ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

ಗುರು, ಚಂದ್ರರ ಯುತಿ ಉತ್ತಮ ಫಲವನ್ನು ಜಾತಕದ ವ್ಯಕ್ತಿ ಅನುಭವಿಸುತ್ತಾನೆ.

Team Udayavani, Oct 16, 2021, 11:55 AM IST

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

ಜ್ಯೋತಿಷ್ಯ ಶಾಸ್ತ್ರದಲ್ಲಿ ನೂರಾರು ಯೋಗಗಳಿವೆ. ಯೋಗ ಅಂದರೆ ಯುತಿ ಸೇರುವುದು. ಒಂದು ಗ್ರಹ ಮತ್ತೊಂದು ಗ್ರಹದೊಂದಿಗೆ ಸೇರುವುದು. ಒಂದು ಗ್ರಹ ತನ್ನ ಉಚ್ಛ ರಾಶಿಯಲ್ಲಿರುವುದು. ಒಂದಕ್ಕಿಂತ ಹೆಚ್ಚಿನ ಗ್ರಹಗಳೊಂದಿಗೆ ಯುತಿಯಾಗುವುದನ್ನು ಯೋಗ ಎನ್ನಬಹುದು. ಇವುಗಳಲ್ಲಿ ಹೆಚ್ಚಾಗಿ ಕೇಳಿಬರುವ ಒಂದು ಯೋಗ ಎಂದರೆ ಗಜಕೇಸರಿ ಯೋಗ.

ಹೆಸರೇ ಹೇಳುವ ಹಾಗೆ ಆನೆ ಮತ್ತು ಸಿಂಹದ ಹೆಸರಿನಿಂದಲೇ ಕರೆಯಲ್ಪಡುವ ಒಂದು ಮಹಾ ಯೋಗ. ಆನೆಯಂತಹ ದೈತ್ಯ, ಬಲಶಾಲಿಯಾದ ಪ್ರಾಣಿ, ಸಿಂಹದಂತಹ ಧೈರ್ಯ, ಪರಾಕ್ರಮಿಯಾದ ಪ್ರಾಣಿಗಳ ಸಂಯೋಗದೊಂದಿಗೆ ಹೆಸರಿಸಲಾದ ಈ ಯೋಗಕ್ಕೆ ಪಂಚಮಹಾ ಪುರುಷ ಯೋಗಕ್ಕೆ ಸಮನಾದ ಸ್ಥಾನವಿದೆ.

ಹಾಗಾದರೆ ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು ತಿಳಿಯೋಣ. ಗಜಕೇಸರಿ ಯೋಗದಲ್ಲಿ ಒಳಪಡುವ ಎರಡು ಶುಭ ಗ್ರಹಗಳೆಂದರೆ ಅದು ಗುರು ಮತ್ತು ಚಂದ್ರ. ಸಾಮಾನ್ಯವಾಗಿ ಹೇಳುವುದಾದರೆ, ಗುರು, ಚಂದ್ರರು ಒಬ್ಬರಿಗೊಬ್ಬರು ಕೇಂದ್ರದಲ್ಲಿದ್ದರೆ ಈ ಯೋಗವು ಉಂಟಾಗುತ್ತದೆ. ಕೇಂದ್ರ ಸ್ಥಾನಗಳು ಎಂದರೆ 1,4,7 ಮತ್ತು 10ನೇ ಮನೆಗಳು.

ಚಂದ್ರನು ಒಂದು ತಿಂಗಳಲ್ಲಿ 12 ರಾಶಿಯನ್ನು ಕ್ರಮಿಸುತ್ತಾನೆ. ಆಗ 4 ಬಾರಿ ಗುರುವಿನಿಂದ ಕೇಂದ್ರದಲ್ಲಿ ಬರುತ್ತಾನೆ. ಹಾಗಾದರೆ ಒಂದು ತಿಂಗಳಲ್ಲಿ ಹುಟ್ಟಿದ ಸುಮಾರು ಶೇ.25ರಷ್ಟು ಜನರಿಗೆ ಗಜಕೇಸರಿ ಯೋಗ ಜಾತಕದಲ್ಲಿ ಇರುತ್ತದೆ. ಹಾಗಾದರೆ ಈ ಯೋಗದ ಫಲ ಎಲ್ಲರಿಗೂ ಸಿಗುತ್ತದಾ, ಇದು ಅಷ್ಟೊಂದು ಸಾಮಾನ್ಯವಾದ ಯೋಗವಾ…ಈ ಬಗ್ಗೆ ತಿಳಿದುಕೊಳ್ಳೋಣ.

ಮೊದಲೇ ತಿಳಿಸಿರುವ ಪ್ರಕಾರ ಈ ಯೋಗವು ಗುರು ಮತ್ತು ಚಂದ್ರನಿಗೆ ಸಂಬಂಧಪಟ್ಟದ್ದು. ಯಾವುದೇ ಜಾತಕದಲ್ಲಿ ಈ ಯೋಗ ಉಂಟಾದಾಗ ಈ ಕೆಳಗಿನ ಅಂಶಗಳನ್ನು ಪರಿಗಣಿಸಲೇಬೇಕು.

  • ಗುರು ನೀಚ ರಾಶಿಯಾದ ಮಕರದಲ್ಲಿರಬಾರದು
  • ಶತ್ರು ಕ್ಷೇತ್ರವಾದ ವೃಷಭ ಮತ್ತು ತುಲಾ ರಾಶಿಯಲ್ಲಿರಬಾರದು.
  • ಗುರು, ಶತ್ರುವಾದ ಶುಕ್ರ ಮತ್ತು ರಾಹು,ಕೇತುವಿನೊಂದಿಗೆ ಯುತಿಯಾಗಬಾರದು.
  • ಚಂದ್ರ ನೀಚ ರಾಶಿಯಾದ ವೃಶ್ಚಿಕದಲ್ಲಿರಬಾರದು.
  • ಶುಕ್ಲ ಪಕ್ಷದ ಚಂದ್ರನು ಬಲಶಾಲಿ.
  • ಚಂದ್ರನು, ಶನಿ ರಾಹು-ಕೇತುಗಳೊಂದಿಗೆ ಯುತಿಯಾಗಬಾರದು

ಮೇಲಿನ ಅಂಶಗಳಲ್ಲದೆ, ಲಗ್ನವೂ ಹೆಚ್ಚಿನ ಮಹತ್ವವನ್ನು ಪಡೆದಿದೆ.

ಉದಾಹರಣೆಗೆ:

  1. ಕರ್ಕಾಟಕ ರಾಶಿಯಲ್ಲಿ ಗುರು, ಚಂದ್ರರ ಯುತಿಯು ಅತ್ಯಂತ ಶ್ರೇಷ್ಠವಾದದ್ದು, ಅತೀ ಹೆಚ್ಚು ಶುಭ ಫಲಗಳನ್ನು, ಗುರುದಶಾ, ಚಂದ್ರ ಭುಕ್ತಿ, ಚಂದ್ರದಶಾ ಗುರು ಭುಕ್ತಿಗಳಲ್ಲಿ ಜಾತಕನು ಅನುಭವಿಸುತ್ತಾನೆ. ಈ ರಾಶಿಯಲ್ಲಿ ಚಂದ್ರ ಸ್ವಕ್ಷೇತ್ರದಲ್ಲೂ ಗುರು ಉಚ್ಛ ಕ್ಷೇತ್ರದಲ್ಲೂ ಇರುತ್ತಾನೆ. ಆದರೆ ಇಲ್ಲಿ ಗುರು ಶತ್ರುಸ್ಥಾನ ಮತ್ತು ಭಾಗ್ಯ ಸ್ಥಾನದ ಅಧಿಪತಿಗಳು, ಜೀವನದಲ್ಲಿ ಅಪಾರವಾದ ಸಂಪತ್ತು ಅದರೊಂದಿಗೆ ಶತ್ರುಗಳನ್ನು ಎದುರಿಸಬೇಕಾಗುತ್ತದೆ.
  2. ಮೀನ ಲಗ್ನದಲ್ಲಿ ಗುರು, ಚಂದ್ರರ ಯುತಿ ಉತ್ತಮ ಫಲವನ್ನು ಜಾತಕದ ವ್ಯಕ್ತಿ ಅನುಭವಿಸುತ್ತಾನೆ. ಗುರು, ಲಗ್ನ , ದಶಮಾಧಿಪತಿ, ಚಂದ್ರ ಪಂಚಮಾಧಿಪತಿ,
  3. ಧನುರಾಶಿಯಲ್ಲಿ ಗುರು ಚಂದ್ರರ ಯುತಿ ಮಧ್ಯ ಫಲವನ್ನು ಅನುಭವಿಸುತ್ತಾನೆ. ಇಲ್ಲಿ ಗುರು ಲಗ್ನಾಧಿಪತಿ, ಸುಖ ಸ್ಥಾನಾಧಿಪತಿ, ಆದರೆ ಚಂದ್ರ ಅಷ್ಟಮ ಸ್ಥಾನದ ಅಧಿಪತಿ. ನವಾಂಶ ಕುಂಡಲಿಯಲ್ಲೂ ಗಜಕೇಸರಿ ಯೋಗ ಉಂಟಾದರೆ ಜಾತಕದ ವ್ಯಕ್ತಿ ಅತ್ಯಂತ ಅಪರೂಪದ ಭಾಗ್ಯವನ್ನು ಹೊಂದುತ್ತಾನೆ. ಕರ್ಕಾಟಕ ರಾಶಿಯಲ್ಲಿ ಗುರು, ಚಂದ್ರರ ಯುತಿಯು 12 ವರ್ಷಕ್ಕೆ ಒಮ್ಮೆ ಉಂಟಾಗುತ್ತದೆ.

ರವೀಂದ್ರ.ಎ. ಜ್ಯೋತಿಷ್ಯ ವಿಶಾರದ

ಬಿಎಸ್ಸಿ, ಎಲ್ ಎಲ್ ಬಿ

ಜ್ಯೋತಿಷ್ಯ ವಿಶ್ಲೇಷಕರು, ಉಡುಪಿ

ಟಾಪ್ ನ್ಯೂಸ್

13

Sandalwood: ಜಪಾನ್‌ನಲ್ಲಿ ಈ ದಿನ ರಿಲೀಸ್‌ ಆಗಲಿದೆ ‘777 ಚಾರ್ಲಿʼ?

Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ಅರ್ಜಿ ನಿರಾಕರಿಸಿದ ನ್ಯಾಯಾಲಯ

Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ

randeep surjewala

Davanagere; ವಿಧಾನಸಭೆ ಸೋಲಿನ ಕಾರಣದಿಂದ ಬರಪರಿಹಾರ ನೀಡದೆ ಮೋದಿ-ಶಾ ಸೇಡು: ಸುರ್ಜೆವಾಲ ಆರೋಪ

Hubli; ಖರ್ಗೆ ಬ್ಲಾಕ್‌ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ

Hubli; ಖರ್ಗೆ ಬ್ಲಾಕ್‌ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

“ನಾನು ಬಟ್ಟೆ ಬದಲಾಯಿಸುವಾಗ ಬಾಗಿಲು..” ನಿರ್ಮಾಪಕರ ಕಿರುಕುಳದ ಬಗ್ಗೆ ಮೌನ ಮುರಿದ ನಟಿ

“ನಾನು ಬಟ್ಟೆ ಬದಲಾಯಿಸುವಾಗ ಬಾಗಿಲು..” ನಿರ್ಮಾಪಕರ ಕಿರುಕುಳದ ಬಗ್ಗೆ ಮೌನ ಮುರಿದ ನಟಿ

20

State Govt ದಿವಾಳಿ ಆಗಿದೆ:ಸರ್ಕಾರದಿಂದಲೇ ಲೂಟಿ ನಡೆಯುತ್ತಿದೆ: ಮಾಜಿ ಸಿಎಂ ಯಡಿಯೂರಪ್ಪ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುದೆಸೆ ಯಾವಾಗ ಆರಂಭವಾಗಲಿದೆ…

ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುಬಲ ಯಾವಾಗ ಆರಂಭವಾಗಲಿದೆ…

jjhgfd

ಮಾರಕಾಧಿಪತಿ, ಭಾದಕಾಧಿಪತಿ: ಅಕಾಲಿಕ ಮರಣದ ಬಗ್ಗೆ “ಅಷ್ಠಮ ಸ್ಥಾನ” ಮುನ್ಸೂಚನೆ ಕೊಡುತ್ತದೆಯೇ?

ದಶಾ ಸಂಧಿ ಕಾಲ ಎಂದರೇನು? ಮೂರು ದಶಾ ಸಂಧಿಗೆ ಹೆಚ್ಚು ಪ್ರಾಮುಖ್ಯತೆ

ದಶಾ ಸಂಧಿ ಕಾಲ ಎಂದರೇನು? ಮೂರು ದಶಾ ಸಂಧಿಗೆ ಹೆಚ್ಚು ಪ್ರಾಮುಖ್ಯತೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

13

Sandalwood: ಜಪಾನ್‌ನಲ್ಲಿ ಈ ದಿನ ರಿಲೀಸ್‌ ಆಗಲಿದೆ ‘777 ಚಾರ್ಲಿʼ?

Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ಅರ್ಜಿ ನಿರಾಕರಿಸಿದ ನ್ಯಾಯಾಲಯ

Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ

randeep surjewala

Davanagere; ವಿಧಾನಸಭೆ ಸೋಲಿನ ಕಾರಣದಿಂದ ಬರಪರಿಹಾರ ನೀಡದೆ ಮೋದಿ-ಶಾ ಸೇಡು: ಸುರ್ಜೆವಾಲ ಆರೋಪ

Desi Swara: ಅಪಹಾಸ್ಯ ನೀಡಿದ ಅದೃಷ್ಟ

Desi Swara: ಅಪಹಾಸ್ಯ ನೀಡಿದ ಅದೃಷ್ಟ

Hubli; ಖರ್ಗೆ ಬ್ಲಾಕ್‌ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ

Hubli; ಖರ್ಗೆ ಬ್ಲಾಕ್‌ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.