವರಿಗೆ ಕಳುಹಿಸಿ ನೆರವಿನ ಹಸ್ತ ನೀಡುವಂತೆ ಯಾಚಿಸಿದರು. ಸುಶ್ಮಾ ಸ್ವರಾಜ್‌ ಕೂಡಲೇ ಕಾರ್ಯ ಪ್ರವೃತ್ತರಾಗಿ ಇದೀಗ ಮೊಹಮ್ಮದೀಯಾ ಭಾರತಕ್ಕೆ ಮರಳುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಮದುವೆಯಾದ ಬಳಿಕದ ಕಳೆದ 21 ವರ್ಷಗಳಲ್ಲಿ ಮೊಹಮ್ಮದೀಯ ಬೇಗಂ ಭಾರತಕ್ಕೆ ಬಂದದ್ದು ಒಂದೇ ಒಂದು ಬಾರಿ. 2012ರಲ್ಲಿ ಆಕೆ ಹೈದರಾಬಾದಿಗೆ ಬಂದು ತಂದೆ ತಾಯಿಯನ್ನು ಕಂಡಿದ್ದಳು.  

ಟಾಪ್ ನ್ಯೂಸ್

2-bng

Bengaluru ನಗರದಲ್ಲಿ ಮತ್ತೆ ರೇವ್‌ ಪಾರ್ಟಿ ನಶೆ

1-24-tuesday

Daily Horoscope: ಹೊಸ ವ್ಯವಹಾರ ಆರಂಭಿಸಲು ಚಿಂತನೆ, ಆರೋಗ್ಯ ತೃಪ್ತಿಕರ

Karnataka ಮೇಲ್ಮನೆ ಏರಲು ಮೂರು ಪಕ್ಷದಲ್ಲೂ ಪೈಪೋಟಿ

Karnataka ಮೇಲ್ಮನೆ ಏರಲು ಮೂರು ಪಕ್ಷದಲ್ಲೂ ಪೈಪೋಟಿ

ಗೋರ್ಕಲ್ಲುಮನೆ ಕೆರೆ ಹೂಳೆತ್ತಿದರೆ ಹತ್ತಾರು ಎಕರೆ ಕೃಷಿಗೆ ವರದಾನ

ಗೋರ್ಕಲ್ಲುಮನೆ ಕೆರೆ ಹೂಳೆತ್ತಿದರೆ ಹತ್ತಾರು ಎಕರೆ ಕೃಷಿಗೆ ವರದಾನ

SSLC ಪರೀಕ್ಷೆ -2, 3ಕ್ಕೆ ಕೃಪಾಂಕ ಇಲ್ಲ; ಸಚಿವ ಮಧು ಬಂಗಾರಪ್ಪ

SSLC ಪರೀಕ್ಷೆ -2, 3ಕ್ಕೆ ಕೃಪಾಂಕ ಇಲ್ಲ; ಸಚಿವ ಮಧು ಬಂಗಾರಪ್ಪ

Karnataka Govt.ಹೊರಗುತ್ತಿಗೆ ನೌಕರರ ನೇಮಕಕ್ಕೂ ಮೀಸಲಾತಿ

Karnataka Govt.ಹೊರಗುತ್ತಿಗೆ ನೌಕರರ ನೇಮಕಕ್ಕೂ ಮೀಸಲಾತಿ

vJune 13: 11 ಮೇಲ್ಮನೆ ಸ್ಥಾನಗಳಿಗೆ ಚುನಾವಣೆ, ಅಂದೇ ಫ‌ಲಿತಾಂಶ

June 13: 11 ಮೇಲ್ಮನೆ ಸ್ಥಾನಗಳಿಗೆ ಚುನಾವಣೆ, ಅಂದೇ ಫ‌ಲಿತಾಂಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-ub

Uber ಬಸ್‌ಗಳು ದಿಲ್ಲಿಯ ರಸ್ತೆಯಲ್ಲಿ ಓಡಲಿದೆ!

IMD

Delhi ತಾಪ 47 ಡಿಗ್ರಿ: ಶಾಲೆಗಳಿಗೆ ಸುದೀರ್ಘ‌ ರಜೆ

covid

Covaxin ಸೈಡ್‌ಎಫೆಕ್ಟ್ ವರದಿಗೆ ಐಸಿಎಂಆರ್‌ ಕಿಡಿ

train-track

Train Drivers Association; ಆನೆ ಹಳಿ ದಾಟುವಾಗ ರೈಲು ನಿಲುಗಡೆ ಅಸಾಧ್ಯ

kejriwal

AAP ವಿದೇಶಿ ದೇಣಿಗೆ: ED ದೂರು ಪಿತೂರಿ ಎಂದ ಕೇಜ್ರಿವಾಲ್‌ ಪಕ್ಷ

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

2-bng

Bengaluru ನಗರದಲ್ಲಿ ಮತ್ತೆ ರೇವ್‌ ಪಾರ್ಟಿ ನಶೆ

1-24-tuesday

Daily Horoscope: ಹೊಸ ವ್ಯವಹಾರ ಆರಂಭಿಸಲು ಚಿಂತನೆ, ಆರೋಗ್ಯ ತೃಪ್ತಿಕರ

Karnataka ಮೇಲ್ಮನೆ ಏರಲು ಮೂರು ಪಕ್ಷದಲ್ಲೂ ಪೈಪೋಟಿ

Karnataka ಮೇಲ್ಮನೆ ಏರಲು ಮೂರು ಪಕ್ಷದಲ್ಲೂ ಪೈಪೋಟಿ

ಗೋರ್ಕಲ್ಲುಮನೆ ಕೆರೆ ಹೂಳೆತ್ತಿದರೆ ಹತ್ತಾರು ಎಕರೆ ಕೃಷಿಗೆ ವರದಾನ

ಗೋರ್ಕಲ್ಲುಮನೆ ಕೆರೆ ಹೂಳೆತ್ತಿದರೆ ಹತ್ತಾರು ಎಕರೆ ಕೃಷಿಗೆ ವರದಾನ

SSLC ಪರೀಕ್ಷೆ -2, 3ಕ್ಕೆ ಕೃಪಾಂಕ ಇಲ್ಲ; ಸಚಿವ ಮಧು ಬಂಗಾರಪ್ಪ

SSLC ಪರೀಕ್ಷೆ -2, 3ಕ್ಕೆ ಕೃಪಾಂಕ ಇಲ್ಲ; ಸಚಿವ ಮಧು ಬಂಗಾರಪ್ಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.