Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

ಬೇಕಾದ ವ್ಯಕ್ತಿಗಳ ಮಾಹಿತಿ ಹಾಗೂ ಸಾಕ್ಷಿ ಸಂಗ್ರಹದಲ್ಲಿ ಮುನ್ನಡೆ ದೊರೆಯಲಿದೆ.

Team Udayavani, Jan 1, 2024, 4:24 PM IST

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

ಲಗ್ನಾಧಿಪತಿಯಾದ ಶುಕ್ರನು ರೋಗಸ್ಥಾನ ಸ್ಥಿತ ಕಾರಣ ವರ್ಷದ ಪ್ರಾರಂಭದಲ್ಲಿ ದೇಶದ ನಾಗರೀಕರಿಗೆ ರೋಗಬಾಧೆ ಕಂಡುಬಂದರೂ, ನಂತರದಲ್ಲಿ ಶೀಘ್ರ ಶಮನವಾಗುವುದು. ಬಾಧಕಾಧಿಪತಿಯಾದ ಶನಿ ಗ್ರಹ ತನ್ನ ಮೂಲ ತ್ರಿಕೋನದಲ್ಲಿ ಬಲಯುತನಾಗಿರುವ ಕಾರಣ ಅಂತರರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಬೆಲೆ ಏರಿಕೆ ಉಂಟಾಗಿ, ಜನರಿಗೆ ಆರ್ಥಿಕ
ನಷ್ಟ ತಲೆದೋರುವ ಸಾಧ್ಯತೆ ಇದೆ.

ಪಾಶ್ಚಿಮಾತ್ಯ ದೇಶಗಳಿಂದ ನೆರವು ದೊರೆಯಲಿದೆ. ಲಾಭದ ರಾಹುಗ್ರಹವಿನಿಂದಾಗಿ ರಫ್ತು ಮತ್ತು ಆಮದು ವ್ಯಾಪಾರದಲ್ಲಿ ಏಳಿಗೆ ಉಂಟಾಗಲಿದೆ. ಭಾರತದ ಶತ್ರು  ರಾಷ್ಟ್ರಗಳಿಗೆ ಮಧ್ಯಪ್ರಾಚ್ಯ ರಾಷ್ಟ್ರಗಳ ಬೆಂಬಲ ಸಿಕ್ಕಿ ಭಾರತದ ಮೇಲೆ ಹಗೆ ಸಾಧಿಸುವ ಸೂಚನೆ ಇರುವುದು. ದೇಶದ ಗುಪ್ತಚರ ಇಲಾಖೆಗಳ ಕಾರ್ಯವೈಖರಿಯಲ್ಲಿ ಯಶಸ್ಸು, ಹೆಚ್ಚು ಮಾಹಿತಿ ಸಂಗ್ರಹ ಮತ್ತು ಬಹು ವರ್ಷಗಳ ಅಪರಾಧಿ ಕೃತ್ಯಕ್ಕೆ ಬೇಕಾದ ವ್ಯಕ್ತಿಗಳ ಮಾಹಿತಿ ಹಾಗೂ ಸಾಕ್ಷಿ ಸಂಗ್ರಹದಲ್ಲಿ ಮುನ್ನಡೆ ದೊರೆಯಲಿದೆ.

ಜಲರಾಶಿಯಲ್ಲಿ ಶತ್ರು ಸ್ಥಾನಾಧಿಪತಿ ಕುಜ ಇರುವುದರಿಂದ ಜಲಮಾರ್ಗಗಳಿಂದ ಶತ್ರು ಭಾದೆ ಎದುರಾಗುವ ಸಾಧ್ಯತೆ ಇದೆ. ದೇಶದ ಶಸ್ತ್ರಾಗಾರಕ್ಕೆ ಹೊಸ ಆಯುಧಗಳ ಪರಿಚಯ, ಅದರಲ್ಲೂ ಜಲ ಅಂತರ್ಗಾಮಿ ನೌಕೆಗಳಿಗೆ ಬಳಸುವಂತಹ ಕ್ಷಿಪಣಿಗಳ ಆವಿಷ್ಕಾರಗಳಲ್ಲಿ ಪಾಶ್ಚಿಮಾತ್ಯ ದೇಶಗಳಿಂದ ಬೆಂಬಲ ದೊರೆಯಲಿದೆ ಹಾಗೂ ಪಾಲುದಾರಿಕೆಯಲ್ಲಿ ಭಾರತದ ಯಶಸ್ಸು ಕಂಡು ಬರುವುದು. ಭಾರತದ ಫಾರ್ಮಸಿ ಕಂಪನಿಗಳಿಗೆ ಹೆಚ್ಚಿನ ಲಾಭ.

ಬಾಹ್ಯಾಕಾಶ ಸಂಸ್ಥೆಗಳಿಂದ ಅನ್ಯಗ್ರಹದ ಸಂಶೋಧನೆ ಸಂಬಂಧ ಪಟ್ಟಂತೆ ಅಪರೂಪದ ಮಾಹಿತಿ ಹಾಗೂ ಉಪಗ್ರಹ
ಉಡಾವಣೆಯಲ್ಲಿ ಮೈಲಿಗಲ್ಲು ಸಾಧನೆಯಾಗಲಿದೆ. ಭಾರತ ಮತ್ತು ಇಸ್ರೇಲ್‌ ದೇಶಗಳ ಸಂಬಂಧದಲ್ಲಿ ಕೊಂಚ ಬಿರುಕು ಕಾಣುವ ಸಾಧ್ಯತೆ ಈ ವರ್ಷ ಕಂಡು ಬರುವುದು. ಈ ವರ್ಷ ಲೋಕಸಭಾ ಚುನಾವಣೆ ನಡೆಯುವುದರಿಂದ ಸಹಜವಾಗಿಯೇ ಹಲವು ಬದಲಾವಣೆಗಳು ನಿರೀಕ್ಷಿತ. ಪ್ರಧಾನಿ ನರೇಂದ್ರ ಮೋದಿ ಅವರ ಜಾತಕದ ಬುಧಭುಕ್ತಿಯಲ್ಲಿ ರಾಜಯೋಗದ ಸೂಚನೆ ಕಾಣಿಸುತ್ತಿರುವುದು ಹಾಗೂ ಏಪ್ರಿಲ್‌ ನಂತರದಲ್ಲಿನ ಗುರುಬಲ ಯಶಸ್ಸಿನ ಸೂಚನೆ ಎಂದೇ ಹೇಳಬಹುದು.”ಇಂಡಿಯಾ’ ಸಂಘಟಿತ ಪಕ್ಷಗಳು ಚುನಾವಣೆ ನಂತರದಲ್ಲಿ ಪರಸ್ಪರ ಮತ್ತೂಂದು
ಹೋರಾಟಕ್ಕೆ ಸಜ್ಜಾಗುವ ಸಾಧ್ಯತೆ ಇದೆ.

ರಾಜ್ಯದಲ್ಲೇನಾಗುತ್ತದೆ?
ಇನ್ನು ರಾಜ್ಯದ ವಿಚಾರಕ್ಕೆ ಬಂದರೆ. ಏಪ್ರಿಲ್‌ ನಂತರ ಹಣಕಾಸಿನ ಅವ್ಯವಹಾರಗಳು ಬೆಳಕಿಗೆ ಬರುವ ಸಾಧ್ಯತೆ. ಭಾಗ್ಯಾಧಿಪತಿ ಶನಿ ರಾಜ್ಯದ ರೈತರಿಗೆ ಸಿಹಿ ಸುದ್ದಿ ನೀಡುತ್ತಾನೆ. ಮತ್ತಷ್ಟು ಭೂ ಹಗರಣಗಳು ಹೆಚ್ಚಾಗಿ, ಭೂ ಸಂಬಂಧ ಇಲಾಖೆಗಳಲ್ಲಿ ಅವ್ಯವಹಾರ ಬಹಿರಂಗವಾಗುವ ಸಾಧ್ಯತೆ ಇದೆ. ರಾಜಕಾರಣಿಗಳಿಗೆ ಮಿತ್ರರೇ ಶತ್ರುವಾಗುವ ಸಮಯ. ರಾಜನಿಗೆ ರೋಗ ಭಯ, ಮಕ್ಕಳಿಂದ ಅವಮಾನ, ಮಹಿಳಾ ರಾಜಕಾರಣಿಗಳಿಗೆ ವಿರೋಧ ಮತ್ತು ಶತ್ರು ಕಾಟ ಉಂಟಾಗಬಹುದು. ಇದೇ ಸಂದರ್ಭದಲ್ಲಿ ರಾಜ್ಯದ ಕೈಗಾರಿಕಾ ವಲಯಗಳಲ್ಲಿ ಹಿನ್ನಡೆ ಉಂಟಾಗಲಿದೆ.

ಆರ್ಥಿಕ ಸ್ಥಿತಿ
ದೇಶದ ಸಾಫ್ಟ್‌ ವೇರ್ ಉದ್ಯಮದಲ್ಲಿ‌ ಅತ್ಯಲ್ಪ ಆರ್ಥಿಕ ಅಭಿವೃದ್ಧಿಯನ್ನು ನಿರೀಕ್ಷಿಸಬಹುದು. ಆದರೆ, ಉದ್ಯೋಗಿಗಳಲ್ಲಿ ಆತಂಕ ಈ ವರ್ಷವೂ ಮುಂದುವರೆಯಲಿದೆ. ಮೇ ತಿಂಗಳಲ್ಲಿ ಬರುವ ಗುರು ಬಲದ ಕರ್ಕಾಟಕ ರಾಶಿಯು ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಮೊದಲನೇ ತ್ತೈಮಾಸಿಕದ ನಂತರ ಭಾರತವು ಹೆಚ್ಚು ಸಾಧನೆ ತೋರಲಿದೆ. ಆರ್ಥಿಕ ನೀತಿಯಲ್ಲಿ ಮಹತ್ತರ ಬದಲಾವಣೆ ಆಗುವುದರಿಂದ ವಾಣಿಜ್ಯ ವ್ಯವಹಾರ ಕುದುರಲಿದ್ದು, ಜನರಿಗೆ ಹೆಚ್ಚಿನ ಅನುಕೂಲ ಉಂಟಾಗಲಿದೆ. ನ್ಯಾಯಾಂಗದ
ಕಾರ್ಯವೈಖರಿಯಲ್ಲಿ ಮತ್ತಷ್ಟು ಬದಲಾವಣೆಯನ್ನು ನಿರೀಕ್ಷಿಸಬಹುದಾಗಿದೆ. ಈ ವರ್ಷದ ಕಾಲಮಾನದಲ್ಲಿ ಕೈ ತಪ್ಪಿ ಹೋಗಿದ್ದ ಎಷ್ಟೋ ಹಲವು ಪುರಾತನ ದೇವಾಲಯಗಳಲ್ಲಿ ಪುನರ್‌ ಪೂಜಾ ಕಾರ್ಯಕ್ರಮಗಳು ಪ್ರಾರಂಭವಾಗುವ ಸಾಧ್ಯತೆ ಇದೆ. ಈ ವರ್ಷದ ಕ್ರೀಡೆಯಲ್ಲಿ ಕ್ರೀಡಾಪಟುಗಳ ಉನ್ನತ ಸಾಧನೆ ಖಚಿತ. ಪಂಜಾಬ್‌ ರಾಜಸ್ಥಾನ ರಾಜ್ಯಗಳಲ್ಲಿ ಕೋಮುವಾದ, ಅಫೀಮ್‌ ಗಾಂಜಾದಂತಹ ನಿರ್ಬಂಧಿತ ವಸ್ತುಗಳ ಸಂಬಂಧಿಸಿದಂತೆ ಬಹುದೊಡ್ಡ ಜಾಲವನ್ನು ಭೇದಿಸಿದ ವಿಚಾರ ಈ ವರ್ಷದ ಪ್ರಮುಖ
ಸುದ್ದಿಯಾಗಬಹುದು.

ಡಾ.ಚೇತನ್‌ ಶ್ರೀನಿವಾಸ್‌
ಜ್ಯೋತಿಷ್ಯ-ವಾಸ್ತುಸಲಹೆಗಾರ, ರತ್ನಶಾಸ್ತ್ರಜ್ಞ, ಬೆಂಗಳೂರು
ಮೊ-9448353411, 7026390001

ಟಾಪ್ ನ್ಯೂಸ್

‘ತಾರಕ್​ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್​ ಸಿಂಗ್​ ನಾಪತ್ತೆ… ಮೊಬೈಲ್ ಸ್ವಿಚ್ ಆಫ್

‘ತಾರಕ್​ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್​ ಸಿಂಗ್​ ನಾಪತ್ತೆ… ಮೊಬೈಲ್ ಸ್ವಿಚ್ ಆಫ್

Desi Swara: ಹೊನ್ನುಡಿ- ಕಲಿಯುವ ಮನೋಭಾವ ಮುಖ್ಯ

Desi Swara: ಹೊನ್ನುಡಿ- ಕಲಿಯುವ ಮನೋಭಾವ ಮುಖ್ಯ

Rakshit Shetty: ʼರಿಚರ್ಡ್‌ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?

Rakshit Shetty: ʼರಿಚರ್ಡ್‌ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?

11-

Holehonnur: ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ಸುರಕ್ಷತೆಯಿಲ್ಲ: ಬಿ.ವೈ. ವಿಜಯೇಂದ್ರ

Desi Swara: ಬುಚ್ಚಿ ನೀಡಿದ ಭರವಸೆಯ ಬೆಳಕು

Desi Swara: ಬುಚ್ಚಿ ನೀಡಿದ ಭರವಸೆಯ ಬೆಳಕು

KKRvsPBKS; Gautam Gambhir’s Heated Argument With Official

IPL 2024; ಪಂಜಾಬ್ ವಿರುದ್ಧ ಸೋಲು; ಅಂಪೈರ್ ಜತೆ ವಾಗ್ವಾದಕ್ಕಿಳಿದ ಗೌತಮ್ ಗಂಭೀರ್

ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ

ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುದೆಸೆ ಯಾವಾಗ ಆರಂಭವಾಗಲಿದೆ…

ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುಬಲ ಯಾವಾಗ ಆರಂಭವಾಗಲಿದೆ…

jjhgfd

ಮಾರಕಾಧಿಪತಿ, ಭಾದಕಾಧಿಪತಿ: ಅಕಾಲಿಕ ಮರಣದ ಬಗ್ಗೆ “ಅಷ್ಠಮ ಸ್ಥಾನ” ಮುನ್ಸೂಚನೆ ಕೊಡುತ್ತದೆಯೇ?

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

ದಶಾ ಸಂಧಿ ಕಾಲ ಎಂದರೇನು? ಮೂರು ದಶಾ ಸಂಧಿಗೆ ಹೆಚ್ಚು ಪ್ರಾಮುಖ್ಯತೆ

ದಶಾ ಸಂಧಿ ಕಾಲ ಎಂದರೇನು? ಮೂರು ದಶಾ ಸಂಧಿಗೆ ಹೆಚ್ಚು ಪ್ರಾಮುಖ್ಯತೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

‘ತಾರಕ್​ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್​ ಸಿಂಗ್​ ನಾಪತ್ತೆ… ಮೊಬೈಲ್ ಸ್ವಿಚ್ ಆಫ್

‘ತಾರಕ್​ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್​ ಸಿಂಗ್​ ನಾಪತ್ತೆ… ಮೊಬೈಲ್ ಸ್ವಿಚ್ ಆಫ್

Desi Swara: ಹೊನ್ನುಡಿ- ಕಲಿಯುವ ಮನೋಭಾವ ಮುಖ್ಯ

Desi Swara: ಹೊನ್ನುಡಿ- ಕಲಿಯುವ ಮನೋಭಾವ ಮುಖ್ಯ

Rakshit Shetty: ʼರಿಚರ್ಡ್‌ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?

Rakshit Shetty: ʼರಿಚರ್ಡ್‌ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?

11-

Holehonnur: ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ಸುರಕ್ಷತೆಯಿಲ್ಲ: ಬಿ.ವೈ. ವಿಜಯೇಂದ್ರ

Desi Swara: ಬುಚ್ಚಿ ನೀಡಿದ ಭರವಸೆಯ ಬೆಳಕು

Desi Swara: ಬುಚ್ಚಿ ನೀಡಿದ ಭರವಸೆಯ ಬೆಳಕು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.