ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುಬಲ ಯಾವಾಗ ಆರಂಭವಾಗಲಿದೆ…

ಗೋಚಾರದ ಫಲಗಳನ್ನು ಹೇಳುವಾಗ, ನವಗ್ರಹಗಳ ಗೋಚಾರದ ಫಲಗಳನ್ನು ಹೇಳಬೇಕು.

Team Udayavani, Jan 7, 2022, 2:22 PM IST

ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುದೆಸೆ ಯಾವಾಗ ಆರಂಭವಾಗಲಿದೆ…

ಜ್ಯೋತಿಷ್ಯ ಶಾಸ್ತ್ರವು ಸೌರಮಂಡಲದಲ್ಲಿ ಗ್ರಹಗಳ ಚಲನೆಯ ಮೇಲಿನ ಅಧ್ಯಯನವಾಗಿದೆ. ಭವಿಷ್ಯದ ಫಲಗಳನ್ನು ದಶಾ ಕಾಲ ಮತ್ತು ಭುಕ್ತಿಗಳ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ. ಇನ್ನೂ ಮುಂದುವರೆದು ಗೋಚಾರದ ಫಲಗಳನ್ನು ಸೇರಿಸಿ, ಭವಿಷ್ಯದ ಆಗು ಹೋಗುಗಳನ್ನು ಇನ್ನೂ ಕರಾರುವಕ್ಕಾಗಿ ನಿರ್ಧರಿಸಬಹುದು.

ಗೋಚಾರ ಅಂದರೆ ಗ್ರಹಗಳ ಚಲನೆ. ಗ್ರಹಗಳನ್ನು ಗೋಲ ಎಂದೂ ಕರೆಯುತ್ತಾರೆ. ಚಾರ ಅಂದರೆ ಚಲನೆ. ಆದ ಕಾರಣ ಗ್ರಹಗಳ ಚಲನೆಯನ್ನು ಗೋಚಾರ ಎಂದೂ ಅದರ ಫಲಗಳನ್ನು ಗೋಚಾರ ಫಲ ಎಂದೂ ಕರೆಯುತ್ತಾರೆ.

ಗೋಚಾರದ ಫಲಗಳನ್ನು ಜನ್ಮರಾಶಿಯನ್ನು ಆಧಾರವಾಗಿಟ್ಟುಕೊಂಡು ಹೇಳಲಾಗುತ್ತದೆ. ಇನ್ನು ಕೆಲವು ಜ್ಯೋತಿಷ್ಯರು ಲಗ್ನದ ಮೂಲಕವೂ ಗೋಚಾರದ ಫಲಗಳನ್ನು ಹೇಳುವುದಿದೆ. ಗೋಚಾರದ ಫಲಗಳನ್ನು ಹೇಳುವಾಗ, ನವಗ್ರಹಗಳ ಗೋಚಾರದ ಫಲಗಳನ್ನು ಹೇಳಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ಕೇವಲ ಗುರು ಮತ್ತು ಶನಿ ಗ್ರಹಗಳ ರಾಶಿ ಪರಿವರ್ತನೆಯನ್ನು ಹೆಚ್ಚಾಗಿ ವೈಭವೀಕರಿಸುತ್ತಾರೆ. ಅದಕ್ಕೆ ಕಾರಣಗಳೂ ಇವೆ.

ಚಂದ್ರ ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಹೋಗಲು ಕೇವಲ 2 ¼ (ಎರಡು ಕಾಲು ದಿನ) ದಿನ ತೆಗೆದುಕೊಳ್ಳುತ್ತದೆ. ರವಿ ರಾಶಿ ಪರಿವರ್ತನೆ ಪ್ರತಿ ಒಂದು ತಿಂಗಳಿಗೊಮ್ಮೆ ನಡೆಯುತ್ತದೆ. ಅಂದರೆ ಸಂಕ್ರಾಂತಿಯಂದು ಇನ್ನು ಕುಜ, ಬುಧ, ಶುಕ್ರ ಗ್ರಹಗಳು ಹೆಚ್ಚು ಕಮ್ಮಿ 30ರಿಂದ 45 ದಿನಗಳನ್ನು ತೆಗೆದುಕೊಳ್ಳುತ್ತದೆ. ಬುಧ, ಶುಕ್ರಗ್ರಹಗಳು ಯಾವಾಗಲು ಸೂರ್ಯನಿಂದ ಒಂದು ರಾಶಿ ಮುಂದೆ ಅಥವಾ ವಕ್ರಿಯಾದಾಗ ಒಂದು ರಾಶಿ ಹಿಂದೆ ಇರುತ್ತದೆ. (ಶುಕ್ರ ಹೆಚ್ಚೆಂದರೆ ಸೂರ್ಯನಿಂದ 3 ರಾಶಿ ಮುಂದೆ ಅಥವಾ ವಕ್ರಿಯಾದಾಗ ಎರಡು ರಾಶಿ ಹಿಂದೆ ಸರಿಯುತ್ತದೆ)

ರಾಹುಕೇತು ಒಂದು ರಾಶಿ ಪರಿವರ್ತನೆಯಾಗಲು 18 ತಿಂಗಳು ತೆಗೆದುಕೊಂಡರೆ, ಗುರು ಗ್ರಹವು ರಾಶಿ ಪರಿವರ್ತನೆಗೆ 12 ತಿಂಗಳು ತೆಗೆದುಕೊಳ್ಳುತ್ತದೆ. ಇನ್ನು ಶನಿ ಗ್ರಹ ಸೂರ್ಯನಿಂದ ಅತ್ಯಂತ ದೂರದಲ್ಲಿರುವ ಗ್ರಹ. ಸೂರ್ಯನಿಗೆ ಒಂದು ಸುತ್ತು ಬರಲು ಅದು ತೆಗೆದುಕೊಳ್ಳುವ ಸಮಯ 30 ವರ್ಷಗಳು. ಅಂದರೆ ಒಂದು ರಾಶಿ ಪರಿವರ್ತನೆಗೆ 30 ತಿಂಗಳು (2 ½ ವರ್ಷ) ತೆಗೆದುಕೊಳ್ಳುತ್ತದೆ.

ಈ ನವಗ್ರಹಗಳಲ್ಲಿ, ಒಂದೊಂದು ಗ್ರಹಗಳು ಜನ್ಮರಾಶಿಯಿಂದ ಶುಭ ಮತ್ತು ಅಶುಭ ಫಲಗಳನ್ನು ಕೊಡುತ್ತದೆ.

ಉದಾಹರಣೆಗೆ:

ಜನ್ಮರಾಶಿಯಿಂದ ಗೋಚಾರದ ಚಂದ್ರನು, 1, 3, 6, 10, 11ನೇ ಮನೆಗಳಲ್ಲಿ ಶುಭ ಫಲಗಳನ್ನೂ, ರವಿಯು 3, 6, 10, 11ನೇ ಸ್ಥಾನಗಳಲ್ಲಿ ಶುಭ ಫಲಗಳನ್ನು, ಕುಜ ಗ್ರಹವು, 3, 6, 10, 11ನೇ ಸ್ಥಾನಗಳಲ್ಲಿ,

ಬುಧ ಗ್ರಹವು 2, 4, 6, 8, 10, 11ನೇ ಸ್ಥಾನಗಳಲ್ಲಿ, ಶುಕ್ರ ಗ್ರಹವು 1, 2, 3, 4, 5, 8, 9, 11, 12ನೇ ಸ್ಥಾನಗಳಲ್ಲಿ, ಗುರು ಗ್ರಹವು 2, 5, 7, 9, 11ನೇ ಸ್ಥಾನಗಳಲ್ಲಿ, ಶನಿ ಗ್ರಹವು 3, 6, 11ನೇ ಸ್ಥಾನಗಳಲ್ಲಿ ಮತ್ತು ರಾಹು, ಕೇತು ಗ್ರಹಗಳು, ಜನ್ಮರಾಶಿಯಿಂದ 3, 6, 10, 11ನೇ ಸ್ಥಾನಗಳಲ್ಲಿ ಶುಭ ಫಲಗಳನ್ನು ನೀಡುತ್ತದೆ.

ಈ ನವಗ್ರಹಗಳಲ್ಲಿ ಗುರು ಗ್ರಹವು ಒಂದು ರಾಶಿಯಲ್ಲಿ ಸುಮಾರು ಒಂದು ವರ್ಷಗಳ ಕಾಲ ಇರುವುದರಿಂದ ಜನ್ಮ ರಾಶಿಯಿಂದ (ಜಾತಕದಲ್ಲಿ ಚಂದ್ರ ಇರುವ ರಾಶಿಯಿಂದ) ಗೋಚಾರದಲ್ಲಿ 2, 5, 7, 9, 11ನೇ ಮನೆಗಳಲ್ಲಿ ಸಂಚಾರ ಮಾಡುವಾಗ ಅತ್ಯಂತ ಶುಭ ಫಲಗಳನ್ನು ನೀಡುತ್ತಾನೆ. ಅದನ್ನು ಗುರುಬಲದ ಸಮಯ ಎಂದೂ ಕರೆಯುತ್ತಾರೆ.

ಅದೇ ರೀತಿ ಶನಿಯು ಒಂದು ರಾಶಿಯಲ್ಲಿ 30 ತಿಂಗಳು (2 ½ ವರ್ಷ)  ಸಂಚಾರ ಮಾಡುವಾಗ, ಶನಿಯ ಶುಭ ಫಲಗಳಿಂದ ಅಶುಭ ಫಲಗಳ ಬಗ್ಗೆ ಹೆಚ್ಚಿಗೆ ವಿಶ್ಲೇಷಣೆಯನ್ನು ಮಾಡಲಾಗುತ್ತದೆ.

ಉದಾಹರಣೆಗೆ:

ಜನ್ಮರಾಶಿಯಿಂದ 12, 1, 2ನೇ ರಾಶಿಗಳಲ್ಲಿ ಶನಿ ಸಂಚಾರದ ಸಮಯವನ್ನು ಸಾಡೇಸಾತಿ (ಏಳುವರೆ ವರ್ಷ) ಎಂದೂ, ಜನ್ಮ ರಾಶಿಯಿಂದ 8ನೇ ರಾಶಿಯನ್ನು ಅಷ್ಟಮ ಶನಿ ಎಂದೂ, ಜನ್ಮ ರಾಶಿಯಿಂದ 4ನೇ ರಾಶಿಯನ್ನು ಅರ್ಧ ಅಷ್ಟಮ ಎಂದೂ ವಿಶ್ಲೇಷಣೆ ಮಾಡುತ್ತಾರೆ.

ಈ ನವಗ್ರಹಗಳು ಜನ್ಮ ರಾಶಿಯಿಂದ 11ನೇ ಮನೆಯಲ್ಲಿ ಸಂಚಾರ ಮಾಡುವಾಗ ಶುಭ ಫಲಗಳನ್ನು ನೀಡುತ್ತದೆ. ಅದಕ್ಕೆ 11ನೇ ಮನೆಯನ್ನು ಲಾಭ ಸ್ಥಾನ ಎಂದೂ, ಸರ್ವಾಭಿಷ್ಠ ಸ್ಥಾನ ಎಂದೂ ಕರೆಯುತ್ತಾರೆ. ಇಲ್ಲಿ ಒಂದು ವಿಷಯವನ್ನು ಗಣನೆಗೆ ತೆಗೆದುಕೊಳ್ಳಬೇಕು, ಅದೇನೆಂದರೆ ಯಾವುದೇ ಜಾತಕನಿಗೆ, ಸ್ವಕ್ಷೇತ್ರ, ಉಚ್ಛ ಕ್ಷೇತ್ರ, ಪಂಚ ಮಹಾಪುರುಷ ಯೋಗದ ದಶಾ ಕಾಲ ನಡೆಯುವ ಸಂದರ್ಭದಲ್ಲಿ, ಗೋಚಾರದ ಯಾವುದೇ ಅಶುಭ ಫಲಗಳು ಅಷ್ಟೊಂದು ಪರಿಣಾಮ ಬೀರುವುದಿಲ್ಲ. ಅಶುಭ ದಶಾಕಾಲ, 6, 8, 12, ಅಧಿಪತಿಗಳ ದಶಾಕಾಲದಲ್ಲಿ ಗೋಚಾರದ ಅಶುಭ ಫಲಗಳು ಒಟ್ಟಾಗಿ ಜಾತಕನು ತುಂಬಾ ಕಷ್ಟ, ನಷ್ಟ, ರೋಗ, ಸಾಲ ಇತ್ಯಾದಿ ಬಾಧೆಗಳನ್ನು ಅನುಭವಿಸಬೇಕಾಗುತ್ತದೆ.

ರವೀಂದ್ರ. ಎ ಬಿಎಸ್ಸಿ, ಎಲ್ ಎಲ್ ಬಿ

ಜ್ಯೋತಿಷ್ಯ ವಿಶಾರದ, ಜ್ಯೋತಿಷ್ಯ ವಿಶ್ಲೇಷಕರು ಉಡುಪಿ

ಟಾಪ್ ನ್ಯೂಸ್

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

b y vijayendra

LokSabha; ರಾಹುಲ್ ಗಾಂಧಿಯನ್ನು ರಾಜ್ಯಕ್ಕೆ ಹೆಚ್ಚೆಚ್ಚು ಕರೆಯಿಸಬೇಕು: ವಿಜಯೇಂದ್ರ‌ ವ್ಯಂಗ್ಯ

ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್

ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

jjhgfd

ಮಾರಕಾಧಿಪತಿ, ಭಾದಕಾಧಿಪತಿ: ಅಕಾಲಿಕ ಮರಣದ ಬಗ್ಗೆ “ಅಷ್ಠಮ ಸ್ಥಾನ” ಮುನ್ಸೂಚನೆ ಕೊಡುತ್ತದೆಯೇ?

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

ದಶಾ ಸಂಧಿ ಕಾಲ ಎಂದರೇನು? ಮೂರು ದಶಾ ಸಂಧಿಗೆ ಹೆಚ್ಚು ಪ್ರಾಮುಖ್ಯತೆ

ದಶಾ ಸಂಧಿ ಕಾಲ ಎಂದರೇನು? ಮೂರು ದಶಾ ಸಂಧಿಗೆ ಹೆಚ್ಚು ಪ್ರಾಮುಖ್ಯತೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

8-uv-fusion

UV Fusion: ಅತಿಯಾದ ಒಲವು ಒಳಿತಲ್ಲ

MP Tejaswi Surya: ಸಂಸದ ತೇಜಸ್ವಿ ಸೂರ್ಯ ವಿರುದ್ಧ ದೂರು

MP Tejaswi Surya: ಸಂಸದ ತೇಜಸ್ವಿ ಸೂರ್ಯ ವಿರುದ್ಧ ದೂರು

Bengaluru: ಬೂತ್‌ನಲ್ಲಿ ಕುಸಿದ ಮಹಿಳೆಗೆ ಜೀವದಾನ

Bengaluru: ಬೂತ್‌ನಲ್ಲಿ ಕುಸಿದ ಮಹಿಳೆಗೆ ಜೀವದಾನ

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Voters: ಮತ್ತೆ ದಾಖಲೆ ಬರೆದ ಹೊಸಕೋಟೆ ಕ್ಷೇತ್ರದ ಮತದಾರರು

Voters: ಮತ್ತೆ ದಾಖಲೆ ಬರೆದ ಹೊಸಕೋಟೆ ಕ್ಷೇತ್ರದ ಮತದಾರರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.