ಲಾಡ್ಲಾಪುರ ಗುಡ್ಡದ ಸುತ್ತ ಮಾಂಸ ತ್ಯಾಜ್ಯಗಳ ತಡಿಕೆ
Team Udayavani, Apr 24, 2017, 4:03 PM IST
ವಾಡಿ: ಲಾಡ್ಲಾಪುರ ಹಾಜಿ ಸರ್ವರ್ (ಹಾದಿ ಶರಣ) ಗುಡ್ಡದ ಜಾತ್ರೆ ಸಂಪನ್ನಗೊಂಡಿದ್ದು, ಬಾಡೂಟದ ತಾಣದಲ್ಲೀಗ ರೋಗಾಣುಗಳು ಹುಟ್ಟಿಕೊಂಡಿವೆ. ಗುಡ್ಡದ ಕೊನೆ ಜಾಗದಲ್ಲಿ ನೆಲೆಸಿರುವ ಹಾಜಿಸರ್ವರ್ ದೇವರು ಮಾಂಸ ನೈವೇದ್ಯವನ್ನು ಸ್ವೀಕರಿಸುವುದಿಲ್ಲ. ಆದರೂ ಜಾತ್ರೆಗೆ ಬಂದವರೆಲ್ಲ ಮಾಂಸದೂಟ ಸಿದ್ಧಪಡಿಸಿ ಹರಕೆ ತೀರಿಸುತ್ತಾರೆ.
ಮುಳ್ಳುಕಂಟಿಯಿಂದ ಆವರಿಸಿರುವ ಸುಮಾರು 600 ಮೀಟರ್ ಎತ್ತರದ ಗುಡ್ಡದ ಸುತ್ತಲ ಪ್ರದೇಶದಲ್ಲೀಗ ಮಾಂಸ ತ್ಯಾಜ್ಯಗಳ ತಡಿಕೆ ಹರಡಿಕೊಂಡಿದ್ದು, ಧಾರ್ಮಿಕ ಸ್ಥಳ ಎಂಬುದು ಅಸ್ವಚ್ಚತೆ ತಾಣವಾಗಿ ರೋಗಾಣುಗಳ ವಾಸಸ್ತಾನವಾಗಿ ಮಾರ್ಪಟ್ಟಿದೆ. ಲಂಬಾಣಿ ಸಮುದಾಯ ಮತ್ತು ಮುಸ್ಲಿಂ ಜನಾಂಗದವರ ಮಧ್ಯೆ ಅನ್ಯ ಸಮುದಾಯಕ್ಕೆ ಸೇರಿದ ಭಕ್ತರೂ ಗುಡ್ಡದೂರಿಗೆ ಬಂದು ಭಕ್ತಿ ಮೆರೆಯುವುದು ಇಲ್ಲಿನ ಭಾವೈಕ್ಯತೆಯ ಸಂಕೇತ.
ಆದರೆ ಹೀಗೆ ಬಂದು ದೇವರಿಗೆ ತೆಂಗಿನಕಾಯಿ ಒಡೆದು ಹೋಗುವವರು ವಿರಳ. ಬಂದವರೆಲ್ಲ ಗುಡ್ಡದ ಸುತ್ತ ಬಿಡಾರ ಹೂಡಿ ಕುರಿಗಳನ್ನು ಬಲಿಕೊಟ್ಟು, ಗುಡ್ಡದ ಕೆಳಗಿನ ಗದ್ದುಗೆಗೆ ಮಾಂಸದ ನೈವೇದ್ಯ ಅರ್ಪಿಸುವ ಸಂಪ್ರದಾಯವಿದೆ. ತಿಂದು ತೇಗಿದ ಮಾಂಸದೂಟದ ತ್ಯಾಜ್ಯಗಳನ್ನು ಭಕ್ತರು ಭಕ್ತಿ ಕೇಂದ್ರವಾದ ಹಾಜಿಸರ್ವರ್ ಗುಡ್ಡದ ಸುತ್ತ ಬೇಕಾಬಿಟ್ಟಿ ಎಸೆದು ಹೋಗಿದ್ದು, ದುರ್ವಾಸನೆ ಹರಡಲು ಕಾರಣವಾಗಿದೆ.
ಧಾರ್ಮಿಕ ಸ್ಥಳದ ಸುತ್ತ ಸ್ವಚ್ಚತೆ ಮತ್ತು ಪಾವಿತ್ರ ಕಾಪಾಡಬೇಕಾದ ಭಕ್ತ ಸಮುದಾಯ, ಹರಕೆ ತೀರಿಸಿ ಪರಿಸರ ಹಾಳುಗೆಡವಿ ಹೋಗಿರುವುದು ಪ್ರಜ್ಞಾವಂತ ಭಕ್ತರ ಅಸಮಾಧಾನಕ್ಕೆ ಕಾರಣವಾಗಿದೆ. ಜಾತ್ರೆ ಸಂಪನ್ನಗೊಂಡು ಐದಾರು ದಿನ ಕಳೆದರೂ ಸ್ಥಳೀಯ ಗ್ರಾಮ ಪಂಚಾಯತ ಆಡಳಿತ ಗುಡ್ಡದ ಸುತ್ತ ರಾಶಿ ರಾಶಿಗಟ್ಟಲೇ ಹರಡಿಕೊಂಡಿರುವ ಮಾಂಸ- ಮೂಳೆಗಳ ತ್ಯಾಜ್ಯ, ಅನ್ನ, ಬಿರಿಯಾನಿ, ನೀರಿನ ಬಾಟಲಿ, ಕಾಗದದ ತಟ್ಟೆಗಳ ವಿಲೇವಾರಿಗೆ ಮುಂದಾಗಿಲ್ಲ.
ಗುಡ್ಡಕ್ಕೆ ಮುತ್ತಿಕೊಂಡಿರುವ ಮುಳ್ಳುಕಂಟಿ ಕತ್ತರಿಸುವಲ್ಲಿ ಕ್ರಮಕೈಗೊಂಡಿಲ್ಲ. ಆರೋಗ್ಯಯುಕ್ತ ವಾತಾವರಣ ಕಲ್ಪಿಸಿಕೊಡಲು ವಿಶೇಷ ಗಮನ ಹರಿಸಬೇಕಿದ್ದ ಚಿತ್ತಾಪುರ ತಹಶೀಲ್ದಾರರು ಇತ್ತ ಹೊರಳಿಯೂ ನೋಡಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಭಕ್ತರಿಗೆ ಕುಡಿಯುವ ನೀರಿನ ವ್ಯವಸ್ಥೆ ಅಚ್ಚುಕಟ್ಟಾಗಿ ಮಾಡಿದ್ದ ಲಾಡ್ಲಾಪುರ ಗ್ರಾಪಂ ಆಡಳಿತ, ಗುಡ್ಡದ ಸುತ್ತ ಹರಡಿಕೊಂಡಿರುವ ಮಾಂಸ ಮೂಳೆಗಳ ತ್ಯಾಜ್ಯದ ವಿಲೇವಾರಿಗೆ ಮುಂದಾಗಬೇಕು ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.
* ಮಡಿವಾಳಪ್ಪ ಹೇರೂರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Politics: ರಾಜ್ಯ ಸರ್ಕಾರ ಎಲ್ಲ ರಂಗಗಳಲ್ಲಿ ವಿಫಲ; ವರ್ಷದ ಸಾಧನೆ ಶೂನ್ಯ; ಬೊಮ್ಮಾಯಿ ಟೀಕೆ
Kalaburagi; ಸಿಯುಕೆನಲ್ಲಿ ಕೋಲಾರದ ವಿದ್ಯಾರ್ಥಿ ಆನಂದ ಅನುಮಾನಾಸ್ಪದ ಸಾವು
Kalaburagi; ಕಾನೂನು ಉಲ್ಲಂಘಿಸಿದರೆ ಮುಲಾಜಿಲ್ಲದೆ ಕ್ರಮ: ಸಚಿವ ಪ್ರಿಯಾಂಕ್ ಖರ್ಗೆ
Kalaburagi: ಬಿಜೆಪಿ ಕಾರ್ಯಕರ್ತನ ಮೇಲೆ ಮರಣಾಂತಿಕ ಹಲ್ಲೆ
Marks card ಕೊಡಲು ಲಂಚ: ಶಿಕ್ಷಣ ಇಲಾಖೆ ಅಧಿಕಾರಿಗಳಿಬ್ಬರು ಲೋಕಾಯುಕ್ತ ಬಲೆಗೆ
MUST WATCH
ಹೊಸ ಸೇರ್ಪಡೆ
Gadag; ಬೈಕ್ ಗೆ ಹಿಂಬದಿಯಿಂದ ಟಿಪ್ಪರ್ ಡಿಕ್ಕಿ; ಬೈಕ್ ಗೆ ಸವಾರನ ಕಾಲು ಕಟ್!
Swindon Borough ಕೌನ್ಸಿಲ್ನ ಮೇಯರ್ ಆಗಿ ಭಾರತೀಯ ಮೂಲದ ಇಮ್ತಿಯಾಜ್ ಶೇಖ್ ಆಯ್ಕೆ
W.Bengal; ಬಿಜೆಪಿ ಅಭ್ಯರ್ಥಿಗೆ 24 ಗಂಟೆ ಕಾಲ ಪ್ರಚಾರ ಮಾಡದಂತೆ ತಡೆ ನೀಡಿದ ಚುಣಾವಣಾ ಆಯೋಗ
Mollywood: 5 ತಿಂಗಳಿನಲ್ಲಿ 1000 ಕೋಟಿಗೂ ಅಧಿಕ ಗಳಿಕೆ: ಈ 3 ಸಿನಿಮಾಗಳ ಕೊಡುಗೆಯೇ ಹೆಚ್ಚು
Gangavati; ಕಿಷ್ಕಿಂಧಾ ಅಂಜನಾದ್ರಿ ಹುಂಡಿಯಲ್ಲಿ 30.21 ಲಕ್ಷ ರೂ.ಸಂಗ್ರಹ