ನಂಬಿಕೆಗಳು ಎಡವಿದಾಗ:ಮೂಢನಂಬಿಕೆಗಳ ನಂಬುವುದು ಎಷ್ಟು ಕಷ್ಟ ಗೊತ್ತಾ?


Team Udayavani, Jul 1, 2017, 3:37 PM IST

65.jpg

ಬೆಕ್ಕು ಅಡ್ಡ ಬಂದರೆ ಅಶುಭವೇ - ಲಾಗಾಯ್ತಿನಿಂದ ಹೌದು, ಅಶುಭ ಎಂದು ಹೇಳುತ್ತಲೇ ಬಂದಿದ್ದಾರೆ. ಹಾಗಾದರೆ ಬೆಕ್ಕು ಅಡ್ಡ ಬಂದಾಗಲೆಲ್ಲಾ ಕೆಲಸ ಕೆಟ್ಟಿದೆಯಾ? ಇದನ್ನು ಯಾರು, ಯಾವಾಗ ಹೇಗೆ ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸಿದ್ದಾರೆ? ಬೆಕ್ಕು ಅಡ್ಡ ಬಂದರೆ ಅಶುಭವಾಗುವುದನ್ನು ಈವರೆಗೆ ಯಾರೂ ಪ್ರಯೋಗಾಲಯದಲ್ಲಿ ಪ್ರಯೋಗ ನಡೆಸಿ ಸಾಧಿಸಿಲ್ಲ.  ಸಾಧಿಸುವ ತಾಕತ್ತು ಇರುವವರು ತಮ್ಮ ಕೆಲಸ ಬಿಟ್ಟು ಪುಗಸಟ್ಟೆ ಸಮಾಜಸೇವೆ ಮಾಡಲು ಮುಂದೆ ಬರಲಾರರು. 

ಜನರನ್ನು ಜ್ಯೋತಿಷಿಗಳು, ಮಂತ್ರವಾದಿಗಳು ಅಥವಾ ಇನ್ನೇನೋ ರೀತಿಯ  ಅನಿಷ್ಟಗಳನ್ನು ದೂರ ಸರಿಸುತ್ತೇವೆ ಎಂದು ನಂಬಿಸಿ ಶೋಷಿಸುವ ಜನರಿಂದ ಆಗುವ ಸಮಾಜದ ಮೇಲಿನ ತೊಂದರೆಗಳನ್ನು ತಪ್ಪಿಸಲು ಮೌಡ್ಯ ನಿರೋಧ ಕಾಯ್ದೆ ತರಲು ಹೆಣಗಾಡುತ್ತಲೇ ಇದೆ ಸರ್ಕಾರ. ಅದು ಮಾಡಬೇಕಾದ ಕೆಲಸವೇ ಆಗಿದೆ. ಆದರೆ ಸರ್ಕಾರಕ್ಕೆ ಈ ಕಾಯ್ದೆಯಿಂದ ಜನರನ್ನು ಸಂತೋಷದಲ್ಲಿರಿಸಬಹುದು, ಶೋಷಣೆಯ ಕಪಿಮುುಷ್ಟಿಯಿಂದ ತಪ್ಪಿಸಿ ಹೊರತರಬಹುದು ಎಂಬುದು ಪೂರ್ತಿ ನಂಬಿಕೆಯಾಗಿದ್ದರೆ ಖಂಡಿತ ಇಂಥದೊಂದು ಕಾಯ್ದೆಯನ್ನು ತರಬೇಕಾದುದು ನ್ಯಾಯವಾಗಿದೆ. ಆದರೆ ಕಾಯ್ದೆ ಕಾನೂನುಗಳು ಜಾರಿಯಾಗುವಾಗ ಹಿಂದಿನ ಇತಿಹಾಸ ಸ್ಪಷ್ಟಪಡಿಸುವ ಮಹಮದ್‌ ಬಿನ್‌ ತೊಘಲಕ್ಕನ ದೇವಗಿರಿಯನ್ನು  ತನ್ನ ಸಾಮ್ರಾಜ್ಯದ ರಾಜಧಾನಿಯನ್ನು ಮಾಡುವ ಯೋಚನೆಯೊಂದಿಗೆ ಹಾಗೆ ಚಲಾವಣೆ ಇದ್ದ ನಾಣ್ಯಗಳನ್ನು ರದ್ಧತಿ ಮಾಡಿ ಹೊಸದೇನನ್ನೋ ಜಾರಿಗೆ ತಂದು ಯಾವುದೂ ಸರಿ ಆಗದೆ ಪರದಾಟಗಳನ್ನು ನಿರ್ಮಿಸಿದ ಹಾಗೆ ಬವಣೆಗಳನ್ನು ಸೃಷ್ಟಿಸುವಂತಾಗಬಾರದು. ಹಾಸ್ಯಾಸ್ಪದವಾಗಬಾರದು. 

ಜನರ ನಂಬಿಕೆ ಮತ್ತು ಶೋಷಣೆ
ಜನರ ಪರದಾಟಗಳು ಯಾವಾಗಲೂ ಆಡಳಿತ ನಡೆಸುವ ಜನರ ವೈಫ‌ಲ್ಯದಿಂದಾಗಿ ಎದುರಾದಷ್ಟು ಇತರ ಶಕ್ತಿಗಳಿಂದ ಎದುರಾಗದು. ಕಾನೂನು ಸುವ್ಯವಸ್ಥೆಗಳನ್ನು ಸರಕಾರ ಕಟ್ಟುನಿಟ್ಟಿನಿಂದ ಪಾಲಿಸಿದರೆ ಜೋತಿಷಿಯಾಗಲಿ, ವ್ಯಾಪಾರಿಯಾಗಲಿ, ಸರಕಾರಿ ಕೆಲಸಗಾರನಾಗಲಿ, ಖಾಸಗಿ ಸಂಸ್ಥೆಗಳಾಗಲಿ, ಸಮಾಜರೋಧಿ ಮಾಫಿಯಾಗಳಾಗಲಿ ಏನನ್ನೂ ಮಾಡಲಾಗುವುದಿಲ್ಲ. ದುರ್ದೈವವಶಾತ್‌ ಕಾನೂನು ಸುವ್ಯವಸ್ಥೆಗಳು ಗಟ್ಟಿಯಾದ ತಳಹದಿ ಪಡೆಯದೆ ಹೋದರೆ ಜನರು ನಡೆಸಬೇಕಾದ ಪರದಾಟವನ್ನು ಬಣ್ಣಿಸಲು ಶಬ್ದವಿಲ್ಲ. 

ಇಲ್ಲಿ ಕಾನೂನುಗಳಿವೆ. ಸಂಧಾನ ಇದೆ. ಸರಕಾರ ಇದೆ. ಯಾವುದೂ ಇಲ್ಲ ಎಂಬುದಿಲ್ಲ. ಆದರೂ ಎಲ್ಲಾ ನಿಟ್ಟಿನಿಂದ ಶೋಷಣೆ ಅಸಹಾಯಕತೆ ಉಂಟು ಮಾಡುವ ಕೆಲಸ ನಡೆಯುತ್ತಲೇ ಇದೆ. ಯಾಕೆ? ಮನುಷ್ಯನ ನಾಗರೀಕತೆ ಮನುಷ್ಯ ಆರೋಗ್ಯವಾಗಿರಲು ಮನುಷ್ಯನಾಗದೇ ಉಳಿದರೆ ಸಾಧ್ಯವಿಲ್ಲ. ಜೋತಿಷಿಯಾಗಲಿ, ಮಂತ್ರವಾದಿಯಾಗಲಿ ಹಣದ ಆಸೆಗೆ ಬಿದ್ದರೆ ಜೋತಿಷ್ಯ ಅಥವಾ ಒಂದು ಜನಪರವಾದ ನಿಗೂಢ ಸಕಾರಾತ್ಮಕ ಶಕ್ತಿ ಏನನ್ನೂ ಮಾಡಲಾಗುವುದಿಲ್ಲ. ಶೋಷಣೆ ಮಾಡುವವರನ್ನು ನಿರ್ಬಂದಿಸಬೇಕು ಎನ್ನುವುದು ಸರಿ. ಮೂಢನಂಬಿಕೆಯನ್ನು ವೈಭವೀಕರಿಸಬಾರದು ಎಂಬುದೂ ಸರಿ.  ಆದರೆ ಸಮಾಜಮುಖೀಯಾದ ಇತರ ಕೆಲಸಗಳು ಜನರು ಸಂಸ್ಕಾರದ ಸಾರ ಕಳೆದುಕೊಂಡರೆ ಜೀವನ ನರಕವಾಗುತ್ತದೆ. 

ಬೆಕ್ಕು ಅಡ್ಡ ಬಂದರೆ ಅಶುಭವೇ
ಲಾಗಾಯ್ತಿನಿಂದ ಹೌದು, ಅಶುಭ ಎಂದು ಹೇಳುತ್ತಲೇ ಬಂದಿದ್ದಾರೆ. ಹಾಗಾದರೆ ಬೆಕ್ಕು ಅಡ್ಡ ಬಂದಾಗಲೆಲ್ಲಾ ಕೆಲಸ ಕೆಟ್ಟಿದೆಯಾ? ಇದನ್ನು ಯಾರು, ಯಾವಾಗ ಹೇಗೆ ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸಿದ್ದಾರೆ? ಮಂತ್ರಕ್ಕೆ ಮಾವಿನಕಾಯಿ ಉದುರುತ್ತದೆಯೇ? ಜೋತಿಷಿಯನ್ನು ತಬ್ಬಿಬ್ಬುಗೊಳಿಸುವ ಪ್ರಶ್ನೆ ಇದು. ಹೌದು ಉದುರುತ್ತದೆ ಎಂಬುದನ್ನು ಸಾಬೀತುಗೊಳಿಸಬಹುದು. ಆದರೂ ಜೋತಿಷಿ ಹೌದು ಉದುರುತ್ತದೆ ಎಂದು ಹೇಳುವುದಿಲ್ಲ. ಹೇಳಬೇಕು, ಜೋತಿಷಿ ಹೇಳಿದ್ದನ್ನು ಮಾಡಲೇಬೇಕು ಎಂದು ಯಾರು ಒತ್ತಡ ತರುತ್ತಾರೆ? ಒತ್ತಡಕ್ಕೆ ಮಣಿಯುವುದು ಮಣಿದವರ ತಪ್ಪು. ನಿನ್ನ ಕೆಲಸ ನೀನು ನೋಡಿಕೋ ನನ್ನ ತಂಟೆಗೆ ಬರಬೇಡ ಎಂದು ಯಾರಾದರೂ ಮುಖಕಕ್ಕೆ ಉಗಿದು ಹೇಳಿದರೆ ಯಾವ ಜೋತಿಷಿ ಯಾರ ಬಳಿ ಹೋಗುತ್ತಾನೆ? ಬೆಕ್ಕು ಅಡ್ಡ ಬಂದರೂ ಕೆಲಸ ಮುಂದುವರೆಸಿ ಎಂಬ ನಂಬಿಕೆಗೆ ಏಕೆ ಜೋತು ಬೀಳಬೇಕು? ಬೆಕ್ಕು ಅಡ್ಡ ಬಂದರೆ ಅಶುಭವಾಗುವುದನ್ನು ಈವರೆಗೆ ಯಾರೂ ಪ್ರಯೋಗಾಲಯದಲ್ಲಿ ಪ್ರಯೋಗ ನಡೆಸಿ ಸಾಧಿಸಿಲ್ಲ.  ಸಾಧಿಸುವ ತಾಕತ್ತು ಇರುವವರು ತಮ್ಮ ಕೆಲಸ ಬಿಟ್ಟು ಪುಗಸಟ್ಟೆ ಸಮಾಜಸೇವೆ ಮಾಡಲು ಮುಂದೆ ಬರಲಾರರು. ಆಟೋ ಚಾಲಕ ಒಂದು ರೂಪಾಯಿ ಚಿಲ್ಲರೆ ಕೊಡಲಿಲ್ಲ ಎಂದು ಜಗಳ ಮಾಡುವ ದೊಡ್ಡ ದಂಡೆ ಇದೆ. ಆದರೆ ಹತ್ತಾರು ಕಿಲೋಮೀಟರ್‌ ದೂರಕ್ಕೆ ಆಟೋ ಚಾಲಕರ ಸೇವೆ ಪಡೆದು ತಾವು ಸೇರಿಕೊಳ್ಳುವ ಜಾಗ ಬಂದಮೇಲೆ ಆಟೋ ಇಳಿದು ಹಣ ಕೇಳಿದಾಗ ಒಂಟಿಯಾಗಿರುವ ಚಾಲಕನ ಮೇಲೆ ಹಲ್ಲೆ ಮಾಡಿ, ಕಾಲಿ ಕೈಯಲ್ಲಿ ದೂಡಿ ಕಳಿಸುವವರೂ ಉಂಟು. ಹೀಗೆಂದ ಮಾತ್ರಕ್ಕೆ ಯಾರು ಕೆಟ್ಟವರು, ಯಾರು ಕೆಟ್ಟವರಲ್ಲ ಎಂಬುದನ್ನು ಆಖೈರಾಗಿ ಇದಮಿತ್ಥಂ ಎಂದು ಹೇಳಲು ಸಾಧ್ಯವಾಗುವುದಿಲ್ಲ. ಕೇತುವಿನ ದೋಷ ಕೂಡಿ ಬಂದಾಗ ಬೆಕ್ಕು ಅಡ್ಡ ಬಂದರೆ ಕೆಡುಕಾಗುತ್ತದೆ. ಬುಧ, ಚಂದ್ರರ ದೋಷ ಇದ್ದರೆ ಬುದ್ಧಿ ಮಂಕಾಗುವುದು ಮಕ್ಕಳಲ್ಲಿ ಸಾಮಾನ್ಯ. ರಾಹು ನೀಚ ಗ್ರಹದೊಡನೆ ಇರುವಾಗ ಕಣ್ಣು ಹಾರಿದರೆ ಕೆಡುಕು ಸಂಭವಿಸುತ್ತದೆ. ಕೇಮದ್ರುಮ ಯೋಗ ಬಂದಾಗ ಅಲಕ್ಷಿ$¾ ಮನೆಗೆ ಬಾರದಂತೆ ಹಸಿಮೆಣಸುಗಳನ್ನು ನಿಂಬೆಹಣ್ಣಿಗೆ ಚುಚ್ಚಿ ಕಟ್ಟಿ ಬಿಡುವುದು ಅನಿವಾರ್ಯ. ಮರಣಾಧಿಪತಿಯ ದಶಾಕಾಲದಲ್ಲಿ ಕಾಗೆ ಕುಕ್ಕಿದರೆ ಕೆಟ್ಟ ಸೂಚನೆ ಇರುತ್ತದೆ. ರಾಹುಕಾಲದಲ್ಲಿ ಕೆಲಸಗಳಲ್ಲಿ ವಿಘ್ನ ಸಂಭವಿಸುವ ಅಪಾಯ ಇರುತ್ತದೆ. ಶನಿಕಾಟ ಇರುವವರು ರಾಹು ಕಾಲದಲ್ಲಿ ಯಾವ ಹೊಸ ಕೆಲಸವನ್ನೂ ಮಾಡಬಾರದು. ಚಂದ್ರನ ಸ್ಥಿತಿಗತಿಗಳಿಂದಾಗಿ ಬೆಳಕಿನ ಸಮೃದ್ಧಿ ಸಿಗುವುದು ಕಷ್ಟವಾದ್ದರಿಂದ ಆಷಾಢಮಾಸದಲ್ಲಿ ಮದುವೆ ಮಾಡುವ ಅಥವಾ ಇತರ ಯಾವುದೇ ಶುಭ ಕೆಲಸ ನಿಷಿದ್ಧ. ಕಪ್ಪು ಘಾತಕ ಶಕ್ತಿಗಳ ನಿರ್ಜನವಾದ ದಟ್ಟ ಪೊದೆಗಳೊ, ಬಿಳಲುಗಳ್ಳೋ ತುಂಬಿ, ವಿಕಾರವಾಗಿ ನಿಂತ ಮರಗಳ ಕೊಂಬೆಯಲ್ಲಿ ಬೀಡು ಬಿಟ್ಟಿರುತ್ತದೆ. ಅಮಾವಾಸ್ಯೆಯ ದಿನದಂದು ಬೆಳಕಿನ ಮೂಲ ಶಕ್ತಿಗಳಿಗೆ ಧಕ್ಕೆ ಇರುವುದರಿಂದ ಸೂರ್ಯ ಹಾಗೂ ಚಂದ್ರರು ಅಸಮತೋಲನ ಉಂಟು ಮಾಡುವ ದುರ್ಬಲ ಸ್ಥೈರ್ಯವನ್ನು ಮನದಲ್ಲಿ ಬಿತ್ತುತ್ತಾರೆ. ಗ್ರಹಣಗಳ ಸಂದರ್ಭದಲ್ಲಿ ಸಕಾರಾತ್ಮಕ ಶಕ್ತಿಗಳು ತೇಜೋಹೀನವಾಗುತ್ತದೆ. ಹಲವರಿಗೆ ಕಾಣಿಸದೇ ಇರುವ ಅಗೋಚರ ಶಕ್ತಿಗಳು ವ್ಯಕ್ತಿ ಸ್ವರೂಪದಲ್ಲಿ ಕೆಲವು ಜನರಿಗೆ ಕೆಲವು ಗ್ರಹಗಳಿಗೆ ರಾಹು, ಕೇತು, ಕುಜಗ್ರಹಗಳ ವೈಪರೀತ್ಯಗಳಿಂದಾಗಿ ಗೋಚರಿಸಲು ಪ್ರಾರಂಭವಾಗುತ್ತದೆ. ಯಾವುದೋ ನಿಗೂಢ ವ್ಯಕ್ತಿ,  ಶಕ್ತಿಗಳು ನಡೆಸುವ ಸಂಭಾಷಣೆ ಹಾಗೂ ಸದ್ದುಗಳನ್ನು ಒಂದು ಹದ ತಪ್ಪಿ ನಡೆದ ಹೆಚ್ಚಿನ ಸಾಂದ್ರತೆಯ ನೈಪುಣ್ಯತೆ ಇರುವವರು ಗ್ರಹಿಸುತ್ತಾರೆ. ಅವರಿಗೆ ಇತರರಿಗೆ ಕೇಳದೆ ಇರುವ ವಿಚಾರ ಕೇಳಿಸುತ್ತದೆ. ಇದನ್ನು ಹಲವರು ಹುಚ್ಚುತನ, ಭ್ರಮೆ, ಬುದ್ಧಿ, ಕವಿತೆ ಎಂದು ಗ್ರಹಿಸುತ್ತಾರೆ.

ಕನಸುಗಳು ಭವಿಷ್ಯ ಸೂಚಕವೇ?
ನಂಬಿದರೆ ನಂಬಿ ಬಿಟ್ಟರೆ ಬಿಡಿ. ಜಾನ್‌.ಎಫ್.ಕೆನಡಿಯವರ ಕಗ್ಗೊಲೆ ನಡೆದ ಕ್ಷಣಗಳ  ತುಸು ಮುನ್ನ ಕೆನಡಿಯನ್ನು ರಕ್ಷಿಸಿ ಕೆನಡಿಯನ್ನು ರಕ್ಷಿಸಿ ಎಂದು ಡಲ್ಲಾಸ್‌ನ ಬೀದಿಬೀದಿಗಳಲ್ಲಿ ಕೂಗಿಕೊಳ್ಳೂತ್ತಿದ್ದ ಮಹಿಳೆಯನ್ನು ಕಂಡವರಿದ್ದಾರೆ. ಆಕೆಯನ್ನು ಹುಚ್ಚಿ ಎಂದುಕೊಂಡವರೇ ಬಹಳ ಮಂದಿ. ನಿದ್ರೆಯಿಂದೆದ್ದು ಓಡಿ ಬಂದಿದ್ದಳು ಕೆನಡಿ ಕೊಲೆಯಾಗುವ ಕೆಟ್ಟ ಕನಸನ್ನು ಕಂಡಿದ್ದಳು. ಜಿಯಾಉಲ್‌ಹಕ್‌ ಪಾಕಿಸ್ತಾನದ ಮಿಲಿಟರಿ ಜನರಲ್‌ ಅಧ್ಯಕ್ಷರಾಗಿ ಪಾಕಿಸ್ತಾನವನ್ನು ಆಳುತ್ತಿದ್ದಾಗ ವಿಮಾನ ಸ್ಫೋಟದಲ್ಲಿ ಮರಣ ಹೊಂದಿದರು. ಜಿಯಾ ಸಾಯುತ್ತಿದ್ದಾರೆ ಎಂದು ಮಂಗಳೂರಿನಲ್ಲಿ ಮಹಿಳೆಯೋರ್ವಳು ನಿದ್ರೆಯಿಂದೆದ್ದು ಕೂಗುತ್ತಾ ಮನೆಯಿಂದ ಹೊರ ಬಂದಿದ್ದಳು. 

ಅತೀಂದ್ರಿಯ ಅಥವಾ ಆರನೇ ಇಂದ್ರಿಯದ ಗುಪ್ತ ಸ್ಥಿತಿ
ರಾಹು,ಕೇತು, ಶನಿ, ಸೂರ್ಯ, ಚಂದ್ರ ಅಥವಾ ಕುಜ ಗ್ರಹಗಳು ಅತೀಇಂದ್ರಿಯ  ಶಕ್ತಿಯನ್ನು ಕೊಡುತ್ತಾರೆ. ಕೆಲವು ಸಲ ಇದು ಸಕಾರಾತ್ಮಕವಾಗಿದ್ದರ ಹಲವು ಸಲ ಕೊಂಡಿ ಕೂಡಿಕೊಂಡ ಅತೀಂದ್ರಿಯ ಶಕ್ತಿಯಾಗುತ್ತದೆ. ಶಕ್ತಿ, ಬೀಜ ಮಂತ್ರಗಳು ಮೂಲ ಬೀಜಾಕ್ಷರ ಶಕ್ತಿ ಮಂತ್ರಗಳು, ರವಿಬುಧರ ಸುಹಾಸಕರ ಬುದ್ಧಿಯೋಗ ನಿಗೂಢಕ್ಕೆ ಪ್ರವೇಶಿಸಿ ಹಲವಾರು ವಿಚಾರಗಳನ್ನು ತಿಳಿದುಕೊಳ್ಳುತ್ತಾರೆ. ಇವರು ಸಾತ್ವಿಕರಾದಾಗ ಮಂತ್ರಕ್ಕೆ ಮಾವಿನಕಾಯಿ ಉದುರಿಸುವ ಶಕ್ತಿ ಸಾಧ್ಯವಾಗುತ್ತದೆ.

ಅನಂತಶಾಸ್ತ್ರಿ 

ಟಾಪ್ ನ್ಯೂಸ್

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಸಾವು, 22 ಮಂದಿಗೆ ಗಾಯ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುದೆಸೆ ಯಾವಾಗ ಆರಂಭವಾಗಲಿದೆ…

ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುಬಲ ಯಾವಾಗ ಆರಂಭವಾಗಲಿದೆ…

jjhgfd

ಮಾರಕಾಧಿಪತಿ, ಭಾದಕಾಧಿಪತಿ: ಅಕಾಲಿಕ ಮರಣದ ಬಗ್ಗೆ “ಅಷ್ಠಮ ಸ್ಥಾನ” ಮುನ್ಸೂಚನೆ ಕೊಡುತ್ತದೆಯೇ?

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ನಾರಿಶಕ್ತಿ ವಿರೋಧಿಸುವ ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ

ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.