ಡಾಕ್ಯುಮೆಂಟರಿ


Team Udayavani, Apr 7, 2017, 3:45 AM IST

img_1943.jpg

ಕಾಲೇಜು ಲೈಫ‌ಲ್ಲಿ ಬಂಕ್‌ ಹಾಕಿ ಸಿನೆಮಾಕ್ಕೆ ಹೋಗೋದು, ಅಲ್ಲಿಗೆ ಇಲ್ಲಿಗೆ ಅಂಥ ಅಲೆಮಾರಿಯಂತೆ ಫ್ರೆಂಡ್ಸ್‌ ಒಟ್ಟಿಗೆ ತಿರುಗಾಡುವುದು ಕಾಮನ್‌ ಮ್ಯಾಟರ್‌. ಅದೇ ಕ್ರಮೇಣ ಅಭ್ಯಾಸವಾಗಿ ಬಿಟ್ಟರೆ ಸ್ಟೂಡೆಂಟ್‌ ಜೀವನ ಫ‌ಜೀತಿಯಾಗಿ ಬಿಡುವುದರಲ್ಲಿ ಎರಡು ಮಾತಿಲ್ಲ!

ಪಿಯುಸಿ ಮುಗಿದ ಮೇಲೆ ಮುಂದೆ ಏನು ಮಾಡುವುದು ಎನ್ನುವ ಯೋಚನೆಯಲ್ಲಿದ್ದಾಗ, ಮೊದಲೇ ಭವಿಷ್ಯದ ಬಗ್ಗೆ ಅರೆಬೆಂದ ನಿರ್ಧಾರವನ್ನು ಮಾಡಿಬಿಟ್ಟಿದ್ದೆ. ಅದರಂತೆ ಕೊನೆಗೂ “ಜರ್ನಲಿಸಂ’ ಸಬೆjಕ್ಟ್ ಆಯ್ಕೆ ಮಾಡಿಕೊಂಡೆ. ಆವತ್ತಿನಿಂದ ಲೈಫ್ಸ್ಟೈಲ್‌ ಸ್ವಲ್ಪ ಬದಲಾಗಿ ಬರೀ ಓದು-ಬರಹಕ್ಕೆ ಸೀಮಿತಗೊಂಡಿತ್ತು.

ಎಲ್ಲರ ಹಾಗೆ ನಾವು  ಕೂಡ ಕಾಲೇಜಿಗೆ ಬಂಕ್‌ ಹಾಕಿ ಕ್ಯಾಂಪಸ್‌ ಸುತ್ತಿ ಟೈಮ್‌ಪಾಸ್‌ ಮಾಡುತ್ತಿದ್ದೆವು. ಆದರೆ, ನಾವು ಫ್ರೀ ಪೀರಿಯೆಡ್‌ ಇದ್ದಾಗ ಕ್ಯಾಂಪಸ್‌ಗೆ ಪ್ರದಕ್ಷಿಣೆ ಹಾಕುವ ಬದಲು ಲೈಬ್ರರಿ ಕಡೆ ಮುಖ ಮಾಡಿದ್ದೇ ಜಾಸ್ತಿ.

ನಾನು ಆಗಷ್ಟೇ ಫ‌ಸ್ಟ್‌ ಇಯರ್‌ಗೆ ಸೇರಿದ್ದಷ್ಟೆ. ಫೈನಲ್‌ ಇಯರ್‌ನ ಕೆಲವು ಹುಡುಗರ ಪರಿಚಯ ನನಗಿತ್ತು. ಪ್ರತಿದಿನ ಹೋದಾಗ ಅವರೊಂದಿಗೆ ಆತ್ಮೀಯನಾಗುತ್ತ ಬಂದೆ. ಅವರಿಗೆ ಕಿರು ಚಿತ್ರಗಳನ್ನು ಮಾಡುವುದರಲ್ಲಿ ಅದೇನೋ ಆಸಕ್ತಿ. ಅವರ ಆಸಕ್ತಿಗೆ ನಾನು ಸೋತಿದ್ದೆ.

ಬೇರೆ ಕಾಲೇಜಿನಲ್ಲಿ ನಡೆದ ಸೆಮಿನಾರಿನಲ್ಲಿ ಅವರೊಂದಿಗಿನ ಒಡನಾಟ ಮತ್ತಷ್ಟು ಬೆಳೆಯ ತೊಡಗಿತ್ತು. ಮುಂದೆ ಕಾಲೇಜು ವಾರ್ಷಿಕೋತ್ಸವದ ಸಂದರ್ಭದಲ್ಲಿ ಮೊದಲ ಸಲ ನಾನು ಕ್ಯಾಮರಾ ಕಣ್ಣಿಗೆ ಕಾಣಿಸಿದ್ದೆ. ಅದು ಕೂಡ ಒಂದು ಕಿರುಚಿತ್ರದ ಮುಖ್ಯ ಪಾತ್ರದಲ್ಲಿ. ಅದೇ ಫೈನಲ್‌ ಇಯರ್‌ನ ನಾಲ್ಕು  ಸ್ನೇಹಿತರ ಟೀಮ್‌ನಲ್ಲಿ ನಾನು ಕೂಡ ಒಬ್ಬನಾಗಿ ಕೆಲಸ ಮಾಡುವ ಅವಕಾಶ ಸಿಕ್ಕಿತು.

ಡಿಗ್ರಿ ಲೆವೆಲ್‌ನಲ್ಲಿ ಪ್ರತಿಭೆಯನ್ನು ಗುರುತಿಸುವ ಅದೆಷ್ಟೋ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಲು ಹಾತೊರೆಯುತ್ತಾರೆ. ಪತ್ರಿಕೋದ್ಯಮದ ವಿಚಾರದಲ್ಲಿ ಒಂದು ಹೆಜ್ಜೆ ಮುಂದೆ ತಮ್ಮ ಕ್ರಿಯೇಟಿವ್‌ ಐಡಿಯಾಸ್‌ಗೆ ಬಣ್ಣ ಬಳಿಯುವ ಸಣ್ಣಪುಟ್ಟ ಸಾಮಾಜಿಕ ಸಂದೇಶಗಳನ್ನು ರವಾನಿಸುವ ಕಿರುಚಿತ್ರಗಳು ಸಾಕ್ಷ್ಯಚಿತ್ರಗಳನ್ನು ಮಾಡುವ ಅವಕಾಶಗಳನ್ನು ವಿದ್ಯಾರ್ಥಿಗಳು ಪಡೆದುಕೊಂಡು ತಮ್ಮ ಪ್ರತಿಭೆಯನ್ನು ಹೊರಹಾಕುತ್ತಾರೆ.

ಇತ್ತೀಚೆಗೆ ಕಾಲೇಜಿನಲ್ಲಿ ಕ್ಯಾಮರಾವನ್ನು ವಿದ್ಯಾರ್ಥಿಗಳು ತಾವೇ ಬಳಸಿಕೊಂಡು ತಮಗೆ ಇಚ್ಛಿಸುವ ವಿಷಯದ ಬಗ್ಗೆ ಕಿರುಚಿತ್ರ ಮಾಡಿ ಅದರ ಎಡಿಟಿಂಗ್‌ ಹಂತವನ್ನು ತಮ್ಮಲ್ಲೇ ಒಬ್ಬ ಮಾಡಿ, ಕಾಲೇಜಿನ ಸ್ಪರ್ಧೆಯಲ್ಲಿ ಜನ ಮೆಚ್ಚುಗೆ ಗಳಿಸುವ ಕಿರುಚಿತ್ರಗಳನ್ನು ನಿರ್ಮಿಸುತ್ತಿದ್ದಾರೆ. ಮೊದಲ ಸಲ ನಾವೇ ಒಂದು ಹೊಸ ಪ್ರಯೋಗದ ಕಿರುಚಿತ್ರ ಮಾಡಿದಾಗ ಹಗಲು-ರಾತ್ರಿ ಎನ್ನದೆ ನಿದ್ದೆ ಬಿಟ್ಟು ಪರಿಶ್ರಮಪಟ್ಟು ಕೊನೆಗೆ ಅದನ್ನು ಯೂಟ್ಯೂಬ್‌ನಲ್ಲಿ ತೇಲಿ ಬಿಟ್ಟಾಗ ಸಿಕ್ಕ ಉತ್ತಮ ಪ್ರತಿಕ್ರಿಯೆಯ ಸಂತೋಷ ಹೇಳ ತೀರದು.

ಹೀಗೆ ಎಲ್ಲರ ಒಳಗೂ ಒಂದು ಪ್ರತಿಭೆ ಇರುತ್ತದೆ. ನಾವು ಹೊರತರಲು ಹಿಂಜರಿಯುತ್ತೇವೆ ಅಷ್ಟೇ. ನನ್ನ ಪ್ರತಿಭೆಗೆ ಜೀವ ಕೊಟ್ಟದ್ದು ಪತ್ರಿಕೋದ್ಯಮ. ಸಾಧನೆಯ ಶಿಖರವನ್ನು ಏರುವ ಕ್ರಿಯೇಟಿವ್‌ ಐಡಿಯಾಗಳಿರಬಹುದು. ಅವಕಾಶಗಳಿಗೆ ಕಾಯಬಾರದು. ನಾವೇ ಅವಕಾಶವನ್ನು ಸೃಷ್ಟಿಸಿಕೊಳ್ಳಬೇಕು.

ಸುಹಾನ್‌
ಪತ್ರಿಕೋದ್ಯಮ ವಿಭಾಗ
ಎಂ.ಜಿ.ಎಂ ಕಾಲೇಜು ಉಡುಪಿ.

ಟಾಪ್ ನ್ಯೂಸ್

ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹೋಗುವುದನ್ನು ಪ್ಲ್ಯಾನ್ ಮಾಡಿದವರು ದೇವೇಗೌಡರು – ಸಿಎಂ ಆರೋಪ

ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹೋಗುವುದನ್ನು ಪ್ಲ್ಯಾನ್ ಮಾಡಿದವರು ದೇವೇಗೌಡರು – ಸಿಎಂ ಆರೋಪ

Vijayapura: ಗೃಹಿಣಿ ಮೇಲೆ ಅತ್ಯಾಚಾರ,ಚಿತ್ರೀಕರಣ: ಮಗನೊಂದಿಗೆ ನಾಪತ್ತೆಯಾದ ಸಂತ್ರಸ್ತೆ

Vijayapura: ಗೃಹಿಣಿ ಮೇಲೆ ಅತ್ಯಾಚಾರ,ಚಿತ್ರೀಕರಣ: ಮಗನೊಂದಿಗೆ ನಾಪತ್ತೆಯಾದ ಸಂತ್ರಸ್ತೆ

11-

Koppala: ವೈದ್ಯರ ನಿರ್ಲಕ್ಷ್ಯ-ಚಿಕಿತ್ಸೆ ಫಲಿಸದೇ ಗರ್ಭಿಣಿ ಸಾವು ; ಕುಟುಂಬಸ್ಥರ ಪ್ರತಿಭಟನೆ

10-mudigere

Mudigere: ಹುಲಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ವಶಕ್ಕೆ

Rupali Ganguly : ʼಅನುಪಮಾʼ ಧಾರಾವಾಹಿ ಖ್ಯಾತಿಯ ನಟಿ ರೂಪಾಲಿ ಗಂಗೂಲಿ ಬಿಜೆಪಿ ಸೇರ್ಪಡೆ

Rupali Ganguly : ʼಅನುಪಮಾʼ ಧಾರಾವಾಹಿ ಖ್ಯಾತಿಯ ನಟಿ ರೂಪಾಲಿ ಗಂಗೂಲಿ ಬಿಜೆಪಿ ಸೇರ್ಪಡೆ

Extortion:  ಆನ್‌ಲೈನ್‌ ಗೇಮ್‌; ಬಾಲಕನ ಬೆದರಿಸಿ ಸುಲಿಗೆ

Extortion: ಆನ್‌ಲೈನ್‌ ಗೇಮ್‌; ಬಾಲಕನ ಬೆದರಿಸಿ ಸುಲಿಗೆ

8-

Politics: ಕೇಂದ್ರ ಬರ ಪರಿಹಾರ ನೀಡದಿರಲು ವಿಧಾನಸಭೆ ಚುನವಾಣೆ ಸೋಲಿನ ಸೇಡು: ರಾಮಲಿಂಗಾರೆಡ್ಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹೋಗುವುದನ್ನು ಪ್ಲ್ಯಾನ್ ಮಾಡಿದವರು ದೇವೇಗೌಡರು – ಸಿಎಂ ಆರೋಪ

ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹೋಗುವುದನ್ನು ಪ್ಲ್ಯಾನ್ ಮಾಡಿದವರು ದೇವೇಗೌಡರು – ಸಿಎಂ ಆರೋಪ

Vijayapura: ಗೃಹಿಣಿ ಮೇಲೆ ಅತ್ಯಾಚಾರ,ಚಿತ್ರೀಕರಣ: ಮಗನೊಂದಿಗೆ ನಾಪತ್ತೆಯಾದ ಸಂತ್ರಸ್ತೆ

Vijayapura: ಗೃಹಿಣಿ ಮೇಲೆ ಅತ್ಯಾಚಾರ,ಚಿತ್ರೀಕರಣ: ಮಗನೊಂದಿಗೆ ನಾಪತ್ತೆಯಾದ ಸಂತ್ರಸ್ತೆ

11-

Koppala: ವೈದ್ಯರ ನಿರ್ಲಕ್ಷ್ಯ-ಚಿಕಿತ್ಸೆ ಫಲಿಸದೇ ಗರ್ಭಿಣಿ ಸಾವು ; ಕುಟುಂಬಸ್ಥರ ಪ್ರತಿಭಟನೆ

7

Bengaluru: ಸೈಕಲ್‌ ಕದಿಯುತ್ತಿದ್ದ ಸೆಕ್ಯೂರಿಟಿ ಗಾರ್ಡ್‌ ಬಂಧನ

10-mudigere

Mudigere: ಹುಲಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ವಶಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.