ಕತ್ತೆಯ ಋಣ


Team Udayavani, Jun 29, 2017, 3:45 AM IST

katte.jpg

ಒಂದೂರಿನಲ್ಲಿ ಒಬ್ಬ ಅಗಸನಿದ್ದನು. ಅಗಸನ ಬಳಿ ದಷ್ಟಪುಷ್ಟವಾದ ಎರಡು ಕತ್ತೆಗಳಿದ್ದವು. ತನ್ನೆಲ್ಲಾ ಕೆಲಸಗಳಿಗೆ ಅವನು ಕತ್ತೆಯನ್ನೇ ಅವಲಂಬಿಸಿದ್ದನು. ಕತ್ತೆಗಳು ಮಾಲೀಕನ ಹೇಳಿದ ಕೆಲಸವನ್ನು ಚಾಚು ತಪ್ಪದೆ ಮಾಡುತ್ತಿದ್ದವು. ಕತ್ತೆಯು ಮಣಭಾರದ ಬಟ್ಟೆಗಳನ್ನು ಹೊತ್ತು ಊರಾಚೆಯ ಹೊಳೆಗೆ ಹೋಗಿ ಬರುತ್ತಿದ್ದವು. ಕತ್ತೆಯ ಮೇಲೆ ಬಟ್ಟೆ ಹಾಕಿ ಅಗಸ ಹಿಂದೆ ಬರುತ್ತಿದ್ದ. ಊರು ದಿನದಿಂದ ದಿನಕ್ಕೆ ಬೆಳೆಯತೊಡಗಿತು. 

ಹೀಗೆ ದಿನದಿಂದ ದಿನಕ್ಕೆ ಬೆಳೆದ ಅಗಸ ತನ್ನ ಮನೆಯಲ್ಲೆ ಬಟ್ಟೆ ಇಸಿŒ ಮಾಡುತ್ತಿದ್ದವನು ಈಗ ಮಳಿಗೆಯಲ್ಲಿ ಲಾಂಡ್ರಿ ತಗೆದನು. ಅವನ ಅದೃಷ್ಟ ಖುಲಾಯಿಸಿತು. ಅಗಸ ಶ್ರೀಮಂತನಾದನು. ಮದುವೆಯೂ ಆಯಿತು. ಅಗಸನ ಪತ್ನಿ “ಈ ಹಾಳಾದ್‌ ಕತ್ತೆ ನಿಮಗೇಕೆ ಬೇಕು ಕಾಡಿಗೆ ಬಿಡಿ’ ಎಂದಳು.  ಲಾಂಡ್ರಿಯಲ್ಲೆ ಬಟ್ಟೆ ಒಗೆಯುವುದರಿಂದ ಕತ್ತೆ ತನಗೆ ಉಪಯೋಗವಿಲ್ಲ ಎಂದು ಅಗಸ ಕತ್ತೆಯನ್ನು ಕಾಡಿಗೆ ಬಿಡಲು ಮುಂದಾದನು. ಆದರೆ ಅಗಸನ ತಾಯಿ “ಕತ್ತೆಗಳು ಅನಾದಿ ಕಾಲದಿಂದಲೂ ನಿಮ್ಮ ಅಪ್ಪ, ಅಜ್ಜಂದಿರ ಕಾಲದಿಂದಲೂ ನಮ್ಮಲ್ಲಿ ದುಡಿಯುತ್ತಿವೆ. ಕತ್ತೆಯನ್ನು ದುಡಿಸಿಕೊಂಡ ನಾವು ಈಗ ಈ ರೀತಿ ಮಾಡುವುದು ಸರಿಯಲ್ಲ. ಯಾವಾಗಲೂ ಹತ್ತಿದ ಏಣಿಯನ್ನು ಒದೆಯಬಾರದು. ಕತ್ತೆಗಳನ್ನು ಕಾಡಿಗೆ ಬಿಡುವ ಬದಲು ಕತ್ತೆಗಳ ಅವಶ್ಯಕತೆ ಇರೋ ಅಗಸನಿಗೆ ಹಸ್ತಾಂತರಿಸು’ ಎಂದಳು. “ಆಗಲಿ ಅಮ್ಮ’ ಎಂದ ಅಗಸ. 

ನಗರದಲ್ಲಿ ಯಾವೊಬ್ಬ ಅಗಸನೂ ಈಗ ಕತ್ತೆ ಉಪಯೋಗಿಸುತ್ತಿರಲಿಲ್ಲ. ಹೀಗಾಗಿ ಅದನ್ನು ತೆಗೆದುಕೊಳ್ಳುವವರೇ ಇರಲಿಲ್ಲ. ಕಾಡಿಗೆ ಬಿಟ್ಟರೆ ತಾಯಿ ಗದರಿಸುತ್ತಾಳೆ, ಬಿಡದಿದ್ದರೆ ಹೆಂಡತಿ ಸಿಡುಕುತ್ತಾಳೆ. ಅಗಸನಿಗೆ ಎನು ಮಾಡುವುದು ತಿಳಿಯದಾಯಿತು. ಒಂದು ದಿನ ಅಗಸನ ತಾಯಿ ತೀರಿಕೊಂಡಳು. ಅಗಸ ತಾಯಿಯ ಅಂತಿಮ ಕಾರ್ಯ ಮುಗಿಸಿದ. ಇದಾಗಿ ಕೆಲದಿನಗಳಲ್ಲೇ ಕತ್ತೆಯನ್ನು ಹೊಡೆದು ಹೊಡೆದು ಕಾಡಿನತ್ತ ಓಡಿಸಿದ. ಕಾಡಿಗೆ ಹೋದ ಕತ್ತೆಗಳನ್ನು ತಿರುಗಿಯೂ ನೋಡಲಿಲ್ಲ. ಕತ್ತೆಗಳು ಮಾತ್ರ ಅಗಸ ಕಾಣುವವರೆಗೂ ತಿರುಗಿ ನೋಡುತ್ತಿದ್ದವು. 

ಅಗಸ ಹೋದ ಸ್ವಲ್ಪ ಹೊತ್ತಿನಲ್ಲೇ ಕತ್ತೆಗಳು ಕಾಡಿನಿಂದ ಅಗಸನ ಮನೆಯ ಜಾಡು ಹಿಡಿದು ವಾಪಸ್‌ ಬಂದವು. ಅಷ್ಟರಲ್ಲಿ ಕತ್ತಲಾಗಿತ್ತು. ಮನೆಯ ಒಳಗಡೆ ಕಳ್ಳರು ಇರುವುದನ್ನು ಗಮನಿಸಿದ ಎರಡು ಕತ್ತೆಗಳು ಜೋರಾಗಿ ಕೂಗಲು ಪ್ರಾರಂಭಿಸಿದವು. ಕತ್ತೆಗಳ ಕೂಗಿನಿಂದ ಅಕ್ಕ ಪಕ್ಕದವರು ನಿದ್ದೆಯಿಂದೆದ್ದು ಹೊರಗಡೆ ಬಂದರು. ರಾತ್ರಿ ನಿದ್ದೆಗೆಡಿಸಿದ ಕೋಪದಿಂದ ಕತ್ತೆಗಳನ್ನು ಬಯ್ಯುತ್ತಾ ಅಗಸನಿಗೆ ಛೀಮಾರಿ ಹಾಕಲು ಹೋದಾಗ ಒಳಗಡೆ ಕಳ್ಳರು ಇರುವುದನ್ನು ಗಮನಿಸಿದರು. ಕಳ್ಳರು ಅಗಸನ ಕುತ್ತಿಗೆಗೆ ಚಾಕು ಹಿಡಿದು ತಮ್ಮ ಕೆಲಸ ಸಾಧಿಸಿಕೊಳ್ಳುತ್ತಿದ್ದರು. 

ಅಕ್ಕಪಕ್ಕದ ಮನೆಯವರು ಒಮ್ಮೆಲೇ ಒಳಗಡೆ ನುಗ್ಗಿ ಅಗಸನನ್ನು ರಕ್ಷಿಸಿದಲ್ಲದೆ, ಕಳ್ಳನನ್ನು ಹಿಡಿದರು. “ನಾನು ಕತ್ತೆಯನ್ನು ಹೊಡೆದು ಕಾಡಿಗೆ ಅಟ್ಟಿದ್ದೆ. ಆದರೆ ಕತ್ತೆಗಳು ನಮ್ಮ ಮನೆಗೆ ಬಂದು ಕಾಪಾಡಿವೆ. ಕತ್ತೆಯ ಋಣ ಇದು’ ಎನ್ನುತ್ತಾ ಕಣ್ಣೀರಾದನು. ಕತ್ತೆಯ ಮೈ ಸವರುತ್ತಾ ಒಳಗಡೆ ಕರೆದೊಯ್ದನು. 

– ನಾಗರಾಜ ನಾಯಕ ಡಿ. ಡೊಳ್ಳಿನ, ಕೊಪ್ಪಳ 

ಟಾಪ್ ನ್ಯೂಸ್

1-qweqwew

IPL ಭಾರಿ ಮಳೆಯಿಂದ ಪಂದ್ಯ ರದ್ದು; ಹೈದರಾಬಾದ್ ಪ್ಲೇ ಆಫ್ ಗೆ ಪ್ರವೇಶ

H. D. Kumaraswamy: ಸಂಸದನಾಗಿದ್ದಾಗಲೇ ನನಗೆ ಸಿಗದ ಪ್ರಜ್ವಲ್‌ ಈಗ ಸಿಗುತ್ತಾರಾ?; ಎಚ್‌ಡಿಕೆ

H. D. Kumaraswamy: ಸಂಸದನಾಗಿದ್ದಾಗಲೇ ನನಗೆ ಸಿಗದ ಪ್ರಜ್ವಲ್‌ ಈಗ ಸಿಗುತ್ತಾರಾ?; ಎಚ್‌ಡಿಕೆ

22

Politics: ಗೃಹ ಸಚಿವರು ಕೂಡಲೇ ರಾಜೀನಾಮೆ ಕೊಡಲಿ: ಅಶ್ವತ್ಥನಾರಾಯಣ 

India alliance: ದಕ್ಷಿಣ ಭಾರತದಲ್ಲಿ ಇಂಡಿಯಾ ಮೈತ್ರಿಕೂಟ ಕ್ಲೀನ್‌ ಸ್ವೀಪ್‌; ಡಿಕೆಶಿ

India alliance: ದಕ್ಷಿಣ ಭಾರತದಲ್ಲಿ ಇಂಡಿಯಾ ಮೈತ್ರಿಕೂಟ ಕ್ಲೀನ್‌ ಸ್ವೀಪ್‌; ಡಿಕೆಶಿ

Politics: ರಘುಪತಿ ಭಟ್ಟರ ಜತೆ ಮುಖಂಡರು ಮಾತನಾಡುತ್ತಾರೆ; ಬಿ. ವೈ. ರಾಘವೇಂದ್ರ

Politics: ರಘುಪತಿ ಭಟ್ಟರ ಜತೆ ಮುಖಂಡರು ಮಾತನಾಡುತ್ತಾರೆ; ಬಿ. ವೈ. ರಾಘವೇಂದ್ರ

1-qwewqewqe

Kejriwal ನಿವಾಸದಲ್ಲಿ ಹಲ್ಲೆ; ಕೊನೆಗೂ ದೂರು ದಾಖಲಿಸಿದ ಸ್ವಾತಿ ಮಲಿವಾಲ್

train-track

Belagavi: ರೈಲಿನಲ್ಲಿ ಮುಸುಕುಧಾರಿಯಿಂದ ಚಾಕು ಇರಿತ: ವ್ಯಕ್ತಿ ಸಾವು,ಇಬ್ಬರಿಗೆ ಗಾಯ !


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

ಹೊಸ ಸೇರ್ಪಡೆ

Thailand Open Super 500: ಸಾತ್ವಿಕ್‌ – ಚಿರಾಗ್‌ ಕ್ವಾರ್ಟರ್‌ಫೈನಲಿಗೆ

Thailand Open Super 500: ಸಾತ್ವಿಕ್‌ – ಚಿರಾಗ್‌ ಕ್ವಾರ್ಟರ್‌ಫೈನಲಿಗೆ

1-qweqwew

IPL ಭಾರಿ ಮಳೆಯಿಂದ ಪಂದ್ಯ ರದ್ದು; ಹೈದರಾಬಾದ್ ಪ್ಲೇ ಆಫ್ ಗೆ ಪ್ರವೇಶ

Sandeep Lamichhane: ಅತ್ಯಾಚಾರ ಆರೋಪ; ಲಮಿಚಾನೆ ಮುಕ್ತ

Sandeep Lamichhane: ಅತ್ಯಾಚಾರ ಆರೋಪ; ಲಮಿಚಾನೆ ಮುಕ್ತ

31

Italian Open 2024: ಬೋಪಣ್ಣ ಜೋಡಿಗೆ ಸೋಲು

Theft Case: ಮನೆಯಿಂದ ಚಿನ್ನಾಭರಣ ಕಳವು

Theft Case: ಮನೆಯಿಂದ ಚಿನ್ನಾಭರಣ ಕಳವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.